ತಾರೀಖು 20/5/2012. ಪಂಜಾಬ್ ನ ಲುಧಿಯಾನದಿಂದ ನವ ವಿವಾಹಿತರಾದ ರಾಜ್ ಮತ್ತು ಪೂಜ ತಮ್ಮ ಮಧುಚಂದ್ರಕ್ಕಾಗಿ ದಿಲ್ಲಿಯ ರೆಸಾರ್ಟ್ ಒಂದಕ್ಕೆ ಪ್ರಯಾಣ ಬೆಳೆಸುತ್ತಾರೆ. ತಾವು ಪ್ರಯಾಣಿಸುತ್ತಿರುವ ವ್ಯಾನ್ ನಲ್ಲಿ ರಾಧ ಎಂಬ ಹುಡುಗಿಯು ಇರುತ್ತಾಳೆ. ಎಲ್ಲರೂ ರೆಸಾರ್ಟ್ ತಲುಪಿ ಈಜುಕೊಳದಲ್ಲಿ ಮೊಜಿನಲ್ಲಿ ಮುಳುಗುತ್ತಾರೆ. ಅದೇ ಸಂಧರ್ಭದಲ್ಲಿ ಸುಸಂಧರ್ಭ ನೋಡಿ ರಾಧ, ರಾಜ್ ನನ್ನು ಭೇಟಿಯಾಗುತ್ತಾಳೆ.ಇದನ್ನು ರಾಜ್ ನ ಪತ್ನಿ ದೂರದಿಂದ ಗಮನಿಸಿ ನಂತರ ಕೋಣೆಗೆ ಬಂದಾಗ ಕೇಳುತ್ತಾಳೆ "ಯಾರು ಆ ಹುಡುಗಿ? ಏನು ಮಾತನಾಡಿದಳು?" ಎಂದು. ಅದಕ್ಕೆ ರಾಜ್ ಏನೂ ಆಗದವನಂತೆ "ಏನಿಲ್ಲ ಡಾರ್ಲಿಂಗ್, ಪರಸ್ಪರ ಪರಿಚಯ ಮಾಡಿಕೊಂಡೆವು" ಎಂದು.
ರಾಜ್ ಓರ್ವ ಪರ್ತ್ರಕರ್ತನಾಗಿದ್ದ. ನಂತರ ಇವರಿಬ್ಬರೂ (ರಾಜ್ ಹಾಗೂ ರಾಧಾ) ಪರಸ್ಪರ ಓರೆ ಕಣ್ಣಿನಿಂದ ನೋಡುವುದು,ಪರಸ್ಪರ ಕಣ್ಸನ್ನೆ, ಸಂಶಯದಿಂದ ವರ್ತಿಸುವುದು ಎಲ್ಲಾ ನಡೆಯುತಿತ್ತು. ದಿನದ ಹೊತ್ತಿನಲ್ಲಿ ಹೊರಾಂಗಣದ ಮೊಜಿನ ಸಮಯದಲ್ಲೂ ತನ್ನ ನವ ಪತ್ನಿಯನ್ನು ಹೇಳದೆ ಕೇಳದೆ ಮಾಯವಾಗುತಿದ್ದ. ಆ ಸಮಯದಲ್ಲೂ ರಾಧಾ ಕೂಡ ಅಲ್ಲಿರುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಪ್ರತ್ಯಕ್ಶವಾಗುತಿದ್ದ. ನಂತರ ರಾಧಾ ಕೂಡ ಪ್ರತ್ಯಕ್ಷವಾಗುತಿದ್ದಳು. ಹಾಗೂ ರಾತ್ರಿ ಹೊತ್ತು ತನ್ನ ಲ್ಯಾಪ್ಟಾಪ್ ನಲ್ಲಿ ಏನೋ ಮಾಡುತಿದ್ದ. ಇದೇ ರೀತಿ ನಡೆಯುತ್ತಿರುವಾಗ ಪತ್ನಿ ಪೂಜ ತನ್ನ ಸಹನೆ ಮುರಿದು ಕೇಳುತ್ತಾಳೆ. ಆಗಲೂ ಹೇಳುತ್ತಾನೆ "ಡಾರ್ಲಿಂಗ್, ತಪ್ಪು ತಿಳಿಯಬೇಡ. ಒಂದು ಮುಖ್ಯವಾದ ಕೆಲಸ ಮಾಡುತ್ತಿದ್ದೆನೆ. ಮನೆಗೆ ಮರಳಿದ ನಂತರ ಸವಿವರವಾಗಿ ತಿಳಿಸುವೆ" ಎಂದು. ಹಾಗಾದರೆ ನಾಳೇನೆ ನಮ್ಮ ಮಧುಚಂದ್ರ ಬಿಟ್ಟು ಊರಿಗೆ ಹೊರಡುವ ಎಂದು ಹಟ ಹಿಡಿಯುತ್ತಾಳೆ. ಆಗ ರಾಜ್ "ಡಾರ್ಲಿಂಗ್ ಇನ್ನು ಎರಡು ದಿನ ನನಗೆ ಕೊಡು. ನಂತರ ನಿನ್ನ ಬಿಟ್ಟು ಎಲ್ಲೂ ಹೊಗಲ್ಲ, ರಾತ್ರಿ ತುಂಬಾ ಆಯಿತು. ಈಗ ಮಲಗು. ಬೆಳಿಗ್ಗೆ ಮಾತನಾಡುವ" ಎಂದು ಸಮಾಧಾನ ಪಡಿಸುತ್ತಾನೆ. ತಡರಾತ್ರಿ ತನ್ನ ಮೊಬೈಲ್ಗೆ ಬಂದ ರಾಧಾಳ SMS ಓದಿ, ಪತ್ನಿಗೆ ಅರಿಯದಂತೆ ಹೊರಟು ಬಿಡುತ್ತಾನೆ. ಪೂಜ ಬೆಳಗೆದ್ದು ನೊಡುವಾಗ ರಾಜ್ ನ ಮ್ರುತದೇಹ ರೆಸಾರ್ಟ್ ನ ಈಜು ಕೊಳದಲ್ಲಿ ಅಂಗಾತ ಬಿದ್ದಿರುವುದನ್ನು ನೋಡಿ, ಅಕಾಶವೇ ಕಳಚಿ ಬಿದ್ದಂತಾಗುತ್ತಾಳೆ.
ಆದರೂ ಪೂಜ ಮನೆಗೆ ತೆರಳದೆ ಆ ರೆಸಾರ್ಟ್ ನಲ್ಲಿಯೆ ಉಳಿದು ತನ್ನ ಪತಿಯ ಸಾವಿನ ಕಾರಣ ತಿಳಿಯಲು ಕಾಯುತ್ತಾಳೆ. ಎರಡು ದಿನದ ನಂತರ ನೇರ ಪೊಲೀಸ್ ಸ್ಟೇಶನ್ ಗೆ ಧಾವಿಸುತ್ತಾಳೆ. ಅಲ್ಲಿ ಪೋಲಿಸ್ ಆಫೀಸರ್ ಹೇಳುತ್ತಾರೆ "ಶವ ಪರೀಕ್ಷೆಯ ಪ್ರಕಾರ, ಆಲ್ಕೊಹಾಲ್ ಮತ್ತು ಡ್ರಗ್ಗ್ಸ್ ರಾಜ್ ನ ದೇಹದಲ್ಲಿ ಪತ್ತೆಯಾಗಿದೆ. ಬಹುಶ ವಿಪರೀತ ಕುಡಿತ ಹಾಗೂ ಡ್ರಗ್ಗ್ಸ್ನಿಂದಾಗಿ ನಿಯಂತ್ರಣ ಕಳೆದು ಈಜು ಕೊಳಕ್ಕೆ ಬಿದ್ದು ಸಾವು ಸಂಭವಿಸಿದೆ" ಆದರೆ ಈ ಮಾತನ್ನು ಪೂಜ ಸುತಾರಾಂ ಒಪ್ಪಲು ತಯಾರಿಲ್ಲ. ಏಕೆಂದರೆ, ರಾಜ್ ವಿಪರೀತ ಕುಡಿಯುವ ವ್ಯಕ್ತಿಯಲ್ಲ ಹಾಗೂ ಡ್ರಗ್ಗ್ಸ್ ಅಂತೂ ಮಾರು ದೂರ.
ಪೂಜ ಅಲ್ಲಿಂದ ರಾಧಾಳ ಬಳಿಗೆ ಬಂದು ವಿನಂತಿಸುತ್ತಾಳೆ " ನೀನೂ, ರಾಜ್ ಗುಟ್ಟಾಗಿ ಮಾತನಾಡುತ್ತಿದ್ದೀರಿ, ಗುಟ್ಟಾಗಿ ಹೋಗುತ್ತಿದ್ದೀರಿ, ಏನು ವಿಷಯ? ನಿನಗೇನಾದರೂ ರಾಜ್ ನ ಸಾವಿನ ಬಗ್ಗೆ ಏನಾದರೂ ತಿಳಿದಿದೆಯೇ" ಎಂದು. ಆದರೆ ಅವಳು ಆ ವಿಷಯ ನನಗೆ ತಿಳಿದಿಲ್ಲ ಎಂದು ತನ್ನ ಕೋಣೆ ಸೇರುತ್ತಾಳೆ. ಮರುದಿನ ರಾಧಾ ನೇರವಾಗಿ ಪೂಜಾಳ ಕೋಣೆಗೆ ಬಂದು ಹೇಳುತ್ತಾಳೆ " ರಾಜ್ ಬಗ್ಗೆ ನನಗೂ ದುಖ್ಖವಿದೆ. ಈ ವಿಷಯದಲ್ಲಿ ಒಂದು ಸುಳಿವು ನೀಡಬಲ್ಲೆ ಆದರೆ ಇನ್ನು ಮುಂದೆ ನನ್ನನ್ನು ಭೇಟಿಯಾಗಬಾರದು, ನನ್ನಲ್ಲಿ ಮಾತನಾಡಲೂ ಬಾರದು. ಹಾಗಾದರೆ ಹೇಳುತ್ತೆನೆ ಕೇಳು - ರಾಜ್ ನ ಕ್ಯಾಮೆರದ ಚಿತ್ರಗಳನ್ನು ಪರಿಶೀಲಿಸು, ಉತ್ತರ ಸಿಗಬಹುದು" ಎಂದು. ಇದನ್ನ ಕೇಳಿ ಪೂಜ ತನ್ನ ಕೋಣೆಯಲ್ಲಿ ರಾಜ್ ನ ಕ್ಯಾಮೆರಕ್ಕಾಗಿ ಹುಡುಕಾಡುತ್ತಾಳೆ. ಆದರೆ ಕ್ಯಾಮೆರ ಅಲ್ಲಿ ಅವಳಿಗೆ ಸಿಗುವುದಿಲ್ಲ. ಆಗ ಅವಳ ಕಣ್ಣು ರಾಜ್ ನ ಲ್ಯಾಪ್ಟಾಪ್ ಮೆಲೆ ಬಿಳುತ್ತದೆ. ಆ ಲ್ಯಾಪ್ಟಾಪನ್ನು ಜಾಲಾಡುತ್ತಾಳೆ. ಅಲ್ಲಿ ಅವಳಿಗೆ ರಾಧಾ ಓರ್ವ ಅಪರಿಚಿತನೊಂದಿಗೆ ಹಾಸಿಗೆ ಹಂಚಿಕೊಂಡ ಚಿತ್ರ ಸಿಗುತ್ತದೆ. ಆ ಚಿತ್ರಗಳನ್ನು ಪೋಲಿಸರಿಗೆ ಕೊಟ್ಟಾಗ, ತಕ್ಷಣ ಆ ವ್ಯಕ್ತಿಯನ್ನು ಬಂದಿಸಿ ತಂದು ವಿಚಾರಿಸಿದಾಗ, ಅವನು ಹೇಳ ತೊಡಗುತ್ತಾನೆ "ನನ್ನ ಹೆಸರು ಮಿತ್ತಲ್. ನನಗೆ ದೇಹ ಸುಖ ಬೇಕಾಗಿದ್ದಾಗಲೆಲ್ಲ ಈ ರೆಸಾರ್ಟ್ ಗೆ ಬರುತ್ತಿರುತ್ತೆನೆ. ರಾಜ್ ಒಬ್ಬ ಬ್ಲ್ಯಾಕ್ ಮೆಲರ್ ಆಗಿದ್ದ. ನಾನು ರಾಧಾ ಜೊತೆ ಹಾಸಿಗೆಯಲ್ಲಿದ್ದ ಚಿತ್ರಗಳನ್ನು ರಾಜ್ ಕ್ಲಿಕ್ಕಿಸಿದ್ದ. ನಾನು ಅವನ ಕ್ಯಾಮೆರ ಪಡೆಯಲಿಕ್ಕಾಗಿ ಅವನ ಡ್ರಿಂಕ್ಸ್ ನಲ್ಲಿ ಡ್ರಗ್ಗ್ಸ್ ಬೆರೆಸಿದ್ದು ಹೌದು, ಆದರೆ ಅವನನ್ನು ಕೊಲೆ ಮಾಡಿಲ್ಲ" ಎನ್ನುತ್ತಾನೆ.
ಆಗ ರಾಧಾಳನ್ನು ಕರೆತಂದು ವಿಚಾರಿಸಿದಾಗ, ರಾಧಾ ಹೇಳುತ್ತಾಳೆ "ರಾಜ್ ಬ್ಲ್ಯಾಕ್ ಮೆಲರ್ ಅಲ್ಲ. ಅವನೊಬ್ಬ ಒಳ್ಳೆಯ ವ್ಯಕ್ತಿ. ನನ್ನನ್ನು ಮೋಸದಿಂದ ಈ ರೆಸಾರ್ಟ್ ನವರು ದೇಹ ಮಾರುವ ಧಂದೆಗೆ ಬೀಳಿಸಿದ್ದಾರೆ. ಈ ಕೂಪದಿಂದ ಪಾರಾಗಲು ರಾಜ್ ಸಹಕರಿಸುತ್ತಿದ್ದ. ನಾನು ಪ್ರತಿಸಲವೂ ಗಿರಕಿಗಳೊಂದಿಗೆ ಹೋಗುವಾಗ ಆ ಸ್ಥಳದ ವಿವರ ಹಾಗೂ ಸಮಯವನ್ನು ರಾಜ್ ಗೆ ತಿಳಿಸುತ್ತಿದ್ದೆ. ಆ ಸಮಯಕ್ಕೆ ರಾಜ್ ಬಂದು ಫೊಟೊ ತೆಗೆದು,ಸಾಕ್ಶ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದ" ಎಂದು.
ಅವಳ ಮಾತು ಕೇಳಿ, ಪೋಲೀಸರು ಆ ರೆಸಾರ್ಟ್ ನ ಟೂರಿಸ್ಟ್ ಗೈಡ್ ಕಪಿಲ್ನನ್ನು ಎಳೆ ತಂದು ಏರೊಪ್ಲೇನ್ ಹತ್ತಿಸಿದಾಗ ಒಂದೊಂದಾಗಿ ಬಾಯಿ ಬಿಡುತ್ತಾನೆ. " ಹೌದು, ನಾವು ಕಾಲೇಜು ಹುಡುಗಿಯರಿಗೆ SMS ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಅದ್ರುಷ್ಟದ ಚೀಟಿಯಲ್ಲಿ ಪ್ರಥಮ ಸ್ಥಾನ ಗೆದ್ದಿದೆ. ನಿಮಗೆ ಉಚಿತ ಊಟದೊಂದಿಗೆ 5 ದಿನಗಳ ಉಚಿತ ರೆಸಾರ್ಟ್ ನಲ್ಲಿ ಉಳಿಯುವ ಅವಕಾಶ ಲಭಿಸಿದೆ. ನಿಮ್ಮೊಂದಿಗೆ ನಿಮ್ಮ ಓರ್ವ ಗೆಳತಿಯನ್ನು ಕರೆತರುವ ಸುವರ್ಣಾವಕಾಶವಿದೆ ಎಂದು ಅವರನ್ನು ರೆಸಾರ್ಟ್ ಗೆ ಬರುವಂತೆ ಮಾಡುತ್ತಿದ್ದೆವು. ಅವರು ಬಂದ ನಂತರ ಅವರಿಗೆ ಅಮಲು ಪದಾರ್ಥ ನೀಡಿ ಅವರೊಂದಿಗೆ ಸೆಕ್ಸ್ ನಡೆಸಿ ವಿಡಿಯೊ ಚಿತ್ರಿಸಿ ಅವರನ್ನು ನಮ್ಮ ಹಿಡಿತದಲ್ಲಿಟ್ಟು ಕೊಂಡು ಈ ಧಂದೆಗೆ ಬಳಸುತ್ತೇವೆ ಈ ನಮ್ಮ ಸೆಕ್ಸ್ ಜಾಲವನ್ನು ಆ ರಾಜ್ ಬಯಲು ಮಾಡುವವನಿದ್ದನು. ಅದಕ್ಕಾಗಿ ಡ್ರಿಂಕ್ಸ್ ಮತ್ತು ಡ್ರಗ್ಗ್ಸ್ ನ ನಶೆಯಲ್ಲಿದ್ದ ರಾಜ್ ನನ್ನು ಈಜುಕೊಳಕ್ಕೆ ದೂಡಿ ಉಸಿರು ಕಟ್ಟಿಸಿ ಸಾಯಿಸಿದೆ"
ಇವರ ದೊಷರೊಪಣೆ ಸಾಬೀತಾಗಿ,ನ್ಯಾಯಾಲಯವು ಈ ಕೆಳಗಿನಂತೆ ಶಿಕ್ಷೆ ವಿಧಿಸಿತು.
ಕಪಿಲ್:
ರಾಜ್ ನ ಕೊಲೆಗಾಗಿ ಐಪಿಸಿ ಸೆಕ್ಷನ್ 302
ಇಮ್ಮೊರಲ್ ಟ್ರಾಫಿಕ್ ಪ್ರಿವೆನ್ಶನ್ ಆಕ್ಟ್ ಪ್ರಕಾರ 1956/4/5 ರಂತೆ ಮಹಿಳೆಯರನ್ನು ವ್ಯೆಶ್ಯಾವ್ರತ್ತಿಗೆ ಬಳಸಿದ್ದಾಕ್ಕಾಗಿ - ಜೀವಾವಧಿ ಶಿಕ್ಷೆ ನೀಡಲಾಯಿತು.
ಮಿತ್ತಲ್:
ಅಪರಾಧ ಷಡ್ಯಂತ್ರಕ್ಕಾಗಿ- ಐಪಿಸಿ ಸೆಕ್ಷನ್ 120B
ರಾಜ್ ನ ಕೊಲೆಯಲ್ಲಿ ಭಾಗಿಯಾಗಿರುವುದಕ್ಕಾಗಿ- ಐಪಿಸಿ ಸೆಕ್ಷನ್108 & 109 ರಂತೆ ಜೀವಾವಧಿ ಶಿಕ್ಷೆ ನೀಡಲಾಯಿತು.
ಇಲ್ಲಿ ಮುಖ್ಯವಾದ ಎರಡು ವಿಚಾರಗಳನ್ನು ನಾವು ಅರ್ಥ ಮಾಡಿ ಕೊಳ್ಳ ಬೇಕಾಗಿದೆ
೧) ಪತಿ ಪತ್ನಿಯರು ತಮ್ಮ ವಿಶಯಗಳನ್ನು ಹಂಚಿ ಕೊಳ್ಳುವುದರಿಂದ ಪರಸ್ಪರ ಸಲಹೆ ಸೂಚನೆಗಳನ್ನು ವಿನಿಮಯ ಮಾಡಿ ಕೊಳ್ಳಬಹುದು. ಸಾಧ್ಯವಾದಶ್ಟು ನಮ್ಮ ಕೆಲಸ ಕಾರ್ಯಗಳ ಬಗ್ಗೆ ಪತ್ನಿಯರಿಗೂ ಸ್ವಲ್ಪ ಮಟ್ಟಿನ ಮಾಹಿತಿ ಕೊಟ್ಟು ಅವರನ್ನು ನಿರಾಳರಾಗಿಯೂ, ಜಾಗ್ರತರನ್ನಗೀಸಬಹುದು.
೨) ಯಾವುದೊ ಗೊತ್ತು ಗೊರಿಯಿಲ್ಲದ SMS ಆಫ಼ರ್ ಗಳನ್ನು ನಂಬಿ ಕಣ್ಣು ಮುಚ್ಚಿ ದೌಡಾಯಿಸುವುದು, ನಮ್ಮನ್ನು ನಾವೆ ಅತೀ ದೊಡ್ಡ ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ.
ಈ ಲೇಖನದ ಮೂಲಕ ನಮ್ಮ ಸುತ್ತ ಮುತ್ತಲಿನಲ್ಲಿ ಯಾವ್ಯಾವ ರೀತಿಯ ಮೋಸ ಹಾಗೂ ಷಡ್ಯಂತ್ರಗಳ ಬಲೆ ಬೀಸಿ ನಮ್ಮನ್ನು ಅಪಾಯಕ್ಕೆ ಸಿಲುಕಿಸುತ್ತಾರೆ ಎಂಬ ಮುನ್ನೆಚ್ಚರಿಕೆ ಕೊಡುವುದಾಗಿತ್ತು ನನ್ನ ಉದ್ದೇಶ
"ಸಾವಧಾನರಾಗಿರಿ, ಸುರಕ್ಷಿತರಾಗಿರಿ" ಎಂಬ ಸಂದೇಶದೊಂದಿಗೆ
ನಿಮ್ಮವನೇ ಆದ
ಅನಾಮಿಕ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ