ಭೂಮಂಡಲದಲ್ಲಿ ಜೀವಿಸುತ್ತಿರುವ ಸಕಲ ಜೀವರಾಶಿಗೂ ಹಸಿವು ಅಂದರೇನು ಅಂತ ತಿಳಿದಿರುತ್ತದೆ, ಪ್ರಕೃತಿಯಲ್ಲಿ ಪ್ರತಿಯೊಂದರ ಹುಟ್ಟಿನೊಂದಿಗೆ ಹಸಿವೂ ಕೂಡ ಜನ್ಮ ತಾಳಿರುತ್ತದೆ. ಹಸಿವು ಸಕಲ ಜೀವರಾಶಿಗಳನ್ನು ಮುಟ್ಟಿಸುವ ದಾರುಣ ಸ್ಥಿತಿ. ಈ 21ನೇ ಶತಮಾನದಲ್ಲಿ 'ಹಸಿವು' ಜಗತ್ತು ಎದುರಿಸುತ್ತಿರುವ ಅತೀ ದೊಡ್ಡ ಸವಾಲು. ಈ ವಿಶ್ವದಲ್ಲಿ ನಾಲ್ಕು ಸೆಕೆಂಡ್ಗೆ ಒಂದು ಮಗು ಸಾಯುತ್ತಿದೆ, ಪ್ರತೀ ಎಂಟು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದೆ, ಅಂದರೆ 870 ಮಿಲಿಯನ್ ಮಕ್ಕಳು ಅಪೌಷ್ಟಿಕತೆ ಅಥವಾ ಅಹಾರದ ಕೊರತೆಯಿಂದ ಒದ್ದಾಡುತ್ತಿವೆ. ಇದಕ್ಕೆಲ್ಲ ಮೂಲ ಕಾರಣವೇ ಹಸಿವು ಎಂದರೆ ಈ ಹಸಿವಿನ ದಾರುಣತೆಯನ್ನು ನಾವು ಊಹಿಸಬಹುದಾಗಿದೆ.
ಭೂಮಿಯ ಮೇಲೆ ಅತೀ ಬುದ್ದಿವಂತನೆನಿಸಿಕೊಂಡಿರುವ ಮನುಷ್ಯನು ನಡೆಸುವ ಬಹತೇಕ ಸಮಾರಂಭಗಳಲ್ಲಿ ತನ್ನ ಒಣ ಪ್ರತಿಷ್ಠೆಗಾಗಿ, ಇತರರಿಂದ ಹೊಗಳಿಕೆ ಗಿಟ್ಟಿಸಿಕೊಳ್ಳುವ ಸಲುವಾಗಿ, ಹಸಿವಿನ ಮೌಲ್ಯ ಗೊತ್ತಿದ್ದರೂ ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ತಿನ್ನುವ ಆಹಾರವನ್ನು ತಿಪ್ಪೆಗೆಸೆಯುತ್ತಿರೋದು ದುರಂತವೇ ಸರಿ. ಒಂದು ನಿಮಿಷ ನಾವೆಲ್ಲರೂ ಯೋಚಿಸಬೇಕಾಗಿದೆ, ಒಬ್ಬ ವ್ಯಕ್ತಿ ಹೆಚ್ಚೆಂದರೆ ಎಷ್ಟು ತಿನ್ನಬಹುದು.. ?, ಹೊಟ್ಟೆ ತುಂಬಿಸಿಕೊಂಡ ನಂತರ ಮಿಕ್ಕ ಅನ್ನವನ್ನು ನಿರ್ಭೀತಿಯಿಂದ ಚೆಲ್ಲುತ್ತಾನೆ ಎಂದಾದರೆ ಯಾರನ್ನು ದೂಷಿಸಬೇಕು?. ಆಡಂಬರದ ಸಮಾರಂಭಗಳಲ್ಲಿ ಲೆಕ್ಕಕಿಂತಲೂ ಅಧಿಕ ಪ್ರಮಾಣದಲ್ಲಿ ಅನ್ನಾಹಾರಗಳನ್ನು ತಯಾರಿಸುವಂತಹ ಕೆಟ್ಟ ಸಂಸ್ಕೃತಿ ಬೆಳೆದು ಬಂದಿರೋದೆ ದುರ್ದೈವ. ಕೇವಲ ಒಣ ಪ್ರತಿಷ್ಠೆಗಾಗಿ, ಬಂದವರಿಂದ ಬೆನ್ನು ತಟ್ಟಿಸಿಕೊಳ್ಳೋ ಸಲುವಾಗಿ ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸಿದ್ದಪಡಿಸಿ ಅದನ್ನು ತೋರ್ಪಡಿಕೆಗೆ ಸಜ್ಜುಗೊಳಿಸುವ ಮಂದಿ ಒಂದೇ ಒಂದು ಸಲ ಸರಿಯಾದ ಆಹಾರವಿಲ್ಲದೆ ಬುದುಕಿತ್ತಿರುವ ಬಡವರ ಬಗ್ಗೆ ಯೊಚಿಸಬೇಕಾಗಿದೆ. ಒಪ್ಪೊತ್ತಿನ ಊಟವನ್ನು ಹಸಿದವನ ಬಟ್ಟಲಿಗೆ ನೀಡಿದ್ದೆ ಆದರೆ ಅದಕ್ಕಿಂತಲೂ ಭಾಗ್ಯದ ಕೆಲಸ ಬೇರಿನ್ನೊಂದಿಲ್ಲ.
ಜಗತ್ತಿನಲ್ಲಿ ಇರುವ 700 ಕೋಟಿ ಜನಸಂಖ್ಯೆ, ಮುಂದಿನ 2050 ರ ವೇಳೆಗೆ900 ಕೋಟಿಗೆ ಏರಲಿದೆ. ಸಧ್ಯದ ಸ್ಥಿತಿಯಲ್ಲಿ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ಸುಮಾರು 87 ಕೋಟಿ ಜನ ಹಸಿವಿನಿಂದ ಒಂದೊತ್ತಿನ ಊಟದಲ್ಲಿ ಬದುಕು ದೂಡುತ್ತಿದ್ದಾರೆ. ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ86 ಕೋಟಿ 80 ಲಕ್ಷ ಜನತೆಯಲ್ಲಿ, ನಮ್ಮ ದೇಶದ ಪಾಲು 27 ಕೋಟಿ, 70ಲಕ್ಷ . ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಸರಿಸುಮಾರು ಆರು ಸಾವಿರದಷ್ಟು ಮಂದಿ ದಿನಂಪ್ರತಿ ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂಬುದು ನಮ್ಮ ದೇಶಕ್ಕೊದಗಿದ ಬಹುದೊಡ್ಡ ವಿಪತ್ತು ಮತ್ತು ಸ್ವಾತಂತ್ರ್ಯದ 60 ವರ್ಷಗಳಲ್ಲಿ ದೇಶಕ್ಕೆ ಅತಿ ದೊಡ್ಡ ಕಳಂಕ. ಅತ್ಯಧಿಕ ಪಾಕೃತಿಕ ಸಂಪನ್ಮೂಲ ಮತ್ತು ಅದಾಯಗಳ ಬಹುಮೂಲವನ್ನುಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಮಾನವೀಯ ಸಂಸ್ಕೃತಿಯೊಂದು ಇವತ್ತಿಗೂ ಇರೋದು ದುರಂತವೇ ಸರಿ. ದೇಶದಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿರುವುದು ಹಸಿವಿನಿಂದ ಅನ್ನೋದು ಬೆಳಕಿನಷ್ಟೇ ಸತ್ಯ ಮತ್ತು ಅಂಕಿ ಅಂಶಗಳು ಕೂಡ ಅದನ್ನೇ ಹೇಳುತ್ತದೆ. ಸರಿಸುಮಾರು ಹದಿನೈದು ಕೋಟಿಯಷ್ಟು ಮಕ್ಕಳು ಇಂದಿಗೂ ಅಪೌಷ್ಟಿಕ ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಇಪ್ಪತ್ತು ಕೋಟಿಗಿಂತಲೂ ಅಧಿಕ ಮಂದಿ ರಾತ್ರಿಯ ಆಹಾರವಿಲ್ಲದೆ ಬರಿಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಇದು ನಿಜಕ್ಕೂ ದೇಶವನ್ನು ಅಪಮಾನಕ್ಕೆ ಗುರಿ ಮಾಡುವ ಅಂಕಿ-ಅಂಶಗಳು.
ಇತ್ತ ಪ್ರತಿದಿನ ಸುಮಾರು ಆರು ಸಾವಿರದಷ್ಟು ಜನ ಸರಿಯಾದ ಆಹಾರವಿಲ್ಲದೆ ಪ್ರಾಣವನ್ನು ಕಳೆದು ಕೊಳ್ಳುತ್ತಿರಬೇಕಾದರೆ ಮತ್ತೊಂದು ಕಡೆ ಲಕ್ಷಗಟ್ಟಲೆ ಟನ್ ಅಕ್ಕಿ,ಬೇಳೆ,ಗೋದಿ ಮುಂತಾದ ಆಹಾರ ಪದಾರ್ಥಗಳು ಸರಕಾರದ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದೊಂದಿಗೆ ಕೊಳೆತುಹೊಗುತ್ತಿದೆ. ಇದಕ್ಕೆಲ್ಲಾ ಉತ್ತರಿಸಬೇಕಾದವರು ಮಾತ್ರ ಹೊಟ್ಟೆ ತುಂಬಾ ಉಂಡು ಎ.ಸಿ ರೂಮಿನಲ್ಲಿ ಜಗದ ಪರಿವೆ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಬಡವರ ಪಾಲಾಗ ಬೇಕಾಗಿದ್ದಂತಹ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಯಾರ ಭಯವೂ ಇಲ್ಲದೆ ಅಧಿಕಾರಿಗಳ ಕಣ್ಣಮುಂದೆಯೇ ಕಳ್ಳರ ಪಾಲಾಗುತ್ತಿರುವುದು ನಮ್ಮ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ. ಬರೀ ಬೆಂಗಳೂರು ನಗರವನ್ನು ಮಾತ್ರ ತೆಗೆದು ಕೊಂಡರೂ ಸಾಕು ದಿನವೊಂದಕ್ಕೆ ಲಕ್ಷಕ್ಕೂ ಮಿಕ್ಕ ಮೌಲ್ಯದ ಅನ್ನಾಹಾರವನ್ನು ಯಾವುದೇ ಮುಲಾಜಿಲ್ಲದೆ ತಿಪ್ಪೆಗೆ ಎಸೆಯಲಾಗುತ್ತಿದೆ. ಹೊಟ್ಟೆ ತುಂಬಿದ ನಂತರ ಮಿಕ್ಕುವ ಒಂದೇ ಒಂದು ತುತ್ತು ಕೂಡ ನಮ್ಮದಲ್ಲ ಅದು ಹಸಿದವರ ಬಟ್ಟಲಿಗೆ ಸೇರಿದ್ದು ಮತ್ತು ಅದವರ ಹಕ್ಕು, ಅದನ್ನು ಚೆಲ್ಲುವ ಯಾ ಹಾಳು ಮಾಡುವ ಅಧಿಕಾರ ಯಾವೊಬ್ಬನಿಗೂ ಇಲ್ಲವೆಂಬ ಸತ್ಯವನ್ನು ನಾವು ಅರಿಯಬೇಕಾಗಿದೆ.
ಈ ಬಗ್ಗೆ ನಮ್ಮ ನಮ್ಮಲ್ಲಿಯೇ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ,ಸಮಾರಂಭಗಳನ್ನ ನಡೆಸುವವರು ಸ್ವಯಂ ಅನ್ನಾಹಾರ ವ್ಯರ್ಥ ಮಾಡದಿರುವ ಕುರಿತು ಸಂಕಲ್ಪವೊಂದನ್ನು ಕೈಗೊಂಡು, ಹಸಿದು ಸಾಯುತ್ತಿರುವ ಜನಸಂಖ್ಯೆಯನ್ನು ವ್ಯಕ್ತವಾಗಿ ನಮೂದಿಸಿದ ಭಿತ್ತಿಪತ್ರಗಳನ್ನಂಟಿಸಿ, ಅದ್ಧೂರಿ ಸಮಾರಂಭಗಳ ನೆಪದಲ್ಲಿ ಲೆಕ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಆಹಾರವನ್ನು ತಯಾರು ಮಾಡಿ, ಮಿಕ್ಕವುಗಳನ್ನು ತೊಟ್ಟಿಗೆಸೆಯೋ ವಿಕೃತ ಮನಸ್ಸಿರುವವರು ನಮ್ಮೊಳಗೆ ನುಸುಳಿ ಬಡವರ ಅನ್ನಾಹಾರ ಕಸಿಯುತ್ತಿರುವ ಅಮಾನುಷ ಅಭ್ಯಾಸ ಬಲಗಳನ್ನು ತೊಡೆದು ಹಾಕಲು, ಮಿತವಾಗಿ ಆಹಾರ ಬಳಸುವ ಪದ್ಧತಿಯನ್ನು ಈ ಸಮಾಜವು ಅಭಿಮಾನದಿಂದ ನೋಡುವಂತೆ ಬದಲಾಯಿಸಿದರೆ, ಅಥವಾ ಬದಲಾಯಿಸುವಲ್ಲಿ ಶಕ್ತವಾದರೆ ಮಾನವೀಯತೆ ಮತ್ತು ಹಸಿದವರ ಬಗೆಗಿರುವ ನಮ್ಮ ಕಾಳಜಿ ಅರ್ಥಪೂರ್ಣವಾದೀತು. ಇಂತಹ ಮಾದರಿ ಸಮಾರಂಭಗಳಿಗೆ ಮುನ್ನುಡಿಯಿಡುವ ಕನಸೊಂದಕ್ಕೆ ನಾವು ನೀವೆಲ್ಲರೂ ಪ್ರಥಮರಾಗೋಣ ಮತ್ತು ಹಸಿವನ್ನು ಹಂಚಿಕೊಂಡು ಮೊದಲು ಮನುಷ್ಯರಾಗೋಣ, ಆ ಮೂಲಕ ಹಸಿವು ಮುಕ್ತ ಭಾರತದ ಕನಸನ್ನು ನನಸಾಗಿಸೋಣ..
- ಟೀಮ್ ಬ್ಲೂ ವೇವ್ಸ್
ಭೂಮಿಯ ಮೇಲೆ ಅತೀ ಬುದ್ದಿವಂತನೆನಿಸಿಕೊಂಡಿರುವ ಮನುಷ್ಯನು ನಡೆಸುವ ಬಹತೇಕ ಸಮಾರಂಭಗಳಲ್ಲಿ ತನ್ನ ಒಣ ಪ್ರತಿಷ್ಠೆಗಾಗಿ, ಇತರರಿಂದ ಹೊಗಳಿಕೆ ಗಿಟ್ಟಿಸಿಕೊಳ್ಳುವ ಸಲುವಾಗಿ, ಹಸಿವಿನ ಮೌಲ್ಯ ಗೊತ್ತಿದ್ದರೂ ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ತಿನ್ನುವ ಆಹಾರವನ್ನು ತಿಪ್ಪೆಗೆಸೆಯುತ್ತಿರೋದು ದುರಂತವೇ ಸರಿ. ಒಂದು ನಿಮಿಷ ನಾವೆಲ್ಲರೂ ಯೋಚಿಸಬೇಕಾಗಿದೆ, ಒಬ್ಬ ವ್ಯಕ್ತಿ ಹೆಚ್ಚೆಂದರೆ ಎಷ್ಟು ತಿನ್ನಬಹುದು.. ?, ಹೊಟ್ಟೆ ತುಂಬಿಸಿಕೊಂಡ ನಂತರ ಮಿಕ್ಕ ಅನ್ನವನ್ನು ನಿರ್ಭೀತಿಯಿಂದ ಚೆಲ್ಲುತ್ತಾನೆ ಎಂದಾದರೆ ಯಾರನ್ನು ದೂಷಿಸಬೇಕು?. ಆಡಂಬರದ ಸಮಾರಂಭಗಳಲ್ಲಿ ಲೆಕ್ಕಕಿಂತಲೂ ಅಧಿಕ ಪ್ರಮಾಣದಲ್ಲಿ ಅನ್ನಾಹಾರಗಳನ್ನು ತಯಾರಿಸುವಂತಹ ಕೆಟ್ಟ ಸಂಸ್ಕೃತಿ ಬೆಳೆದು ಬಂದಿರೋದೆ ದುರ್ದೈವ. ಕೇವಲ ಒಣ ಪ್ರತಿಷ್ಠೆಗಾಗಿ, ಬಂದವರಿಂದ ಬೆನ್ನು ತಟ್ಟಿಸಿಕೊಳ್ಳೋ ಸಲುವಾಗಿ ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸಿದ್ದಪಡಿಸಿ ಅದನ್ನು ತೋರ್ಪಡಿಕೆಗೆ ಸಜ್ಜುಗೊಳಿಸುವ ಮಂದಿ ಒಂದೇ ಒಂದು ಸಲ ಸರಿಯಾದ ಆಹಾರವಿಲ್ಲದೆ ಬುದುಕಿತ್ತಿರುವ ಬಡವರ ಬಗ್ಗೆ ಯೊಚಿಸಬೇಕಾಗಿದೆ. ಒಪ್ಪೊತ್ತಿನ ಊಟವನ್ನು ಹಸಿದವನ ಬಟ್ಟಲಿಗೆ ನೀಡಿದ್ದೆ ಆದರೆ ಅದಕ್ಕಿಂತಲೂ ಭಾಗ್ಯದ ಕೆಲಸ ಬೇರಿನ್ನೊಂದಿಲ್ಲ.
ಜಗತ್ತಿನಲ್ಲಿ ಇರುವ 700 ಕೋಟಿ ಜನಸಂಖ್ಯೆ, ಮುಂದಿನ 2050 ರ ವೇಳೆಗೆ900 ಕೋಟಿಗೆ ಏರಲಿದೆ. ಸಧ್ಯದ ಸ್ಥಿತಿಯಲ್ಲಿ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ಸುಮಾರು 87 ಕೋಟಿ ಜನ ಹಸಿವಿನಿಂದ ಒಂದೊತ್ತಿನ ಊಟದಲ್ಲಿ ಬದುಕು ದೂಡುತ್ತಿದ್ದಾರೆ. ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ86 ಕೋಟಿ 80 ಲಕ್ಷ ಜನತೆಯಲ್ಲಿ, ನಮ್ಮ ದೇಶದ ಪಾಲು 27 ಕೋಟಿ, 70ಲಕ್ಷ . ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಸರಿಸುಮಾರು ಆರು ಸಾವಿರದಷ್ಟು ಮಂದಿ ದಿನಂಪ್ರತಿ ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂಬುದು ನಮ್ಮ ದೇಶಕ್ಕೊದಗಿದ ಬಹುದೊಡ್ಡ ವಿಪತ್ತು ಮತ್ತು ಸ್ವಾತಂತ್ರ್ಯದ 60 ವರ್ಷಗಳಲ್ಲಿ ದೇಶಕ್ಕೆ ಅತಿ ದೊಡ್ಡ ಕಳಂಕ. ಅತ್ಯಧಿಕ ಪಾಕೃತಿಕ ಸಂಪನ್ಮೂಲ ಮತ್ತು ಅದಾಯಗಳ ಬಹುಮೂಲವನ್ನುಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಮಾನವೀಯ ಸಂಸ್ಕೃತಿಯೊಂದು ಇವತ್ತಿಗೂ ಇರೋದು ದುರಂತವೇ ಸರಿ. ದೇಶದಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿರುವುದು ಹಸಿವಿನಿಂದ ಅನ್ನೋದು ಬೆಳಕಿನಷ್ಟೇ ಸತ್ಯ ಮತ್ತು ಅಂಕಿ ಅಂಶಗಳು ಕೂಡ ಅದನ್ನೇ ಹೇಳುತ್ತದೆ. ಸರಿಸುಮಾರು ಹದಿನೈದು ಕೋಟಿಯಷ್ಟು ಮಕ್ಕಳು ಇಂದಿಗೂ ಅಪೌಷ್ಟಿಕ ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಇಪ್ಪತ್ತು ಕೋಟಿಗಿಂತಲೂ ಅಧಿಕ ಮಂದಿ ರಾತ್ರಿಯ ಆಹಾರವಿಲ್ಲದೆ ಬರಿಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಇದು ನಿಜಕ್ಕೂ ದೇಶವನ್ನು ಅಪಮಾನಕ್ಕೆ ಗುರಿ ಮಾಡುವ ಅಂಕಿ-ಅಂಶಗಳು.
ಇತ್ತ ಪ್ರತಿದಿನ ಸುಮಾರು ಆರು ಸಾವಿರದಷ್ಟು ಜನ ಸರಿಯಾದ ಆಹಾರವಿಲ್ಲದೆ ಪ್ರಾಣವನ್ನು ಕಳೆದು ಕೊಳ್ಳುತ್ತಿರಬೇಕಾದರೆ ಮತ್ತೊಂದು ಕಡೆ ಲಕ್ಷಗಟ್ಟಲೆ ಟನ್ ಅಕ್ಕಿ,ಬೇಳೆ,ಗೋದಿ ಮುಂತಾದ ಆಹಾರ ಪದಾರ್ಥಗಳು ಸರಕಾರದ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದೊಂದಿಗೆ ಕೊಳೆತುಹೊಗುತ್ತಿದೆ. ಇದಕ್ಕೆಲ್ಲಾ ಉತ್ತರಿಸಬೇಕಾದವರು ಮಾತ್ರ ಹೊಟ್ಟೆ ತುಂಬಾ ಉಂಡು ಎ.ಸಿ ರೂಮಿನಲ್ಲಿ ಜಗದ ಪರಿವೆ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಬಡವರ ಪಾಲಾಗ ಬೇಕಾಗಿದ್ದಂತಹ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಯಾರ ಭಯವೂ ಇಲ್ಲದೆ ಅಧಿಕಾರಿಗಳ ಕಣ್ಣಮುಂದೆಯೇ ಕಳ್ಳರ ಪಾಲಾಗುತ್ತಿರುವುದು ನಮ್ಮ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ. ಬರೀ ಬೆಂಗಳೂರು ನಗರವನ್ನು ಮಾತ್ರ ತೆಗೆದು ಕೊಂಡರೂ ಸಾಕು ದಿನವೊಂದಕ್ಕೆ ಲಕ್ಷಕ್ಕೂ ಮಿಕ್ಕ ಮೌಲ್ಯದ ಅನ್ನಾಹಾರವನ್ನು ಯಾವುದೇ ಮುಲಾಜಿಲ್ಲದೆ ತಿಪ್ಪೆಗೆ ಎಸೆಯಲಾಗುತ್ತಿದೆ. ಹೊಟ್ಟೆ ತುಂಬಿದ ನಂತರ ಮಿಕ್ಕುವ ಒಂದೇ ಒಂದು ತುತ್ತು ಕೂಡ ನಮ್ಮದಲ್ಲ ಅದು ಹಸಿದವರ ಬಟ್ಟಲಿಗೆ ಸೇರಿದ್ದು ಮತ್ತು ಅದವರ ಹಕ್ಕು, ಅದನ್ನು ಚೆಲ್ಲುವ ಯಾ ಹಾಳು ಮಾಡುವ ಅಧಿಕಾರ ಯಾವೊಬ್ಬನಿಗೂ ಇಲ್ಲವೆಂಬ ಸತ್ಯವನ್ನು ನಾವು ಅರಿಯಬೇಕಾಗಿದೆ.
ಈ ಬಗ್ಗೆ ನಮ್ಮ ನಮ್ಮಲ್ಲಿಯೇ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ,ಸಮಾರಂಭಗಳನ್ನ ನಡೆಸುವವರು ಸ್ವಯಂ ಅನ್ನಾಹಾರ ವ್ಯರ್ಥ ಮಾಡದಿರುವ ಕುರಿತು ಸಂಕಲ್ಪವೊಂದನ್ನು ಕೈಗೊಂಡು, ಹಸಿದು ಸಾಯುತ್ತಿರುವ ಜನಸಂಖ್ಯೆಯನ್ನು ವ್ಯಕ್ತವಾಗಿ ನಮೂದಿಸಿದ ಭಿತ್ತಿಪತ್ರಗಳನ್ನಂಟಿಸಿ, ಅದ್ಧೂರಿ ಸಮಾರಂಭಗಳ ನೆಪದಲ್ಲಿ ಲೆಕ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಆಹಾರವನ್ನು ತಯಾರು ಮಾಡಿ, ಮಿಕ್ಕವುಗಳನ್ನು ತೊಟ್ಟಿಗೆಸೆಯೋ ವಿಕೃತ ಮನಸ್ಸಿರುವವರು ನಮ್ಮೊಳಗೆ ನುಸುಳಿ ಬಡವರ ಅನ್ನಾಹಾರ ಕಸಿಯುತ್ತಿರುವ ಅಮಾನುಷ ಅಭ್ಯಾಸ ಬಲಗಳನ್ನು ತೊಡೆದು ಹಾಕಲು, ಮಿತವಾಗಿ ಆಹಾರ ಬಳಸುವ ಪದ್ಧತಿಯನ್ನು ಈ ಸಮಾಜವು ಅಭಿಮಾನದಿಂದ ನೋಡುವಂತೆ ಬದಲಾಯಿಸಿದರೆ, ಅಥವಾ ಬದಲಾಯಿಸುವಲ್ಲಿ ಶಕ್ತವಾದರೆ ಮಾನವೀಯತೆ ಮತ್ತು ಹಸಿದವರ ಬಗೆಗಿರುವ ನಮ್ಮ ಕಾಳಜಿ ಅರ್ಥಪೂರ್ಣವಾದೀತು. ಇಂತಹ ಮಾದರಿ ಸಮಾರಂಭಗಳಿಗೆ ಮುನ್ನುಡಿಯಿಡುವ ಕನಸೊಂದಕ್ಕೆ ನಾವು ನೀವೆಲ್ಲರೂ ಪ್ರಥಮರಾಗೋಣ ಮತ್ತು ಹಸಿವನ್ನು ಹಂಚಿಕೊಂಡು ಮೊದಲು ಮನುಷ್ಯರಾಗೋಣ, ಆ ಮೂಲಕ ಹಸಿವು ಮುಕ್ತ ಭಾರತದ ಕನಸನ್ನು ನನಸಾಗಿಸೋಣ..
- ಟೀಮ್ ಬ್ಲೂ ವೇವ್ಸ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ