ಮಂಗಳವಾರ, ಫೆಬ್ರವರಿ 10, 2015

***** ನನ್ನ ಧ್ವಜ *****


ಗೆಳೆಯರೇ..
.
ನಾವು ದಿನನಿತ್ಯ ನೋಡುತ್ತಿರುವ ಹಾಗೂ ಅದರ ಬಗ್ಗೆ ಗಮನ ಹರಿಸದ ಒಂದು ವಿಚಾರದತ್ತ ಬೆಳಕು ಚೆಲ್ಲಲು ಬಯಸುತ್ತಿದ್ದೇನೆ.
ನಮ್ಮಲ್ಲಿ ಹೆಚ್ಚಿನ ಜನರು ಯಾವುದಾದರೂ ಒಂದು ಧ್ವಜದ ಹಿಂಬಾಲಕರಾಗಿದ್ದಾರೆ. ಕೆಲವರು ಕೇಸರಿ ಧ್ವಜದ ಹಿಂದೆ ಇದ್ದರೆ, ಇನ್ನೂ ಕೆಲವರು ಹಸಿರು ಧ್ವಜದ ಹಿಂದೆ ಇರುವರು. ಇನ್ನು ಕೆಲವರು ನೀಲಿ ಬಿಳಿ, ಕೆಂಪು ಹೀಗೆ ಬಣ್ಣದ ಬಣ್ಣದ ಧ್ವಜಗಳ ಹಿಂದಿದ್ದಾರೆ. ನಿಜವಾಗಿಯೂ ಅವರವರ ಧ್ವಜಜಗಳ ಮೇಲೆ ಅವರಿಗೆ ಅಭಿಮಾನವಿದೆಯೇ....? ಅಥವಾ ತಮ್ಮ ಗುಂಪಿನ ಧ್ವಜ ಕಟ್ಟಿ ಅಹಂನಿಂದ ಬೀಗುವ ದರ್ಪವೇ...?

ನಮ್ಮಲ್ಲಿ ಅದರಲ್ಲಿ ವಿಷೇಶವಾಗಿ ಕರಾವಳಿ ಭಾಗದಲ್ಲಂತೂ ಧ್ವಜ ಹಾಗೂ ಪತಾಕೆಗಳದ್ದೇ ಕಾರುಬಾರು. ಯಾವುದಾದರೂ ಸಂಘಟನೆ ಯಾ ಸಂಸ್ಥೆಗಳ ಕಾರ್ಯಕ್ರಮವಿದ್ದರೆ ಧ್ವಜಗಳು, ಪತಾಕೆಗಳು ಆ ಕಾರ್ಯಕ್ರಮದ ಅವಿಭಾಜ್ಯ ವಸ್ತುವಾಗಿದೆ. ಪೇಟೆ, ಬೀದಿ, ಗಲ್ಲಿ, ಕೇರಿಗಳಲ್ಲಿ ದ್ವಜ,ಪತಾಕೆ, ಬ್ಯಾನರ್ ಹಾಕದಿದ್ದರೆ ಆ ಕಾರ್ಯಕ್ರಮ ಏನೊ ಕಡಿಮೆಯಾದಂತೆ ಭಾವಿಸುತ್ತಾರೆ. ಊಟಕ್ಕೆ ಉಪ್ಪು ಹಾಕದ ಹಾಗೆ ಸಪ್ಪೆ ಸಪ್ಪೆ ಎಂದು ಭಾವಿಸುಷ್ಟು ಮಟ್ಟಿಗೆ ಬೆಳೆದಿದೆ. ಈ ಮದ್ಯೆ ಯಾರಾದರೂ ಆ ಬ್ಯಾನರ್, ದ್ವಜಗಳಿಗೆ ಹಾನಿಯುಂಟು ಮಾಡಿದರಂತೂ ಕೇಳುವುದೇ ಬೇಡ. ಹಾನಿ ಮಾಡಿದವರನ್ನು ಹೊಡೆದು ಸಾಯಿಸುವಷ್ಟು ಅಂಧಾಭಿಮಾನ ಹೊಂದಿರುತ್ತಾರೆ. ಇವುಗಳಿಂದಾಗಿ ಎಷ್ಟೋ ಕೋಮು ಗಲಭೆಗಳು ಕೂಡ ಸಂಭವಿಸಿದೆ.
ನಿಜವಾಗಿಯೂ ಅವರವರ ಧ್ವಜಗಳ ಮೇಲೆ ಅವರವರಿಗೆ ಅಭಿಮಾನವಿದೆಯೇ...? 


ಏಕೆಂದರೆ... ಇಂತಹಾ ಧ್ವಜ, ಪತಾಕೆಗಳನ್ನು ಕಟ್ಟುವಾಗ ಇರುವಂತಹ ಅಭಿಮಾನ, ಹುಮ್ಮಸ್ಸು ಆಯಾ ಕಾರ್ಯಕ್ರಮ ಮುಗಿದ ನಂತರ ಎಲ್ಲಿ ಹೋಗುತ್ತೊ ತಿಳಿಯುತ್ತಿಲ್ಲ. ಅಂತಹಾ ಅಭಿಮಾನ ಧ್ವಜ ಪತಾಕೆಗಳು ಅಲ್ಲೆ ಹಲವು ದಿನಗಳವರೆಗೆ ಹಾರಾಡುತ್ತಾ, ದೂಳು ಮೆತ್ತಿಕೊಂಡು, ಯಾರ್ಯಾರ ಕಾಲಿನಡಿಗೆ ಬಿದ್ದು ಹರಿ ಹಂಚಿ ಹೋಗುವಾಗ ಯಾರ ಕಣ್ಣಿಗೂ ಕಾಣುವುದೇ ಇಲ್ಲ. ಮೊದಲಿನ ಅಭಿಮಾನ ಎಲ್ಲಿ ಸತ್ತು ಹೋಗುತ್ತೋ...? ಒಂದು ಬ್ಯಾನರ್ ಅಥವಾ ಧ್ವಜಕ್ಕಾಗಿ ಯಾರನ್ನೂ ಕೊಲೆ ಮಾಡಲು ಹಿಂಜರಿಯದ ಅಭಿಮಾನ ಕಾರ್ಯಕ್ರಮದ ನಂತರ ಟಾರ್ಚ್ ಹಿಡಿದು ಹುಡುಕಿದರೂ ಸಿಗಾಕಿಲ್ಲಾ... ಅಂತಹಾ ಅಭಿಮಾನ ಇದ್ದರೆಷ್ಟು, ಬಿಟ್ಟರೆಷ್ಟು...?

ಯಾವುದಾದರೂ ಗ್ರೂಪಿನ ಕಾರ್ಯಕ್ರಮದ ಬ್ಯಾನರ್ ಅಥವಾ ಧ್ವಜಕ್ಕೆ ಹಾನಿಯಾದರೆ ಅದೆಷ್ಟು ಪ್ರತಿಭಟನೆಗಳಾಗುತ್ತವೆ, ಪ್ರೆಸ್ ಕಾನ್ಫರೆನ್ಸ್ ಗಳಾಗುತ್ತವೆ. ಧಾಂದಲೆಗಳಗುತ್ತವೆ. ಊರಿಗೆ ಊರೇ ಹೊತ್ತಿ ಉರಿಯುವ ವಿಷಯಗಳು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೇ ಅಂತಹಾ ದ್ವಜ ಪತಾಕೆಗಳು ಮಣ್ಣು ಮೆತ್ತಿ ಹರಿ ಹಂಚಿ ಮೂರಾ ಬಟ್ಟೆಯಾದರೂ ಕೇಳುವವರಿಲ್ಲಾ. ಅವುಗಳನ್ನು ಮೂಕ ಪ್ರಾಣಿಗಳು ತಿಂದು ಆರೋಗ್ಯ ಕೆಡಿಸಿ ಕೊಳ್ಳುತ್ತವೆ. ಆದರೆ ನಾವುಗಳು ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳೋದೆ ಇಲ್ಲ. ಹರಿದು ಹೋದ ಧ್ವಜಗಳಿಂದ ನಮ್ಮ ಪೇಟೆ, ಪರಿಸರದ ಅಂದವೂ ಕೆಡುತ್ತದೆ. ಇಂತಹ ತೋರ್ಪಡಿಕೆಯ ಕಾರ್ಯಗಳ ಅಗತ್ಯವಿದೆಯೆ ?



ಇಂತಹಾ ಧ್ವಜದ ಹಿಂದೆ ಓಡುವುದರ ಬದಲು ನಮ್ಮ ಆತ್ಮ ಸಮ್ಮಾನವಾದ ತ್ರಿವರ್ಣ ಧ್ವಜವೊಂದನ್ನೇ ಎತ್ತಿ ಹಿಡಿಯುವ ಬಗ್ಗೆ ಯಾತಕ್ಕಗಿ ಚಿಂತಿಸುವುದಿಲ್ಲಾ??? ಕೇವಲ ಆಗಷ್ಟ್ 15 ರಂದು ಮಾತ್ರ ತ್ರಿವರ್ಣ ಧ್ವಜದ ನೆನಪಾಗುವುದೇ ?
ಎಲ್ಲಾ ಧ್ವಜಗಳನ್ನು ಬದಿಗೊತ್ತಿ, ಆ ಧ್ವಜ ಈ ಧ್ವಜವೆಂದು ಬಡಿದಾಡಿ ಕೊಳ್ಳುವ ಬದಲು ಕೇವಲ ತ್ರಿವರ್ಣ ಧ್ವಜವೊಂದನ್ನೆ ನಮ್ಮ ಹ್ರದಯದಲ್ಲಿ ಅಚ್ಚಿಳಿಸಲು ಸಾಧ್ಯವಿಲ್ಲವೆ?


ಅಂತಹಾ ದಿನಕ್ಕಾಗಿ ಹಾತೊರೆಯುತ್ತಿರುವ
ನಿಮ್ಮವನೇ ಆದ
ಮುಖ್ತಾರ್ ಉಚ್ಚಿಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ