ಭಾನುವಾರ, ನವೆಂಬರ್ 9, 2014

ಭ್ರಷ್ಟಾಚಾರಿ ಜನ ನಾಯಕರು



ನಾವು ಭ್ರಷ್ಟಾಚಾರಕ್ಕೆ ಹೊಂದಿಕೊಂಡ ರೀತಿ ನೋಡಿದ್ರೆ ಈ ದೇಶ ಉದ್ದಾರ ಆಗೋ ಲಕ್ಷಣ ಕಾಣ್ತಾ ಇಲ್ಲ . ತಮ್ಮ ಇಷ್ಟದ ನಾಯಕರು ಯಾ ಪಕ್ಷ ಮಾಡಿದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಹಿಂಬಾಲಕರನ್ನು ನೋಡಿ ಈ ತರ ಯಾರಿಗಾದರೂ ಅನಿಸಿದರೆ ಅದು ಅವರ ತಪ್ಪಲ್ಲ .

ದೇಶದ ಉದ್ದಾರದ ಬಗ್ಗೆ ನೂರಾರು ಚರ್ಚೆಗಳನ್ನು ಮಾಡುವ ನಾವು, ಭ್ರಷ್ಟಾಚಾರಿ ಜನ ನಾಯಕರು ಮಾಡಿದ ತಪ್ಪಿಗೆ ಈ ದೇಶದ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸುವಾಗ ವಿವೇಚನಾರಹಿತರಂತೆ ವರ್ತಿಸೋದು ಯಾಕೆ ?

ಕೆಲವರು "ಏನೋ ಆಗಬಾರದ್ದು ಆಗಿಹೋಯಿತು" ಎಂದು ಲಬೋ ಲಬೋ ಎಂದು ಬಾಯ್ಬಡಿಯೋದು ನೋಡಿದ್ರೆ ಭ್ರಷ್ಟಾಚಾರವನ್ನು ಕೂಡ ಕಾನುಬದ್ದ ಮಾಡಲು ಶ್ರಮಿಸುವ 'ಬುದ್ದಿಗೇಡಿಗಳ' ಲದ್ದಿ ಹೋರಾಟ ಅಂತ ಅನಿಸಿದರೆ ಅದು ನಮ್ಮ ತಪ್ಪಲ್ಲ .
ಗ್ರಾಮ ಪಂಚಾಯತ್ ನಿಂದ ಆರಂಬಿಸಿ ಸಂಸತ್ ನವರೆಗೆ ಹಬ್ಬಿರುವ ಈ ಭ್ರಷ್ಟ ರೋಗವನ್ನು ನಿರ್ಮೂಲನ ಮಾಡದ ಹೊರತು ದೇಶದ ಅಭಿವ್ರದ್ದಿ ಹೊಂದಲು ಸಾದ್ಯವೇ ಇಲ್ಲ ಎನ್ನುವುದು ಸೂರ್ಯ ಬೆಳಕಿನಷ್ಟೇ ಸತ್ಯ . ಸರಕಾರೀ ಇಲಾಖೆಗಳಲ್ಲಿರುವ ನೌಕರರ ಕಾರ್ಯ ಪ್ರವತ್ತಿಯಲ್ಲಿನ ವಿಳಂಬ ನೋಡಿದ್ರೆ ಯಾವುದೋ ಕಾಟಾಚಾರಕ್ಕೆ ಕೆಲಸ ಮಾಡುತ್ತಿರುವಂತೆ ಕಂಡು ಬಂದರೆ ಅಚ್ಚರಿ ಪಡಬೇಕಾಗಿಲ್ಲ .ಪ್ರಪಂಚದ ಯಾವುದೋ ಮೂಲೆಯಲ್ಲಿನ ದೇಶಗಳು ಮಾಡಿದ ಮಹತ್ ಸಾಧನೆಗಳನ್ನು ಬಣ್ಣಿಸುವ ನಾವು,ನಮ್ಮ ದೇಶದೊಳಗೆ ಅಂತಹ ಸಾಧನೆಯನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಇಲ್ಲ .ಯಾಕೆ ಹೀಗೆ ? ಅಂತ ಗಂಭೀರವಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಯಾರೋ ಬಂದು ಉದ್ದಾರ ಮಾಡುತ್ತಾರೆ ಅನ್ನುವ ಆಲಸ್ಯ ತೊಲಗುವುದಾರೂ ಯಾವಾಗ ?


ಇನ್ನಾದರೂ ನಿದ್ದೆಯಲ್ಲಿರುವ ವಿವೇಚಿತರು ಎಚ್ಚರವಾಗಿ ಶಬ್ದ ಹೊರಡಿಸದ ಹೊರತು ಭ್ರಷ್ಟಾಚಾರದ ಸಾವು ಕನಸು ಮಾತ್ರ. ಎದ್ದೇಳಿ ಯುವಕರೇ .....ನಮ್ಮೊಳಗಿನ ಭೇದಗಳನ್ನು ಮರೆತು ಭ್ರಷ್ಟಾಚಾರವನ್ನು ಒದ್ದೋಡಿಸಿ ಸಮೃದ್ದ ದೇಶವನ್ನು ಕಟ್ಟೋಣ ಬನ್ನಿ.


https://www.facebook.com/BlueWavesPage


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ