ಗುರುವಾರ, ಫೆಬ್ರವರಿ 12, 2015

ನೀಚತೆಯ ಪರಮಾವಧಿ

ಕತೆಯಲ್ಲ... ನೈಜ ಘಟನೆ...!!!
ಮುಂಬಯಿ ತಾ. 18/03/2014





ರೋಶನಿ ಹಾಗೂ ನಿಕೇತ್ ಹೊಸದಾಗಿ ಮದುವೆಯಾದ ನವ ದಂಪತಿಗಳು. ಸಾಮಾನ್ಯವಾಗಿ ಎಲ್ಲರಂತೆ ಮದುವೆಯ ಆರಂಭದ ರಸಮಯ ದಿನಗಳನ್ನು ಕಳೆಯುತ್ತಿದ್ದರು. ಬಹಳ ಪ್ರೀತಿಯಿಂದ ಹೊಸ ಸೊಸೆಯನ್ನು ನೋಡಿಕೊಳ್ಳುತ್ತಿದ್ದರು. ಅಷ್ಟೇ ಪ್ರೀತಿಯಿಂದ ಅತ್ತೆ, ಮಾವನನ್ನು ನೋಡಿ ಕೊಳ್ಳುತ್ತಿದ್ದಳು. ಇವರ ಸಂಸಾರದ ದೊಣಿ ನಗು ನಗುತ್ತಾ ಸಾಗುತ್ತಿರುವಾಗ, ಆಕಾಶವೇ ಕಳಚಿ ಬಿಳುವಂತಹ ಘಟನೆ ನಡೆಯುತ್ತದೆ.

ಒಂದು ಮುಂಜಾನೆ ಮಾವನಾದ ಬಾಬುಲಾಲ್ ಒಂದು ಸಿಡಿ ಹಾಗೂ ಪತ್ರವನ್ನು ತನ್ನ ಮಗ ಹಾಗೂ ಸೊಸೆಗೆ ತೋರಿಸಿ ಬೊಬ್ಬಿಡಲಾರಂಭಿಸುತ್ತಾರೆ. ಆ ಪತ್ರದಲ್ಲಿ ಬರೆಯಲಾಗಿತ್ತು " ಈ ಸಿಡಿಯಲ್ಲಿ ನಿಮ್ಮ ಮಗ ಹಾಗೂ ಸೊಸೆಯ ರಸಮಯ ಕ್ಷಣಗಳ ವಿಡಿಯೊ ಇದೆ. ಈ ವಿಡಿಯೊ ರಹಸ್ಯವಾಗಿರ ಬೇಕಾದರೆ 3 ದಿನದೊಳಗೆ 10 ಲಕ್ಷ ರೂಪಾಯಿ ಕೊಡ ಬೇಕು. ಇಲ್ಲಾಂದ್ರೆ ಇದನ್ನು ಇನ್ಟರ್ನೆಟ್ ನಲ್ಲಿ ಹಾಕಲಾಗುವುದು. ಹಣ ಎಲ್ಲಿಗೆ ತಲುಪಿಸಬೇಕೆಂಬ ಮಾಹಿತಿ 3 ದಿನದ ನಂತರ ತಿಳಿಸಲಾಗುವುದು." ಇದನ್ನು ಕೇಳಿ ಎಲ್ಲರೂ ದಂಗಾಗುತ್ತಾರೆ. ಇಷ್ಟು ದೊಡ್ಡ ಮೊತ್ತವನ್ನು ನಮ್ಮಿಂದ ಹೊಂದಿಸಲು ಸಾಧ್ಯವಿಲ್ಲ. ನಿಮ್ಮ ಖಾಸಗಿ ಕ್ಷಣಗಳನ್ನು ಜಾಗ್ರತೆಯಿಂದ ಕಳೆಯಬೇಕೆಂಬ ಸ್ವಲ್ಪ ಬುಧ್ಧಿ ಇಲ್ಲವೆ ನಿಮಗೆ ? ಈ ಮೊತ್ತವನ್ನು ನೀವೆ ಪತಿ ಪತ್ನಿ ಹೊಂದಿಸಿ ಕೊಳ್ಳಿ ಎಂದು ಹೇಳಿ ಹೊರಟು ಹೋಗುತ್ತಾರೆ. ಪತಿಯು ಇಷ್ಟು ದೊಡ್ಡ ಮೊತ್ತ ನನ್ನಿಂದ ಸಾಧ್ಯವಿಲ್ಲ. ಪೋಲಿಸಿಗೆ ದೂರು ಕೊಟ್ಟರೆ ನಮ್ಮ ಮಾನ ಮರ್ಯದೆಯೆಲ್ಲಾ ಹೊಗುತ್ತೆ. ನೀನೆ ಏನಾದರೂ ಮಾಡು ಎಂದು ನವ ಪತ್ನಿಯ ದುಂಬಾಲು ಬೀಳುತ್ತಾನೆ.

ಈ ಪರಿಸ್ಥಿತಿಯಲ್ಲಿ ರೋಶನಿ, ಇಂತಹ ನೀಚ ಕ್ರುತ್ಯವನ್ನು ಯಾರು ಮಾಡಲು ಸಾಧ್ಯ ಎಂದು ಯೋಚಿಸುತ್ತಿರುವಾಗಲೆ, ತನ್ನ ಹಳೇಯ ಪ್ರೇಮಿ ಮಹೇಂದ್ರನ ಚಿತ್ರ ಅವಳ ಮನಸ್ಸಿನ ಮುಂದೆ ಹಾದು ಹೋಗುತ್ತದೆ. ಆ ಕೂಡಲೇ ತನ್ನ ತವರು ಮನೆಗೆ ಹೋಗಿ "ನನಗೆ ಈಗಲೇ 10 ಲಕ್ಷ ರೂಪಾಯಿಯ ಅಗತ್ಯವಿದೆ. ಏಕೆ ಎಂದು ಕೇಳ ಬೇಡಿ. ನಿಮಗೂ ನಿಮ್ಮ ಮಗಳ ಮೇಲೆ ಪ್ರೀತಿಯಿದೆ ಎಂದು ಭಾವಿಸಿ ಕೇಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಅಂಗಲಾಚುತ್ತಾಳೆ. ಆಗ ತಂದೆ ಕೇಳುತ್ತಾರೆ " ಏನಾಯಿತು? ಪತಿ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಾರೆಯೆ?" ಅದಕ್ಕವಳು "ಇಲ್ಲಾ.. ನನಗೆ ಬೇರೆಯದೆ ಅಗತ್ಯವಿದೆ." ಅದಕ್ಕವರು ಮರು ಮಾತನಾಡದೆ ಸದ್ಧ್ಯಕ್ಕೆ 5 ಲಕ್ಷ ರೂಪಾಯಿಯನ್ನು ಮಗಳಿಗೆ ಕೊಡುತ್ತಾರೆ.

ಆ ಹಣವನ್ನು ಸಂಶಯದ ಮೇಲೆ, ನೇರ ತನ್ನ ಹಳೇಯ ಪ್ರೇಮಿಯ ಮನೆಗೆ ಹೊಗುತ್ತಾಳೆ. ಮನೆ ಬಾಗಿಲಿನಲ್ಲಿ ರೋಶನಿಯನ್ನು ಕಂಡು, ಬಾಗಿಲು ಹಾಕಿ ಒಳಗೆ ಬಂದು, ರೋಶನಿಯ ಫೊಟೊಗಳನ್ನು ಚೊಕ್ಕದಾಗಿ ಗೋಡೆಯ ಮೇಲೆ ತೂಗು ಹಾಕಿರುತ್ತಾನೆ. ಅದರ ಮೇಲೆ ಅವಳಿಗೆ ತಿಳಿಯಬಾರದೆಂಬ ಉದ್ಧೇಶದಿಂದ ಒಂದು ಬಟ್ಟೆ ಹಾಕಿ ಮುಚ್ಚಿ,ನಂತರ ರೋಶನಿಯನ್ನು ಬರ ಮಾಡಿ ಕೊಳ್ಳುತ್ತಾನೆ. ಒಳಗೆ ಬಂದವಳೇ ಸಿಟ್ಟಿನಿಂದ " ಯಾಕೋ ಇಂತಹ ನೀಚ ಕೆಲಸ ಮಾಡುತ್ತಿದ್ದಿಯಾ? ನನ್ನ ಖಾಸಗಿ ಕ್ಷಣವನ್ನು ಚಿತ್ರಿಕರಿಸಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿಯಾ ? ತಗೋ 5 ಲಕ್ಷ ಇದೆ. ಬಾಕಿ ಹಣ ಸ್ವಲ್ಪ ದಿನದಲ್ಲೇ ಕೊಡುವೆ" ಎಂದು ರೇಗುತ್ತಾಳೆ. ಆಗ ಅವನು ಶಾಂತವಾಗಿ ಹೇಳುತ್ತಾನೆ " ನಾನು ನಿನ್ನನ್ನು ಕೇವಲ ಪ್ರೀತಿದ್ದಲ್ಲ,ಬದಲಾಗಿ ನಿಶ್ಕಲ್ಮಶವಾಗಿ ಪೂಜಿಸಿದ್ದೇನೆ. ನಂಬಿಕೆ ಇಲ್ಲದ್ದಿದ್ದರೆ,ಇಗೋ ನೋಡು" ಎಂದು ಅವಳ ಫೊಟೊಗಳ ಮೇಲೆ ಹಾಕಿದ್ದ ಬಟ್ಟೆ ಸರಿಸಿ ತೋರಿಸುತ್ತಾನೆ. ಅದನ್ನು ಕಂಡು ಕಣ್ಣೀರಿನೊಂದಿಗೆ. ಮತ್ಯಾರು ಈ ಕೆಲಸ ಮಾಡಿರ ಬಹುದು ಎಂದು ಯೋಚಿಸುತ್ತಿರುವಾಗ .... ಮಹೇಂದ್ರ ಕೇಳುತ್ತಾನೆ... ಆ ಸಿಡಿ ಮೊದಲು ಯಾರ ಕೈಗೆ ಸಿಕ್ಕಿದ್ದು ? ನಂತರ ಏನಾಯಿತು ಎಂದು ಒಂದರ ನಂತರ ಒಂದು ಪ್ರೆಶ್ನಿಸುತ್ತಾನೆ... ನಂತರ ಪೂರ್ತಿ ವಿಷಯ ಅವಳಿಂದ ಕೇಳಿಸಿ ಕೊಂಡು, ಇಬ್ಬರೂ ಸೇರಿ ಒಂದು ಪ್ಲ್ಯಾನ್ ಮಾಡಿ. ಆ ಹಣವನ್ನು ಕೊಟ್ಟು ಅತ್ತೆ ಮನೆಗೆ ಕಳುಹಿಸಿ ಕೊಡುತ್ತಾನೆ.

ಮನೆಗೆ ಬಂದವಳೇ... ಕೇವಲ 5 ಲಕ್ಷ ಮಾತ್ರ ಹೊಂದಿಸಲು ಸಾಧ್ಯವಾಯಿತು ಎನ್ನುವಾಗ ಆಕೆಯ ಪತಿ " ಇನ್ನುಳಿದ 5 ಲಕ್ಷಕ್ಕೆ ಏನು ಮಾಡುವುದು ಎಂದು ಬೊಬ್ಬಿಡಾಲಾರಂಭಿಸುತ್ತಾನೆ. ಆಗ ಮಾವ ಸಮಾಧಾನಿಸುತ್ತಾ ಹೇಳುತ್ತಾನೆ " ಪರ್ವಾಗಿಲ್ಲಾ ಸಧ್ಯಕ್ಕೆ 5 ಲಕ್ಷ ಕೊಟ್ಟು ಸ್ವಲ್ಪ ಕಾಲಾವಕಾಶ ಕೇಳೊಣ" ಎಂದು ಆಗ ರೋಶನಿ ಸಿಟ್ಟಿನಿಂದ ಅಲ್ಲಿದ್ದ ಸಿಡಿ ಹಾಗೂ ಗಂಡನ ಲ್ಯಾಪ್ ಟಾಪ್ ನೆಲಕ್ಕೆ ಬಡಿದು ಪುಡಿಗಟ್ಟುತ್ತಾಳೆ. ಅದನ್ನು ನೋಡಿ ಸಿಟ್ಟಾದ ಗಂಡನನ್ನು ಮಾವನು ಸಮಾಧಾನಿಸುತ್ತಾನೆ.
ಅದೇ ದಿನ ರಾತ್ರಿ ನಿಕೇತ್ ತನ್ನ ಪತ್ನಿಯಲ್ಲಿ ಮಿಲನಕ್ಕಾಗಿ ಅಪೇಕ್ಷಿಸುತ್ತಾನೆ. ಆದರೆ ಅವಳು "ಇವತ್ತು ನನ್ನ ಮೂಡ್ ಸರಿ ಇಲ್ಲ... ದಯವಿಟ್ಟು ಕ್ಷಮಿಸಿ" ಎಂದು ಶೌಚಾಲಯಕ್ಕೆ ಹೊದಾಗ... ನಿಕೇತ್ ಕಿಟಕಿಯ ಬಳಿ ಬಂದು "ಇವತ್ತು ಮೂಡ್ ಇಲ್ವಂತೆ. ಇವತ್ತು ಯಾವುದೇ ಸಂಭವ ಕಾಣುತ್ತಿಲ್ಲ" ಎಂದಾಗ ಆ ಕಡೆಯಿಂದ "ಮೂಡ್ ಇಲ್ಲಾಂದ್ರೆ, ಮೂಡ್ ಬರಿಸೊ. ವಿಡಿಯೊವಿದ್ದ ಲ್ಯಾಪ್ ಟಾಪ್ ಬೇರೆ ಪುಡಿ ಮಾಡಿದ್ದಾಳೆ. ಒಂದಾದ್ರೂ ವಿಡಿಯೋದ ಈಗ ತುರ್ತು ಅಗತ್ಯವಿದೆ." ಎಂಬ ಮಾತುಕತೆ ನಡೆಯುವಾಗ, ರೋಶನಿ ಶೌಚಾಲಯದಿಂದ ಚಪ್ಪಾಳೆ ತಟ್ಟುತ್ತಾ ಹೊರಗೆ ಬಂದು "ಅಯ್ಯೋ ನೀಚರೇ ಹಣಕ್ಕಾಗಿ ಗಂಡ ಹಾಗೂ ಅತ್ತೆ ಮಾವ ಸೇರಿ ಇಂತಹ ನೀಚ ಕೆಲಸ ಮಾಡಬಹುದು ಎಂದು ಯೋಚಿಸಿರಲಿಲ್ಲ" ಎಂದು ಹೇಳಿದಾಗ ತಮ್ಮ ದುಷ್ಕ್ರುತ್ಯ ಬಯಲಾದಾಗ ಅತ್ತೆ ಮಾವ ಇಬ್ಬರೂ ಅವಳ ಕೋಣೆಗೆ ಓಡಿ ಬಂದು "ಮಗನೆ ಅವಳನ್ನು ಬಿಡ ಬೇಡ, ನಮ್ಮ ರಹಸ್ಯ ಅವಳಿಗೆ ತಿಳಿದಾಯಿತು. ಈಗ ಅವಶ್ಯವಾಗಿ ವಿಡಿಯೋದ ಅಗತ್ಯವಿದೆ ಎಂದು ಬಲವಂತದಿಂದ ಅವಳ ಬಲತ್ಕಾರಗೊಳಿಸುವ ಚಿತ್ರಿಕರಣ ನಡೆಸಲಾರಂಭಿಸುತ್ತಾರೆ. ಇದೇ ಸಮಯದಲ್ಲಿ ಅವಳ ಹಳೇಯ ಪ್ರೇಮಿ ಮಹೇಂದ್ರ ಇದೆಲ್ಲವನ್ನು ತನ್ನ ವಿಡಿಯೋ ಕ್ಯಾಮೆರಾದಲ್ಲಿ ಚಿತ್ರಿಸಿ ಜೋರಾಗಿ ಬಾಗಿಲ ಗಂಟೆ ಬಾರಿಸಿ, ಚಿತ್ರೀಕರಿಸಿದ ಸಿಡಿಯನ್ನು ಬಾಗಿಲಲ್ಲಿ ಬಿಟ್ಟು ಮೊದಲೇ ವಿಷಯ ತಿಳಿಸಿಟ್ಟಿದ್ದ ಪೋಲಿಸರನ್ನು ಕರೆ ತರಲು ಓಡುತ್ತಾನೆ. ಬಾಗಿಲಲ್ಲಿ ಗಂಟೆ ಬಾರಿಸಿದವರಾರು ಇರಲಿಲ್ಲ ಬದಲಾಗಿ ಅಲ್ಲಿ ಬಿದ್ದಿರುವ ಸಿಡಿಯನ್ನು ಎತ್ತಿ ಮಗನಲ್ಲಿ ಈ ಸಿಡಿ ಇತ್ತು ಬಾಗಿಲಲ್ಲಿ. ಏನಿದೆ ನೋಡುವ ಎಂದು ನೋಡಿದಾಗ ತಮ್ಮದೇ ದುಶ್ಕ್ರುತ್ಯ ನೋಡಿ ದಂಗಾಗಿ. ಇದು ನಿನ್ನದೇ ಕೆಲಸವಲ್ಲವೇ ಎಂದು ಅವಳನ್ನು ಕತ್ತು ಹಿಚುಕಿ ಕೊಲ್ಲಲು ಮುಂದಾಗುತ್ತಾರೆ. ಅದೇ ಸಮಯಕ್ಕೆ ಮಹೇಂದ್ರ ಪೋಲಿಸರನ್ನು ಕರೆದು ಕೊಂಡು ಸಕಾಲಕ್ಕೆ ಬಂದು ಅವಳನ್ನು ರಕ್ಷಿಸಿ ಆ ಮೂವರನ್ನು ಬಂಧಿಸುತ್ತಾರೆ.

ರೋಶನಿಯ ಗಂಡ, ಅತ್ತೆ ಹಾಗೂ ಮಾವನಿಗೆ ಮುಂಬಯಿ ನ್ಯಾಲಯವು ವಿಧಿಸಿದ ಶಿಕ್ಷೆ ಹಾಗೂ IPC ಸಂಖ್ಯೆಯನ್ನು ಈ ಕೆಳಗೆ ನೀಡಲಾಗಿದೆ.ಬಲವಂತ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಹಾಗೂ ಅಪರಾಧಿಕ ಷಡ್ಯಂತ್ರಕ್ಕಾಗಿ... ಸೆಕ್ಶನ್498A, 339C, 120B ಯಂತೆ 7 ವರ್ಷಗಳ ಕಠಿನ ಸಜೆ ವಿಧಿಸಲಾಯಿತು.

ಮಾನವನು ಇಷ್ಟೊಂದು ನೀಚನಾಗಿರ ಬಹುದೇ ಎಂಬ ಪ್ರೆಶ್ನೆ ನಿಮ್ಮಲ್ಲೂ ಉಧ್ಭವಿಸುತ್ತಿರ ಬಹುದಲ್ಲವೇ...? ಹೌದು ಇದ್ದಾರೆ ... ನಮ್ಮ ಸಮಾಜದಲ್ಲಿ ಇನ್ನೂ ಕೂಡ ಕೆಲವರು ಹೆಣ್ಣನ್ನು ಕೇವಲ ಹಣ ಗಳಿಸುವ ಯಂತ್ರ ಎಂದು ಭಾವಿಸಿದ್ದಾರೆ. ತಮ್ಮ ದುರಾಸೆಗಾಗಿ ಯಾವ ರೀತಿಯಲ್ಲಾದರೂ ಉಪಯೊಗಿಸಲು ನಾಚುವುದಿಲ್ಲ.

ನಾವು ನಮ್ಮ ಸ್ವಂತಕ್ಕಾಗಿ ಏನಾದರೂ ಖರೀದಿಸುವಾಗ,ಆ ವಸ್ತುವನ್ನು ಸರಿಯಾಗಿ ಪರೀಕ್ಷಿಸಿ ನಂತರ ಖರೀದಿಸುತ್ತೆವೆ... ಆದರೆ ತಮ್ಮ ಮುದ್ದಿನ ಮಗಳು ಮದುವೆಯ ವಯಸ್ಸಿಗೆ ಬಂದಾಗ ಅದೇ ಮುದ್ದಿನ ಮಗಳು ತಲೆಯ ಭಾರವಾಗ ತೊಡಗುತ್ತಾಳೆ. ಯಾರಿಗಾದರೂ ತಲೆಗೆ ಕಟ್ಟಿ ಕೊಡಲು ತುದಿಗಾಲಲ್ಲಿ ಇರುತ್ತಾರೆ. ಹುಡುಗನ ಪೂರ್ವಪರ ಪರಿಶೀಲಿಸದೆ ತಲೆಯ ಭಾರವನ್ನು ಇಳಿಸುವ ಆತುರದಲ್ಲಿರುತ್ತಾರೆ. ನಂತರ ಅನುಭವಿಸುವುದು ಆ ಹೆಣ್ಣು ಜೀವ ಮಾತ್ರ…!!!

# ತಲೆಯ ಭಾರ ಇಳಿಸುವ ಆತುರದಲ್ಲಿ ಆ ಬಡ ಜೀವವನ್ನು ಯಾಕೆ ಕೈಗೊಂಬೆಯಾಗಿಸುತ್ತೀರ...???
# ಅದೇ ರೀತಿ ಮನೆಗೆ ಬಂದ ಸೊಸೆಯನ್ನು ಅಷ್ಟೊಂದು ಕ್ರೂರವಾಗಿ ಯಾಕಾಗಿ ಹಿಂಸಿಸುತ್ತೀರ...???
# ನೀವು ಪ್ರಾಣಿಗಿಂತಲೂ ಕಡೆಯಾಗಿದ್ದೀರಾ...???
# ವರದಕ್ಷಿಣೆಗೆ ಒತ್ತಾಯಿಸಿದರೆ, ಕೇಸು, ಕೋರ್ಟು ಅಂತ ಅಲೆಯ ಬೇಕಾದಿತು ಎಂದು ಈ ರೀತಿ ಸುಲಭವಾಗಿ ಹಣ ಮಾಡುವ ದುರಾಲೊಚನೆಯೆ...???

# ನಿಮ್ಮಂತವರಿಗೆ ನನ್ನ ಸಾವಿರ ಧಿಕ್ಕಾರವಿದೆ...!!!
ನಿಮ್ಮವನೇ ಆದ
-ಮುಖ್ತಾರ್ ಉಚ್ಚಿಲ

ದೆಹಲಿ ಅನುಭವ




ಗೆಳೆಯರೇ...

ಕೆಲಸದ ನಿಮಿತ್ತ ತುರ್ತಾಗಿ ದೆಹೆಲಿಗೆ ಹೋಗಬೇಕಾಗಿ ಬಂದ್ದಿದ್ದರಿಂದ, ಓರ್ವ ಗೆಳೆಯನಜೊತೆಗೂಡಿ, ಸಮಯದ ಅಭಾವದ ಕಾರಣಮಂಗಳೂರಿನಿಂದ ದೆಹಲಿಗೆ ವಿಮಾನವೇರಿದೆ. ನನ್ನದೆಹಲಿ ಪ್ರಯಾಣದಲ್ಲಾದ ಕೆಲವು ಅನುಭವಗಳನ್ನುತಮ್ಮ ಮುಂದಿಡುತ್ತಿದ್ದೆನೆ.
ಮಂಗಳೂರಿನಿಂದ ಮುಂಬಯಿ ಮುಖಾಂತರಮಧ್ಯ ರಾತ್ರಿಗೆ ದೆಹಲಿ ಪ್ರಾದೇಶಿಕ ವಿಮಾನನಿಲ್ದಾಣದಲ್ಲಿ ಇಳಿದು ಹೊರಗೆ ಬಂದಾಗ ನೂರಾರುಬಾಡಿಗೆ ಕಾರುಗಳು ನಮಗೆದುರಾದವು. ಒಬ್ಬರನಂತರ ಒಬ್ಬರು ಟ್ಯಾಕ್ಸಿ ಬೇಕಾ ಎಂದು ಕೇಳತೊಡಗಿದರು. ಪಹಾಡ್ ಗಂಜ್ ಗೆ ಹೋಗಲು ಎಷ್ಟುಚಾರ್ಜ್ ಮಾಡುವಿರಿ ಎಂದು ಕೇಳಿದಾಗ, ನಮಗೆಸಿಕ್ಕಿದ ರೇಟ್ ಗಳನ್ನು ನೀವೇ ಗಮನಿಸಿ... ಒಬ್ಬರನಂತರ ಒಬ್ಬರು – 1500/-, 1200/-, 1000/-, 800/- ಕೊನೆಗೆ 700/- ರೂಪಾಯಿಗೆ ಬಂದು ನಿಂತಿತು.ಎಲ್ಲರ ರೇಟು ಕೇಳಿದ ನಂತರ, ನಿಲ್ದಾಣದಲ್ಲಿರುವ ಪ್ರೀಪೈಡ್ ಟ್ಯಾಕ್ಸಿಯಲ್ಲಿ ವಿಚಾರಿಸಿದಾಗ ಕೇವಲ 350/-ರೂಪಾಯಿ ಎಂದು ಉತ್ತರ ಸಿಕ್ಕಿತು. ಅದನ್ನೆ ನಿಗದಿಪಡಿಸಿ ಮುನ್ನಡೆದೆವು. ದಾರಿ ಮದ್ಯೆ ಕಾರಿನಚಾಲಕನಲ್ಲಿ, ಯಾವುದಾದರೂ 2000-2500/-ರೂಪಾಯಿ ಬೆಲೆಯ ಒಳ್ಳೆಯ ಹೋಟೆಲ್ಕೊಡಿಸುವಂತೆ ಕೇಳಿದೆವು. ಅವನು ಒಂದುಹೊಟೇಲಿಗೆ ಕರೆದು ಕೊಂಡು ಹೋದ, ನಮಗಿಂತಮೊದಲು ಒಳ ಹೊಕ್ಕು "ಸಾರ್ ಗೆ ರೂಮ್ ತೋರಿಸು"ಎಂದ. ರೇಟು ಎಷ್ಟು ಕೇಳಿದರೆ "ಮೊದಲು ರೂಮ್ನೋಡಿ, ಒಪ್ಪಿಗೆಯಾದರೆ ರೇಟು ತಿಳಿಸುವೆ" ಎಂದುರೂಮ್ ಬಾಯ್ ನೊಂದಿಗೆ ಕಳುಹಿಸಿದ. ರೂಮ್ಸಣ್ಣದಾಗಿದ್ದರೂ 2500/- ಬೇರೆ ವಿಧಿಯಿಲ್ಲದೆ ಒಪ್ಪಿದೆ.ನಮ್ಮ ಇನ್ನೋರ್ವ ಗೆಳೆಯ ದುಬಾಯಿ ಯಿಂದಬರುವವನಿದ್ದ ಕಾರಣ 2 ರೂಮ್ ಪಡೆದೆವು.

ಆದರೆ ನಂತರ ತಿಳಿಯಿತು ಆ ರೂಮ್ ಗೆಹೆಚ್ಚೆಂದರೆ 1000/- ರೂಪಾಯಿ ಕೊಡಬಹುದುಎಂದು. ನಮ್ಮನ್ನು ಕರೆದುಕೊಂಡು ಬಂದ ಟ್ಯಾಕ್ಸಿಡ್ರೈವರ್ ನಾವು ರೂಮ್ ನೋಡಲು ಒಳಗೆಹೋದಾಗ ಹೋಟೇಲಿನವನೊಂದಿಗೆ 2500/- ಹೇಳುಎಂದು ಫಿಕ್ಸಿಂಗ್ ಮಾಡಿ, ಬಾಕಿ ಹಣವನ್ನು ತನ್ನಜೇಬಿಗಿಳಿಸಿ ಹೋಗಿದ್ದ. ಸಾಮಾನ್ಯವಾಗಿ ನಾನುಯಾವಾಗಲೂ ದೂರದೂರಿಗೆ ಪ್ರಯಾಣ ಹೊರಡುವಾಗ Booking.com/app ನಲ್ಲಿ ನಿರ್ದಿಷ್ಟ ಸ್ಥಳದ ಹೋಟೆಲ್ ಗಳ ಬೆಲೆಯನ್ನು ಪರೀಕ್ಷಿಸಿಮುಂಗಡವಾಗಿ ಕಾಯ್ದಿರಿಸುತ್ತಿದ್ದೆ. ಆದರೆ ಈ ಸಲಸಮಯದ ಅಭಾವದ ಕಾರಣ ಪರೀಕ್ಷಿಸಲಾಗಲಿಲ್ಲ. ಆಸಂದರ್ಭದಲ್ಲಿ ನನಗೆ ಈ app ನ ಮಹತ್ವ ತಿಳಿಯಿತು.

ಮರುದಿನ ಮಧ್ಯಾನ್ಹ 1:30 ಕ್ಕೆ ಹೋಟೆಲ್ಬಿಡುವಾಗ 2 ರೂಮ್ 2 ದಿನದ ಬಾಡಿಗೆ ಕೇಳಿದ.ನಾವು ಕೇವಲ 13 ಗಂಟೆ ಮಾತ್ರ ಉಳಿದುಕೊಂಡದ್ದು,ಅದಕ್ಕೆ ಎರಡು ದಿನದ ಬಾಡಿಗೆ ಯಾಕೆ ಎಂದು ಕೇಳಿದೆ.ಅದಕ್ಕವನು "ನೀವು ಯಾವುದೇ ಸಮಯದಲ್ಲಿಬಂದರೂ ಮಧ್ಯಾನ್ಹ 12 ಗಂಟೆ ಮೊದಲು ರೂಮ್ಖಾಲಿ ಮಾಡ್ಬೆಕು. ಇಲ್ಲಂದ್ರೆ ಮರುದಿನದ ಬಾಡಿಗೆಕಡ್ಡಾಯ ಪಾವತಿಸ ಬೇಕು. ಆಗ ನಾನುBooking.com/app ನ ಮೊರೆ ಹೋದಾಗ ಅದೇಪರಿಸರದಲ್ಲಿ ಇನ್ನೊಂದು ಉತ್ತಮ ಹೋಟೆಲ್ಲಭಿಸಿದಾಗ ಅದನ್ನೇ ರಿಸರ್ವ್ ಮಾಡಿ, ಅಲ್ಲಿಂದನಿರ್ಗಮಿಸಿದೆವು. ನಮಗೆ ಲಭಿಸಿದ ಹೋಟೆಲ್ವಿಶಾಲವಾಗಿಯೂ, ಸ್ವಚ್ಚವಾಗಿತ್ತು. ನಾವು 3 ಜನರಿಗೆಉಳಿದು ಕೊಳ್ಳಲು ಬಾಡಿಗೆ ಕೇವಲ 2800/-ರೂಪಾಯಿ ಮಾತ್ರ – Thanks to Booking.com/app

ನಮ್ಮ ಉದ್ದೇಶಿತ ಕಾರ್ಯವು 3 ದಿನ ವಿಳಂಭವಾದ ಕಾರಣ ಮರುದಿನ ಜಗತ್ತಿನ 7 ನೇ ಅಧ್ಭುತವಾದ ಆಗ್ರಾದ "ತಾಜ್ ಮಹಲ್" ನೋಡಲು7000/- ಪಾವತಿಸಿ ಬಾಡಿಗೆ ಕಾರು ನಿಗದಿಪಡಿಸಿ ಮುಂಜಾನೆ 6 ಗಂಟೆಗೆ ಹೊರಟೆವು. 4 ಗಂಟೆಗಳ ಪ್ರಯಾಣವಾದ ಕಾರಣ, ದಾರಿ ಮದ್ಯೆ ಕಾರು ಚಾಲಕ ಕೇಳಿದ "ಸಾರ್ ಚಹ, ತಿಂಡಿಗಾಗಿ ಮುಂದೆ ಒಂದು ಧಾಭಾವಿದೆ" ಎಂದ. ಅದರಂತೆ ಧಾಭಾದ ಒಳಗೆ ಹೋಗಿ ತಿಂಡಿಗಳ ದರ ಪಟ್ಟಿ ನೋಡಿ ದಂಗಾದೆವು. ಒಂದು ಪ್ಲೇಟ್ ಪೂರಿಗೆ 125/-, ಕೇವಲ ಒಂದು ಪರೋಟಕ್ಕೆ 40/-, ಚಹ 50/- ರೂಪಾಯಿ. ಊರಿನಲ್ಲಿ15 ರೂಪಾಯಿಗೆ ಸಿಗುವ ಬಿಸ್ಕಿಟ್ ಗೆ 170/- ಮುಂದಿನ ಧಾಭಾದಲ್ಲಿ ಅದೇ ಬಿಸ್ಕಿಟ್ ಗೆ 50/- ರೂಪಾಯಿ ಕೊಟ್ಟು ಖರೀದಿಸಿ ಮುಂದುವರಿದು ಒಂದು ಕ್ಯಾಂಟೀನ್ ನಲ್ಲಿ ಚಹ ತಿಂಡಿ ಮುಗಿಸಿದೆವು.

ನಂತರ ಆಗ್ರಾ ತಲುಪಿದಾಗ ತಾಜ್ ಮಹಲ್ ನ ಗೇಟ್ ನಲ್ಲಿ ಸೈಕಲ್ ರಿಕ್ಷಾದವ ಹೇಳಿದ " ಸಾರ್ ಇದು ಸರಕಾರಿ ಪ್ರಾಯೊಜಿತ ಸೈಕಲ್. ತಾಜ್ ಮಹಲ್ ಬಳಿಗೆ ಬಿಡಲು ಕೇವಲ 40/- ರೂಪಾಯಿ ಮಾತ್ರ" ಒಮ್ಮೆ ಸೈಕಲ್ ರಿಕ್ಷಾ ಏರಿದ ಮೇಲೆ, ಅಲ್ಲಿಯ ಪರಿಸರದ ಬಗ್ಗೆ ವಿವರಿಸಲು ತೊಡಗಿದ. ಕೊನೆಗೆ "ಸಾರ್ ಇಲ್ಲಿ ಒಂದು ಸರಕಾರಿ ಬಟ್ಟೆ ಅಂಗಡಿ ಇದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸೀರೆಗಳು. ಬಿದಿರನ್ನು ಎಳೆ ಎಳೆಯಾಗಿ ಬಿಡಿಸಿ, ಅದರಿಂದ ತಯಾರಿಸಿದ ಸೀರೆಗಳು. ಬಾಳೆ ದಿಂಡಿನ ಎಳೆಗಳಿಂದ ತಯಾರಿಸಿದ ಸೀರೆಗಳು. ನಯವಾಗಿಯೂ, ಅತೀ ಹಗುರವಾದ, ಇಸ್ತ್ರಿ ಹಾಕುವ ಅಗತ್ಯವಿಲ್ಲದ ಸೀರೆಗಳು. ಜೈಲಿನಲ್ಲಿರುವ ಕೈದಿಗಳಿಂದ ತಯಾರಿಸಲ್ಪಡುತ್ತದೆ. 5 ವರ್ಷ ವಾರಂಟಿಯೂ ಇದೆ. ಅದೂ ಅಲ್ಲದೆ 3-4 ವರ್ಷ ಉಪಯೊಗಿಸಿದ ನಂತರ ಹಿಂತಿರುಗಿಸಿದರೆ ಅರ್ಧ ಹಣ ವಾಪಸ್ ನೀಡುತ್ತಾರೆ. ಬೆಂಗಳೂರಿನಲ್ಲಿ ಇವರ ಶಾಖೆಗೆ ಹಿಂತಿರುಗಿಸ ಬಹುದು. ಅಲ್ಲಿ ಒಂದು ದಪ್ಪವಾದ ಹಾಗೂ ಹತ್ತಿಗಿಂತ ಹಗುರವಾದ ಚಾದರ ಸಿಗುತ್ತದೆ. ಚಳಿಗಾಲದಲ್ಲಿಯೂ ಉಪಯೊಗಿಸಿ, ಸೆಖೆಗಾಲದಲ್ಲಿ ಅದನ್ನೆ ತಿರುಗಿಸಿ ಹೊದ್ದು ಕೊಂಡರೆ ತಂಪಾಗಿರಿಸುತ್ತದೆ." ಹೀಗೆ ಹೇಳುತ್ತಾ ನಾನು ನಿಮ್ಮನ್ನು ಮೊದಲು ಅಲ್ಲಿಗೆ ಕರೆದು ಕೊಂಡು ಹೋಗುವೆ, ನಂತರ ತಾಜ್ ಮಹಲ್ ಗೆ ಕರೆದು ಕೊಂಡು ಹೋಗುವೆ ಎಂದ. ಅವನ ಮಾತಿಗೊಪ್ಪಿ ಆ ಅಂಗಡಿಗೆ ಭೇಟಿ ನೀಡಿ ಬಾಳೆ ದಿಂಡಿನ ಮತ್ತು ಬಿದಿರಿನ ೨ ಸೀರೆ ಹಾಗು ಒಂದು ಚಾದರ ಖರೀದಿಸಿ ಸೈಕಲ್ ಹತ್ತಿ ಕುಳಿತು ಚಾಲಕನಿಗಾಗಿ ಕಾಯುತಿದ್ದೆವು. ಅವನು ನಮ್ಮ ವ್ಯಾಪಾರದ ಮೊತ್ತಕ್ಕನುಗುಣವಾಗಿ ಕಮಿಶನ್ ಪಡೆಯಲು ಹೊಗಿದ್ದ ಎಂದು ನಂತರ ತಿಳಿಯಿತು. ಅಲ್ಲಿಂದ ತಾಜ್ ಮಹಲ್ ಕಡೆಗೆ ಹೊರಟೆವು.

ಟೂರಿಸ್ಟ್ ಗೈಡ್ ನ ಸಹಾಯ ಪಡೆಯುವುದು ಬೇಡವೆಂದು ಮೊದಲು ನಿರ್ಧರಿಸಿದ್ದೆವು. ಆದರೆ ತಾಜ್ ಮಹಲ್ ಪ್ರವೇಶಕ್ಕೆ 400-500 ಜನ ಕ್ಯೂ ನಿಂತಿದ್ದರು. ಆಗ ಅಲ್ಲಿಗೆ ಬಂದ ಗೈಡ್ ನಮಗೆ ಹೇಳ ತೊಡಗಿದ "ಸಾರ್ ಹೀಗೆ ಹೋದರೆ ಟಿಕೆಟ್ ಸಿಗುವಾಗ ಸಂಜೆಯಾಗುತ್ತದೆ. ನಾನು ನಿಮ್ಮನ್ನು ಕಾಯಿಸದೆ 5ನಿಮಿಷದಲ್ಲಿ VIP ಗೇಟ್ ಮುಖಾಂತರ ಒಳಗೆ ಕರೆದು ಕೊಂಡು ಹೋಗುವೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿ ಕೊಳ್ಳುವೆ. ಕೇವಲ450/- ರೂ ಕೊಡಿ ಎಂದ. ಅಲ್ಲಿರುವ ಕ್ಯೂ ನೋಡಿ ಅವನ ಮಾತಿನ ಮೇಲೆ ನಂಬಿಕೆ ಇರಲಿಲ್ಲ. ಆದರೂ ವಿಧಿಯಿಲ್ಲದೆ ಒಪ್ಪಿದೆವು. ಅವನು ತನ್ನ ಮಾತಿನಂತೆ ನಮ್ಮನ್ನು ಇಕ್ಕಟ್ಟಾದ ಓಣಿಗಳಲ್ಲಿ ಕರೆದು ಕೊಂಡು ಹೋಗಿ ಟಿಕೇಟ್ ಪಡೆದು 5 ನಿಮಿಷದಲ್ಲಿ ಹೊರಗಿನVIP ಗೇಟ್ ಮುಖಾಂತರ ಪ್ರವೇಶಿಸುವಂತೆ ಮಾಡಿದ. ಪರಿಸರವನ್ನು ಸುತ್ತಾಡಿಕೊಂಡು ತಾಜ್ ಮಹಲ್ ನ ಒಳಗೆ ಹೋಗಲು ಇನ್ನಷ್ಟು (100-150 ಜನರ) ಕ್ಯೂ ಇತ್ತು. ಆಗ "ಚಿಂತೆ ಮಾಡಬೇಡಿ, ಎರಡೇ ನಿಮಿಷದಲ್ಲಿ ನಾವು ಒಳಗೆ ಹೋಗುವಂತೆ ಮಾಡುವೆ" ಎಂದವನೇ ಸರತಿಯ ಸಾಲನ್ನು ದಾಟಿಸಿ, ತಟ್ಟನೆ ಒಳಗೆ ಹೊಗಲು ಅನುವು ಮಾಡಿ ಕೊಟ್ಟು, ಸವಿವರವಾಗಿ ಮಾಹಿತಿ ನೀಡಿದ ನಂತರ ಗೇಟ್ ನ ಹೊರಗಡೆ ನಮ್ಮ ಸೈಕಲ್ ರಿಕ್ಶಾದ ಬಳಿಗೆ ಬಿಟ್ಟ. ಅಲ್ಲಿಂದ ದೆಹಲಿಯ ನಮ್ಮ ಹೋಟೆಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಗೈಡ್ ನಿಂದಾಗಿ ನಮ್ಮ ಕೆಲಸ ತುಂಬಾನೆ ಸುಲಭವಾಯಿತು.

ದೆಹಲಿಗೆ (ಇತರ ಊರಿಗೂ ಅನ್ವಯ) ಪ್ರಯಾಣಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಿ.

· ಚಳಿಗಾಲದ ಸಮಯದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಥವ ಹತ್ತುವಾಗ ಸಾಧ್ಯವಾದಷ್ಟು 10 am ಗಂಟೆಯ ನಂತರದ ವಿಮಾನಗಳೊಂದಿಗೆ ವ್ಯವಹರಿಸಿ.ಏಕೆಂದರೆ,ಮಧ್ಯರಾತ್ರಿಯಿಂದ ಬೆಳ್ಳಗಿನವರೆಗೆ ದಟ್ಟವಾದ ಮಂಜು ಆವರಿಸಿರುವ ಕಾರಣ ವಿಮಾನ ವಿಳಂಬ(ಆಗುತ್ತದೆ)ವಾಗುವ ಸಾಧ್ಯತೆಗಳಿರುತ್ತವೆ.
· ಟ್ಯಾಕ್ಸಿಯನ್ನು ಪ್ರೀ ಪೈಡ್ ಕೌಂಟರ್ ನಿಂದಲೇ ಕಾಯ್ದಿರಿಸಿಕೊಳ್ಳಿ.
· ಹೋಟೆಲ್ ಕಾಯ್ದಿರಿಸಲು ಕೆಲವೊಂದು ಆಪ್ಲಿಕೆಶನ್ ಗಳು ಸ್ಮಾರ್ಟ್ ಫೊನ್ ಗಳಲ್ಲಿ ಲಭ್ಯವಿದೆ. ಹಾಗಾಗಿ ಪ್ರಯಾಣ ಹೊರಡುವ ಮೊದಲೇ ಅಂತಹ ಆಪ್ಲಿಕೆಶನ್ ಸಹಾಯದಿಂದ ತಮ್ಮ ಹೋಟೆಲ್ ಕೋಣೆಯನ್ನು ಕಾಯ್ದಿರಿಸಿಕೊಳ್ಳಿ. ಇಲ್ಲಾಂದ್ರೆ ದುಪಟ್ಟ ಹಣ ಕೊಡ ಬೇಕಾಗಿ ಬರಬಹುದು.
· ಕೆಲವು ಹೋಟೆಲ್ ಗಳಲ್ಲಿ ನೀವು ಪ್ರವೆಶಿಸಿದ ಕ್ಷಣದಿಂದ ನಿಮ್ಮ ಸಮಯ ಶುರುವಾಗಿ ಮರುದಿನ ಅದೇ ಸಮಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಕೆಲವು ಹೋಟೆಲ್ ಗಳಲ್ಲಿ 12pm ಗೆ ಕೋಣೆ ಬಿಡ ಬೇಕಾಗಿದೆ. ಅದರ ನಂತರ ಅರ್ಧ ಗಂಟೆ ಕಳೆದರೂ ಮರು ದಿನದ ಬಾಡಿಗೆಯನ್ನು ಪಾವತಿಸ ಬೇಕಾಗುತ್ತದೆ. ಹಾಗಾಗಿ ಇದನ್ನು ಮೊದಲೇ ಹೋಟೆಲ್ ನವರಿಂದ ಕೇಳಿ ತಿಳಿದು ಕೊಳ್ಳಿ.
· ತಾಜ್ ಮಹಲ್ ನಲ್ಲಿ ಗೈಡ್ ಪಡಕೊಂಡ್ರೆ ಒಳ್ಳೆದು. (ಅನುಭವದ ಮಾತು)
· ಚಳಿಗಾಲದಲ್ಲಿ ಹವಾಮಾನ 4 ಡಿಗ್ರಿಯವರೆಗೆ ಇಳಿಯುತ್ತದೆ. ಹಾಗಾಗಿ ಅದಕ್ಕೆ ತಕ್ಕುದಾದ ಬಟ್ಟೆ,ಕಾಲು ಚೀಲ, ಕೈ ಚೀಲ ಇತ್ಯಾದಿಗಳೊಂದಿಗೆ ಪ್ರಯಾಣಿಸಿ.
ದೆಹಲಿ ಪ್ರಯಾಣದಲ್ಲಿ ನನಗಾದ ಅನುಭವ ಹಾಗೂ ಪ್ರಯಾಣಿಕರಿಗೆ ಉಪಯೋಗವಾಗಲಿ ಎಂಬುದು ಈ ಲೇಖನ ಬರೆಯುವ ಉದ್ದೇಶ. ಹಾಗಾಗಿ ಈ ಲೇಖನ ಉಪಯುಕ್ತವಾಗಿದೆ ಎಂಬ ವಿಶ್ವಾಸದೊಂದಿಗೆ
ನಿಮ್ಮವನೇ ಆದ
ಅನಾಮಿಕ...

ಭವಿಷ್ಯದಲ್ಲಿ ಭಾರತ




ಭಾರತವು ಬಹು ಸಂಕೀರ್ಣತೆಯ ಮತ್ತು ಬಹು ಸಮಾಜದ ಗೊಂದಲಮಯ ದೇಶವಾಗಿದೆ. ಹಾಗೆಯೇ ವಿಶ್ವ ದಲ್ಲಿಯೇ ಅತಿ ಹೆಚ್ಚಿನ ಧರ್ಮಗಳನ್ನು ಹೊಂದಿದೆ. ನಮ್ಮ ದೇಶದ ನಿಜವಾದ ಸಮಸ್ಯೆ ಶಿಕ್ಷಣ, ನಿರುದ್ಯೋಗ, ಬಡತನವೇ ಹೊರತು ಮಂದಿರ, ಮಸೀದಿ, ಗೋವು ,ಹಂದಿ ಅಲ್ಲ ಅಂತ ಎಲ್ಲಿವರೆಗೆ ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವ್ರದ್ದಿ ಮರೀಚಿಕೆ ಮಾತ್ರ. ಧರ್ಮ, ಬಟ್ಟೆ , ಆಹಾರ ವೈಯುಕ್ತಿಕವಾದವುಗಳೇ ಹೊರತು ಸಾರ್ವತ್ರಿಕವಾಗಿ ಹೇರಲ್ಪಡುವಂತದ್ದು ಅಲ್ಲ.

ನಮ್ಮ ವೋಟು ಪಡೆದವರು ತಮ್ಮ ತೀಟೆಗಳಿಗೆ ಜನರ ನಡುವೆ ದ್ವೇಷ ಏರ್ಪಡಿಸಿ ಕೋಮು ದಳ್ಳುರಿಗೆ ಪ್ರಚೋದಿಸುತ್ತಿರುವಾಗ, ನಮ್ಮ ದೇಶದ ಇಂಚು ಇಂಚನ್ನು ಹಂತ ಹಂತವಾಗಿ ನಮಗೆ ಗೊತ್ತೇ ಆಗದ ಹಾಗೆ ಮಾರುತ್ತಿರುವಾಗ ನಾವು ಕುರುಡ ರಂತೆ ಅವರನ್ನು ಅಪ್ಪಿಕೊಂಡರೆ ನಮ್ಮ ನಾಶ ಖಂಡಿತ .ಹೀಗಾಗಿ ನಮ್ಮಲ್ಲಿನ ವಿವಿದತೆಯನ್ನು ಬದಿಗಿಟ್ಟು ಭಾರತ ರಕ್ಷಣೆಗೆ ನಾವೆಲ್ಲಾ ಒಂದಾಗಿ ನಮ್ಮ ಶಕ್ತಿಯನ್ನು ದುಪ್ಪ
ಟ್ಟು ಗೊಳಿಸಿಕೊಳ್ಳಳು ಪ್ರಯತ್ನಿಸದಿದ್ದರೆ ಭವಿಷ್ಯದಲ್ಲಿ ಅಧಃಪತನಕೀಡಾಗುವ ಅಪಾಯವಿದೆ.

ನಮ್ಮ ನಡೆ-ನುಡಿ, ವೇಷ -ಭೂಷಣ, ಆಚಾರ-ವಿಚಾರ, ಆಹಾರ-ವಿಹಾರದ ವಿವಿಧತೆಯಲ್ಲಿಯೂ ಕೂಡ ಏಕತೆಯನ್ನು ಒಪ್ಪಿಕೊಂಡಿರುವ ನಾವು ಸಂಕುಚಿರಾಗದೆ, ನಮ್ಮ ಅನನ್ಯತೆಯನ್ನು ಮೆಚ್ಚಿಕೊಂಡು ಮುನ್ನಡೆದರೆ ಮಾತ್ರ ದೇಶ ವಿಕಾಶದ ಕನಸು ನನಸಾಗಲು ಸಾದ್ಯ. ಭವಿಷ್ಯದ ಭಾರತದ ಅಬಿವ್ರದ್ದಿಗೆ ಹೊಸ ದೃಷ್ಟಿಕೋನದ ಅಗತ್ಯವಿದ್ದು ಅಂತ ಹೊಸ ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ.ಎಲ್ಲ ಧರ್ಮದವರೂ ಸಮಾನವಾಗಿ ಎದುರಿಸಬೇಕಾದ ಸಮಸ್ಯೆಗಳಾದ ಶಿಕ್ಷಣ, ನಿರುದ್ಯೋಗ, ಬಡತನದ ವಿರುದ್ದ ಹೋರಾಡಬೇಕೆ ಹೊರತು ಪರಸ್ಪರ ಗುದ್ದಾಡುವುದು ಅಲ್ಲ. ದೇಶದ ಹಿತಾಶಕ್ತಿಯಿಂದ ನಮ್ಮೊಳಗಿನ ವೈಷಮ್ಯ ತೊರೆದು ಒಂದಾಗಬೇಕಿದೆ. ತನ್ಮೂಲಕ ಸಾಮಾನ್ಯ ಭಾರತೀಯರ ಹೆಬ್ಬಯಕೆಗಳನ್ನು ಈಡೇರಿಸಲು ಮತ್ತು ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಚಿಂತಕರು ,ಸಮಾಜ ಸುದಾರಕರು ಮುಂದೆ ಬರಬೇಕಾಗಿದೆ.

ಅಭಿವ್ರದ್ದಿಯ ಕಡೆಗೆ ನಡೆಸಬಲ್ಲ ಅಂಥ ನಡೆಯನ್ನು ವಿಶಾಲ ಮನಸ್ಸಿನಿಂದ ಒಪ್ಪಿಕೊಂಡರೆ ಭವಿಷ್ಯದಲ್ಲಿ ಭಾರತ ನಂಬರ್ ಒನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

- ಉಫಾಕು

ಸಾವಧಾನರಾಗಿರಿ, ಸುರಕ್ಷಿತರಾಗಿರಿ


ತಾರೀಖು 20/5/2012. ಪಂಜಾಬ್ ನ ಲುಧಿಯಾನದಿಂದ ನವ ವಿವಾಹಿತರಾದ ರಾಜ್ ಮತ್ತು ಪೂಜ ತಮ್ಮ ಮಧುಚಂದ್ರಕ್ಕಾಗಿ ದಿಲ್ಲಿಯ ರೆಸಾರ್ಟ್ ಒಂದಕ್ಕೆ ಪ್ರಯಾಣ ಬೆಳೆಸುತ್ತಾರೆ. ತಾವು ಪ್ರಯಾಣಿಸುತ್ತಿರುವ ವ್ಯಾನ್ ನಲ್ಲಿ ರಾಧ ಎಂಬ ಹುಡುಗಿಯು ಇರುತ್ತಾಳೆ. ಎಲ್ಲರೂ ರೆಸಾರ್ಟ್ ತಲುಪಿ ಈಜುಕೊಳದಲ್ಲಿ ಮೊಜಿನಲ್ಲಿ ಮುಳುಗುತ್ತಾರೆ. ಅದೇ ಸಂಧರ್ಭದಲ್ಲಿ ಸುಸಂಧರ್ಭ ನೋಡಿ ರಾಧ, ರಾಜ್ ನನ್ನು ಭೇಟಿಯಾಗುತ್ತಾಳೆ.ಇದನ್ನು ರಾಜ್ ನ ಪತ್ನಿ ದೂರದಿಂದ ಗಮನಿಸಿ ನಂತರ ಕೋಣೆಗೆ ಬಂದಾಗ ಕೇಳುತ್ತಾಳೆ "ಯಾರು ಆ ಹುಡುಗಿ? ಏನು ಮಾತನಾಡಿದಳು?" ಎಂದು. ಅದಕ್ಕೆ ರಾಜ್ ಏನೂ ಆಗದವನಂತೆ "ಏನಿಲ್ಲ ಡಾರ್ಲಿಂಗ್, ಪರಸ್ಪರ ಪರಿಚಯ ಮಾಡಿಕೊಂಡೆವು" ಎಂದು.
ರಾಜ್ ಓರ್ವ ಪರ್ತ್ರಕರ್ತನಾಗಿದ್ದ. ನಂತರ ಇವರಿಬ್ಬರೂ (ರಾಜ್ ಹಾಗೂ ರಾಧಾ) ಪರಸ್ಪರ ಓರೆ ಕಣ್ಣಿನಿಂದ ನೋಡುವುದು,ಪರಸ್ಪರ ಕಣ್ಸನ್ನೆ, ಸಂಶಯದಿಂದ ವರ್ತಿಸುವುದು ಎಲ್ಲಾ ನಡೆಯುತಿತ್ತು. ದಿನದ ಹೊತ್ತಿನಲ್ಲಿ ಹೊರಾಂಗಣದ ಮೊಜಿನ ಸಮಯದಲ್ಲೂ ತನ್ನ ನವ ಪತ್ನಿಯನ್ನು ಹೇಳದೆ ಕೇಳದೆ ಮಾಯವಾಗುತಿದ್ದ. ಆ ಸಮಯದಲ್ಲೂ ರಾಧಾ ಕೂಡ ಅಲ್ಲಿರುತ್ತಿರಲಿಲ್ಲ. ಸ್ವಲ್ಪ ಸಮಯದ ನಂತರ ಪ್ರತ್ಯಕ್ಶವಾಗುತಿದ್ದ. ನಂತರ ರಾಧಾ ಕೂಡ ಪ್ರತ್ಯಕ್ಷವಾಗುತಿದ್ದಳು. ಹಾಗೂ ರಾತ್ರಿ ಹೊತ್ತು ತನ್ನ ಲ್ಯಾಪ್ಟಾಪ್ ನಲ್ಲಿ ಏನೋ ಮಾಡುತಿದ್ದ. ಇದೇ ರೀತಿ ನಡೆಯುತ್ತಿರುವಾಗ ಪತ್ನಿ ಪೂಜ ತನ್ನ ಸಹನೆ ಮುರಿದು ಕೇಳುತ್ತಾಳೆ. ಆಗಲೂ ಹೇಳುತ್ತಾನೆ "ಡಾರ್ಲಿಂಗ್, ತಪ್ಪು ತಿಳಿಯಬೇಡ. ಒಂದು ಮುಖ್ಯವಾದ ಕೆಲಸ ಮಾಡುತ್ತಿದ್ದೆನೆ. ಮನೆಗೆ ಮರಳಿದ ನಂತರ ಸವಿವರವಾಗಿ ತಿಳಿಸುವೆ" ಎಂದು. ಹಾಗಾದರೆ ನಾಳೇನೆ ನಮ್ಮ ಮಧುಚಂದ್ರ ಬಿಟ್ಟು ಊರಿಗೆ ಹೊರಡುವ ಎಂದು ಹಟ ಹಿಡಿಯುತ್ತಾಳೆ. ಆಗ ರಾಜ್ "ಡಾರ್ಲಿಂಗ್ ಇನ್ನು ಎರಡು ದಿನ ನನಗೆ ಕೊಡು. ನಂತರ ನಿನ್ನ ಬಿಟ್ಟು ಎಲ್ಲೂ ಹೊಗಲ್ಲ, ರಾತ್ರಿ ತುಂಬಾ ಆಯಿತು. ಈಗ ಮಲಗು. ಬೆಳಿಗ್ಗೆ ಮಾತನಾಡುವ" ಎಂದು ಸಮಾಧಾನ ಪಡಿಸುತ್ತಾನೆ. ತಡರಾತ್ರಿ ತನ್ನ ಮೊಬೈಲ್ಗೆ ಬಂದ ರಾಧಾಳ SMS ಓದಿ, ಪತ್ನಿಗೆ ಅರಿಯದಂತೆ ಹೊರಟು ಬಿಡುತ್ತಾನೆ. ಪೂಜ ಬೆಳಗೆದ್ದು ನೊಡುವಾಗ ರಾಜ್ ನ ಮ್ರುತದೇಹ ರೆಸಾರ್ಟ್ ನ ಈಜು ಕೊಳದಲ್ಲಿ ಅಂಗಾತ ಬಿದ್ದಿರುವುದನ್ನು ನೋಡಿ, ಅಕಾಶವೇ ಕಳಚಿ ಬಿದ್ದಂತಾಗುತ್ತಾಳೆ.

ಆದರೂ ಪೂಜ ಮನೆಗೆ ತೆರಳದೆ ಆ ರೆಸಾರ್ಟ್ ನಲ್ಲಿಯೆ ಉಳಿದು ತನ್ನ ಪತಿಯ ಸಾವಿನ ಕಾರಣ ತಿಳಿಯಲು ಕಾಯುತ್ತಾಳೆ. ಎರಡು ದಿನದ ನಂತರ ನೇರ ಪೊಲೀಸ್ ಸ್ಟೇಶನ್ ಗೆ ಧಾವಿಸುತ್ತಾಳೆ. ಅಲ್ಲಿ ಪೋಲಿಸ್ ಆಫೀಸರ್ ಹೇಳುತ್ತಾರೆ "ಶವ ಪರೀಕ್ಷೆಯ ಪ್ರಕಾರ, ಆಲ್ಕೊಹಾಲ್ ಮತ್ತು ಡ್ರಗ್ಗ್ಸ್ ರಾಜ್ ನ ದೇಹದಲ್ಲಿ ಪತ್ತೆಯಾಗಿದೆ. ಬಹುಶ ವಿಪರೀತ ಕುಡಿತ ಹಾಗೂ ಡ್ರಗ್ಗ್ಸ್ನಿಂದಾಗಿ ನಿಯಂತ್ರಣ ಕಳೆದು ಈಜು ಕೊಳಕ್ಕೆ ಬಿದ್ದು ಸಾವು ಸಂಭವಿಸಿದೆ" ಆದರೆ ಈ ಮಾತನ್ನು ಪೂಜ ಸುತಾರಾಂ ಒಪ್ಪಲು ತಯಾರಿಲ್ಲ. ಏಕೆಂದರೆ, ರಾಜ್ ವಿಪರೀತ ಕುಡಿಯುವ ವ್ಯಕ್ತಿಯಲ್ಲ ಹಾಗೂ ಡ್ರಗ್ಗ್ಸ್ ಅಂತೂ ಮಾರು ದೂರ.

ಪೂಜ ಅಲ್ಲಿಂದ ರಾಧಾಳ ಬಳಿಗೆ ಬಂದು ವಿನಂತಿಸುತ್ತಾಳೆ " ನೀನೂ, ರಾಜ್ ಗುಟ್ಟಾಗಿ ಮಾತನಾಡುತ್ತಿದ್ದೀರಿ, ಗುಟ್ಟಾಗಿ ಹೋಗುತ್ತಿದ್ದೀರಿ, ಏನು ವಿಷಯ? ನಿನಗೇನಾದರೂ ರಾಜ್ ನ ಸಾವಿನ ಬಗ್ಗೆ ಏನಾದರೂ ತಿಳಿದಿದೆಯೇ" ಎಂದು. ಆದರೆ ಅವಳು ಆ ವಿಷಯ ನನಗೆ ತಿಳಿದಿಲ್ಲ ಎಂದು ತನ್ನ ಕೋಣೆ ಸೇರುತ್ತಾಳೆ. ಮರುದಿನ ರಾಧಾ ನೇರವಾಗಿ ಪೂಜಾಳ ಕೋಣೆಗೆ ಬಂದು ಹೇಳುತ್ತಾಳೆ " ರಾಜ್ ಬಗ್ಗೆ ನನಗೂ ದುಖ್ಖವಿದೆ. ಈ ವಿಷಯದಲ್ಲಿ ಒಂದು ಸುಳಿವು ನೀಡಬಲ್ಲೆ ಆದರೆ ಇನ್ನು ಮುಂದೆ ನನ್ನನ್ನು ಭೇಟಿಯಾಗಬಾರದು, ನನ್ನಲ್ಲಿ ಮಾತನಾಡಲೂ ಬಾರದು. ಹಾಗಾದರೆ ಹೇಳುತ್ತೆನೆ ಕೇಳು - ರಾಜ್ ನ ಕ್ಯಾಮೆರದ ಚಿತ್ರಗಳನ್ನು ಪರಿಶೀಲಿಸು, ಉತ್ತರ ಸಿಗಬಹುದು" ಎಂದು. ಇದನ್ನ ಕೇಳಿ ಪೂಜ ತನ್ನ ಕೋಣೆಯಲ್ಲಿ ರಾಜ್ ನ ಕ್ಯಾಮೆರಕ್ಕಾಗಿ ಹುಡುಕಾಡುತ್ತಾಳೆ. ಆದರೆ ಕ್ಯಾಮೆರ ಅಲ್ಲಿ ಅವಳಿಗೆ ಸಿಗುವುದಿಲ್ಲ. ಆಗ ಅವಳ ಕಣ್ಣು ರಾಜ್ ನ ಲ್ಯಾಪ್ಟಾಪ್ ಮೆಲೆ ಬಿಳುತ್ತದೆ. ಆ ಲ್ಯಾಪ್ಟಾಪನ್ನು ಜಾಲಾಡುತ್ತಾಳೆ. ಅಲ್ಲಿ ಅವಳಿಗೆ ರಾಧಾ ಓರ್ವ ಅಪರಿಚಿತನೊಂದಿಗೆ ಹಾಸಿಗೆ ಹಂಚಿಕೊಂಡ ಚಿತ್ರ ಸಿಗುತ್ತದೆ. ಆ ಚಿತ್ರಗಳನ್ನು ಪೋಲಿಸರಿಗೆ ಕೊಟ್ಟಾಗ, ತಕ್ಷಣ ಆ ವ್ಯಕ್ತಿಯನ್ನು ಬಂದಿಸಿ ತಂದು ವಿಚಾರಿಸಿದಾಗ, ಅವನು ಹೇಳ ತೊಡಗುತ್ತಾನೆ "ನನ್ನ ಹೆಸರು ಮಿತ್ತಲ್. ನನಗೆ ದೇಹ ಸುಖ ಬೇಕಾಗಿದ್ದಾಗಲೆಲ್ಲ ಈ ರೆಸಾರ್ಟ್ ಗೆ ಬರುತ್ತಿರುತ್ತೆನೆ. ರಾಜ್ ಒಬ್ಬ ಬ್ಲ್ಯಾಕ್ ಮೆಲರ್ ಆಗಿದ್ದ. ನಾನು ರಾಧಾ ಜೊತೆ ಹಾಸಿಗೆಯಲ್ಲಿದ್ದ ಚಿತ್ರಗಳನ್ನು ರಾಜ್ ಕ್ಲಿಕ್ಕಿಸಿದ್ದ. ನಾನು ಅವನ ಕ್ಯಾಮೆರ ಪಡೆಯಲಿಕ್ಕಾಗಿ ಅವನ ಡ್ರಿಂಕ್ಸ್ ನಲ್ಲಿ ಡ್ರಗ್ಗ್ಸ್ ಬೆರೆಸಿದ್ದು ಹೌದು, ಆದರೆ ಅವನನ್ನು ಕೊಲೆ ಮಾಡಿಲ್ಲ" ಎನ್ನುತ್ತಾನೆ.

ಆಗ ರಾಧಾಳನ್ನು ಕರೆತಂದು ವಿಚಾರಿಸಿದಾಗ, ರಾಧಾ ಹೇಳುತ್ತಾಳೆ "ರಾಜ್ ಬ್ಲ್ಯಾಕ್ ಮೆಲರ್ ಅಲ್ಲ. ಅವನೊಬ್ಬ ಒಳ್ಳೆಯ ವ್ಯಕ್ತಿ. ನನ್ನನ್ನು ಮೋಸದಿಂದ ಈ ರೆಸಾರ್ಟ್ ನವರು ದೇಹ ಮಾರುವ ಧಂದೆಗೆ ಬೀಳಿಸಿದ್ದಾರೆ. ಈ ಕೂಪದಿಂದ ಪಾರಾಗಲು ರಾಜ್ ಸಹಕರಿಸುತ್ತಿದ್ದ. ನಾನು ಪ್ರತಿಸಲವೂ ಗಿರಕಿಗಳೊಂದಿಗೆ ಹೋಗುವಾಗ ಆ ಸ್ಥಳದ ವಿವರ ಹಾಗೂ ಸಮಯವನ್ನು ರಾಜ್ ಗೆ ತಿಳಿಸುತ್ತಿದ್ದೆ. ಆ ಸಮಯಕ್ಕೆ ರಾಜ್ ಬಂದು ಫೊಟೊ ತೆಗೆದು,ಸಾಕ್ಶ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದ" ಎಂದು.

ಅವಳ ಮಾತು ಕೇಳಿ, ಪೋಲೀಸರು ಆ ರೆಸಾರ್ಟ್ ನ ಟೂರಿಸ್ಟ್ ಗೈಡ್ ಕಪಿಲ್ನನ್ನು ಎಳೆ ತಂದು ಏರೊಪ್ಲೇನ್ ಹತ್ತಿಸಿದಾಗ ಒಂದೊಂದಾಗಿ ಬಾಯಿ ಬಿಡುತ್ತಾನೆ. " ಹೌದು, ನಾವು ಕಾಲೇಜು ಹುಡುಗಿಯರಿಗೆ SMS ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ಅದ್ರುಷ್ಟದ ಚೀಟಿಯಲ್ಲಿ ಪ್ರಥಮ ಸ್ಥಾನ ಗೆದ್ದಿದೆ. ನಿಮಗೆ ಉಚಿತ ಊಟದೊಂದಿಗೆ 5 ದಿನಗಳ ಉಚಿತ ರೆಸಾರ್ಟ್ ನಲ್ಲಿ ಉಳಿಯುವ ಅವಕಾಶ ಲಭಿಸಿದೆ. ನಿಮ್ಮೊಂದಿಗೆ ನಿಮ್ಮ ಓರ್ವ ಗೆಳತಿಯನ್ನು ಕರೆತರುವ ಸುವರ್ಣಾವಕಾಶವಿದೆ ಎಂದು ಅವರನ್ನು ರೆಸಾರ್ಟ್ ಗೆ ಬರುವಂತೆ ಮಾಡುತ್ತಿದ್ದೆವು. ಅವರು ಬಂದ ನಂತರ ಅವರಿಗೆ ಅಮಲು ಪದಾರ್ಥ ನೀಡಿ ಅವರೊಂದಿಗೆ ಸೆಕ್ಸ್ ನಡೆಸಿ ವಿಡಿಯೊ ಚಿತ್ರಿಸಿ ಅವರನ್ನು ನಮ್ಮ ಹಿಡಿತದಲ್ಲಿಟ್ಟು ಕೊಂಡು ಈ ಧಂದೆಗೆ ಬಳಸುತ್ತೇವೆ ಈ ನಮ್ಮ ಸೆಕ್ಸ್ ಜಾಲವನ್ನು ಆ ರಾಜ್ ಬಯಲು ಮಾಡುವವನಿದ್ದನು. ಅದಕ್ಕಾಗಿ ಡ್ರಿಂಕ್ಸ್ ಮತ್ತು ಡ್ರಗ್ಗ್ಸ್ ನ ನಶೆಯಲ್ಲಿದ್ದ ರಾಜ್ ನನ್ನು ಈಜುಕೊಳಕ್ಕೆ ದೂಡಿ ಉಸಿರು ಕಟ್ಟಿಸಿ ಸಾಯಿಸಿದೆ"

ಇವರ ದೊಷರೊಪಣೆ ಸಾಬೀತಾಗಿ,ನ್ಯಾಯಾಲಯವು ಈ ಕೆಳಗಿನಂತೆ ಶಿಕ್ಷೆ ವಿಧಿಸಿತು.
ಕಪಿಲ್:
ರಾಜ್ ನ ಕೊಲೆಗಾಗಿ ಐಪಿಸಿ ಸೆಕ್ಷನ್ 302
ಇಮ್ಮೊರಲ್ ಟ್ರಾಫಿಕ್ ಪ್ರಿವೆನ್ಶನ್ ಆಕ್ಟ್ ಪ್ರಕಾರ 1956/4/5 ರಂತೆ ಮಹಿಳೆಯರನ್ನು ವ್ಯೆಶ್ಯಾವ್ರತ್ತಿಗೆ ಬಳಸಿದ್ದಾಕ್ಕಾಗಿ - ಜೀವಾವಧಿ ಶಿಕ್ಷೆ ನೀಡಲಾಯಿತು.
ಮಿತ್ತಲ್:
ಅಪರಾಧ ಷಡ್ಯಂತ್ರಕ್ಕಾಗಿ- ಐಪಿಸಿ ಸೆಕ್ಷನ್ 120B
ರಾಜ್ ನ ಕೊಲೆಯಲ್ಲಿ ಭಾಗಿಯಾಗಿರುವುದಕ್ಕಾಗಿ- ಐಪಿಸಿ ಸೆಕ್ಷನ್108 & 109 ರಂತೆ ಜೀವಾವಧಿ ಶಿಕ್ಷೆ ನೀಡಲಾಯಿತು.
ಇಲ್ಲಿ ಮುಖ್ಯವಾದ ಎರಡು ವಿಚಾರಗಳನ್ನು ನಾವು ಅರ್ಥ ಮಾಡಿ ಕೊಳ್ಳ ಬೇಕಾಗಿದೆ
೧) ಪತಿ ಪತ್ನಿಯರು ತಮ್ಮ ವಿಶಯಗಳನ್ನು ಹಂಚಿ ಕೊಳ್ಳುವುದರಿಂದ ಪರಸ್ಪರ ಸಲಹೆ ಸೂಚನೆಗಳನ್ನು ವಿನಿಮಯ ಮಾಡಿ ಕೊಳ್ಳಬಹುದು. ಸಾಧ್ಯವಾದಶ್ಟು ನಮ್ಮ ಕೆಲಸ ಕಾರ್ಯಗಳ ಬಗ್ಗೆ ಪತ್ನಿಯರಿಗೂ ಸ್ವಲ್ಪ ಮಟ್ಟಿನ ಮಾಹಿತಿ ಕೊಟ್ಟು ಅವರನ್ನು ನಿರಾಳರಾಗಿಯೂ, ಜಾಗ್ರತರನ್ನಗೀಸಬಹುದು.
೨) ಯಾವುದೊ ಗೊತ್ತು ಗೊರಿಯಿಲ್ಲದ SMS ಆಫ಼ರ್ ಗಳನ್ನು ನಂಬಿ ಕಣ್ಣು ಮುಚ್ಚಿ ದೌಡಾಯಿಸುವುದು, ನಮ್ಮನ್ನು ನಾವೆ ಅತೀ ದೊಡ್ಡ ಅಪಾಯಕ್ಕೆ ಸಿಲುಕಿಸಿದಂತಾಗುತ್ತದೆ.
ಈ ಲೇಖನದ ಮೂಲಕ ನಮ್ಮ ಸುತ್ತ ಮುತ್ತಲಿನಲ್ಲಿ ಯಾವ್ಯಾವ ರೀತಿಯ ಮೋಸ ಹಾಗೂ ಷಡ್ಯಂತ್ರಗಳ ಬಲೆ ಬೀಸಿ ನಮ್ಮನ್ನು ಅಪಾಯಕ್ಕೆ ಸಿಲುಕಿಸುತ್ತಾರೆ ಎಂಬ ಮುನ್ನೆಚ್ಚರಿಕೆ ಕೊಡುವುದಾಗಿತ್ತು ನನ್ನ ಉದ್ದೇಶ


"ಸಾವಧಾನರಾಗಿರಿ, ಸುರಕ್ಷಿತರಾಗಿರಿ" ಎಂಬ ಸಂದೇಶದೊಂದಿಗೆ
ನಿಮ್ಮವನೇ ಆದ

ಅನಾಮಿಕ...

ಗೆಳೆಯರೇ 
ಬಹಳ ಮುಖ್ಯವಾದ ವಿಚಾರವನ್ನು ತಮ್ಮ ಮುಂದಿಡುತ್ತಿದ್ದೇನೆ. ತಪ್ಪದೆ ಪೂರ್ತಿಯಾಗಿ ಓದ ಬೇಕಾಗಿ ವಿನಂತಿ.
ಕ್ಷಣಿಕ ದೈಹಿಕ ಸುಖದ ಆಸೆಯನ್ನು ಈಡೇರಿಸುವ ಹುಚ್ಚಿನಲ್ಲಿ ನಮ್ಮ ಯುವ ಸಮೂಹವು ತನ್ನನ್ನು ಹಾಗೂ ತನ್ನ ಕುಟುಂಬಿಕರ ಜೀವಗಳನ್ನು ಮರಣದೊಂದಿಗೆ ಜೂಜು ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಇಂತಹ ದುಸ್ಸಾಹಸಕ್ಕೆ ಇಳಿಯುವ ಮೊದಲು ತಮಗಾಗಿ ಅಥವಾ ತಮ್ಮವರಿಗಾಗಿ ಯೋಚಿಸದಷ್ಟು ಅವಿವೇಕಿಗಳಾಗುತ್ತಾರೆ.
ಹೌದು ... ನಾನಿವತ್ತು ಹೇಳ ಹೊರಟಿರುವುದು ಏಡ್ಸ್ ಎಂಬ ಮಹಾ ಮಾರಿಯ ಬಗ್ಗೆ. ಇದೊಂದು ಹೆಚ್ಚಿನ ಸಂಧರ್ಭಗಳಲ್ಲಿ ಲೈಂಗಿಕವಾಗಿ ಹರಡುವಂತಹ, ಔಷದವೇ ಇಲ್ಲದ ಮಾರಕ ರೊಗವಾಗಿದೆ. ಇದು ಕೇವಲ ಒಂಟಿ ವ್ಯಕ್ತಿಯನ್ನು ಮಾತ್ರ ಆಹುತಿ ಪಡೆಯುವ ರೋಗವಲ್ಲ ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನು ಬಲಿ ಪಡೆಯ ಬಲ್ಲಂತಹ ರೋಗವಾಗಿದೆ.
ಈ ರೋಗದ ಸಂಕ್ಷಿಪ್ತ ಮಾಹಿತಿ ತಮ್ಮ ಮುಂದಿಡುತ್ತೆನೆ.
AIDS ಅಂದರೆ Acquired Immuno Deficiency Syndrome. ಇದು HIV - Human Immunodeficiency Virus ಎಂಬ ಸೋಂಕಿನಿಂದ ಹರಡುವ ರೋಗವಾಗಿದೆ ವಿಶ್ವದಲ್ಲೇ ಪ್ರಥಮ ಬಾರಿ 1983 ರಲ್ಲಿ ಈ ಸೋಂಕಿಗೆ HIV ಎಂದು ಹೆಸರಿಸಲಾಯಿತು ಹಾಗೂ ಭಾರತದಲ್ಲಿ 1986 ಪ್ರಥಮವಾಗಿ ತಮಿಳುನಾಡಿನ ಚೆನ್ನೈಯಲ್ಲಿ Dr. Suniti Soloman ಎಂಬವರು ಪತ್ತೆ ಹಚ್ಚಿದರು.
HIV ಯಂತೆಯೇ ಇನ್ನೂ ಕೆಲವು ಲೈಂಗಿಕ ಕ್ರಿಯೆಯಿಂದ ಹರಡುವ ಸೋಂಕುಗಳಿವೆ. ಇವುಗಳಲ್ಲಿ ಮುಖ್ಯವಾದುವು. Hepatitis, Clamydia, Genital Warts, Gonorrhea, Herpis. ಇವುಗಳಲ್ಲಿ HIV ಗುಣ ಪಡಿಸಲಾಗದ ರೋಗವಾಗಿದೆ ಎರಡನೇ ಸ್ಥಾನದಲ್ಲಿ Hepatitis ಇದೆ. ಇದೂ ಕೂಡ HIV ಯಷ್ಟೇ ಮಾರಕವಾಗಿದೆ.
ಸೊಂಕುಗಳ ಆರಂಭಿಕ ಲಕ್ಷಣಗಳು:
HIV- ಪ್ರತಿ ತಿಂಗಳು ದೇಹದ 10% ತೂಕ ಕಡಿಮೆಯಾಗುತ್ತ ಬರುತ್ತದೆ.
ವಿಪರೀತ (loose motion) ಭೇದಿಯಾಗುತ್ತದೆ.
ಎಡೆಬಿಡದೆ ಜ್ವರ ಬರುತ್ತದೆ.
Gonorrhea-
ಮೂತ್ರದಲ್ಲಿ ಉರಿ ಯಾಗುತ್ತದೆ.
ಬಿಳುಪು / ಹಳದಿ ದ್ರವ ಶಿಶ್ನದಿಂದ ಸೋರಿಕೆಯಾಗುತ್ತದೆ.
ಯೋನಿ ಸ್ರಾವವಾಗುತ್ತದೆ.
ಗುದದ್ವಾರದಿಂದ ನೀರಿಳಿಯುವಿಕೆ.
Herpis:
ಮೂತ್ರದ ಭಾಗದಲ್ಲಿ / ಗುದದ್ವಾರದಲ್ಲಿ ವಿಪರೀತ ತುರಿಕೆ.
ದೇಹದ ಗಾಯಗಳನ್ನು ಕೆಣಕಿದಾಗ ಅಲ್ಲಿ ದ್ರವ ರೂಪದ ಗುಳ್ಳೆಗಳು ಏಳುವುದು.
ಮೂತ್ರಿಸುವಾಗ ಮುಕ್ತವಾದ ಗಾಯಗಳಲ್ಲಿ ನೋಯುವುದು (ವಿಶೇಷವಾಗಿ ಮಹಿಳೆಯರಲ್ಲಿ)
ಗುಪ್ತಾಂಗ ಊದಿ ಕೊಳ್ಳುವುದು.
ದೇಹದಲ್ಲಿ ಅಸಮಾನ್ಯ ಗಾಂಟು /ಗಾಯ.
ಸೋಂಕು ಹರಡುವ ಮೂಲಗಳು:
ಇದೊಂದು STD (Sexual Tansmiting Disease) ಲೈಂಗಿಕವಾಗಿ ಹರಡುವ ರೋಗವಾಗಿದೆ.
Parent to chaild - ಪೋಷಕರಿಂದ ಮಕ್ಕಳಿಗೆ ಹರಡುವ ರೋಗ. ಆದರೆ ಇನ್ನೊಂದು ವಿಚಾರ, ಪೋಷಕರಿಗೆ ರೋಗವಿದ್ದರೆ ಎಲ್ಲ ಮಕ್ಕಳಿಗೆ ಏಡ್ಸ್ ಬರ ಬೇಕೆಂದಿಲ್ಲ ..! ಬರದಿರಲೂ ಬಹುದು.
ತಾಯಿಯ ಜನನಾಂಗ / ಹೊಟ್ಟೆಯಲ್ಲಿ ಗಾಯವಾಗಿದ್ದರೆ ಜನನ ಸಮಯದಲ್ಲಿ ಆಗುವಂತಹ ತಿಕ್ಕಾಟದಲ್ಲಿ ಮಗುವಿನ ಚರ್ಮದಲ್ಲಿ ಗಾಯವಾಗಿದ್ದರೆ ಆ ಗಾಯದ ಮೂಲಕ ಬೆರೆಯುತ್ತದೆ.
ತಾಯಿಗೆ ಏಡ್ಸ್ ಇದ್ದರೆ ಅಂತಹವರು ಮಗುವಿಗೆ ಎದೆ ಹಾಲು ನೀಡದಿದ್ದರೆ ಒಳ್ಳೆಯದೆ. ತಾಯಿಯ ಎದೆ ಹಾಲಿನಲ್ಲಿ ಅತೀ ವೇಗವಾಗಿ ಹರಡುತ್ತದೆ.
Sex Worker (ಲೈಂಗಿಕ ಕಾರ್ಯಕರ್ತರು )
ಲೈಂಗಿಕ ಕಾರ್ಯಕರ್ತರೊಂದಿಗೆ ಕಾಂಡೋಮ್ ಬಳಸದೆ ಮಾಡುವ ಲೈಂಗಿಕ ಕ್ರಿಯೆಯಲ್ಲಿ ಈ ರೋಗ ಹರಡುತ್ತದೆ. ವಿಶ್ವಾಸ ರಹಿತ ಸಂಗಾತಿಯೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ.
ಕಾಂಡೋಮ್ ಬಳಸಿಯೂ ಈ ರೋಗ ಬರುವ ಸಂಭವವಿದೆ. ಹೇಗೆಂದರೆ, ಕಾಂಡೋಮ್ ಸರಿಯಾದ ವಿಧಾನದಲ್ಲಿ ಬಳಸಬೇಕು. ಇಲ್ಲವಾದಲ್ಲಿ ಬಲೂನ್ ತರಹ ಗಾಳಿ ತುಂಬುವ ರೀತಿಯಲ್ಲಿ ಬಳಸಿದರೆ ಕಾಂಡೋಮ್ ಹರಿಯುವ ಸಾಧ್ಯತೆಗಳಿವೆ. ಕಾಂಡೋಮ್ ಬಳಸದ ಭಾಗದಲ್ಲಿ (ಯೊನಿ/ಶಿಶ್ನದ ಅಕ್ಕ ಪಕ್ಕದಲ್ಲಿ ) ಕಜ್ಜಿ ಅಥವಾ ಗಾಯಗಳಿದ್ದರೆ, ಸಂಭೋಗದ ಸಮಯದಲ್ಲಿ ಆಗುವ ಘರ್ಷಣೆಯಿಂದ ಪರಸ್ಪರರ ರಕ್ತ ಬದಲಾಯಿಸಿಕೊಳ್ಳುವ ಸಂಭವವಿದೆ.
Gay Sex (ಗಂಡು ಸಲಿಂಗ ಕಾಮ)
ಈ ಕ್ರಿಯೆಯಲ್ಲಿ ಹೆಣ್ಣಿನ ಮುಂಭಾಗದೊಂದಿಗಿನ ಕ್ರಿಯೆಯಲ್ಲಿ ಹರಡುವ ಪ್ರಮಾಣಕಿಂತ ಕಡಿಮೆ ಇರುತ್ತದೆ. ಗಂಡಿನ ಹಿಂಭಾಗಕ್ಕೆ ವೀರ್ಯ ಪ್ರವೇಶಿಸಿದರೆ ತೊಂದರೆ ಇಲ್ಲ, ಆದರೆ ಗಂಡಿನ ಹಿಂಭಾಗದಲ್ಲಿ ತಾಜಾ ಗಾಯವಿದ್ದರೆ ಗಾಯದ ಮುಖಾಂತರ ಸೋಂಕು ದೇಹದೊಳಗೆ ಪ್ರವೆಶಿಸುತ್ತದೆ.
Oral Sex (ಮೌಖಿಕ ಕ್ರಿಯೆ):
ಇಂತಹಾ ಕ್ರಿಯೇಯಿಂದಲೂ ಸೋಂಕು ಬರುವ ಸಾದ್ಯತೆಗಳಿವೆ. HIV ಸೋಂಕು ಇರುವ ವೀರ್ಯ ನುಂಗಿದರೆ ಏನು ಆಗಲ್ಲ ಆದರೆ ನುಂಗುವವರ ಬಾಯಿಯಲ್ಲಿ ಗಾಯಗಳಿದ್ದರೆ ಆ ಗಾಯದ ಮೂಲಕ ರಕ್ತದೊಂದಿಗೆ ಸೋಂಕು ಸೇರ ಬಹುದು.
IDU - Injecting Drug Users. (ಮಾದಕ ದ್ರವ್ಯ ಚುಚ್ಚುವ ವ್ಯಸನಿಗಳಿಂದ):
ಮಾದಕ ದ್ರವ್ಯ ವ್ಯಸನಿಗಳು ಒಂದೇ ಸೀರೀಂಜನ್ನು ಪರಸ್ಪರರು ಚುಚ್ಚಿ ಕೊಳ್ಳುವುದರಿಂದಲೂ ಈ ಸೋಂಕು ಹರಡುತ್ತದೆ.
ಇದಲ್ಲದೆ ಸೋಂಕು ಭಾದಿತರ ಬಟ್ಟೆಗಳಿಂದ, ಸಾಬೂನು ಇತ್ಯಾದಿಗಳಿಂದ ಸೋಂಕು ಹರಡುವುದಿಲ್ಲ. ಇವರೋಟ್ಟಿಗೆ ಇರುವುದರಿಂದ ಪೀಡಿತರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ.
ಓರ್ವ ವ್ಯಕ್ತಿಗೆ ಸೋಂಕು ತಗುಲಿದ್ದನ್ನು ಧೃಡ ಪಡಿಸಲು 3 ತಿಂಗಳು ಬೇಕು. ಈ ಮಧ್ಯೆ ರಕ್ತ ಪರೀಕ್ಷೆ ಮಾಡಿದರೂ HIV ಸೋಂಕು ಪತ್ತೆ ಹಚ್ಚಲು ಸಾಧ್ಯವಿಲ್ಲ.
HIV ಪೀಡಿತರು ಸಾಧಾರಣವಾಗಿ 5-6 ವರ್ಷ ಜೀವಿಸುತ್ತಾರೆ. ಅದರೂ ಬೆಂಗಳೂರಿನಲ್ಲೊಬ್ಬರು ಕಳೆದ 28 ವರ್ಷ ದಿಂದ ರೋಗ ಬಾದಿತರಾಗಿ ಜೇವಿಸುತ್ತಿದ್ದರೆ.
ಆದೇ ರೀತಿ ಹುಟ್ಟಿನಿಂದ ರೋಗ ಪೀಡಿತನಾದ ಯುವಕ ಈಗಷ್ಟೇ 22 ರ ಹರೆಯಕ್ಕೆ ಕಾಲಿಟ್ಟಿದ್ದಾನೆ. ಡಿಪ್ಲಮೋ ಮಾಡುತ್ತಿರುವ ಈ ಯುವಕನಿಗೆ ಈ ತನಕ ಯಾವುದೇ ಚರ್ಮ ರೋಗ ಭಾದಿಸಿಲ್ಲ...
(ಇವರ ವಿವರಗಳನ್ನು ಗೌಪ್ಯವಾಗಿಟ್ಟಿದ್ದೇನೆ)
ಒಂದು NGO ಮುಖಾಂತರ ಸರ್ವೇ ಮಾಡಲು, ಪ್ರತಿ ಗರ್ಬಿಣಿಯರಿಗೆ PPTCT- Prevention of parent to child transmission ಕಡ್ಡಾಯ ಗೊಳಿಸಿದಾಗ ಕಂಡು ಬಂದಂತಹ ಅಂಶವೆಂದರೆ, ಕುಗ್ರಾಮದಂತಹ ಗ್ರಾಮೀಣ ಪ್ರದೇಶದ ಕೃಷಿ ಮಾಡುವ ಮಹಿಳೆಯರಲ್ಲಿ HIV ಸೋಂಕು ಅತೀ ಹೆಚ್ಚಾಗಿ ಕಂಡು ಬಂತು ಆಶ್ಚರ್ಯವೆಂದರೆ ಆ ಮಹಿಳೆಯರಿಗೆ HIV ಎಂದರೇನೆಂದೇ ಗೊತ್ತಿಲ್ಲ
ಸಾಮಾನ್ಯವಾಗಿ ಯಾವುದೇ ಜೀವ ವಿಮಾ ಕಂಪನಿಯವರು HIV ಪೀಡಿತರಿಗೆ ವಿಮೆ ಮಾಡಿಸುವುದಿಲ್ಲ. ಇದಕ್ಕೆ ಅಪಾರ್ಥವಾಗಿ STAR ಇನ್ಶ್ಯುರೆನ್ಸ್ನಲ್ಲಿ ಈ ಅವಕಾಶವಿದೆ. ಈ ಕಂಪನಿಯ ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಂಚ್ ನಲ್ಲಿಯೇ 283 ಅರ್ಜಿಗಳಿವೆ. ಹಾಗಾದರೆ ನೀವೇ ಲೆಕ್ಕ ಹಾಕಿ. ಪ್ರತಿ ಮಗುವಿನ ತಂದೆ ತಾಯಿಯರು 283 x 2 = 566 ಪೋಷಕರು, ಒಟ್ಟು 849 ಮಂದಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇನ್ನು ಸಮಾಜಕ್ಕೆ ತಿಳಿದರೆ ಮುಜುಗರ ಪಡಬೇಕಾಗುತ್ತದೆ ಎಂದು ತಮ್ಮ ರೋಗವನ್ನು ಗೌಪ್ಯವಾಗಿಟ್ಟವರು ಅದೆಷ್ಟೋ ಮಂದಿ ಇದ್ದಾರೆ.
ಇನ್ನು ಅಂಕೆ ಸಂಖ್ಯೆಗಳನ್ನು ನೋಡುವುದಾದರೆ -
ಮಣಿಪುರ- 0.78% ಅಂದ್ರ ಪ್ರದೇಶ- 0.76%. ಕರ್ನಾಟಕ- 0.69% ನಾಗಾಲ್ಯಾಂಡ್- 0.66%. HIV ಸೋಂಕು ಭಾದಿತರಿದ್ದರೆ.
2011-12 ರ ಸಮೀಕ್ಷೆಯ ಪ್ರಕಾರ:
ಪೋಷಕರಿಂದ ಮಕ್ಕಳಿಗೆ - 5.0%
ಗಂಡು ಸಲಿಂಗಿಗಳಿಂದ- 1.5%
ಸೀರಿಂಜ್ ಬಳಕೆಯಿಂದ- 1.7%
ರಕ್ತದಿಂದ ರಕ್ತಕ್ಕೆ- 1.0%
ಕಾರಣ ತಿಳಿಯದೆ- 2.7%
ನಮ್ಮ ಕ್ಷಣಿಕ ಸುಖದ ಆಸೆಗಾಗಿ ನಾವು ನಮ್ಮ ಪರಿವಾರ ಮತ್ತು ಮುಂದಿನ ಪೀಳಿಗೆಯನ್ನು ಇಂತಹ ಮಾರಕ ರೋಗದ ಬಾಯಿಗೆ ಏಕೆ ಕೊಡಬೇಕು? ನಮ್ಮಿಂದಾಗಿ ಇನ್ನೊಬ್ಬರ ಅತ್ಯಮೂಲ್ಯ ಜೀವನಕ್ಕೆ HIV ಯಂತಹ ವಿಷ ಏಕೆ ಉಣಿಸಬೇಕು?ಇನ್ನಾದರೂ ಈ ಬಗ್ಗೆ ಯೋಚಿಸದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಸಮಾಜವು ಒಂದು ಕರಾಳ ಛಾಯೆಯಡಿ ಜೀವಿಸಬೇಕಾಗಿ ಬರಬಹುದು. ಏಡ್ಸ್ ನಂತಹ ಮಹಾ ಮಾರಿಯನ್ನು ನಾವು ಸ್ವಪ್ರಯತ್ನ ದಿಂದ ಹದ್ದು ಬಸ್ತಿನಲ್ಲಿಟ್ಟುಕೊಂಡು ಸಮಾಜಕ್ಕೆ ಸಹಕಾರಿಯಾಗಿ ಜೀವಿಸುವೆವು ಎಂಬ ಪ್ರತಿಜ್ಞೆಯನ್ನು ಇಂದೇ ಕೈಗೊಳ್ಳುವಿರಿ ತಾನೇ? ಇದರ ಬಗ್ಗೆ ನಿಮ್ಮ ಮಕ್ಕಳಲ್ಲಿ, ಕುಟುಂಬಿಕರಲ್ಲಿ, ನಿಮ್ಮ ನೆರೆ ಹೊರೆಯವರಲ್ಲಿ ಜಾಗೃತಿ ಮೂಡಿಸುವಿರಿ ತಾನೇ?
ಸಂಕೋಚ ಪಟ್ಟು ಇಂತಹ ವಿಷಗಳ ಬಗ್ಗೆ ಜಾಗೃತಿ ಮೂಡಿಸದಿದ್ದರೆ, ನಮಗೆ ನಾವೇ ಆತ್ಮ ವಂಚನೆ ಮಾಡಿದಂತಾಗುತ್ತದೆ. ಈ ಮಾಹಿತಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಇತರರಿಗೆ ಮನವರಿಕೆ ಮಾಡಿಸುವಿರಿ ಎಂಬ ವಿಶ್ವಾಸದೊಂದಿಗೆ, ತಮ್ಮ ಉತ್ತರದ ನಿರೀಕ್ಷೆಯಲ್ಲಿ....
ನಿಮ್ಮವನೇ ಆದ
ಅನಾಮಿಕ.

ದಯೆಯಿಲ್ಲದೆ ಯಾವ ಧರ್ಮವೂ ಇಲ್ಲ .




 ಧರ್ಮದ ಮರ್ಮ ಅರಿಯದ ಅಧಮಿಗಳು ಮಾಡಿದ ಕುತಂತ್ರಕ್ಕೆ ಧರ್ಮ ಹೊಣೆಯಲ್ಲ. ಧರ್ಮ ಆತ್ಮ ಬೆಳಗುವ ಬೆಳಕೇ ಹೊರತು,ಇತರರನ್ನು ಉರಿಸಿ ಬೂದಿ ಮಾಡಿಸಬಲ್ಲ ಜ್ವಾಲೆಯಲ್ಲ. ಧರ್ಮದಿಂದ ಶಾಂತಿ ನೆಲೆ ನಿಲ್ಲಬೇಕೆ ಹೊರತು ಅಶಾಂತಿಯ ಕಿಡಿ ಹೊತ್ತಿ ಉರಿಯಬಾರದು. ಹಿಂಸೆ ಯಾವುದಕ್ಕೂ ಪರಿಹಾರವಲ್ಲ .ಉದ್ರೇಕಿತ ಮನಸ್ಸುಗಳು ನೆಮ್ಮದಿ ಹಾಳು ಮಾಡಬಲ್ಲವೇ ಹೊರತು ಶಾಂತಿ ನೀಡಲಾರದು . ಸರ್ವಧರ್ಮೀಯರು ಇದನ್ನು ಅರ್ಥ ಮಾಡಿ ಕೊಂಡರೆ ಮಾತ್ರ ಸರ್ವರಿಗೂ ಒಳಿತು.

ಶಾಂತಿ ಮತ್ತು ಅಹಿಂಸೆಯ ತತ್ವಗಳ ಮೂಲಕ ಯುದ್ಧವನ್ನು ಗೆಲ್ಲಲು ಸಾಧ್ಯವೇ?ಎಂದು ಯಾರಾದರೂ ಕೇಳಿದರೆ . ಗಾಂಧೀಜಿಯವರು ಇದಕ್ಕೆ ಉತ್ತಮ ಉತ್ತರವನ್ನು ಕೊಟ್ಟಿದ್ದಾರೆ.."ಶಾಶ್ವತವಾದ ಶಾಂತಿಯ ಸಾಧ್ಯತೆಯನ್ನು ನಂಬದೇ ಇರುವುದು ಮಾನವೀಯತೆಯ ಒಳಗೆ ದೈವತ್ವ ಅಡಗಿದೆ ಎಂಬುದನ್ನು ನಂಬದೇ ಇರುವಂತೆಯೇ ಆಗಿದೆ. ಅಂದರೆ ಮಾನವರಲ್ಲಿ ಅಂಥ ಸದ್ಗುಣ ಸಂಪತ್ತು ಇದೆ ಮತ್ತು ಅದರೊಂದಿಗೆ ಅವರು ಬಾಳಿ ಬದುಕಬೇಕು."ಈ ನಂಬಿಕೆಯು ಗ್ರಹಿಸಿ ಪಡೆಯುವಂತಹದ್ದಲ್ಲ. ಬೆಳೆದು ಗಳಿಸಬೇಕಾದದ್ದು ಮತ್ತು ಇಂಥ ಬೆಳೆಯುವಿಕೆ ಆಂತರ್ಯದಿಂದ ಬಂದರೆ ಮಾತ್ರ ಶಾಂತಿ ನೆಲೆಸುತ್ತದೆ.

ಶಾಂತಿಯ ಸದಾಶಯದೊಂದಿಗೆ

ಟೀಂ ಬ್ಲೂ ವೇವ್ಸ್

ಜಾಗ್ರತೆ..... ನಿಮ್ಮವರು ಕಾಯುತ್ತಿದ್ದಾರೆ


ಗೆಳೆಯರೇ..

ಎಂದಿನಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನನ್ನ ವಾಹನದಲ್ಲಿ ಸಾಗುತ್ತಿರುವಾಗ, ಆಗಷ್ಟೇ ಆದ ವಾಹನ ಅಫಘಾತ ಕಂಡು ನನ್ನ ವಾಹನವನ್ನು ಬದಿಗೆ ನಿಲ್ಲಿಸಿ ಅತ್ತ ಧಾವಿಸಿದೆ. ಅದು ಅಷ್ಟೇನೂ ದೊಡ್ಡ ಪ್ರಮಾಣದ ಭೀಕರ ಅಫಘಾತ ವಾಗಿರಲಿಲ್ಲ. ಆದರೆ ಸ್ಥಳದಲ್ಲೇ ಮೃತ ಪಟ್ಟ, ಮದುವೆಯಾಗಿ ಎರಡು ದಿನದ ಮದುಮಗನ ಮೃತ ದೇಹ ಕಂಡು ಒಂದು ಕ್ಷಣ ಮೂಕವಿಸ್ಮಿತನಾದೆ. ರಸ್ತೆಯ ತಡೆಗೋಡೆಗೆ ಬಡಿದ ರಭಸಕ್ಕೆ ಕಾರಿನ ಸ್ಟಿಯರಿಂಗ್ ವ್ಹೀಲ್ ನ ಮೇಲೆ ಮೃತ ದೇಹ ಬಿದ್ದಿತ್ತು. ಅಲ್ಲಿ ನೆರೆದಿದ್ದ ಜನರ ಪ್ರಕಾರ " ಸೀಟ್ ಬೆಲ್ಟ್ ಧರಿಸಿದ್ದರೆ ಬಹುಶಃ ಜೀವ ಉಳಿಯುವ ಸಂಭವವಿತ್ತು". ತನ್ನ ಮೇಲೆರಗಿ ಬಂದ ವಾಹನವನ್ನು ತಪ್ಪಿಸುವ ಭರದಲ್ಲಿ ರಸ್ತೆಯ ತಡೆಗೋಡೆಗೆ ಅಪ್ಪಳಿಸಿಟ್ಟು. ಜನರಾಡಿಕೊಳ್ಳುತಿದ್ದ ಮಾತಿನಲ್ಲೂ ಸತ್ಯಾಂಶವಿತ್ತು. ಸ್ಟಿಯರಿಂಗ್ ವ್ಹೀಲ್ ಮತ್ತು ಸೀಟ್ ನ ಮಧ್ಯೆ ಸಾಕಷ್ಟು ಅಂತರವಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಅವನ ಇಡೀ ದೇಹವು ಸ್ಟಿಯರಿಂಗ್ ವ್ಹೀಲ್ ಗೆ ಅಪ್ಪಳಿಸಿ ಕಿಡ್ನಿಯ ಭಾಗಕ್ಕೆ ಬಡಿದಿತ್ತು. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿರುತ್ತಿದ್ದರೆ ಪ್ರಾಣಾಪಾಯದಿಂದ ಪಾರಾಗ ಬಹುದಿತ್ತೇನೋ...

ಹಾಗೇನೆ ಕಳೆದ ಒಂದೇ ವರ್ಷದಲ್ಲಿ ಆದಂತಹ ಅಫಘಾತಗಳ ಪಟ್ಟಿ ಮಾಡಿದ್ದೇನೆ.
ಅಂಕಿ ಅಂಶಗಳ ಪ್ರಕಾರ ಕಳೆದ ಒಂದೇ ವರ್ಷದಲ್ಲಿ (2013) ಕೇವಲ ಕರ್ನಾಟಕದಲ್ಲಿ 42107 ಅಪಘಾತಗಳಾಗಿವೆ. 8145 ಪುರುಷರು, 1365 ಮಹಿಳೆಯರು ಸೇರಿ 9510 ಜನರು ಮೃತಪಟ್ಟಿದ್ದಾರೆ. ಹಾಗೂ 13656 ಮಂದಿ ಗಾಯಾಳುವಾಗಿದ್ದಾರೆ.


2013 ರ ಒಂದೇ ವರ್ಷದಲ್ಲಿ ಇಡೀ ಭಾರತದಲ್ಲಿ ಆದ ರಸ್ತೆ ಅಪಘಾತಗಳ ವಿವರ ಈ ರೀತಿ ಇದೆ.
ಒಟ್ಟು ಅಪಘಾತಗಳು - 4,43,001
ಮೃತರಾದವರ ಸಂಖ್ಯೆ- 1,37,423
ಮಹಿಳೆಯರು - 15%
ಪುರುಷರು - 85%
ಗಾಯಾಳುಗಳು - 4,69,882
ಅಪಘಾತದಲ್ಲಿ ಅತೀ ಹೆಚ್ಚು ಗಾಯಾಳುಗಳಾದ 3 ರಾಜ್ಯಗಳು
ತಮಿಳುನಾಡು - 75,681
ಕರ್ನಾಟಕ - 52,793
ಅಂದ್ರ ಪ್ರದೇಶ - 52,522
ಅಪಘಾತದಲ್ಲಿ ಅತೀ ಹೆಚ್ಚು ಮರಣ ಸಂಭವಿಸಿದ ರಾಜ್ಯಗಳು
ಉತ್ತರ ಪ್ರದೇಶ -15,630
ತಮಿಳುನಾಡು - 15,563
ಆಂಧ್ರಪ್ರದೇಶ - 14,647
ಅತೀ ಹೆಚ್ಚು ಗಾಯಾಳುಗಳಾದ ಪಟ್ಟಣಗಳು
ಚೆನ್ನೈ- 8700
ದಿಲ್ಲಿ - 5637
ಬೆಂಗಳೂರು- 4334
ಅತೀ ಹೆಚ್ಚು ಮರಣ ಸಂಭವಿಸಿದ ಪಟ್ಟಣಗಳು.
ದಿಲ್ಲಿ - 1530
ಚೆನ್ನೈ - 1247
ಜೈಪುರ - 783
ಮೇಲಿನ ಅಂಕಿ ಅಂಶಗಳನ್ನೂ ನೋಡುವಾಗ ನಮ್ಮನ್ನೇ ನಾವು ಪ್ರಶ್ನಿಸ ಬೆಕಾಗಿದೆ. ಮುಂದಿನ ವರ್ಷದಲ್ಲಿ ಈ ಸಂಖ್ಯೆಯೊಂದಿಗೆ ನಾವು ಕೂಡ ಸೇರ್ಪಡೆ ಯಾಗಲಿದ್ದೆವೆಯೇ ?
ಹಾಗಾಗಿ ಪ್ರತಿಸಲ ನಾವು ವಾಹನ ಚಲಾಯಿಸುವಾಗ "ನನ್ನ ಮಡದಿ ಮಕ್ಕಳು ನನಗಾಗಿ ಕಾದಿರುವರು. ಕನಿಷ್ಠ ಪಕ್ಷ ಅವರಿಗಾಗಿಯಾದರೂ ವಾಹನವನ್ನು ಜಾಗರೂಕತೆಯಿಂದ ಚಲಾಯಿಸುವೆ" ಎಂಬುದನ್ನು ಮನದಲ್ಲಿಟ್ಟು ಕೊಂಡಿರಬೆಕು. ಒಮ್ಮೆ ಕಳೆದು ಹೋದ ಜೀವ, ಸಮಯ ಹಿಂತಿರುಗಿ ಬರಲಾರದು.
ವಾಹನ ಚಲಾಯಿಸುವಾಗ ಕೆಲವೊಂದು ಅಂಶಗಳನ್ನೂ, ನಮಗಲ್ಲದ್ದಿದ್ದರೂ, ನಮ್ಮ ಮನೆಯವರಿಗಾಗಿ ಗಮನದಲ್ಲಿಟ್ಟು ಕೊಂಡಿರಬೆಕು.
# ಸೀಟ್ ಬೆಲ್ಟ್ ಭಧ್ರ ಪಡಿಸಿ ಕೊಂಡಿರ ಬೇಕು.
# ದ್ವಿಚಕ್ರ ವಾಹನದಲ್ಲಿ ಕಡ್ಡಾಯಾ ಹೆಲ್ಮೆಟ್ ಧರಿಸಿರಬೇಕು.
# indicator ಕ್ಲಪ್ತ ಸಮಯದಲ್ಲಿ ಉಪಯೋಗಿಸಬೇಕು.
# ವಾಹನವನ್ನು ಅನಿರೀಕ್ಷಿತವಾಗಿ ನಿಲ್ಲಿಸುವಾಗ, ರಸ್ತೆಯಿಂದ ಸಾಧ್ಯವಾದಷ್ಟು ಬದಿಗೆ ಸರಿಸಿ ನಿಲ್ಲಿ.
# ನಿಮ್ಮನ್ನು Overtake ಮಾಡುವಂತಹ ವಾಹನದ ಜಿದ್ದಿಗೆ ಬೀಳದೆ ಹಾಗೂ ಎದುರಿನಿಂದ ಬರುವ ವಾಹನಗಳಿಗೆ ದಾರಿ ಮಾಡಿಕೊಡಿ.
# ಸಣ್ಣ ಮಕ್ಕಳನ್ನು ಯಾವತ್ತೂ ಮುಂದಿನ ಸೀಟ್ ಗಳಲ್ಲಿ ಕುಳ್ಳಿರಿಸಬೇಡಿ.
# ತಮ್ಮ ವಾಹನದ ಸ್ಥಿತಿಯನ್ನು ತಿಂಗಳಿಗೊಮ್ಮೆಯಾದರೂ ಪರೀಕ್ಷಿಸಿಕೊಳ್ಳಿ.
# ವಾಹನ ಚಲಾಯಿಸುವಾಗ ಮೊಬೈಲ್ ಬಳಸ ಬೇಡಿ.
# ತೀರ ಅಗತ್ಯ ಕರೆಗಳನ್ನು ವಾಹನವನ್ನು ಬದಿಗೆ ನಿಲ್ಲಿಸಿ ಮಾತಾಡಿ ಮುಂದುವರೆಯಿರಿ. ಸಾಧ್ಯವಾದರೆ ನಿಮ್ಮ ಕರೆಗಳನ್ನು ನಿಮ್ಮ ಸಹ ಪ್ರಯಾಣಿಕರಿಗೆ ಉತ್ತರಿಸಲು ಹೆಳಿ. ಚಾಲನಾ ಸಮಯದಲ್ಲಿ Bluetooth ಅಥವಾ earphone ಬಳಸಿ.
# ಚಾಲನಾ ಸಮಯದಲ್ಲಿ ಯಾವತ್ತೂ SMS ಅಥವಾ Whatsapp ಖಂಡಿತವಾಗಿಯೂ ಬಳಸ ಬೇಡಿ.
ಇಂತಹ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ನಿಮ್ಮನ್ನೂ ಮತ್ತು ನಿಮ್ಮ ಕುಟುಂಬದವರ ಬಗ್ಗೆ ಚಿಂತಿಸಿ, ಸುಂದರ ಭವಿಷ್ಯವನ್ನು ಸಾಕಾರ ಗೊಳಿಸಿ ಎಂಬ ವಿನಂತಿಯೊಂದಿಗೆ

ಇಂತಿ

Team Blue Waves