ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಿಂದಾಗಿ ಜನರಿಗೆ ಪರಸ್ಪರ ವೇಗವಾಗಿ ಸಂಪರ್ಕ ಬೆಳೆಸಿಕೊಳ್ಳಲು ಸಾದ್ಯ ವಾಗುತ್ತಿದೆ. ಈ ತಾಣಗಳಿಂದ ಎಷ್ಟು ಒಳಿತೋ ಅಷ್ಟೇ ಕೆಡುಕಿನ ಅಂಶಗಳೂ ಇವೆ.ಫೇಸ್ಬುಕ್, ವಾಟ್ಸ್ಅಫ್ ನಲ್ಲಿ ಅವ್ಯಾಹತವಾಗಿ ಹರಿದು ಬರುತ್ತಿರುವ ಸುಳ್ಳು ಸಂದೇಶಗಳಿಂದ ಯುವ ಜನತೆ ದಾರಿ ತಪ್ಪುತ್ತಿದೆ. ಇಂದಿನ ಯುವ ಜನಾಂಗ ಬಾಗಿದ ತಲೆಯಲ್ಲಿ ಕಣ್ಣು ಅತ್ತಿತ್ತ ಅಲುಗಾಡಿಸದೆ ಸದಾ ಫೇಸ್ಬುಕ್, ವಾಟ್ಸ್ ಅಪ್ಪ್ ಗಳ ಮೆಸೆಜ್ಗಳ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಕೈಯಲ್ಲೊಂದು ಮೊಬೈಲ್, ಕಿವಿಗಳಲ್ಲಿ ಹೆಡ್ ಫೋನ್ ತೂರಿಸಿಕೊಂಡು ಅದರೊಳಗೆ ತೂರಿಕೊಂಡರೆ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವೂ ಕೂಡ ಅವರಿಗೆ ಇರುವುದಿಲ್ಲ.
ಈಗೀಗ ಈ ತಾಣಗಳಲ್ಲಿ ಸುಳ್ಳುಗಳನ್ನು ವಿಜೃಂಭಿಸುತ್ತಿದೆ , ಮೂಡನಂಬಿಕೆ ಮಾರಾಟವಾಗುತ್ತಿದೆ. ಪರಸ್ಪರ ಅಪನಂಬಿಕೆ ಹರಡಲಾಗುತ್ತಿದೆ. ಮಾನವ ವಿರೋದಿ ನಿಲುವುಗಳನ್ನು ಪ್ರಚಾರ ಪಡಿಸಲಾಗುತ್ತಿದೆ , ಭಿನ್ನಾಭಿಪ್ರಾಯಗಳನ್ನು ತೇಜೋವಧೆಗಾಗಿ ಬಳಸಲಾಗುತ್ತಿದೆ ,ಅನಗತ್ಯ ಅಸಭ್ಯ ಮತ್ತು ಅಶ್ಲೀಲ ವೀಡಿಯೊ , ಚಿತ್ರ , ಬರಹಗಳನ್ನು ಅವ್ಯಾಹತವಾಗಿ ರವಾನಿಸಿ ವಿಕೃತ ಮಜ ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲ ಈಗ ತಾಣ ಅಪಾಯಕ್ಕೆ ಈಡಾಗುತ್ತಿದೆ. ಕ್ಷಣಮಾತ್ರದಲ್ಲಿ ಇಡೀ ಲೋಕವನ್ನು ಅಶಾಂತಿಯನ್ನು ಉಂಟು ಮಾಡಬಲ್ಲಂಥ ಮೆಸೇಜ್ ಗಳು ಅನಾಹುತಕ್ಕೆ ಎಡೆ ಮಾಡಿ ಕೊಡುತ್ತಿವೆ. ಇಂಥ ಸಂದೇಶಗಳ ಅಗತ್ಯವಿದೆಯೇ ? ಎಂದು ಆಲೋಚಿಸಬೇಕಾದ ಕಾಲ ಬಂದಿದೆ.
ಸಾಮಾಜಿಕ ತಾಣಗಳ ಬಲೆಗೆ ಬಿದ್ದವರೇ ಒಮ್ಮೆ ಯೋಚಿಸಿ .ನೀವು, ನಿಮ್ಮ ಹೆತ್ತವರು,ಸಂಭಂದಿಕರು,ನಿಮ್ಮ ಸಹೋದರ ಸಹೋದರಿಯರು ಸ್ನೇಹಿತ ಸ್ನೇಹಿತೆಯರು ಈ ಕೆಳಗಿನ ಸಂದರ್ಭಗಳಲ್ಲಿ ಇದ್ದಾಗ ಅವರ ಫೋಟೋ, ವೀಡಿಯೊಗಳನ್ನು ಶೇರ್ ಮಾಡಲು ತಯಾರಿದ್ದೀರಾ ?
೧.ಮರಣ ಸಂಭವಿಸಿದಾಗ
೨.ಅಪಘಾತ ಸಂಭವಿಸಿದಾಗ
೩.ನೀರಲ್ಲಿ ಮುಳುಗುತ್ತಿರುವಾಗ
೩.ರಸ್ತೆ ಅಥವಾ ಇನ್ನಿತರ ಯಾವುದೇ ದುರಂತಕ್ಕೆ ಬಲಿಯಾದಾಗ
೪.ಖಾಸಗಿ ಕ್ಷಣ ಗಳಲ್ಲಿ ಮೈಮರೆತಿರುವಾಗ
೫.ಗುಪ್ತವಾದ ಆತ್ಮೀಯ ಕ್ಷಣ ಹಂಚಿಕೊಂಡಾಗ
೬.ಯಾವುದೇ ಗಲಬೆಗೆ ಈಡಾದಾಗ
೭.ಬೆಂಕಿ ಅನಾಹುತ ಸಂಭವಿಸಿದಾಗ
೮ .ಅನೈತಿಕತೆಗೆ ಬಲಿಯಾದಾಗ
ಇಂಥ ಅನೇಕ ಸನ್ನಿವೇಶಗಳಿಗೆ ನೀವು ಬಲಿಯಾದಾಗ ನಿಮ್ಮ ಫೋಟೋ, ವೀಡಿಯೊ ಮಾಡಿ ಯಾರದ್ರೂ ಶೇರ್ ಮಾಡಿದರೆ ನೀವು ಒಪ್ಪಿಕೊಳ್ಳಲು ತಯಾರಿದ್ದೀರಾ ? ಇಲ್ಲ ಅನ್ನುವುದಾದರೆ ಇತರರ ಫೋಟೋ ,ವೀಡಿಯೊಗಳನ್ನು ಶೇರ್ ಮಾಡುವುದು ಸರಿಯೇ ಯೋಚಿಸಿ .ಸಿಕ್ಕಿ ಸಿಕ್ಕಿದ ಮೆಸೇಜ್ ಗಳನ್ನು ಹಿಂದೆ ಮುಂದೆ ನೋಡದೆ, ಓದದೆ ಮುಂದೆ ಕಳುಹಿಸುವವರು ನೂರು ಸಲ ಯೋಚಿಸಿ.ಅನಗತ್ಯ ಸಂದೇಶಗಳನ್ನು ಕಳುಹಿಸಿ ನಿಮ್ಮ ಡಾಟಾ ಪ್ಯಾಕೇಜ್ ಗೆ ಕೊಟ್ಟ ಹಣವನ್ನು ವ್ಯರ್ಥವಾಗಿಸುವುದರ ಜೊತೆಗೆ ಇನ್ನೊಬ್ಬರ ಜೇಬಿಗೆ ಮತ್ತು ಮನಸ್ಸಿಗೆ ಕತ್ತರಿ ಹಾಕುವ ಮೊದಲು ಯೋಚಿಸಿ .
ಹಣ ಕೊಟ್ಟು ನೆಟ್ ಹಾಕಿಸಿ ಇಂಟರ್ನೆಟ್ ಕಂಪನಿ ಗಳನ್ನು ಉದ್ದಾರ ಮಾಡುವ ಬದಲು ಅಗತ್ಯವಾದ ಸಂದೇಶಗಳನ್ನು ಮಾತ್ರ ಕಳುಹಿಸಿ ನಿಮ್ಮನ್ನು ನೀವೇ ಉದ್ದಾರ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ . ತನ್ಮೂಲಕ ತಮ್ಮ ಸಮುದಾಯ ,ಸಮಾಜ ದೇಶವನ್ನು ಉದ್ದಾರ ಮಾಡುವ ಬಗೆಯನ್ನು ಕಂಡುಕೊಳ್ಳಿ. ತಮ್ಮ ಮೊಬೈಲ್ ಗೆ ಯಾರೇ ವಾಟ್ಸ್ಯಾಪ್ ಸಂದೇಶ ಕಳುಹಿಸಿದರೆ, ತಾವು ಕಳುಹಿಸಿದ ಸಂದೇಶ ನಿಜವೇ ಎಂದು ತಿರುಗಿ ಕಳುಹಿಸಿದವನಲ್ಲಿ ಪ್ರೆಶ್ನಿಸುವಷ್ಟು ವ್ಯವಧಾನವೂ ಇಲ್ಲದೆ ಇನ್ನೊಬ್ಬರಿಗೆ ಕಳುಹಿಸುತ್ತೇವೆ. ಹಾಗೆ ತಿರುಗಿ ಪ್ರೆಶ್ನಿಸಿ ಕೊಂಚ ಮಟ್ಟಿಗಾದರೂ ಇಂತಹ ತಪ್ಪು ಸಂದೇಶಗಳಿಗೆ ಕಡಿವಾಣ ಹಾಕ ಬಹುದು. ಸುಳ್ಳು ವದಂತಿಗಳನ್ನು ಹಬ್ಬಿ ಬಿಡುವವರೇ, ಅದನ್ನು ಫಾರ್ವರ್ಡ್ ಮಾಡುವವರೇ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಈಗಲೇ ನಿರ್ಧಾರ ಮಾಡಿಕೊಳ್ಳಿ. . ನಾಳೆಯ ನೆಮ್ಮದಿಗಾಗಿ ಇಂದಿನ ದಿನದಿಂದ ಸತ್ ಸಮಾಜದ ನಿರ್ಮಾಣಕ್ಕಾಗಿ ಒಳ್ಳೆಯ ಮೆಸೇಜ್ ಮಾತ್ರ ಕಳುಹಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿ. ಇಂಥ ಪ್ರತಿಜ್ಞೆ ಈ ನಿಮಿಷದಲ್ಲಿ ,ಈಗಲೇ ಕೈಗೊಳ್ಳಿ.ಎಲ್ಲವೂ ಒಳ್ಳೆಯದಾಗುತ್ತದೆ
ಸತ್ ಸಮಾಜದ ನಿರ್ಮಾಣಕ್ಕಾಗಿ ಈ ಪ್ರತಿಜ್ಞೆ ಸ್ವೀಕರಿಸುವಿರಿ ಎಂಬ ಭರವಸೆಯೊಂದಿಗೆ
- ಟೀಂ ಬ್ಲೂ ವೇವ್ಸ್
www.Facebook.com/BlueWavesPage