ಶುಕ್ರವಾರ, ನವೆಂಬರ್ 28, 2014

ಚಿಂತಿಸಿ , ನಿರ್ಧರಿಸಿ



ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಿಂದಾಗಿ ಜನರಿಗೆ ಪರಸ್ಪರ ವೇಗವಾಗಿ ಸಂಪರ್ಕ ಬೆಳೆಸಿಕೊಳ್ಳಲು ಸಾದ್ಯ ವಾಗುತ್ತಿದೆ. ಈ ತಾಣಗಳಿಂದ ಎಷ್ಟು ಒಳಿತೋ ಅಷ್ಟೇ ಕೆಡುಕಿನ ಅಂಶಗಳೂ ಇವೆ.ಫೇಸ್ಬುಕ್, ವಾಟ್ಸ್ಅಫ್ ನಲ್ಲಿ ಅವ್ಯಾಹತವಾಗಿ ಹರಿದು ಬರುತ್ತಿರುವ ಸುಳ್ಳು ಸಂದೇಶಗಳಿಂದ ಯುವ ಜನತೆ ದಾರಿ ತಪ್ಪುತ್ತಿದೆ. ಇಂದಿನ ಯುವ ಜನಾಂಗ ಬಾಗಿದ ತಲೆಯಲ್ಲಿ ಕಣ್ಣು ಅತ್ತಿತ್ತ ಅಲುಗಾಡಿಸದೆ ಸದಾ ಫೇಸ್ಬುಕ್, ವಾಟ್ಸ್ ಅಪ್ಪ್ ಗಳ ಮೆಸೆಜ್ಗಳ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಕೈಯಲ್ಲೊಂದು ಮೊಬೈಲ್, ಕಿವಿಗಳಲ್ಲಿ ಹೆಡ್ ಫೋನ್ ತೂರಿಸಿಕೊಂಡು ಅದರೊಳಗೆ ತೂರಿಕೊಂಡರೆ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವೂ ಕೂಡ ಅವರಿಗೆ ಇರುವುದಿಲ್ಲ.


ಈಗೀಗ ಈ ತಾಣಗಳಲ್ಲಿ ಸುಳ್ಳುಗಳನ್ನು ವಿಜೃಂಭಿಸುತ್ತಿದೆ , ಮೂಡನಂಬಿಕೆ ಮಾರಾಟವಾಗುತ್ತಿದೆ. ಪರಸ್ಪರ ಅಪನಂಬಿಕೆ ಹರಡಲಾಗುತ್ತಿದೆ. ಮಾನವ ವಿರೋದಿ ನಿಲುವುಗಳನ್ನು ಪ್ರಚಾರ ಪಡಿಸಲಾಗುತ್ತಿದೆ , ಭಿನ್ನಾಭಿಪ್ರಾಯಗಳನ್ನು ತೇಜೋವಧೆಗಾಗಿ ಬಳಸಲಾಗುತ್ತಿದೆ ,ಅನಗತ್ಯ ಅಸಭ್ಯ ಮತ್ತು ಅಶ್ಲೀಲ ವೀಡಿಯೊ , ಚಿತ್ರ , ಬರಹಗಳನ್ನು ಅವ್ಯಾಹತವಾಗಿ ರವಾನಿಸಿ ವಿಕೃತ ಮಜ ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲ ಈಗ ತಾಣ ಅಪಾಯಕ್ಕೆ ಈಡಾಗುತ್ತಿದೆ. ಕ್ಷಣಮಾತ್ರದಲ್ಲಿ ಇಡೀ ಲೋಕವನ್ನು ಅಶಾಂತಿಯನ್ನು ಉಂಟು ಮಾಡಬಲ್ಲಂಥ ಮೆಸೇಜ್ ಗಳು ಅನಾಹುತಕ್ಕೆ ಎಡೆ ಮಾಡಿ ಕೊಡುತ್ತಿವೆ. ಇಂಥ ಸಂದೇಶಗಳ ಅಗತ್ಯವಿದೆಯೇ ? ಎಂದು ಆಲೋಚಿಸಬೇಕಾದ ಕಾಲ ಬಂದಿದೆ.



ಸಾಮಾಜಿಕ ತಾಣಗಳ ಬಲೆಗೆ ಬಿದ್ದವರೇ ಒಮ್ಮೆ ಯೋಚಿಸಿ .ನೀವು, ನಿಮ್ಮ ಹೆತ್ತವರು,ಸಂಭಂದಿಕರು,ನಿಮ್ಮ ಸಹೋದರ ಸಹೋದರಿಯರು ಸ್ನೇಹಿತ ಸ್ನೇಹಿತೆಯರು ಈ ಕೆಳಗಿನ ಸಂದರ್ಭಗಳಲ್ಲಿ ಇದ್ದಾಗ ಅವರ ಫೋಟೋ, ವೀಡಿಯೊಗಳನ್ನು ಶೇರ್ ಮಾಡಲು ತಯಾರಿದ್ದೀರಾ ?


೧.ಮರಣ ಸಂಭವಿಸಿದಾಗ
೨.ಅಪಘಾತ ಸಂಭವಿಸಿದಾಗ
೩.ನೀರಲ್ಲಿ ಮುಳುಗುತ್ತಿರುವಾಗ
೩.ರಸ್ತೆ ಅಥವಾ ಇನ್ನಿತರ ಯಾವುದೇ ದುರಂತಕ್ಕೆ ಬಲಿಯಾದಾಗ
೪.ಖಾಸಗಿ ಕ್ಷಣ ಗಳಲ್ಲಿ ಮೈಮರೆತಿರುವಾಗ
೫.ಗುಪ್ತವಾದ ಆತ್ಮೀಯ ಕ್ಷಣ ಹಂಚಿಕೊಂಡಾಗ
೬.ಯಾವುದೇ ಗಲಬೆಗೆ ಈಡಾದಾಗ
೭.ಬೆಂಕಿ ಅನಾಹುತ ಸಂಭವಿಸಿದಾಗ
೮ .ಅನೈತಿಕತೆಗೆ ಬಲಿಯಾದಾಗ
ಇಂಥ ಅನೇಕ ಸನ್ನಿವೇಶಗಳಿಗೆ ನೀವು ಬಲಿಯಾದಾಗ ನಿಮ್ಮ ಫೋಟೋ, ವೀಡಿಯೊ ಮಾಡಿ ಯಾರದ್ರೂ ಶೇರ್ ಮಾಡಿದರೆ ನೀವು ಒಪ್ಪಿಕೊಳ್ಳಲು ತಯಾರಿದ್ದೀರಾ ? ಇಲ್ಲ ಅನ್ನುವುದಾದರೆ ಇತರರ ಫೋಟೋ ,ವೀಡಿಯೊಗಳನ್ನು ಶೇರ್ ಮಾಡುವುದು ಸರಿಯೇ ಯೋಚಿಸಿ .ಸಿಕ್ಕಿ ಸಿಕ್ಕಿದ ಮೆಸೇಜ್ ಗಳನ್ನು ಹಿಂದೆ ಮುಂದೆ ನೋಡದೆ, ಓದದೆ ಮುಂದೆ ಕಳುಹಿಸುವವರು ನೂರು ಸಲ ಯೋಚಿಸಿ.ಅನಗತ್ಯ ಸಂದೇಶಗಳನ್ನು ಕಳುಹಿಸಿ ನಿಮ್ಮ ಡಾಟಾ ಪ್ಯಾಕೇಜ್ ಗೆ ಕೊಟ್ಟ ಹಣವನ್ನು ವ್ಯರ್ಥವಾಗಿಸುವುದರ ಜೊತೆಗೆ ಇನ್ನೊಬ್ಬರ ಜೇಬಿಗೆ ಮತ್ತು ಮನಸ್ಸಿಗೆ ಕತ್ತರಿ ಹಾಕುವ ಮೊದಲು ಯೋಚಿಸಿ .

ಹಣ ಕೊಟ್ಟು ನೆಟ್ ಹಾಕಿಸಿ ಇಂಟರ್ನೆಟ್ ಕಂಪನಿ ಗಳನ್ನು ಉದ್ದಾರ ಮಾಡುವ ಬದಲು ಅಗತ್ಯವಾದ ಸಂದೇಶಗಳನ್ನು ಮಾತ್ರ ಕಳುಹಿಸಿ ನಿಮ್ಮನ್ನು ನೀವೇ ಉದ್ದಾರ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ . ತನ್ಮೂಲಕ ತಮ್ಮ ಸಮುದಾಯ ,ಸಮಾಜ ದೇಶವನ್ನು ಉದ್ದಾರ ಮಾಡುವ ಬಗೆಯನ್ನು ಕಂಡುಕೊಳ್ಳಿ. ತಮ್ಮ ಮೊಬೈಲ್ ಗೆ ಯಾರೇ ವಾಟ್ಸ್ಯಾಪ್ ಸಂದೇಶ ಕಳುಹಿಸಿದರೆ, ತಾವು ಕಳುಹಿಸಿದ ಸಂದೇಶ ನಿಜವೇ ಎಂದು ತಿರುಗಿ ಕಳುಹಿಸಿದವನಲ್ಲಿ ಪ್ರೆಶ್ನಿಸುವಷ್ಟು ವ್ಯವಧಾನವೂ ಇಲ್ಲದೆ ಇನ್ನೊಬ್ಬರಿಗೆ ಕಳುಹಿಸುತ್ತೇವೆ. ಹಾಗೆ ತಿರುಗಿ ಪ್ರೆಶ್ನಿಸಿ ಕೊಂಚ ಮಟ್ಟಿಗಾದರೂ ಇಂತಹ ತಪ್ಪು ಸಂದೇಶಗಳಿಗೆ ಕಡಿವಾಣ ಹಾಕ ಬಹುದು. ಸುಳ್ಳು ವದಂತಿಗಳನ್ನು ಹಬ್ಬಿ ಬಿಡುವವರೇ, ಅದನ್ನು ಫಾರ್ವರ್ಡ್ ಮಾಡುವವರೇ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಈಗಲೇ ನಿರ್ಧಾರ ಮಾಡಿಕೊಳ್ಳಿ. . ನಾಳೆಯ ನೆಮ್ಮದಿಗಾಗಿ ಇಂದಿನ ದಿನದಿಂದ ಸತ್ ಸಮಾಜದ ನಿರ್ಮಾಣಕ್ಕಾಗಿ ಒಳ್ಳೆಯ ಮೆಸೇಜ್ ಮಾತ್ರ ಕಳುಹಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿ. ಇಂಥ ಪ್ರತಿಜ್ಞೆ ಈ ನಿಮಿಷದಲ್ಲಿ ,ಈಗಲೇ ಕೈಗೊಳ್ಳಿ.ಎಲ್ಲವೂ ಒಳ್ಳೆಯದಾಗುತ್ತದೆ
ಸತ್ ಸಮಾಜದ ನಿರ್ಮಾಣಕ್ಕಾಗಿ ಈ ಪ್ರತಿಜ್ಞೆ ಸ್ವೀಕರಿಸುವಿರಿ ಎಂಬ ಭರವಸೆಯೊಂದಿಗೆ

- ಟೀಂ ಬ್ಲೂ ವೇವ್ಸ್
www.Facebook.com/BlueWavesPage




                                                           ****** ಬ್ಲೂ ವೇವ್ಸ್ ಪತ್ರಿಕಾಗೋಷ್ಠಿ ******

ಎಲೆಮರೆಯ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್-ನ ಮೊದಲ ಹೆಜ್ಜೆ 'ನಿಕ್ಷೇಪ -2014' ಈ ಸಾಹಿತ್ಯ ಸ್ಪರ್ಧೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ದಿಸೆಯಲ್ಲಿ ಟೀಂ ಬ್ಲೂ ವೇವ್ಸ್ ಯಶಸ್ವಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತು.

-Team Blue Waves 

ಮದುವೆ

# ಮದುವೆ #

ಗೆಳೆಯರೇ,

ಮದುವೆ ಎಂಬುದು ಎರಡು ಜೀವಗಳ, ಎರಡು ಮನಸ್ಸುಗಳ ಸುಂದರ ಸಮಾಗಮವಾಗಿದೆ. ಸಾವಿರಾರು ಸುಂದರ ಕನಸುಗಳನ್ನು ಕಂಡು, ಸಾಕಾರ ಗೊಳಿಸಲು ಇಡುವ ಮೊದಲ ಹೆಜ್ಜೆಯಾಗಿದೆ. ಮದುವೆಯ ಆರಂಭಿಕ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ವಿಹರಿಸಿ ಕ್ರಮೇಣ ತಮ್ಮ ಜೀವನಕ್ಕೆ ಮರಳುವಾಗ ಬಹುತೇಕ ಸಂಸಾರಗಳಲ್ಲಿ ಕೆಲವೊಂದು ತಪ್ಪು ಗ್ರಹಿಕೆ ಗಳಿಂದಾಗಿ ಸಂಸಾರದ ನೌಕೆ ಅಲುಗಾಡಲು ಶುರುವಾಗುತ್ತದೆ.

ಹೊಸದಾಗಿ ಮನೆಗೆ ಬಂದ ಸೊಸೆ ನಮ್ಮ ಮಾತು ಕೇಳುತಿಲ್ಲ. ನಮ್ಮ ಸಂಸಾರಕ್ಕೆ ಹೊಂದಿಕೊಂಡು ನಡೆಯುತ್ತಿಲ್ಲ ಇತ್ಯಾದಿ, ಇತ್ಯಾದಿ. ತನ್ನವರನ್ನೆಲ್ಲ ಬಿಟ್ಟು ಹೊಸ ಪರಿಸರಕ್ಕೆ ಬಂದ ಸೊಸೆ ತನ್ನ ಬೇಸರ, ಖುಷಿಗಳನ್ನು ಗಂಡನ ಬಳಿ ಹೇಳಿಕೊಂಡರೆ, ಏಕಾಂತ ಬಯಸಿದರೆ ಅದಕ್ಕೆ ಸಿಟ್ಟೇಳುವ ಅತ್ತೆ . ಮಗನನ್ನು ತನ್ನ ಕೈಮುಷ್ಠಿಯಲ್ಲಿಟ್ಟುಕೊಂಡಿದ್ದಾಳೆ ಎಂಬ ಭಾವನೆ ಸೊಸೆಗೆ ಬಂದರೆ ಸಂಸಾರದಲ್ಲಿ ಒಡಕು ಮೂಡತೊಡಗುತ್ತದೆ .ಈ ರೀತಿಯ ಮನಸ್ಥಿತಿಯಿಂದ ಹೊರಬಂದರೆ ಮಾತ್ರ ಅತ್ತೆ ಸೊಸೆಯರ ನಡುವೆ ಸಾಮರಸ್ಯ ಏರ್ಪಡಬಹುದು.

ಇಂಥ ಸನ್ನಿವೇಶದಲ್ಲಿ ಗಂಡನಾದವನು ಅಸಾಹಾಯಕನಾಗುತ್ತಾನೆ. ಅತ್ತ ತಾಯಿಯತ್ತ ವಾಲುವಂತಿಲ್ಲಾ, ಇತ್ತ ಪತ್ನಿಯ ಮಾತು ಕೇಳುವಂತಿಲ್ಲ. ಮುತ್ತು ಕೊಡುವ ಮಡದಿ ಬಂದಾಗ ತುತ್ತು ಕೊಟ್ಟ ತಾಯಿಯನ್ನು ಮರೆಯಲಾಗದೆ, ಎದುರಿಸಲಾಗದೆ ಗಂಡನಾದವನು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗುತ್ತಾನೆ. ಅತ್ತೆ ಸೊಸೆಯರ ಒಳ ಜಗಳ ಬಹುತೇಕ ಸಂಸಾರಗಳಲ್ಲಿ ಕಾಣಬಹುದು. ಅಂತಹ ಸಂಧರ್ಭಗಳಲ್ಲಿ ಅತೀ ಹೆಚ್ಚಿನ ಜಾಗರೂಕತೆಯಿಂದ ಜಾಣ ಮೌನ ವಹಿಸುವುದು ಉತ್ತಮ. ಇಬ್ಬರ ಮಾತನ್ನೂ ಆಲಿಸಿ, ಗಣನೆಗೆ ತೆಗೆದು ಕೊಳ್ಳದೇ ಪರಿಸ್ಥಿತಿ ತಿಳಿಗೊಳಿಸಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಅವರವರ ಮೂಡ್ ನೋಡಿ ಪ್ರೀತಿಯಿಂದ, ಜಾಣ್ಮೆ ಯಿಂದ ಪರಸ್ಪರ ಹೊಂದಾಣಿಕೆ ಮಾಡಿ ಕೊಳ್ಳಲು ಅರ್ಥವಾಗುವಂತೆ ಹೇಳಬೇಕು.

ಇಲ್ಲಿ ಚಿಂತಿಸಬೇಕಾದ ವಿಷಯ - ಆ ಹೊಸ ಮದುಮಗಳು ತನ್ನ ಹುಟ್ಟಿನಿಂದ ಯೌವ್ವಾನಾವಸ್ಥೆಯ ತನಕ ಅವಳದೇ ಆದ ಜೀವನ ಶೈಲಿ ರೂಪಿಸಿಕೊಂಡು, ನಮಗೆ ವ್ಯತಿರಿಕ್ತವಾದ ವಾತಾವರಣ ದಲ್ಲಿ ಬೆಳೆದು ಬಂದವಳಾಗಿರುತ್ತಾಳೆ. ಅಂತಹಾ ಯುವತಿ ಮದುಮಗಳಾಗಿ ಬಂದ ಕೂಡಲೇ ತಮ್ಮ ಸಂಪ್ರದಾಯಕ್ಕೆ, ತಮ್ಮ ಕುಟುಂಬಾಚರಣೆಗೆ ಒಗ್ಗಿಕೊಳ್ಳ ಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಅವಳು ಮಾಡುವ ಮನೆಗೆಲಸಗಳಲ್ಲಿ ಹೆಚ್ಚು ಕಮ್ಮಿಯಾದರೂ,ಸರಿಯಾದ ಸಮಯ ಸಂಧರ್ಭ ನೋಡಿ ಪ್ರೀತಿಯಿಂದ ತಿಳಿ ಹೇಳುವುದು ಜಾಣತನವಾಗಿದೆ. ಅವಳು ಮಾಡುವ ಅಡುಗೆಯ ರುಚಿಯಲ್ಲಿ ಸ್ವಲ್ಪ ಏರು ಪೆರಾದಲ್ಲಿ, ಅದನ್ನು ಸಹಿಸಿಕೊಂಡು "ಅಡುಗೆ ಚೆನ್ನಾಗಿತ್ತು ಆದರೆ ಇನ್ನೂ ಕೂಡ ರುಚಿಯಾಗಿ ಮಾಡುವ ನೈಪುಣ್ಯತೆ ನಿನ್ನಲ್ಲಿದೆ" ಎಂದು ಹುರಿದುಂಬಿಸಬೆಕು. ಈಗಿನ ಕಾಲದಲ್ಲಿ ವೆಬ್ ಸೈಟ್ ಗಳಲ್ಲಿ, ಯೂ ಟ್ಯೂಬ್ ನಲ್ಲಿ ಬೇಕಾದಷ್ಟು ಅಡುಗೆಯ ವಿಧಾನಗಳು ಸುಲಭವಾಗಿ ಲಭ್ಯವಿದೆ. ಸಾಧ್ಯವಾದರೆ ಅಂತಹ ವಿಡಿಯೋಗಳನ್ನೂ, ಲೇಖನ ಗಳನ್ನೂ ತೋರಿಸಿ ಪ್ರೊತ್ಸಾಹಿಸಬೇಕು.

ಗಂಡು ಆದವನು, ಅವಳೂ ಕೂಡ ಒಂದು ಹೆಣ್ಣು ಜೀವ, ಅವಳಿಗೆ ಅವಳದೇ ಆದಂತಹ ಆಸೆ ಆಕಾಂಕ್ಷೆ ಗಳಿವೆ ಎಂಬುದನ್ನು ಅರ್ಥ ಮಾಡಿ ಕೊಂಡು, ತನ್ನ short temper ಅದುಮಿಟ್ಟುಕೊಂಡು ಚಾಕಚಕ್ಯತೆಯಿಂದ, ಎರಡೂ ಕಡೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ತಮಗೆ ಪೂರಕವಾದ ವಾತಾವರಣ ನಿರ್ಮಿಸಲು ಸಹಕಾರಿಯಾಗ ಬಲ್ಲುದು. ಮನೆಯಲ್ಲಿ ಅತ್ತೆ-ಸೊಸೆ ಜಗಳ ಸಾಮಾನ್ಯ ಬಿಡಿ ಅಂತ ಸುಮ್ಮನಿದ್ದು ಬಿಟ್ಟರೆ ಸಮಸ್ಯೆ ಬೆಂಕಿಗೆ ತುಪ್ಪ ಸುರಿದಂತೆ ಆಗುವ ಸಂಭವವಿದೆ . ತನ್ನ ತಾಯಿಯಿಂದ (ಅತ್ತೆ ) ಸೊಸೆಗಾಗುವ (ತನ್ನ ಹೆಂಡತಿಗೆ ) ಅಥವಾ ತನ್ನ ಹೆಂಡತಿಯಿಂದ ತನ್ನ ತಾಯಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಡನಾದವನು ಗಮನಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಉಂಟಾಗುವ ದಂಪತಿಗಳ ಜಗಳದಿಂದ ಮನೆ ರಣರಂಗ ವಾಗುವುದು ಇದೆ . ಆದ್ದರಿಂದ ಗಂಡನಾದವನು ತನ್ನ ಸಂಸಾರದಲ್ಲಿನ ಆಗು ಹೋಗುಗಳಿಗೆ ಕಿವಿಯಾಗಿ ಎಲ್ಲವನ್ನೂ ಸರಿದೂಗಿಸುತ್ತಾ, ಇಬ್ಬರೂ ಪರಸ್ಪರ ಸಹಕಾರದಿಂದ ಸಾಗುವ ಹಾಗೆ ಮಾಡಬೇಕು.

ಮದುವೆಯ ಹೊಸತರಲ್ಲಿ ಹೆಚ್ಚಿನವರೆಲ್ಲರಿಗೂ ಇಂತಹ ಸನ್ನಿವೇಶಗಳು ಅನುಭವ ಆಗಿಯೇ ಆಗುತ್ತದೆ. ನನಗೂ ಎದುರಾಗಿತ್ತು. ಸಾಧ್ಯವಾದಷ್ಟು ನಿಭಾಯಿಸಿದ್ದೆನೆ. ಹಾಗೂ ಕೆಲವು ಸಂದರ್ಭಗಳಲ್ಲಿ ಎಡವಿದ್ದೆನೆಯೂ ಕೂಡ. ಹೊಸದಾಗಿ ಮದುವೆಯಾದವರಿಗೂ ಹಾಗೂ ಇನ್ನು ಮದುವೆ ಆಗುವವರಿಗೆ ಈ ಕೆಲವು ಟಿಪ್ಸ್ ಗಳು ತಮ್ಮ ವೈವಾಹಿಕ ಜೀವನವನ್ನು ಸಾಧ್ಯವಾದಷ್ಟು ಸುಗಮ ವಾಗಿಸಲಿ ಎಂಬ ಸದುದ್ದೇಶ ನನ್ನದು.

ಇಂತಿ
ಅನಾಮಿಕ

ದ್ವೇಷವ ಬಿಟ್ಟು ಶಾಂತಿಯ ದೇಶವನ್ನು ಕಟ್ಟೋಣ.



ಪ್ರಪಂಚದ ಅತೀ ದೊಡ್ಡ ಜಾತ್ಯತೀತವಾದ ಪ್ರಜಾಪ್ರಭುತ್ವ ದೇಶವಾದಂತಹ ಭಾರತದಲ್ಲಿ ಅತ್ಯಾಚಾರ,ಕೋಮುವಾದ, ಭೀತಿವಾದ ಗಳು ಮೇಲೈಸಿ ಅಶಾಂತಿಗಳು ಉಂಟಾಗುತ್ತಿದೆ.

ಪರಸ್ಪರ ಸಹೋದರರಂತೆ ಅನ್ಯೋನ್ಯತೆಯಿಂದ ಜೀವಿಸಬೇಕಾದವರು ಧರ್ಮ ,ಧರ್ಮಗಳ ಹೆಸರೇಳಿಕೊಂಡು ಪರಸ್ಪರ ಬಡಿದಾಡಿಕೊಳ್ಳುವಂತಹ ಸನ್ನಿವೇಶಗಳಾಗಿವೆ ನಾವು ನೋಡುತ್ತಿರುವುದು.

ಒಂದು ಕಡೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಗಳು ಬೆಳೆದು ದೇಶದ ಸೌಹಾರ್ದತೆಗೆ ಮಾರಕವಾಗುತ್ತಿರುವಾಗ ಮತ್ತೊಂದು ಕಡೆಯಿಂದ ದೇಶದ ಉದ್ದಗಲಕ್ಕೂ ಸ್ತ್ರೀ ವರ್ಗವು ನಿರಂತರವಾಗಿ ಲೈಂಗಿಕ ದೌರ್ಜನ್ಯಗಳಿಗೆ ಒಳಪಡುತ್ತಲೇ ಇದ್ದಾರೆ..!!

ದೇಶದಲ್ಲಿ ನಡೆಯುತ್ತಿರುವಂತಹ ಎಲ್ಲಾ ಅನಾಚಾರ,ಅತ್ಯಾಚಾರ,ಅಕ್ರಮಗಳ ರೂವಾರಿಗಳನ್ನು ಧರ್ಮದ ಹೆಸರಿನಲ್ಲಿ ಗುರುತಿಸಿ ಅದಕ್ಕೆ ಮತೀಯ ಬಣ್ಣವನ್ನು ಲೇಪಿಸಿ ಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವಂತಹ ರಾಜಕೀಯ ಪಕ್ಷಗಳಿಗೇನು ಕೊರತೆಯಿಲ್ಲ.

ಸೌಹಾರ್ದಯುತ ಭಾರತವನ್ನು ಕಟ್ಟಲು ಯುವ ಸಮೂಹಕ್ಕೆ ಖಂಡಿತ ಸಾಧ್ಯವಿದೆ.ಪರಸ್ಪರ ಸಂಘಟನೆಗಳನ್ನು ಕಟ್ಟಿಕೊಂಡು ಅನ್ಯ ಧರ್ಮಗಳನ್ನು ನಿಂದಿಸಿ ದೇಶದ ಸೌಹಾರ್ದತೆಗೆ ಧಕ್ಕೆ ತರದೆ ಪರಸ್ಪರ ಸಹೋದರತೆಯಿಂದ, ಏಕತೆಯಿಂದ ಒಂದು ಗೂಡಿ ಬಾಳೋಣ.

ಧರ್ಮ ಧರ್ಮಗಳ ನಡುವಿನ ಅಪನಂಬಿಕೆಗಳನ್ನು ದೂರವಾಗಿಸಿ, ದ್ವೇಷವ ಬಿಟ್ಟು ಸೌಹಾರ್ದಯುತ ದೇಶವ ಕಟ್ಟುವವರು ನಾವುಗಳಾಗೋಣ..

ಸದಾಶಯದೊಂದಿಗೆ
ಟೀಂ ಬ್ಲೂ ವೇವ್ಸ್

ಹಸಿವು' ಇರುವ ದೇಶದಲ್ಲಿ 'ಅನ್ನ'ವು ತೊಟ್ಟಿಯ ಪಾಲಾಗದಿರಲಿ

ಭೂಮಂಡಲದಲ್ಲಿ ಜೀವಿಸುತ್ತಿರುವ ಸಕಲ ಜೀವರಾಶಿಗೂ ಹಸಿವು ಅಂದರೇನು ಅಂತ ತಿಳಿದಿರುತ್ತದೆ, ಪ್ರಕೃತಿಯಲ್ಲಿ ಪ್ರತಿಯೊಂದರ ಹುಟ್ಟಿನೊಂದಿಗೆ ಹಸಿವೂ ಕೂಡ ಜನ್ಮ ತಾಳಿರುತ್ತದೆ. ಹಸಿವು ಸಕಲ ಜೀವರಾಶಿಗಳನ್ನು ಮುಟ್ಟಿಸುವ ದಾರುಣ ಸ್ಥಿತಿ. ಈ 21ನೇ ಶತಮಾನದಲ್ಲಿ 'ಹಸಿವು' ಜಗತ್ತು ಎದುರಿಸುತ್ತಿರುವ ಅತೀ ದೊಡ್ಡ ಸವಾಲು. ಈ ವಿಶ್ವದಲ್ಲಿ ನಾಲ್ಕು ಸೆಕೆಂಡ್‌ಗೆ ಒಂದು ಮಗು ಸಾಯುತ್ತಿದೆ, ಪ್ರತೀ ಎಂಟು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದೆ, ಅಂದರೆ 870 ಮಿಲಿಯನ್ ಮಕ್ಕಳು ಅಪೌಷ್ಟಿಕತೆ ಅಥವಾ ಅಹಾರದ ಕೊರತೆಯಿಂದ ಒದ್ದಾಡುತ್ತಿವೆ. ಇದಕ್ಕೆಲ್ಲ ಮೂಲ ಕಾರಣವೇ ಹಸಿವು ಎಂದರೆ ಈ ಹಸಿವಿನ ದಾರುಣತೆಯನ್ನು ನಾವು ಊಹಿಸಬಹುದಾಗಿದೆ.

ಭೂಮಿಯ ಮೇಲೆ ಅತೀ ಬುದ್ದಿವಂತನೆನಿಸಿಕೊಂಡಿರುವ ಮನುಷ್ಯನು ನಡೆಸುವ ಬಹತೇಕ ಸಮಾರಂಭಗಳಲ್ಲಿ ತನ್ನ ಒಣ ಪ್ರತಿಷ್ಠೆಗಾಗಿ, ಇತರರಿಂದ ಹೊಗಳಿಕೆ ಗಿಟ್ಟಿಸಿಕೊಳ್ಳುವ ಸಲುವಾಗಿ, ಹಸಿವಿನ ಮೌಲ್ಯ ಗೊತ್ತಿದ್ದರೂ ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ತಿನ್ನುವ ಆಹಾರವನ್ನು ತಿಪ್ಪೆಗೆಸೆಯುತ್ತಿರೋದು ದುರಂತವೇ ಸರಿ. ಒಂದು ನಿಮಿಷ ನಾವೆಲ್ಲರೂ ಯೋಚಿಸಬೇಕಾಗಿದೆ, ಒಬ್ಬ ವ್ಯಕ್ತಿ ಹೆಚ್ಚೆಂದರೆ ಎಷ್ಟು ತಿನ್ನಬಹುದು.. ?, ಹೊಟ್ಟೆ ತುಂಬಿಸಿಕೊಂಡ ನಂತರ ಮಿಕ್ಕ ಅನ್ನವನ್ನು ನಿರ್ಭೀತಿಯಿಂದ ಚೆಲ್ಲುತ್ತಾನೆ ಎಂದಾದರೆ ಯಾರನ್ನು ದೂಷಿಸಬೇಕು?. ಆಡಂಬರದ ಸಮಾರಂಭಗಳಲ್ಲಿ ಲೆಕ್ಕಕಿಂತಲೂ ಅಧಿಕ ಪ್ರಮಾಣದಲ್ಲಿ ಅನ್ನಾಹಾರಗಳನ್ನು ತಯಾರಿಸುವಂತಹ ಕೆಟ್ಟ ಸಂಸ್ಕೃತಿ ಬೆಳೆದು ಬಂದಿರೋದೆ ದುರ್ದೈವ. ಕೇವಲ ಒಣ ಪ್ರತಿಷ್ಠೆಗಾಗಿ, ಬಂದವರಿಂದ ಬೆನ್ನು ತಟ್ಟಿಸಿಕೊಳ್ಳೋ ಸಲುವಾಗಿ ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸಿದ್ದಪಡಿಸಿ ಅದನ್ನು ತೋರ್ಪಡಿಕೆಗೆ ಸಜ್ಜುಗೊಳಿಸುವ ಮಂದಿ ಒಂದೇ ಒಂದು ಸಲ ಸರಿಯಾದ ಆಹಾರವಿಲ್ಲದೆ ಬುದುಕಿತ್ತಿರುವ ಬಡವರ ಬಗ್ಗೆ ಯೊಚಿಸಬೇಕಾಗಿದೆ. ಒಪ್ಪೊತ್ತಿನ ಊಟವನ್ನು ಹಸಿದವನ ಬಟ್ಟಲಿಗೆ ನೀಡಿದ್ದೆ ಆದರೆ ಅದಕ್ಕಿಂತಲೂ ಭಾಗ್ಯದ ಕೆಲಸ ಬೇರಿನ್ನೊಂದಿಲ್ಲ.

ಜಗತ್ತಿನಲ್ಲಿ ಇರುವ 700 ಕೋಟಿ ಜನಸಂಖ್ಯೆ, ಮುಂದಿನ 2050 ರ ವೇಳೆಗೆ900 ಕೋಟಿಗೆ ಏರಲಿದೆ. ಸಧ್ಯದ ಸ್ಥಿತಿಯಲ್ಲಿ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ಸುಮಾರು 87 ಕೋಟಿ ಜನ ಹಸಿವಿನಿಂದ ಒಂದೊತ್ತಿನ ಊಟದಲ್ಲಿ ಬದುಕು ದೂಡುತ್ತಿದ್ದಾರೆ. ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ86 ಕೋಟಿ 80 ಲಕ್ಷ ಜನತೆಯಲ್ಲಿ, ನಮ್ಮ ದೇಶದ ಪಾಲು 27 ಕೋಟಿ, 70ಲಕ್ಷ . ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಸರಿಸುಮಾರು ಆರು ಸಾವಿರದಷ್ಟು ಮಂದಿ ದಿನಂಪ್ರತಿ ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂಬುದು ನಮ್ಮ ದೇಶಕ್ಕೊದಗಿದ ಬಹುದೊಡ್ಡ ವಿಪತ್ತು ಮತ್ತು ಸ್ವಾತಂತ್ರ್ಯದ 60 ವರ್ಷಗಳಲ್ಲಿ ದೇಶಕ್ಕೆ ಅತಿ ದೊಡ್ಡ ಕಳಂಕ. ಅತ್ಯಧಿಕ ಪಾಕೃತಿಕ ಸಂಪನ್ಮೂಲ ಮತ್ತು ಅದಾಯಗಳ ಬಹುಮೂಲವನ್ನುಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಮಾನವೀಯ ಸಂಸ್ಕೃತಿಯೊಂದು ಇವತ್ತಿಗೂ ಇರೋದು ದುರಂತವೇ ಸರಿ. ದೇಶದಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿರುವುದು ಹಸಿವಿನಿಂದ ಅನ್ನೋದು ಬೆಳಕಿನಷ್ಟೇ ಸತ್ಯ ಮತ್ತು ಅಂಕಿ ಅಂಶಗಳು ಕೂಡ ಅದನ್ನೇ ಹೇಳುತ್ತದೆ. ಸರಿಸುಮಾರು ಹದಿನೈದು ಕೋಟಿಯಷ್ಟು ಮಕ್ಕಳು ಇಂದಿಗೂ ಅಪೌಷ್ಟಿಕ ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಇಪ್ಪತ್ತು ಕೋಟಿಗಿಂತಲೂ ಅಧಿಕ ಮಂದಿ ರಾತ್ರಿಯ ಆಹಾರವಿಲ್ಲದೆ ಬರಿಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಇದು ನಿಜಕ್ಕೂ ದೇಶವನ್ನು ಅಪಮಾನಕ್ಕೆ ಗುರಿ ಮಾಡುವ ಅಂಕಿ-ಅಂಶಗಳು.

ಇತ್ತ ಪ್ರತಿದಿನ ಸುಮಾರು ಆರು ಸಾವಿರದಷ್ಟು ಜನ ಸರಿಯಾದ ಆಹಾರವಿಲ್ಲದೆ ಪ್ರಾಣವನ್ನು ಕಳೆದು ಕೊಳ್ಳುತ್ತಿರಬೇಕಾದರೆ ಮತ್ತೊಂದು ಕಡೆ ಲಕ್ಷಗಟ್ಟಲೆ ಟನ್ ಅಕ್ಕಿ,ಬೇಳೆ,ಗೋದಿ ಮುಂತಾದ ಆಹಾರ ಪದಾರ್ಥಗಳು ಸರಕಾರದ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದೊಂದಿಗೆ ಕೊಳೆತುಹೊಗುತ್ತಿದೆ. ಇದಕ್ಕೆಲ್ಲಾ ಉತ್ತರಿಸಬೇಕಾದವರು ಮಾತ್ರ ಹೊಟ್ಟೆ ತುಂಬಾ ಉಂಡು ಎ.ಸಿ ರೂಮಿನಲ್ಲಿ ಜಗದ ಪರಿವೆ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಬಡವರ ಪಾಲಾಗ ಬೇಕಾಗಿದ್ದಂತಹ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಯಾರ ಭಯವೂ ಇಲ್ಲದೆ ಅಧಿಕಾರಿಗಳ ಕಣ್ಣಮುಂದೆಯೇ ಕಳ್ಳರ ಪಾಲಾಗುತ್ತಿರುವುದು ನಮ್ಮ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ. ಬರೀ ಬೆಂಗಳೂರು ನಗರವನ್ನು ಮಾತ್ರ ತೆಗೆದು ಕೊಂಡರೂ ಸಾಕು ದಿನವೊಂದಕ್ಕೆ ಲಕ್ಷಕ್ಕೂ ಮಿಕ್ಕ ಮೌಲ್ಯದ ಅನ್ನಾಹಾರವನ್ನು ಯಾವುದೇ ಮುಲಾಜಿಲ್ಲದೆ ತಿಪ್ಪೆಗೆ ಎಸೆಯಲಾಗುತ್ತಿದೆ. ಹೊಟ್ಟೆ ತುಂಬಿದ ನಂತರ ಮಿಕ್ಕುವ ಒಂದೇ ಒಂದು ತುತ್ತು ಕೂಡ ನಮ್ಮದಲ್ಲ ಅದು ಹಸಿದವರ ಬಟ್ಟಲಿಗೆ ಸೇರಿದ್ದು ಮತ್ತು ಅದವರ ಹಕ್ಕು, ಅದನ್ನು ಚೆಲ್ಲುವ ಯಾ ಹಾಳು ಮಾಡುವ ಅಧಿಕಾರ ಯಾವೊಬ್ಬನಿಗೂ ಇಲ್ಲವೆಂಬ ಸತ್ಯವನ್ನು ನಾವು ಅರಿಯಬೇಕಾಗಿದೆ.

ಈ ಬಗ್ಗೆ ನಮ್ಮ ನಮ್ಮಲ್ಲಿಯೇ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ,ಸಮಾರಂಭಗಳನ್ನ ನಡೆಸುವವರು ಸ್ವಯಂ ಅನ್ನಾಹಾರ ವ್ಯರ್ಥ ಮಾಡದಿರುವ ಕುರಿತು ಸಂಕಲ್ಪವೊಂದನ್ನು ಕೈಗೊಂಡು, ಹಸಿದು ಸಾಯುತ್ತಿರುವ ಜನಸಂಖ್ಯೆಯನ್ನು ವ್ಯಕ್ತವಾಗಿ ನಮೂದಿಸಿದ ಭಿತ್ತಿಪತ್ರಗಳನ್ನಂಟಿಸಿ, ಅದ್ಧೂರಿ ಸಮಾರಂಭಗಳ ನೆಪದಲ್ಲಿ ಲೆಕ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಆಹಾರವನ್ನು ತಯಾರು ಮಾಡಿ, ಮಿಕ್ಕವುಗಳನ್ನು ತೊಟ್ಟಿಗೆಸೆಯೋ ವಿಕೃತ ಮನಸ್ಸಿರುವವರು ನಮ್ಮೊಳಗೆ ನುಸುಳಿ ಬಡವರ ಅನ್ನಾಹಾರ ಕಸಿಯುತ್ತಿರುವ ಅಮಾನುಷ ಅಭ್ಯಾಸ ಬಲಗಳನ್ನು ತೊಡೆದು ಹಾಕಲು, ಮಿತವಾಗಿ ಆಹಾರ ಬಳಸುವ ಪದ್ಧತಿಯನ್ನು ಈ ಸಮಾಜವು ಅಭಿಮಾನದಿಂದ ನೋಡುವಂತೆ ಬದಲಾಯಿಸಿದರೆ, ಅಥವಾ ಬದಲಾಯಿಸುವಲ್ಲಿ ಶಕ್ತವಾದರೆ ಮಾನವೀಯತೆ ಮತ್ತು ಹಸಿದವರ ಬಗೆಗಿರುವ ನಮ್ಮ ಕಾಳಜಿ ಅರ್ಥಪೂರ್ಣವಾದೀತು. ಇಂತಹ ಮಾದರಿ ಸಮಾರಂಭಗಳಿಗೆ ಮುನ್ನುಡಿಯಿಡುವ ಕನಸೊಂದಕ್ಕೆ ನಾವು ನೀವೆಲ್ಲರೂ ಪ್ರಥಮರಾಗೋಣ ಮತ್ತು ಹಸಿವನ್ನು ಹಂಚಿಕೊಂಡು ಮೊದಲು ಮನುಷ್ಯರಾಗೋಣ, ಆ ಮೂಲಕ ಹಸಿವು ಮುಕ್ತ ಭಾರತದ ಕನಸನ್ನು ನನಸಾಗಿಸೋಣ..

- ಟೀಮ್ ಬ್ಲೂ ವೇವ್ಸ್

ಮಾನವೀಯತೆಯಲ್ಲಿ ಬೆಳಗಲಿ ನಮ್ಮ ಭಾರತ

ಇಂದಿನ ಪ್ರಸಕ್ತ ಸನ್ನಿವೇಶಗಳಲ್ಲಿ ಪತ್ರಿಕೆಗಳಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ರಕ್ತದ ಕಲೆಗಳೇ ನಮಗೆ ಅಧಿಕವಾಗಿ ಕಾಣಸಿಗುತ್ತದೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿ ಮರೆಯಾಗುತ್ತಿರುವ ಮಾನವೀಯತೆ ಎಂದರೆ ತಪ್ಪಾಗಲಾರದು. ಜಾತಿ ವೈಷಮ್ಯಗಳು, ಗುಂಪುಗಾರಿಕೆ, ಕೊಲೆ, ಸುಳಿಗೆ, ಅತ್ಯಾಚಾರ, ಬಡಿದಾಟ, ಕೋಮುಗಲಭೆ ಹೀಗೆ ಮುಂತಾದ ಸಮಾಜ ಘಾತುಕ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿದೆ ನಮ್ಮ ಇಂದಿನ ಸಮಾಜದಲ್ಲಿ. ಅತೀ ಹೆಚ್ಚು ವಿಧ್ಯಾರ್ಹತೆಯನ್ನು ಹೊಂದಿದಂತಹ ಯುವಕರುಗಳು ಕೂಡಾ ಇಂತಹ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಇದು ನಮ್ಮ ದೇಶವನ್ನು ಆಂತರಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ದೇಶದ ಸಮಗ್ರ ಅಭಿವ್ರದ್ದಿಯ ಅಗತ್ಯತೆಯೆಡೆಗೆ ಗಮನ ಹರಿಸದಂತೆ ಮಾಡಿದೆ.

ಇಂದು ಮಾನವೀಯತೆಯು ನಶಿಸಿ, ರಾಕ್ಷಸೀ ಪ್ರವೃತ್ತಿ ಹೆಚ್ಚಿ ಒಂದರ ಮೇಲೊಂದರಂತೆ ತಲೆಗಳು ಉರುಳುತ್ತಾ ಬೀಳುತ್ತಿದ್ದರೂ ಅದರ ವಿರುದ್ಧ ಸೂಕ್ಷ್ಮ ಕ್ರಮ ಕೈಗೊಂಡು ನಿಯಂತ್ರಿಸಬೇಕಾಗಿದ್ದಂತಹ ಜವಾಬ್ದಾರಿಯನ್ನು ಹೊತ್ತ ಜನನಾಯಕರು ಅದ್ಯಾವುದರ ಪರಿವೇ ಇಲ್ಲದೆ ತಮ್ಮ ಜೇಬನ್ನು ತುಂಬಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಈ ಲಜ್ಜೆಗೆಟ್ಟ ರಾಜಕಾರಣಿಗಳು ಸಮಾಜದಲ್ಲಿ ಯಾವುದೇ ಒಂದು ಅಹಿತಕರ ಘಟನೆ ನಡೆದರೂ ಅದಕ್ಕೆ ಕೋಮು ಬಣ್ಣವನ್ನು ಲೇಪಿಸಿ ಪರಸ್ಪರ ಜನರ ಮದ್ಯೆ ವಿಷ ಬೀಜವನ್ನು ಬಿತ್ತಿ ದ್ವೇಷ ವೈಷಮ್ಯವನ್ನು ಬೆಳೆಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇವರ ಈ ಕಾರ್ಯ ಸಾಧನೆಗೆ ಇವರೊಂದಿಗೆ ಪಾಲುದಾರನಾಗಿ ನಿಲ್ಲುವುದು ಕೆಲವು ಪೂರ್ವಾಗ್ರಹ ಪೀಡಿತ ಮಾಧ್ಯಮಗಳಾಗಿವೆ. ಸಮಾಜದಲ್ಲಿ ನಡೆಯುತ್ತಿರುವ ದುಷ್ಕ್ರತ್ಯಗಳನ್ನು ಬೆಳಕಿಗೆ ತಂದು ಅದರಿಂದ ಜನರನ್ನು ರಕ್ಷಿಸಬೇಕಾದಂತಹ ಹೊಣೆಗಾರಿಕೆಯನ್ನು ಹೊತ್ತಂತಹ ಮಾಧ್ಯಮಗಳು ಇಂದು ಹಣಕ್ಕಾಗಿ ಮತ್ತು ಟಿ.ಆರ್.ಪಿ ಗಾಗಿ ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯವನಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಇದರ ಮೂಲಗಳನ್ನು ಕೆದಕಿದರೆ ಇದಕ್ಕೆಲ್ಲ ಮುಖ್ಯ ಕಾರಣ ನಾವುಗಳೇ ಎಂದು ಹೇಳಬಹುದು.

ಭಾರತದ ಸಂವಿಧಾನವು ನಮಗೆ ಕೊಟ್ಟಿರುವ ಮತದಾನದ ಹಕ್ಕನ್ನು ವ್ಯಕ್ತಿ ಮತ್ತು ಅವನ ಪೂರ್ವ ಪರಂಪರೆಯನ್ನು ನೋಡದೆ ಕೇವಲ ಪಕ್ಷ ಮತ್ತು ಜಾತಿಯ ಆಧಾರದಲ್ಲಿ ಮತ ಚಲಾವಣೆ ಮಾಡುವ ಮೂಲಕ ದುಷ್ಟ ರಾಜಕಾರಣಿಗಳ ಹುಟ್ಟಿಗೆ ಕಾರಣರಾಗುತ್ತೇವೆ. ಮುಂದೆ ಇದೇ ರಾಜಕಾರಣಿಗಳು ಬೆಳೆದು ಎಲ್ಲೊಂದರಲ್ಲಿ ನಡೆಯುವ ರಕ್ತ-ಸಿಕ್ತ ಅಧ್ಯಾಯಕ್ಕೆ ಕಾರಣೀಕೃತರಾಗುತ್ತಾರೆ. ಸಮಾಜದ ಉನ್ನತಿಗಾಗಿ ಶ್ರಮಿಸಬೇಕಾಗಿದ್ದಂತಹ ರಾಜಕಾರಣಿಗಳು ತಮ್ಮ ಸ್ವಾರ್ಥಕಾಗಿ ಸಮಾಜವನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಹೇಳಬಹುದು.

ಮತ್ತೊಂದು ಕಡೆ ಇನ್ನೂ ಕೂಡಾ ಪ್ರಾಪ್ತತೆಗೆ ಬರದಿರುವ ಮುಗ್ದ ಕಂದಮ್ಮಗಳನ್ನು ತಮ್ಮ ಕಾಮತೀಟೆ ತೀರಿಸಿಕೊಳ್ಳಲು ಸ್ವಂತ ತಂದೆಯರೇ ಉಪಯೋಗಿಸಿಕೊಳ್ಳುವಂತಹ ಹಲವು ಘಟನೆಗಳನ್ನು ನಾವು ಕಾಣಬಹುದಾಗಿದೆ, ಇವೆಲ್ಲವೂ ಮಾನವೀಯತೆ ನಶಿಸಿ ಹೋಗಿರುವುದರ ಕುರುಹುಗಳು ಎಂದು ಹೇಳಬಹುದು. ತಮಗೂ ಸಹ ಅಕ್ಕ ತಂಗಿ, ತಾಯಿಯಂದಿರಿದ್ದಾರೆಂಬ ಪರಿವೇ ಇಲ್ಲದೆ ಇನ್ನೊಂದು ಮನೆಯ ಹೆಣ್ಣು ಮಕ್ಕಳ ಮೇಲೆ ಕಾಮ ದ್ರಷ್ಟಿಯನ್ನು ಬೀರಿ ಅತ್ಯಾಚಾರವೆಸಗಿ ಅವರ ಬಾಳಿನ ನಂದಾ ದೀಪವನ್ನು ಆರಿಸಿ ಆನಂದ ಪಡೆಯುವ ವಿಕ್ರತ ಮನಸ್ಸಿನವರೇ ತುಂಬಿಹೋಗಿದ್ದಾರೆ ಈ ಕಲುಷಿತ ಸಮಾಜದಲ್ಲಿ.

ಒಂದು ಕಾಲದಲ್ಲಿ ಮಾನವೀಯತೆಗೆ ಹೆಸರು ವಾಸಿಯಾಗಿದ್ದ ಭಾರತ ದೇಶವು ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಳು ನಮ್ಮ ಪಾತ್ರವೂ ಸಹ ಮಹತ್ತರವಾದದ್ದು ಎಂಬ ಕಟು ಸತ್ಯವನ್ನು ಮರೆಯುವ ಹಾಗಿಲ್ಲ. ಬದಲಾಗ ಬೇಕಾಗಿದೆ ಗೆಳೆಯರೆ ನಾವು, ಬದಲಾಯಿಸಬೇಕಾಗಿದೆ ನಮ್ಮ ಭಾರತವನ್ನು. ಪ್ರತಿಯೊಂದು ರಾಷ್ಟ್ರವು ನಮ್ಮ ದೇಶದ ಅಭಿವ್ರದ್ಧಿಯನ್ನು ಕಂಡು ಅಸೂಯೆಪಡುವಂತಹ ದಿನಗಳಿಗಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ನಮ್ಮ ಸಂವಿದಾನವು ನಮಗೆ ಕೊಟ್ಟ ಹಕ್ಕನ್ನು ನಮ್ಮ ದೇಶದ ಅಭಿವ್ರದ್ಧಿಗಾಗಿ ಚಲಾಯಿಸುವುದರ ಮೂಲಕ ಬಲಿಷ್ಠ ಭಾರತವನ್ನು ಕಟ್ಟಬೇಕಾಗಿದೆ. ನಮ್ಮಗಳ ಮನಸ್ಸಿನ ಮೇಲೆ ಹೇರಲ್ಪಟ್ಟ ಕೋಮು ವೈಷಮ್ಯವನ್ನು ತೊಡೆದು ಹಾಕಿ ಸಹೋದರತೆಯ, ಸೌಹಾರ್ದಯುತ ಜಾತ್ಯತೀತ ಭಾರತವನ್ನು ಕಟ್ಟಬೇಕಾಗಿದೆ.

ಕೋಮುವಾದ ಅಳಿಯಲಿ
ಮಾನವೀಯತೆ ಉಳಿಯಲಿ
ಭಾರತೀಯತೆ ಬೆಳೆಯಲಿ
ಭಾರತ ಪ್ರಕಾಶಿಸಲಿ,
ಅನ್ಯ ದೇಶಗಳಿಗೆ ಬೆಳಕನನೀವ
ದೀವಿಗೆಯಾಗಲಿ... ನಮ್ಮ ದೇಶ
ಜೈಹಿಂದ್!


- ಟೀಂ ಬ್ಲೂ ವೇವ್ಸ್


ಹದಿಹರೆಯದ ಪ್ರೀತಿ ಪ್ರೇಮ

ಹದಿಹರೆಯದ ಪ್ರೀತಿ ಪ್ರೇಮ : ನೈಜತೆ, ಕಾಲ್ಪನಿಕತೆ ಮತ್ತು ತಪ್ಪಿಗೆ ತೆರುವ ಬೆಲೆಗಳು.

"ಅಮ್ಮಾ ನಂಗಿನ್ನು ಜೀವಿಸಬೇಕಾಗಿಲ್ಲ, ನಾನು ಸಾಯ್ತೀನಿ. ಯಾರಾದ್ರೂ ಕೇಳಿದರೆ ಏನಾದ್ರೂ ಸೀರಿಯಸ್ ರೋಗ ಬಂದು ಸತ್ತು ಹೋದಳು ಅಂದುಬಿಡಿ. ಪ್ಲೀಸ್ ನನ್ನನ್ನು ಕ್ಷಮಿಸಿ ಅಮ್ಮಾ... ಅವನಿಲ್ಲದ ಜೀವನ ಬೇಡ ಎಂದೇ ನಾನಿವತ್ತು ಕಪಾಟಿನಲ್ಲಿದ್ದ ಎಲ್ಲಾ ಮಾತ್ರೆಗಳನ್ನು ಕುಡಿದು ಸಾಯಲು ಹೊರಟಿದ್ದೇನೆ. ನನ್ನನ್ನು ಕ್ಷಮಿಸಿಬಿಡು".
ಒಂದು ಆಂಬುಲೆನ್ಸ್ ಬಹಳಷ್ಟು ವೇಗವಾಗಿ ಚಲಿಸುತ್ತಿದೆ, ತುರ್ತು ಚಿಕಿತ್ಸೆಗೆ ಬೇಕಾಗಿ ನಗರದ ಪ್ರಮುಖ ಆಸ್ಪತ್ರೆ ಕಡೆ. 17 ವಯಸ್ಸಿನ ಸಹನಾ ಆಂಬುಲೆನ್ಸ್ ಒಳಗೆ ನೋವಿನಿಂದ ತನ್ನ ಹತ್ತಿರ ಕುಳಿತಿದ್ದ ತಾಯಿಯ ಬಳಿ ಹೇಳುತ್ತಿದ್ದಾಳೆ. ಮರುತ್ತರ ನೀಡಲು ಆ ತಾಯಿ ಕೂಡ ಅಶಕ್ತರಾದರು. ಆಸ್ಪತ್ರೆ ತಲುಪಿತು, ಬಹಳಷ್ಟು ಚಿಕಿತ್ಸೆಯ ಮೂಲಕ ಖರ್ಚು ವೆಚ್ಚ ಮಾಡಿ 10 ದಿನಗಳ ಬಳಿಕ ಸಹನಾ ಮೊದಲಿನಂತಾದಳು.

ಮಗಳ ಬಗ್ಗೆ ಅಪಾರ ನಂಬಿಕೆ ಮಮತೆ ಹೊಂದಿರುವ ಆ ತಂದೆಗೆ ಬಹಳಷ್ಟು ನೋವಾಗಿತ್ತು. ಮಗಳನ್ನು ಹತ್ತಿರ ಕರೆದು "ಸಹನಾ. ಹೇಳು, ನಿನ್ನ ಸಮಸ್ಯೆ ಏನು.. ? ನಿನ್ನ ತಾಯಿ ಹೇಳದಿದ್ದರೂ ಡಾಕ್ಟರ್ ನಂಗೆ ಎಲ್ಲಾ ವಿಷಯ ತಿಳಿಸಿದರು. ಯಾಕಾಗಿ ನೀ ಸುಸೈಡ್ ಮಾಡಲು ಪ್ರಯತ್ನಿಸಿದೆ?. ಅಷ್ಟಕ್ಕೂ ನಿಂಗೇನೂ ಕಡಿಮೆ ಮಾಡಿದ್ದೇನೆ ನಾನು. ನನ್ನ ಜೇಬು ಖಾಲಿಯಾಗಿದ್ದರೂ ಸಾಲ ಮಾಡಿ ತಂದು ನೀ ಹಣ ಕೇಳಿದಾಗಲೆಲ್ಲಾ ನಾನು ಕೊಟ್ಟಿಲ್ಲವೇ.. ಅವಶ್ಯಕತೆಗಳನ್ನು ಚಾಚೂ ತಪ್ಪದೆ ನೆರವೆರಿಸಿಲ್ಲವೇ..?. ಏನಿದ್ದರೂ ಬೇಗ ಹೇಳು. ಕೈಯಲ್ಲಿ ಹಣ ಸಂಪತ್ತಿಲ್ಲದಿದ್ದರೂ ಸಮಾಜದಲ್ಲಿ ಒಂದು ನೆಲೆ ಬೆಲೆ ಇದೆ. ಅದೂ ಇಲ್ಲದಾಗಿಸಿ ಊರವರಿಗೆ ಮುಖ ತೋರಿಸದಂತೆ ಮಾಡಬೇಡ.. " ಎಂದು ಹೇಳಿ ಮುಗಿಸುವಾಗ ಆ ತಂದೆಯ ಕಣ್ಣು ತುಂಬಿತ್ತು. ಇದನ್ನು ಕೇಳಿದ ಸಹನಾಗೆ ಉತ್ತರಿಸಲು ಬಾಯಿ ಬರದಂತಾಯಿತು. ಕಣ್ಣು ಮುಚ್ಚಿ "ಅಪ್ಪಾ ನನ್ನನ್ನು ಕ್ಷಮಿಸಿಬಿಡು.. ನಾನು ತಪ್ಪು ಮಾಡಿದೆ. ನಾನು ಒಬ್ಬನನ್ನು ಪ್ರೀತಿಸಿದೆ, ನನ್ನ ಜೀವಕ್ಕಿಂತಲೂ ಹೆಚ್ಚಾಗಿ. ಅವನು ನನ್ನನ್ನು ಮದುವೆಯಾಗುತ್ತೇನೆ ಎಂದಾಗ ನಾನು ನಿಮಗೆಲ್ಲಾ ಅವನನ್ನು ಇಷ್ಟವಾಗಬಹುದು ಎಂದು ಯೋಚಿಸಿ ಸಮಯ ಬಂದಾಗ ಹೇಳಬೇಕೆಂದಿದ್ದೆ. ಆದರೆ ಇವಾಗ ಅವನ ತಂದೆ ತಾಯಿಯ ನೆಪ ಹೇಳಿ ಅವನು ನನ್ನನ್ನು ಮದುವೆ ಆಗಲು ಸಾಧ್ಯವಿಲ್ಲ ಅನ್ನುತ್ತಿದ್ದಾನೆ. ಅವನಿಲ್ಲದೆ ಜೀವಿಸಲಾರದಷ್ಟು ಅವನನ್ನು ಹಚ್ಚಿಕೊಂಡಿದ್ದೇನೆ. ಸ್ಸಾರೀ ಅಪ್ಪಾ ಇನ್ನು ನಿನಗರಿವಿಲ್ಲದಂತೆ ಏನೂ ಮಾಡಲಾರೆ, ಈ ಬಾರಿ ನನ್ನನ್ನು ಕ್ಷಮಿಸಿಬಿಡು ಅಪ್ಪಾ" ಎಂದು ಬಿಕ್ಕಿ ಬಿಕ್ಕಿ ಅತ್ತಳು.

ಹೌದು ಇದೊಂದು ಸಣ್ಣ ಉದಾಹರಣೆ ಮಾತ್ರ. ಪ್ರತಿದಿನ ಈ ಪ್ರೀತಿ-ಪ್ರೇಮ ಅಂತೇಳಿ ಅದೆಷ್ಟೋ ಹದಿ ಹರೆಯದ ಯುವಕ-ಯುವತಿಯರು ತಮ್ಮ ಬಾಳ ಬೆಳಕನ್ನು ತಾವಾಗಿಯೇ ನಂದಿಸುತ್ತಿದ್ದಾರೆ. ಪ್ರಾಯದ ಬಿಸುಪಿಗೆ ಹರೆಯದ ಆಸೆಗಳಿಗೆ ಕಡಿವಾಣ ಹಾಕಲಾರದೆ ಕ್ಷಣಿಕ ಸುಖದ ಬೆನ್ನು ಬಿದ್ದು ಜೀವನ ಏನೆಂದು ಅರ್ಥವಾಗುವ ಮೊದಲೇ ಜೀವನಕ್ಕೆ ಕೊನೆ ಕಾಣಿಸುತ್ತಿದ್ದಾರೆ. ನಿಮಗೆಲ್ಲಾ ತಿಳಿದಿರುವ ಹಾಗೆ ಈಗಿನ ಪರಿಸ್ಥಿತಿಯೇ ಬದಲಾಗಿದೆ. ಸರಿಯಾಗಿ ಓದಿ ಸ್ಕೂಲ್ ಕಾಲೇಜುಗಳಲ್ಲಿ ರಾಂಕ್ ಪಡೆಯಬೇಕಾಗಿದ್ದ ಹದಿ ಹರೆಯದ ಯುವಕ ಯುವತಿಯರು ಇಂದು ಮೊಬೈಲ್-ನ, ಸಾಮಾಜಿಕ ಜಾಲತಾಣಗಳ ದಾಸರಾಗಿ ಪ್ರೀತಿ ಎಂಬ ಕೂಪಕ್ಕೆ ಬಿದ್ದು ಮೇಲೇಳಾರದೆ ಕೈ ಕಾಲು ಬಡಿಯುತ್ತಾ ತಮ್ಮ ಜೀವನವನ್ನು ತಾವೇ ನಾಶಮಾಡುತ್ತಿದ್ದಾರೆ.

ತಾನು ಕನಸು ಕಂಡದ್ದೆಲ್ಲಾ ನಿಜ ಎಂದು ನಂಬಿ ತಂದೆ-ತಾಯಿ ಕುಟುಂಬವನ್ನು ಮರೆತು ಇಂದೋ ನಿನ್ನೆಯೋ ಬಂದ ಹುಡುಗನ ಜೊತೆ ತನ್ನ ಸರ್ವಸ್ವವನ್ನೂ ಅರ್ಪಿಸುವ ಹುಡುಗಿಯರು ಚಿಂತಿಸಬೇಕಾಗಿದೆ. ಕಲಿಯಬೇಕಾದ ವಯಸ್ಸಿನಲ್ಲಿ ಆಟ ಪಾಠವನ್ನು ಬಿಟ್ಟು ಅನಗತ್ಯ ಏನನ್ನೂ ಯೋಚಿಸಬಾರದು. ಗೆಳೆಯ ಗೆಳತಿಯರನ್ನು ಆಯ್ಕೆ ಮಾಡುವಾಗಲೂ ಜಾಗರೂಕತೆಯಿಂದಿರಬೇಕು. ಕೆಲವರು ತಮ್ಮ ಗೆಳೆತನದ ಕಾರಣದಿಂದ ದಾರಿ ತಪ್ಪುತ್ತಿದ್ದಾರೆ. ನಮ್ಮನ್ನು ಇಷ್ಟು ವರ್ಷ ತಮ್ಮ ಕಷ್ಟ ನಷ್ಟಗಳನ್ನು ಬದಿಗಿಟ್ಟು ಸಾಕಿ ಸಲಹಿದ ನಮ್ಮ ಹೆತ್ತವರಿಗೆ ಎಂದೂ ಮೋಸ ಮಾಡಬಾರದು. ಎಲ್ಲಾ ವಿಷಯಗಳಲ್ಲೂ ನಮ್ಮಿಷ್ಟದಂತೆ ನಾವು ಕೇಳಿದ್ದನ್ನೆಲ್ಲಾ ತೆಗೆದುಕೊಟ್ಟಿರುವ ನಮ್ಮ ಹೆತ್ತವರು ನಮ್ಮ ಮದುವೆ ಬಗ್ಗೆಯೂ ಒಂದು ಕನಸು ಇಟ್ಟಿರುತ್ತಾರೆ ಅಲ್ವಾ?. ಅವರು ಹೇಗಾದರೂ ಉತ್ತಮವಾದುದನ್ನೇ ಕೊಡುತ್ತಿರುವಾಗ ಅವರ ಭಾವನೆಗಳಿಗೆ ಬೆಂಕಿ ಇಟ್ಟು ಸ್ವಯಂ ಆಯ್ಕೆ ಮಾಡಲು ಪ್ರಯತ್ತಿಸುವುದು ಎಷ್ಟು ಸರಿ?.

ಇಲ್ಲಿ ಹೆತ್ತವರ ಪಾತ್ರ ಬಹಳಷ್ಟಿದೆ. ಈ ಒಂದು ವಯಸ್ಸಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ಒಂದು ಲಿಮಿಟ್ ನಲ್ಲೇ ಅವರನ್ನು ಸಲಹಬೇಕು. ತಪ್ಪು ಸರಿಗಳ ಬಗ್ಗೆ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ ಮನದಟ್ಟು ಮಾಡಬೇಕು. ತಪ್ಪು ಕಂಡಾಗ ತಿದ್ದಬೇಕಾದ ರೀತಿಯಲ್ಲಿ ಅವರನ್ನು ತಿದ್ದಿ ನೇರಮಾರ್ಗಕ್ಕೆ ಕರೆತರುವುದು ಪ್ರತಿ ತಂದೆ-ತಾಯಿಯರ ಆದ್ಯ ಕರ್ತವ್ಯವಾಗಿದೆ. ಅದು ಬಿಟ್ಟು ಅಗತ್ಯಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಮುದ್ದಾಡಿ ಕೇಳಿದನ್ನೆಲ್ಲಾ ತೆಗೆದು ಕೊಟ್ಟು ಅವರ ಆಗು ಹೋಗುಗಳ ಬಗ್ಗೆ ದಿನ ನಿತ್ಯ ಕಣ್ಣಾಡಿಸದಿದ್ದರೆ ಮುಂದೊಂದು ದಿನ ದೊಡ್ಡ ಬೆಲೆ ತೆರಬೇಕಾದೀತು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತಿನಂತೆ ಹದಿಹರೆಯದ ವಯಸ್ಸಿನಲ್ಲೇ ಮಕ್ಕಳಿಗೆ ಸರಿಯಾದ ಬುದ್ದಿವಾದ ಹೇಳಿ ಸರಿದಾರಿಗೆ ತಂದು ನಿಲ್ಲಿಸಿ ಅವರ ಜವಾಬ್ದಾರಿಯನ್ನು ಅರ್ಥಮಾಡಿಸಿ ಕೊಡುವುದು ಹೆತ್ತವರ ಕರ್ತವ್ಯವಾಗಿದೆ. ಜೀವನ ಏನಂಬುದೆಂದು ಕಲಿಯುವ ಮೊದಲೇ ತಾನು ಕಂಡದ್ದೇ ಸರಿ ಎಂದು ಜೀವನದ ಬಲು ಪ್ರಾಮುಖ್ಯ ವಿಷಯಗಳ ಬಗ್ಗೆ ಸ್ವ-ತೀರ್ಮಾನ ತೆಗೆದುಕೊಳ್ಳುವ ಪ್ರತಿಯೊಬ್ಬ ಹದಿಹರೆಯದ ಯುವಕರೂ ಚಿಂತಿಸಬೇಕಾಗಿದೆ.

-ಟೀಮ್ ಬ್ಲೂ ವೇವ್ಸ್
www.facebook.com/BlueWavesPage

ಪ್ರಜಾಪ್ರಭುತ್ವ ಭಾರತದಲ್ಲಿ ಯುವಸಮೂಹದ ಪಾತ್ರ



ಜಾತಿ ನಿಂದನೆ, ಕಚ್ಚಾಟ, ಕಿತ್ತಾಟ ಇವುಗಳೇ ಇಂದಿನ ಯುವ ಸಮೂಹವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯಾಗುತ್ತಿದೆಯೇ...?!!
ಈ ಕೆಟ್ಟ ಶಕ್ತಿಯಿಂದ ಮುಕ್ತಿ ಪಡೆಯಲು ಸಮಯದ ಅಭಾವವೋ, ಜ್ಞಾನದ ಕೊರತೆಯೋ ಎಂದು ಆಲೋಚಿಸುವ ಮಟ್ಟಿಗೆ ಇಂದಿನ ಸಮಾಜದ ಜನತೆ ಚಡಪಡಿಸುವಂತಾಗಿದೆ. ಧರ್ಮದ ಹೆಸರಲ್ಲಿ ಹೊಡೆದಾಡಿ, ಹೊಡೆದಾಟಕ್ಕೆಂದು ಧರ್ಮವನ್ನೇ ಗುರಿಯಾಗಿಸಿಕೊಂಡು ಪರಸ್ಪರ ಭೇದಭಾವಗಳನ್ನು ಸೃಷ್ಟಿಸುವ ಯುವ ಸಮೂಹವು ಧರ್ಮದ ನಿಯಮಗಳನ್ನು ಪಾಲಿಸದೆ ಅಮಾನವೀಯತೆಯ ಹೊಸ ಆಧುನಿಕ ಯುಗವನ್ನೆ ನಿರ್ಮಾಣ ಮಾಡುತ್ತಿದೆ.

ಪ್ರಜಾಪ್ರಭುತ್ವ ಭಾರತದಲ್ಲಿ ಕೋಮುಗಲಭೆಗೆ ಕೊರತೆಯೇ ಇಲ್ಲವೆಂಬಂತೆ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಮುಖವಾಡ ಧರಿಸಿದ ಹಲವು ಶಕ್ತಿಗಳ ಕೈವಾಡವಿದ್ದರೂ ಸಹ ಇಂತಹ ಕೃತ್ಯಗಳಿಗೆ ಬಲಿಯಾಗುವುದು ಬಡ ಅಮಾಯಕರೇ ಎಂಬುವುದರಲ್ಲಿ ಸಂಶಯವೇ ಇಲ್ಲದಂತಾಗಿದೆ. ಬಡ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಈ ಕಾಲಘಟ್ಟದಲ್ಲಿ ತಮ್ಮ ದುಷ್ಟ ಶಕ್ತಿಗಳನ್ನು ಬಳಸಿ ಜನತೆಯ ನೆಮ್ಮದಿ ಕೆಡಿಸುವುದಾಗಿದೆ ಇದರ ಉದ್ದೇಶ. ಜಾತಿ ಧರ್ಮವನ್ನು ಬದಿಗಿಟ್ಟು ಕೋಮು ಸೌಹಾರ್ದತೆಯನ್ನು ತೊಡಗಿಸಿ ಶಾಂತಿಯ ಸಮಾಜದ ನಿರ್ಮಾಣವೂ ಈ ಹಂತದಲ್ಲಿ ಅತ್ಯಗತ್ಯ.

ಯಾವ ಧರ್ಮವೂ ರೂಪಿಸಿಕೊಡದಂತಹ 'ವರದಕ್ಷಿಣೆ' ಕೂಡ ಇಂದಿನ ಹರೆಯದ ಯುವಕರಲ್ಲಿ ಉದ್ಭವಿಸುತ್ತಿರುವುದು ಅತಿಯಾಗಿದೆ. ಐಶಾರಾಮಿ ಮದುವೆಯ ಬಗ್ಗೆ ಚಿಂತಿಸುವುದೇ ಇಂದಿನ ಯುವ ಸಮೂಹಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ ಎಂಬ ಸತ್ಯವನ್ನು ಕೂಡ ಮರೆತಂತಿದೆ. ಪ್ರಸಕ್ತವಾಗಿ ಬಡ ಹೆಣ್ಣುಮಕ್ಕಳ ಕಣ್ಣೀರನ್ನು ಒರೆಸಬೇಕಾದ ಯುವಸಮೂಹವು ವರದಕ್ಷಿಣೆಯ ಕಿರುಕುಳದಿಂದ ಹೆಣ್ಣು ಹೆತ್ತವರ ಜೀವ ಹಿಂಡುತ್ತಿರುವುದು ಶೋಚನೀಯ.

ಪ್ರಾರಂಭದಲ್ಲಿ ಅಂತರ್ಜಾಲಗಳ ಬಳಕೆ ಬುದ್ಧಿವಂತಿಕೆಯ ಸಂಕೇತವಾಗಿ ಅಚ್ಚರಿಯ ವಿಚಾರವಾಗಿತ್ತು. ಆದರೆ ಇಂದು ಇಲ್ಲಿ ಒಳ್ಳೆಯ ಕುತೂಹಗಳೇ ಇಲ್ಲದಾಗಿದೆ. ಅಂತರ್ಜಾಲಗಳ ದುರ್ಬಳಕೆ, ಅಪರಿಚಿತ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಿ ನಕಲಿ ಖಾತೆಗಳನ್ನು ತೆರೆದು ಜೊತೆಗೆ ಕೆಲಸಕ್ಕೆ ಬಾರದ ಪೇಜುಗಳನ್ನು ನಿರ್ಮಿಸಿ ಸಮಾಜದ ಅಶಾಂತಿಗೆ ಕಾರಣವಾಗುವುದರಲ್ಲಿ ಇಂದಿನ ಯುವ ಸಮೂಹವೇ ಎತ್ತಿದ ಕೈ.

ಜಾತಿ ನಿಂದನೆಗೆಂದೇ ಬಳಸುವ ಫೇಸ್ಬುಕ್ ಪೇಜುಗಳ ಸಂಖ್ಯೆ ಅಷ್ಟಿಷ್ಟಲ್ಲ. ಮಂದಿರ ಮಸೀದಿಗಳ ಚಿತ್ರಗಳಿಗೆ ಫೋಟೋಶಾಪ್ ಗಳಿಂದ ವಿವಿಧ ಬಣ್ಣಗಳನ್ನು ಹಚ್ಚಿ ಅಕ್ಷರಗಳ ಮೂಲಕ ಕೆಟ್ಟದಾಗಿ ಚಿತ್ರಿಸುವುದೇ ಅಂತರ್ಜಾಲ ಬಳಕೆಯ ಮುಖ್ಯ ಉದ್ದೇಶವೆಂಬಂತಾಗಿಬಿಟ್ಟಿದೆ.ಆಲ್ಕೋಹಾಲ್, ಡ್ರಗ್ಸ್ ನಂತಹ ಉನ್ಮಾದ ಚಟಗಳ ಪಟ್ಟಿಗೆ ಆರೋಗ್ಯಕರವೆಂಬಂತೆ ಕಾಣುವ ಆಧುನಿಕ ಚಟವಾಗಿದೆ ಈ ಅಂತರ್ಜಾಲಗಳು. ಅಸಂಬದ್ದತೆಗಳಿಗೆ, ಅಸಹ್ಯ ಕಾರ್ಯಗಳಿಗೆ, ಅನೈತಿಕ ಚಟುವಟಿಕೆಗಳಿಗೆ ಉಚಿತವಾಗಿ ಬಳಸುವ ಅಂತರ್ಜಾಲಗಳ ಬಳಕೆಯೇ ಇಂದಿನ ಯುವ ಸಮೂಹದ ದೊಡ್ಡ ದುರಂತ.

ಹಾಗಂತ ಬರೀ ಕೊರತೆಗಳನ್ನೇ ಬರೆದು ಬಿಂಬಿಸುವ ಬದಲು ಸ್ವಲ್ಪ ಒಳ್ಳೆಯ ಯುವಕರ ಬಗ್ಗೆಯೂ ಚಿಂತಿಸಬೇಕಿದೆ. ಪ್ರತಿಯೊಂದು ಜನಮೆಚ್ಚುಗೆಯ ಕಾರ್ಯಗಳಲ್ಲೂ ಜಾತಿ, ಧರ್ಮವೆಂಬ ಭೇದಭಾವಗಳಿಲ್ಲದೆ ನಾಡಿನ ಅಭಿವೃದ್ದಿಗೋಸ್ಕರ ದುಡಿಯುವ ಯುವ ಸಮೂಹವು ನಮ್ಮ ನಡುವೆ ಇದೆ. ಇಂತಹ ಒಳ್ಳೆಯ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಿ ಉನ್ನತ ಮಟ್ಟದ ಅಭಿವೃದ್ಧಿಗಾಗಿ ದುಡಿಯುವಂತವರಾಗೋಣ.

ಭೇದಭಾವಗಳನ್ನು ದೂರ ತಳ್ಳಿ ಆತ್ಮಿಯರಾಗೋಣ. ವರದಕ್ಷಿಣೆ ಪಿಶಾಚಿಯನ್ನು ಒದ್ದೋಡಿಸೋಣ. ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸುವಂತೆ ಪ್ರತಿಭಟಿಸೋಣ. ಸಮಾಜದ ಜನತೆಗೆ ತೃಪ್ತಿಯನ್ನು ನೀಡೋಣ. ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ ಆಝಾದ್, ಭಗತ್ ಸಿಂಗರ ಕನಸಿನ ಭಾರತವನ್ನು ನನಸಾಗಿಸೋಣ. ಭಾರತವನ್ನು ಬದಲಾಯಿಸೋಣ.



Team Blue Waves
www.facebook.com/BlueWavesPage

ಶನಿವಾರ, ನವೆಂಬರ್ 15, 2014

ಅಂತರ್ಧರ್ಮೀಯ ಪ್ರೇಮ ಪ್ರಕರಣ

ಗೆಳೆಯರೇ, ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚಾ ವಿಷಯವಾಗಿದೆ "ಅಂತರ್ಧರ್ಮೀಯ ಪ್ರೇಮ ಪ್ರಕರಣಗಳು"

ನಮ್ಮ ಸಮಾಜದಲ್ಲಿ ಅಂತರ್ಜಾತೀಯ ಪ್ರೇಮ ಪ್ರಕರಣಗಳು ಸಾಮರಸ್ಯದ, ಸಹೋದರತ್ವ ಬಾಳಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಅದಕ್ಕೆ ಪೂರಕವೆಂಬಂತೆ ಸಮಾಜದ ಸ್ವಾಸ್ಥ್ಯ ಬಯಸದ ಅಘೋಷಿತ ನಾಯಕರು ಅದಕ್ಕಿಷ್ಟು ಎಣ್ಣೆ ಸುರಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಅವಕಾಶಕ್ಕಾಗಿ ಹೊಂಚು ಹಾಕುತಿದ್ದಾರೆ. ಇಡೀ ಊರು ಉಧ್ವಿಗ್ನ ಗೊಳ್ಳುತ್ತೆ, ಅಮಾಯಕರನ್ನ ವಿಚಾರಣೆಯಾ ನೆಪದಲ್ಲಿ ಹೊತ್ತೊಯ್ಯುತ್ತಾರೆ, ಪ್ರತಿಭಟನೆಗಳು ನಡೆಯುತ್ತವೆ, ಎರಡೂ ಕಡೆಯ ಮನೆ ಮಂದಿ ಆತಂಕದ ಕ್ಷಣ ಗಣನೆಯಲ್ಲಿರುತ್ತಾರೆ. ಮಾಧ್ಯಮಗಳು FIR ಆಗುವ ಮೊದಲೇ ಅಂತಿಮ ತೀರ್ಪು ಕೊಟ್ಟು ಬಿಡ್ತಾವೆ. ಮನಸ್ಸಿಗೆ ತೋಚಿದ್ದನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡ್ತಾವೆ. ಮುಂದಿನ ಕ್ಷಣದಲ್ಲಿ ಊರಿಗೆ ಊರೆ ರಣರಂಗವಾಗ ಬಲ್ಲಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ.

ಸಣ್ಣ ಮಕ್ಕಳಿಂದ, ಮುದುಕರವರೆಗೂ ಇಲ್ಲಿನ ಕೋಮು ಸೂಕ್ಷ್ಮದ ಅರಿವಿದೆ. ಯಾರೋ ಅಪಾಪೋಲಿಗಳು, ಗುಂಡಾಡಿಗಳು ತಮ್ಮ ಮೋಜಿಗಾಗಿ, ಅನ್ಯ ಧರ್ಮದವರನ್ನು (ಹಿಂದೂ, ಮುಸ್ಲಿಂ, ಕ್ರೈಸ್ತ) ಪ್ರೀತಿಸಿ, ಜೊತೆಗೆ ಓಡಿ ಹೋಗಿ, ತಮ್ಮ ಮನೆ ಹಾಗು ಊರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾರೆ.

ಅದು ಬಿಟ್ಟು ಇವತ್ತು (ಹಿಂದೂ, ಮುಸ್ಲಿಂ, ಕ್ರೈಸ್ತ ಇತ್ಯಾದಿ ಧರ್ಮಗಳಲ್ಲಿ) ಮದುವೆಯ ವಯಸ್ಸಿಗೆ ಬಂದಂತಹ ಹಾಗೂ ಮದುವೆಯ ವಯಸ್ಸು ಮೀರಿದಂತಹ ಅದೆಷ್ಟೋ ಯುವತಿಯರು ಎಲ್ಲಾ ಧರ್ಮಗಳಲ್ಲಿ ಕಾಣ ಬಹುದು. ಅಂತಹ ಯುವತಿಯರನ್ನು ವರದಕ್ಷಿಣೆ ಎಂಬ ಪೆಡಂಬೂತವನ್ನು ಹೊಡೆದೋಡಿಸಿ ಸರಳ ರೀತಿಯಲ್ಲಿ ವಿವಾಹವಾಗಿ, ಇನ್ನೊಬ್ಬರಿಗೆ ಮಾದರಿಯಾಗುವಂತಹ ಅವಕಾಶವನ್ನು ಕೈ ಚೆಲ್ಲುತ್ತಾರೆ.

ಆ ಯುವತಿಯರ ಆರ್ಥಿಕ ಸ್ಥಿತಿ, ಮನಸ್ಸಿನ ವೇದನೆ ಅರ್ಥ ಮಾಡಿಕೊಂಡು ಒಂದು ಸುಂದರ ಬಾಳು ಕೊಟ್ಟರೆ, ಅದಕ್ಕಿಂತ ಮಿಗಿಲಾದ ಮಹತ್ಕಾರ್ಯ ಬೇರೊಂದಿದೆಯೇ ? ನಮ್ಮನ್ನು ಹೊತ್ತು, ಹೆತ್ತು, ಸಾಕಿ ಸಲುಹಿದ ಮನೆ ಮಂದಿಯ ಮನ ನೋಯಿಸಿ, ಅವರನ್ನು ಸಂಕಷ್ಟದ ವಾತಾವರಣದಲ್ಲಿ ಬಿಟ್ಟು ಓಡುವುದು ಯಾವ ಸೀಮೆಯ ಗಂಡಸುತನ?

ಈ ಎಲ್ಲಾ ವಿಷಯಗಳನ್ನು ಮನದಲ್ಲಿಟ್ಟುಕೊಂಡು, ಸಮಾಜದ ಸ್ವಾಸ್ಥ್ಯ ಕೆಡದಂತೆ, ಸರ್ವಧರ್ಮಿಯರೊಂದಿಗೆ ಸಹೋದರರಂತೆ ಬಾಳಿ ಬದುಕುವುದು ಶ್ರೆಷ್ಟವಲ್ಲವೇ? ಇಂತಹಾ ಅವಕಾಶಕ್ಕಾಗಿ ಕಾದಿರುವ ಯುವತಿಯರ ಹೃದಯ ರಾಜನಾಗಿ, ಸುಂದರ ಸಮಾಜ ನಿರ್ಮಿಸಿರಿ ಎಂಬ ಕಿವಿ ಮಾತಿನೊಂದಿಗೆ....

ಇಂತಿ ನಿಮ್ಮ
ಅನಾಮಿಕ

#Being #Human #Respect #Women

www.facebook.com/BlueWavesPage

ಪ್ರಜಾಪ್ರಭುತ್ವ ಭಾರತದಲ್ಲಿ ಯುವಸಮೂಹದ ಪಾತ್ರ



ಜಾತಿ ನಿಂದನೆ, ಕಚ್ಚಾಟ, ಕಿತ್ತಾಟ ಇವುಗಳೇ ಇಂದಿನ ಯುವ ಸಮೂಹವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯಾಗುತ್ತಿದೆಯೇ...?!!
ಈ ಕೆಟ್ಟ ಶಕ್ತಿಯಿಂದ ಮುಕ್ತಿ ಪಡೆಯಲು ಸಮಯದ ಅಭಾವವೋ, ಜ್ಞಾನದ ಕೊರತೆಯೋ ಎಂದು ಆಲೋಚಿಸುವ ಮಟ್ಟಿಗೆ ಇಂದಿನ ಸಮಾಜದ ಜನತೆ ಚಡಪಡಿಸುವಂತಾಗಿದೆ. ಧರ್ಮದ ಹೆಸರಲ್ಲಿ ಹೊಡೆದಾಡಿ, ಹೊಡೆದಾಟಕ್ಕೆಂದು ಧರ್ಮವನ್ನೇ ಗುರಿಯಾಗಿಸಿಕೊಂಡು ಪರಸ್ಪರ ಭೇದಭಾವಗಳನ್ನು ಸೃಷ್ಟಿಸುವ ಯುವ ಸಮೂಹವು ಧರ್ಮದ ನಿಯಮಗಳನ್ನು ಪಾಲಿಸದೆ ಅಮಾನವೀಯತೆಯ ಹೊಸ ಆಧುನಿಕ ಯುಗವನ್ನೆ ನಿರ್ಮಾಣ ಮಾಡುತ್ತಿದೆ.

ಪ್ರಜಾಪ್ರಭುತ್ವ ಭಾರತದಲ್ಲಿ ಕೋಮುಗಲಭೆಗೆ ಕೊರತೆಯೇ ಇಲ್ಲವೆಂಬಂತೆ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಮುಖವಾಡ ಧರಿಸಿದ ಹಲವು ಶಕ್ತಿಗಳ ಕೈವಾಡವಿದ್ದರೂ ಸಹ ಇಂತಹ ಕೃತ್ಯಗಳಿಗೆ ಬಲಿಯಾಗುವುದು ಬಡ ಅಮಾಯಕರೇ ಎಂಬುವುದರಲ್ಲಿ ಸಂಶಯವೇ ಇಲ್ಲದಂತಾಗಿದೆ. ಬಡ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಈ ಕಾಲಘಟ್ಟದಲ್ಲಿ ತಮ್ಮ ದುಷ್ಟ ಶಕ್ತಿಗಳನ್ನು ಬಳಸಿ ಜನತೆಯ ನೆಮ್ಮದಿ ಕೆಡಿಸುವುದಾಗಿದೆ ಇದರ ಉದ್ದೇಶ. ಜಾತಿ ಧರ್ಮವನ್ನು ಬದಿಗಿಟ್ಟು ಕೋಮು ಸೌಹಾರ್ದತೆಯನ್ನು ತೊಡಗಿಸಿ ಶಾಂತಿಯ ಸಮಾಜದ ನಿರ್ಮಾಣವೂ ಈ ಹಂತದಲ್ಲಿ ಅತ್ಯಗತ್ಯ.

ಯಾವ ಧರ್ಮವೂ ರೂಪಿಸಿಕೊಡದಂತಹ 'ವರದಕ್ಷಿಣೆ' ಕೂಡ ಇಂದಿನ ಹರೆಯದ ಯುವಕರಲ್ಲಿ ಉದ್ಭವಿಸುತ್ತಿರುವುದು ಅತಿಯಾಗಿದೆ. ಐಶಾರಾಮಿ ಮದುವೆಯ ಬಗ್ಗೆ ಚಿಂತಿಸುವುದೇ ಇಂದಿನ ಯುವ ಸಮೂಹಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ ಎಂಬ ಸತ್ಯವನ್ನು ಕೂಡ ಮರೆತಂತಿದೆ. ಪ್ರಸಕ್ತವಾಗಿ ಬಡ ಹೆಣ್ಣುಮಕ್ಕಳ ಕಣ್ಣೀರನ್ನು ಒರೆಸಬೇಕಾದ ಯುವಸಮೂಹವು ವರದಕ್ಷಿಣೆಯ ಕಿರುಕುಳದಿಂದ ಹೆಣ್ಣು ಹೆತ್ತವರ ಜೀವ ಹಿಂಡುತ್ತಿರುವುದು ಶೋಚನೀಯ.

ಪ್ರಾರಂಭದಲ್ಲಿ ಅಂತರ್ಜಾಲಗಳ ಬಳಕೆ ಬುದ್ಧಿವಂತಿಕೆಯ ಸಂಕೇತವಾಗಿ ಅಚ್ಚರಿಯ ವಿಚಾರವಾಗಿತ್ತು. ಆದರೆ ಇಂದು ಇಲ್ಲಿ ಒಳ್ಳೆಯ ಕುತೂಹಗಳೇ ಇಲ್ಲದಾಗಿದೆ. ಅಂತರ್ಜಾಲಗಳ ದುರ್ಬಳಕೆ, ಅಪರಿಚಿತ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಿ ನಕಲಿ ಖಾತೆಗಳನ್ನು ತೆರೆದು ಜೊತೆಗೆ ಕೆಲಸಕ್ಕೆ ಬಾರದ ಪೇಜುಗಳನ್ನು ನಿರ್ಮಿಸಿ ಸಮಾಜದ ಅಶಾಂತಿಗೆ ಕಾರಣವಾಗುವುದರಲ್ಲಿ ಇಂದಿನ ಯುವ ಸಮೂಹವೇ ಎತ್ತಿದ ಕೈ.

ಜಾತಿ ನಿಂದನೆಗೆಂದೇ ಬಳಸುವ ಫೇಸ್ಬುಕ್ ಪೇಜುಗಳ ಸಂಖ್ಯೆ ಅಷ್ಟಿಷ್ಟಲ್ಲ. ಮಂದಿರ ಮಸೀದಿಗಳ ಚಿತ್ರಗಳಿಗೆ ಫೋಟೋಶಾಪ್ ಗಳಿಂದ ವಿವಿಧ ಬಣ್ಣಗಳನ್ನು ಹಚ್ಚಿ ಅಕ್ಷರಗಳ ಮೂಲಕ ಕೆಟ್ಟದಾಗಿ ಚಿತ್ರಿಸುವುದೇ ಅಂತರ್ಜಾಲ ಬಳಕೆಯ ಮುಖ್ಯ ಉದ್ದೇಶವೆಂಬಂತಾಗಿಬಿಟ್ಟಿದೆ.ಆಲ್ಕೋಹಾಲ್, ಡ್ರಗ್ಸ್ ನಂತಹ ಉನ್ಮಾದ ಚಟಗಳ ಪಟ್ಟಿಗೆ ಆರೋಗ್ಯಕರವೆಂಬಂತೆ ಕಾಣುವ ಆಧುನಿಕ ಚಟವಾಗಿದೆ ಈ ಅಂತರ್ಜಾಲಗಳು. ಅಸಂಬದ್ದತೆಗಳಿಗೆ, ಅಸಹ್ಯ ಕಾರ್ಯಗಳಿಗೆ, ಅನೈತಿಕ ಚಟುವಟಿಕೆಗಳಿಗೆ ಉಚಿತವಾಗಿ ಬಳಸುವ ಅಂತರ್ಜಾಲಗಳ ಬಳಕೆಯೇ ಇಂದಿನ ಯುವ ಸಮೂಹದ ದೊಡ್ಡ ದುರಂತ.

ಹಾಗಂತ ಬರೀ ಕೊರತೆಗಳನ್ನೇ ಬರೆದು ಬಿಂಬಿಸುವ ಬದಲು ಸ್ವಲ್ಪ ಒಳ್ಳೆಯ ಯುವಕರ ಬಗ್ಗೆಯೂ ಚಿಂತಿಸಬೇಕಿದೆ. ಪ್ರತಿಯೊಂದು ಜನಮೆಚ್ಚುಗೆಯ ಕಾರ್ಯಗಳಲ್ಲೂ ಜಾತಿ, ಧರ್ಮವೆಂಬ ಭೇದಭಾವಗಳಿಲ್ಲದೆ ನಾಡಿನ ಅಭಿವೃದ್ದಿಗೋಸ್ಕರ ದುಡಿಯುವ ಯುವ ಸಮೂಹವು ನಮ್ಮ ನಡುವೆ ಇದೆ. ಇಂತಹ ಒಳ್ಳೆಯ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಿ ಉನ್ನತ ಮಟ್ಟದ ಅಭಿವೃದ್ಧಿಗಾಗಿ ದುಡಿಯುವಂತವರಾಗೋಣ.

ಭೇದಭಾವಗಳನ್ನು ದೂರ ತಳ್ಳಿ ಆತ್ಮಿಯರಾಗೋಣ. ವರದಕ್ಷಿಣೆ ಪಿಶಾಚಿಯನ್ನು ಒದ್ದೋಡಿಸೋಣ. ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸುವಂತೆ ಪ್ರತಿಭಟಿಸೋಣ. ಸಮಾಜದ ಜನತೆಗೆ ತೃಪ್ತಿಯನ್ನು ನೀಡೋಣ. ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ ಆಝಾದ್, ಭಗತ್ ಸಿಂಗರ ಕನಸಿನ ಭಾರತವನ್ನು ನನಸಾಗಿಸೋಣ. ಭಾರತವನ್ನು ಬದಲಾಯಿಸೋಣ.

- H. ಸವಣೂರು
Team Blue Waves
www.facebook.com/BlueWavesPage

ಬುಧವಾರ, ನವೆಂಬರ್ 12, 2014

ವಿದೇಶಿ_ಫಾಸ್ಟ್_ಫುಡ್ ಬಗ್ಗೆ ನಿಮಗೆಷ್ಟು ಗೊತ್ತು?



ಜಾಗತೀಕರಣ ಎಷ್ಟರ ಮಟ್ಟಿಗೆ ನಮ್ಮ ದೇಶದ ಮೇಲೆ ಕರಾಳ ಛಾಯೆಯನ್ನು ಬೀರುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆ ವಿದೇಶಿ ಫಾಸ್ಟ್ ಫುಡ್. ಈ ರುಚಿಕರ ವಿದೇಶಿ ಫಾಸ್ಟ್ ಫುಡ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?. ಪಾಶ್ಚಾತ್ಯರ ಅತಿವೇಗದ ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ನಮ್ಮ ಯುವಪೀಳಿಗೆಗೆ ಲೇಸ್ ಪೊಟ್ಯಾಟೊ ಚಿಪ್ಸ್, ನೂಡಲ್ಸ್, ಬರ್ಗರ್, ಕೆ.ಎಫ್.ಸಿ ಚಿಕನ್ ಹಾಗೂ ಪಿಜ್ಜಾಗಳಂತಹ ವೈವಿಧ್ಯಮಯ ವಿದೇಶಿ ಖಾದ್ಯಗಳೆಂದರೆ ಪಂಚಪ್ರಾಣ. ಈಗಿನ ಜಂಕ್ ಫುಡ್ ಪ್ರಿಯರ ನಾಗಾಲೋಟವನ್ನು ಅಧ್ಯಯನ ಮಾಡಿದ ಅರೋಗ್ಯ ಸಂಘದ ಸಮೀಕ್ಷೆಯೊಂದು ಭಾರತದಲ್ಲಿ 100 ಮಿಲಿಯನ್ ಜನ 2030ರೊಳಗೆ ಡಯಾಬಿಟೀಸ್ ಗೆ ತುತ್ತಾಗಿರುತ್ತಾರೆ ಎಂದು ಹೇಳಿದ್ದರೆ, ಈ ವಿದೇಶಿ ಜಂಕ್ ಫುಡ್ ನಮ್ಮನ್ನು ಎಷ್ಟೊಂದು ಆವರಿಸಿದೆ ಅಂತ ತಿಳಿದುಕೊಳ್ಳಬಹುದು.

ಈ ವಿದೇಶಿ ಜಂಕ್ ಫುಡ್ ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ವಿದೇಶಿ ಶೈಲಿಯ ಖಾದ್ಯಗಳಲ್ಲಿ ರುಚಿವರ್ಧಕವಾಗಿ ಬಳಸುವ ಮೊನೊ ಸೋಡಿಯಂ ಗ್ಲುಟಾಮೆಟ್ ಎಂಬ ರಾಸಾಯನಿಕವನ್ನು ಅಜಿನೊಮೊಟೊ ಅಥವಾ "ಚೈನೀಸ್ ಸಾಲ್ಟ್" ಎಂದು ಕರೆಯುತ್ತಾರೆ. ಈ ದ್ರವ್ಯವು ಗ್ಲುಟಾಮೆಟ್ ಎಸಿಡ್ ನ ಸೋಡಿಯಂ ಲವಣವಾಗಿದ್ದು, ನೀರಿನಲ್ಲಿ ಸುಲಭದಲ್ಲೇ ಕರಗುತ್ತದೆ. 1960 ರ ದಶಕದ ಅಂತ್ಯದಲ್ಲಿ ಚೈನೀಸ್ ಸಾಲ್ಟ್ ನ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ವಾದವಿವಾದಗಳು ಹುಟ್ಟಿಕೊಂಡಿದ್ದವು. ಈ ಸಂದರ್ಭದಲ್ಲಿ ಪ್ರಖ್ಯಾತ ವೈದ್ಯಕೀಯ ಸಂಶೋಧಕ ಡಾ. ಜಾನ್ ಒಲ್ನೆ ಯವರು ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ನಡೆಸಿದ್ದ ಅಧ್ಯಯನ-ಪ್ರಯೋಗಗಳು ಅಜಿನೊಮೊಟೊದ ದುಷ್ಪರಿಣಾಮಗಳನ್ನು ಸಾಬೀತುಪಡಿಸಿದ್ದವು. ಅವುಗಳಲ್ಲಿ ಸ್ಯಾಂಪಲ್-ಗಳು ಹೇಗಿವೆ:

೧) ಅಜಿನೊಮೊಟೊ ದೇಹವನ್ನು ಸೇರುವುದರಿಂದ ತಲೆನೋವು, ಬೆವರು, ತಲೆತಿರುಗುವಿಕೆ ಉಂಟಾಗುತ್ತದೆ. ಇದರ ಹೆಚ್ಚು ಸೇವನೆ ಮೆದುಳಿಗೂ ತೊಂದರೆ.
೨) ಅಜಿನೊಮೊಟೊದಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದಲ್ಲದೆ ಮುಖ, ಕಣ್ಣು ಊದಿಕೊಳ್ಳುತ್ತದೆ.
೩) ಇದರ ನಿರಂತರ ಸೇವನೆಯಿಂದ ಎದೆ ನೋವು, ಉಸಿರಾಟದ ಸಮಸ್ಯೆ ಮತ್ತು ಸೋಮಾರಿತನ ಬರುತ್ತದೆ. ಶೀತ, ನೆಗಡಿ, ಸೀಗು ಮತ್ತು ತೂಕಡಿಕೆಯೂ ಕಂಡುಬರುತ್ತದೆ.
೪). ಅಜಿನೊಮೊಟೊದಲ್ಲಿರುವ ಆಸಿಡಿಕ್ ಅಂಶ ಹೊಟ್ಟೆ ಮತ್ತು ಗಂಟಲು ಉರಿಯನ್ನು ಉಂಟುಮಾಡುತ್ತದೆ.
೫) ನಿರಂತರವಾಗಿ ಮೂತ್ರ ಹೋಗುವುದು, ಗುಪ್ತಾಂಗದಲ್ಲಿ ಊತ ಇನ್ನೂ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
೬) ಇದರ ಸೇವನೆಯಿಂದ ಕೆಳಹೊಟ್ಟೆಯ ನೋವು, ವಾಂತಿ, ಭೇದಿಯೊಂದಿಗೆ ಎಲುಬು ಮತ್ತು ಕೀಲಿನ ನೋವು ಬರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನೂ ಕಡಿಮೆಮಾಡಿ ಮೂಳೆಗಳು ಸವೆಯಲು ಕಾರಣವಾಗುತ್ತದೆ.
೭)ಮನುಷ್ಯನ ಮೆದುಲಿನಲ್ಲಿನ ಹೈಪೊಥಲಮಸ್ ಎನ್ನುವ ಭಾಗದಲ್ಲಿ ಹಾನಿಯನ್ನು ಉಂಟುಮಾಡುವ ಅಜಿನೊಮೊಟೊ, ತನ್ಮೂಲಕ ಮನುಷ್ಯನ ಶರೀರದಲ್ಲಿ ಹಾರ್ಮೋನುಗಳನ್ನು ಉತ್ಪಾದಿಸುವ ಮತ್ತು ನಿಯಂತ್ರಿಸುವ ಪ್ರಕ್ರಿಯೆಗಳಲ್ಲಿ ವ್ಯತ್ಯಯವನ್ನು ಉಂಟುಮಾಡುತ್ತದೆ. ತತ್ಪರಿಣಾಮವಾಗಿ ನಮ್ಮ ಶರೀರದ ಅಂಗಾಂಗಗಳ ಕಾರ್ಯಕ್ಷಮತೆಯಲ್ಲೂ ವ್ಯತ್ಯಯಗಳು ಸಂಭವಿಸುತ್ತವೆ.

'ಜಂಕ್ ಫುಡ್ ಸಂಸ್ಕೃತಿ' ನಮಗರಿವಿಲ್ಲದೇ ನಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂದು ಶಾಲೆಯಿಂದ ಮನೆಗೆ ಮರಳುವ ಮಗು ಮೊದಲಿಗೆ ಟೀವಿ ಮುಂದೆ 'ಜಂಕ್ ಫುಡ್' ಹಿಡಿದು ಕುಳಿತುಕೊಳ್ಳುತ್ತದೆ. ಈ ವಿಷಕಾರಿ ಜಂಕ್-ಫುಡ್ ಗಳನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಿನ್ನಿಸಲಾರಂಭಿಸಿದರೆ ಆಗುವ ದುಷ್ಪರಿಣಾಮಗಳನ್ನು ಊಹಿಸುವುದು ಕಷ್ಟ. ಈ ಜಂಕ್ ಫುಡ್-ಗಳು ಮಕ್ಕಳ ದೇಹಕ್ಕೆ ಪ್ರತಿದಿನ 187ಕ್ಯಾಲೋರಿಯಷ್ಟು ಹೆಚ್ಚುವರಿಯಾಗಿ ತುಂಬುತ್ತದೆ. ಇದರಿಂದಾಗಿ ಐದು ಪಟ್ಟಿನಷ್ಟು ಹೆಚ್ಚು ತೂಕ ಪಡೆಯಲು ಆರಂಭಿಸುತ್ತಾರೆ. ಅಲ್ಲದೇ ಇವುಗಳು ಸಾಮಾನ್ಯಕ್ಕಿಂತ ಹತ್ತು ಪಟ್ಟಿನಷ್ಟು ಸೋಡಿಯಂ ಅನ್ನೂ ದೇಹದೊಳಗೆ ಸೇರಿಸುತ್ತದೆ. ಇನ್ನು ಸರಳ ಕಾರ್ಬೋಹೈಡ್ರೆಟ್-ಗಳು ದೇಹದ ಸಕ್ಕರೆಯ ಪ್ರಮಾಣವನ್ನು ಅತಿ ವೇಗದಲ್ಲಿ ಏರಿಸಿದರೆ ಸಂಕೀರ್ಣ ಕಾರ್ಬೋಹೈಡ್ರೇಟ್-ಗಳು ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇವುಗಳು ದೇಹದ ಕ್ರಿಯೆಗಳಿಗೆ ವಿಶೇಷವಾಗಿ ಪಚನ/ ಜೀರ್ಣ ಕ್ರಿಯೆಗಳನ್ನು ಒತ್ತಡಕ್ಕೀಡು ಮಾಡುತ್ತದೆ. ಪರಿಣಾಮ ಇನ್ಸುಲಿನ್ ಬಿಡುಗಡೆಯ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದು ಇನ್ನಷ್ಟು ಹಸಿವೆಯನ್ನು ತಂದೊಡ್ಡಿ ಮತ್ತೆ ಜಂಕ್ ಫುಡ್-ಗಳಿಗೆ ಮನಸ್ಸು ಹಾತೊರೆಯುವಂತೆ ಮಾಡುತ್ತದೆ. ಇಲ್ಲಿ ಮತ್ತದೇ ಕ್ರಿಯೆಗಳು ಪುನರಾವರ್ತನೆ ಆಗುತ್ತದೆ, ಪರಿಣಾಮ ಬೊಜ್ಜು,ಹೈಪರ್ ಟೆನ್ಶನ್,ಡಯಾಬಿಟಿಸ್, ಗ್ಯಾಸ್ ಟ್ರಬಲ್ ಮುಂತಾದ ರೋಗಗಳು, ಇತ್ತೀಚಿನ ಜಂಕ್ ಫುಡ್-ಗಳಲ್ಲಿ ಕ್ಯಾನ್ಸರ್ ಕಾರಕಗಳು ಯತೇಚ್ಚವಾಗಿ ತುಂಬಿದೆ ಎಂದು ಹಲವು ಸಂಶೋದನೆಗಳು ಹಲವು ಪುರಾವೆಗಳನ್ನು ನಮ್ಮ ಕಣ್ಣ ಮುಂದಿಟ್ಟಿದೆ.

ಇನ್ನು ಕೆ.ಎಫ್.ಸಿ ಮತ್ತು ಮೆಕ್ಡೊನಲ್ಡ್ ಕಂಪನಿಯಲ್ಲಿ ದೊರಕುವ ಚಿಕನ್ ಮತ್ತು ಬೀಫ್ ಬರ್ಗರುಗಳಲ್ಲಿ ಬರುವ ಪ್ಯಾಟ್ಟಿಗಳು ಯಂತ್ರಗಳಲ್ಲಿ ತಯಾರು ಮಾಡಲ್ಪಡುವ ಗ್ರೌಂಡ್ ಮೀಟ್ (ಪುಡಿಕರಿಸಲ್ಪಟ್ಟ ಮಾಂಸ ಅಥಾವ ಖೈಮಾ) ಆಗಿರುತ್ತದೆ. ಇದು ತಾಜಾ ಎನ್ನುವುದಕ್ಕೆ ಯಾವುದೆ ಪುರಾವೆಗಳು ಇರುವುದಿಲ್ಲ. ಮತ್ತು ಇದೇ ಯಂತ್ರಗಳಲ್ಲಿ ಹಂದಿ ಮಾಂಸಗಳನ್ನು ಬಳಸಿ ಬರ್ಗರ್ ಪ್ಯಾಟಿ, ಬೇಕನ್, ಹಾಟ್ ಡಾಗುಗಳನ್ನು (ಸೋಸೆಜ್) ಮಾಡುತ್ತಾರೆ. ನಂತರ ಅವುಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿ "ಸುರಕ್ಷಿತ" ಅಂತ ಅಂತರಾಷ್ಟ್ರೀಯ ಮುದ್ರೆಯನ್ನು ಹಾಕುತ್ತಾರೆ. ಇವುಗಳು ಆರೋಗ್ಯಕ್ಕೆ ಎಷ್ಟೊಂದು ಹಾನಿಕರ ಎಂದರೆ ಸ್ವತಹಃ ಮೆಕ್‌-ಡೊನಾಲ್ಡ್ಸ್‌ನಂತಹ ಕಂಪೆನಿಗಳೇ ತಮ್ಮ ಸಿಬ್ಬಂದಿಗೆ ಫಾಸ್ಟ್‌ಫುಡ್ ಅತಿಯಾಗಿ ಉಪಯೋಗಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಆದರೂ ಎಚ್ಚೆತ್ತುಕೊಳ್ಳದ ನಮ್ಮ ಭಾರತ ದೇಶದಲ್ಲಿ ಇಂತಹ ಕಂಪೆನಿಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿದೆ. ಈ ಕಂಪೆನಿಗಳು ಭಾರತಕ್ಕೆ ಲಗ್ಗೆಯಿಟ್ಟಾಗ ನಮ್ಮ ಸರಕಾರ ಅದು ಆರೋಗ್ಯಕ್ಕೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಕೇಳುವುದಿಲ್ಲ, ಅದರಿಂದ ನಮಗೆಷ್ಟು ಲಾಭ ಅನ್ನುವ ಪ್ರಶ್ನೆಗಳನ್ನ ಮಾತ್ರವೇ ಕೇಳುತ್ತದೆ.

ಆಹಾರವೆನ್ನುವುದು ನಾಲಗೆಯ ರುಚಿ ಮತ್ತು ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವುದಕ್ಕಾಗಿ ತೆಗೆದುಕೊಳ್ಳುವುದಲ್ಲ. ಅದು ನಮ್ಮ ಸಂಸ್ಕೃತಿಯ, ಜೀವನ ಪದ್ದತಿಯ ಅವಿಭಾಜ್ಯ ಅಂಗ. ನಮ್ಮ ಆಹಾರ ಪದ್ಧತಿ ನಮ್ಮ ಪರಂಪರೆಯ ದ್ಯೋತಕ. ಅದು ನಮ್ಮ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ನಮ್ಮ ಅಡುಗ ಮನೆಗಳು ನಮಗೆ ಆರೋಗ್ಯವನ್ನು ಕೊಡುತ್ತದೆ. ರುಚಿಯಾಗಿರುತ್ತದೆ. ಶುಚಿಯಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅದನ್ನು ನಮಗಾಗಿ ಮಾಡಿ ಬಡಿಸಿದ ತಾಯಿ ಅಥವಾ ಇನ್ಯಾರದೋ ಜೊತೆ ಭಾವನಾತ್ಮಕ ಸಂಬಂಧವನ್ನು ಈ ಅಡುಗೆ ಪೋಣಿಸುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ನೆಲದ ಅಡುಗೆಯನ್ನು ಜಾಗತೀಕರಣ ಎಂಬ ಕೊಳ್ಳುಬಾಕ ರಾಕ್ಷಸನ ಮುಂದೆ ಅಡವಿಟ್ಟು ಅವನ ಅಡಿಯಾಳಾಗುವುದು ಬೇಡ.
ನಮ್ಮ ಅಡುಗೆ, ನಮ್ಮ ಆಹಾರ ಪದ್ಧತಿ ನಮ್ಮ ಹೆಮ್ಮೆ. ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಗುರುತರ ಜವಾಬ್ದಾರಿ ನನ್ನ ಮತ್ತು ನಿಮ್ಮೆಲ್ಲರ ಮೇಲಿದೆ.

- Team Blue Waves

www.facebook.com/BlueWavesPage

ಸೋಮವಾರ, ನವೆಂಬರ್ 10, 2014

ನ್ಯಾಯ ಸಿಗಲಿ, ದ್ವೇಷ ಅಳಿಯಲಿ, ಶಾಂತಿ ಉಳಿಯಲಿ



ಸಮಾಜ ವಿರೋದಿ ನರ ರಾಕ್ಷಸರು ಮಾಡಿದ ಪಾಶವೀ ಕ್ರತ್ಯಗಳನ್ನು ಬೊಟ್ಟು ಮಾಡಿ ತಮ್ಮ ಬೇಳೆ ಬೇಯಿಸಲು ಶ್ರಮಿಸುತ್ತಿರುವ ಕೋಮು ಕ್ರಿಮಿಗಳಿಗೆ ಸರಿಯಾದ ಮದ್ದು ಅರೆಯೋದು ಕಾಲದ ಬೇಡಿಕೆಯಾಗಿದೆ . ಯಾವ ಧರ್ಮಕ್ಕೂ ಸೇರಿಸಲು ಲಾಯಕ್ಕಲ್ಲದವರನ್ನು ಅವರ ಜಾತಿ ಸೂಚಕ ಹೆಸರಿನ ಮಾತ್ರಕ್ಕೆ ಇಡೀ ಸಮುದಾಯವನ್ನೇ ಅಪರಾಧಿಗಳ ಕಟಕಟೆಯಲ್ಲಿ ನಿಲ್ಲಿಸುವ , ಹೀನಾಯವಾಗಿ ಟೀಕಿಸುವ ಸಂಕುಚಿತ ಮನೋಭಾವ ದೇಶದ ಒಗ್ಗಟಿಗೆ ಮಾರಕ ಎಂಬುದನ್ನು ಮನಗಾಣ ಬೇಕಾಗಿದೆ .

ನಮ್ಮ ಮಂಗಳೂರಿನ ರತ್ನ ಕೊಠಾರಿ,ಸೌಜನ್ಯ,ಉತ್ತರಪ್ರದೇಶದ ಬದೌನ್ನ ಸಹೋದರಿಯರು, ಹೈದರಬಾದಿನ ನಾಶೀಯಾ, ಡೆಲ್ಲಿಯ ನಿರ್ಭಯಾಳ ಮೇಲೆ ಕಿರಾತಕರು ಎರಗಿ ಕೊಂದಾಗ ದೇಶದ ಪ್ರಜ್ಞಾವಂತರು ಬೀದಿಗಿಳಿದು ಪ್ರತಿಭಟಿಸಿದ್ದರು. ತಮ್ಮ ಹೆಣ್ಣು ಮಗಳಿಗೆ ಆದ ಅನ್ಯಾಯ ಯಾವ ಹೆಣ್ಣಿಗೂ ಆಗಬಾರದೆಂದು ಜಾತಿ ಮತ ಭೇದ ಮರೆತು ಮರುಗಿದ್ದರು. ನಂದಿತಾಳ ಸಾವಿನ ತನಿಖೆ ಕೂಡ ನಡೆಯಬೇಕೆಂದು ಶಾಂತಿಯನ್ನು ಬಯಸುವ ಮನಸುಗಳು ಸರಕಾರವನ್ನು ಒತ್ತಾಯ ಮಾಡುತ್ತಿವೆ.

ತಮ್ಮ ನೀಚ ನಾಲಿಗೆಯ ಗುಣ ಮಟ್ಟವನ್ನು ಪರೀಕ್ಷಿಸುವ ಸ್ಪರ್ದೆಗೆ ಇಳಿದಿರುವ ರಾಜಕೀಯ ನಾಯಕರು ಜಿದ್ದಾಜಿದ್ದು ಬಿಟ್ಟು ,ಮಾನವೀಯ ಕಳಕಳಿಯಿಂದ ಸಮರ್ಪಕ ತನಿಖೆ ನಡೆಯಲು ಅನುವು ಮಾಡಿ ಕೊಟ್ಟರೆ ಮಾತ್ರ ಅಮಾಯಕವಾಗಿ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗಲು ಸಾದ್ಯ . ಪ್ರತಿಯೊಂದು ಅಸಹಜ ಸಾವುಗಳನ್ನು ತಮ್ಮ ಓಟಿನ ಮೂಲಕ ಅಲೆಯುವ ಕೆಟ್ಟ ಪ್ರವತ್ತಿ ಯನ್ನು ರಾಜಕೀಯ ಪಕ್ಷಗಳು ಬಿಟ್ಟರೆ ಮಾತ್ರ ಜನತೆಗೆ ನಿಜವಾದ ನೆಮ್ಮದಿ ಸಿಗಬಹುದೇ ಹೊರತು ಪರಸ್ಪರ ಕೆಸರೆರಚಾಟದಿಂದ ಅಲ್ಲ ಎಂಬುದನ್ನು ಎಲ್ಲರೂ ಮನಗಾಣ ಬೇಕು.

ನ್ಯಾಯ ಸಿಗಲಿ, ದ್ವೇಷ ಅಳಿಯಲಿ , ಶಾಂತಿ ಉಳಿಯಲಿ ಎಂಬುದೇ ಬ್ಲೂ ವೇವ್ಸ್ ನ ಬೇಡಿಕೆ ..

www.facebook.com/BlueWavesPage

#Get #United #For #Better #Tomorrow

ಭಾನುವಾರ, ನವೆಂಬರ್ 9, 2014

ಬ್ಲೂ ವೇವ್ಸ್ : ನಿಕ್ಷೇಪ- 2014 : ಯುವ ಬರಹಗಾರರಿಂದ ಕನ್ನಡ ಬರಹಗಳಿಗೆ ಆಹ್ವಾನ



ಕನ್ನಡ ಯುವ ಬರಹಗಾರರ ಸಾಮಾಜಿಕ ಜಾಲತಾಣದ ಸಾಹಿತ್ಯ ವೇದಿಕೆ ಬ್ಲೂ ವೇವ್ಸ್ (ನೀಲಿ ಅಲೆಗಳು) ಫೇಸ್ಬುಕ್ ಪೇಜ್ ಬಳಗದ ವತಿಯಿಂದ ಕನ್ನಡದ ಯುವ ಬರಹಗಾರರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಕ್ಷೇಪ - 2014 (ನವ ಚಿಂತನೆಗಳ ಅಗೆತ) ಎಂಬ ಸ್ಪರ್ಧೆಯಡಿ ಏಳು ಪ್ರಸಕ್ತ ವಿದ್ಯಮಾನಗಳ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ. ಪ್ರಜ್ಞಾವಂತ ಸೃಜನಶೀಲ ಯುವ ಬರಹಗಾರರು ಇದರಲ್ಲಿ ಪಾಲ್ಗೊಳ್ಳಬಹುದು. 

ವಿಷಯಗಳು ಇಂತಿವೆ.
೧. ಮಾಧ್ಯಮ - ಪೂರ್ವಾಗ್ರಹ ಮತ್ತು ನೈತಿಕತೆ
೨. ಶಿಕ್ಷಣ ವ್ಯವಸ್ಥೆ ಲೋಪದೋಷಗಳು ಮತ್ತು ಸುಧಾರಣೆ ಮಾರ್ಗಗಳು
೩. ಅಲ್ಪಸಂಖ್ಯಾತ ಮತ್ತು ದಲಿತರ ಹಿನ್ನೆಡೆ ಮತ್ತು ಪರಿಹಾರೋಪಾಯಗಳು
೪. ಪ್ರಸಕ್ತ ಮತ್ತು ನನ್ನ ಕನಸಿನ ಭಾರತ
೫. ಯುವಜನತೆ - ಅಭಿರುಚಿಗಳು, ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ
೬. ಭಾರತದಲ್ಲಿ ಭಯೋತ್ಪಾದನೆ - ಮೂಲಗಳು ಮತ್ತು ನಿಗ್ರಹ ಮಾರ್ಗಗಳು.
೭. ಯುವಜನತೆ -ಸಾಮಾಜಿಕ ತಾಣ ಉಪಯೋಗಿಸಬೇಕಾದ ಪರಿ ಮತ್ತು ದಾರಿ ತಪ್ಪುತ್ತಿರುವ ರೀತಿ

ಬಹುಮಾನಗಳ ವಿವರ:
• ಮೊದಲ ಬಹುಮಾನ ರೂ.25,000 ಮತ್ತು ಪ್ರಶಸ್ತಿ ಪತ್ರ
• ದ್ವೀತಿಯ ಬಹುಮಾನ ರೂ.15,000 ಮತ್ತು ಪ್ರಶಸ್ತಿ ಪತ್ರ
• ತೃತೀಯ ಬಹುಮಾನ ರೂ10,000 ಮತ್ತು ಪ್ರಶಸ್ತಿ ಪತ್ರ
• ಭಾಗವಹಿಸಿದ ಉತ್ತಮ ಬರಹಗಾರರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.

ಸ್ಪರ್ಧೆಯ ನಿಯಮಗಳು:
• ಲೇಖನ ಸ್ವಂತದ್ದಾಗಿರಬೇಕು; ಅಪ್ರಕಟಿತವಾಗಿರಬೇಕು (ಬ್ಲಾಗ್/ವೆಬ್‌ಸೈಟ್‌ಗಳಲ್ಲೂ ಪ್ರಕಟವಾಗಿರಬಾರದು),• ಕನಿಷ್ಟ 1500 ಪದಗಳದ್ದಾಗಿರಬೇಕು.• ಲೇಖನ ಕೃತಿ ಚೌರ್ಯವಾಗಿರಬಾರದು.
• ಒಬ್ಬರು ಎಲ್ಲ ವಿಷಯಗಳ ಮೇಲೆ ಬರೆಯಬಹುದು. (ಆದರೆ ಪ್ರತ್ಯೇಕವಾಗಿ ಕಳುಹಿಸತಕ್ಕದ್ದು).• ವಯೋಮಿತಿ 16 ರಿಂದ 30 ವಯಸ್ಸು.
• ಲೇಖನದೊಂದಿಗೆ ಪಾಸ್ಪೋರ್ಟ್ ಸೈಜ್ ಭಾವಚಿತ್ರ, ವಿಳಾಸ ಮತ್ತು ಫೇಸ್ಬುಕ್ ಖಾತೆಯ ಲಿಂಕ್ ಕಳುಹಿಸತಕ್ಕದ್ದು.
• ಲೇಖನವನ್ನು ಕಳುಹಿಸಬೇಕಾದ ಕೊನೆಯ ದಿನಾಂಕ 15 ಡಿಸೆಂಬರ್ 2014.
• 19 ಡಿಸೆಂಬರ್ 2014 ಕ್ಕೆ ಫಲಿತಾಂಶ ಪ್ರಕಟ.
• ಸ್ವೀಕೃತ ಉತ್ತಮ ಬರಹಗಳನ್ನು ಪ್ರಕಟಿಸುವ ಹಕ್ಕು ಸಂಯೋಜಕರದ್ದಾಗಿರುತ್ತದೆ.• ಲೇಖಕರು ಪೂರ್ಣವಾಗಿ ಸಿದ್ಧವಾದ ತಮ್ಮ ಲೇಖನವನ್ನು ಸ್ಪಷ್ಟ ಕೈಬರಹ (ಸ್ಕ್ಯಾನ್ ಮಾಡಿದ ಇಮೇಜ್ ಅಥವಾ ಪಿಡಿಎಫ್ ರೂಪದಲ್ಲಿ) ಯಾ ನುಡಿ/ಬರಹ/ಯೂನಿಕೋಡ್ ರೂಪದಲ್ಲಿ ಬೆರಳಚ್ಚಿಸಿ admin@bluewavespage.com ಇಮೇಲ್ ಗೆ ಕಳುಹಿಸಿ ಕೊಡಬೇಕು.

ಫಲಿತಾಂಶ ವಿವರಗಳು :
• ಬಹುಮಾನ ವಿಜೇತ ಬರಹಗಾರರ ಹೆಸರನ್ನು ಬ್ಲೂ ವೇವ್ಸ್ ಪೇಜ್,ಸಾಮಾಜಿಕ ತಾಣಗಳಲ್ಲಿ ಮತ್ತು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
• ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು 21 ಡಿಸೆಂಬರ್ 2014 ರಂದು ನಡೆಯುವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿ:
www.facebook.com/BlueWavesPage

ಧನ್ಯವಾದಗಳೊಂದಿಗೆ,
ಟೀಂ ಬ್ಲೂ ವೇವ್ಸ್

ನಮ್ಮ ಭಾರತ



ಬಿಸಿ ರಕ್ತದ ಭಾರತೀಯ ಯುವಕರು ಜಾಗೃತರಾಗಿ ಪ್ರತಿಜ್ಞೆ ಗೈದರೆ ಎಲ್ಲವೂ ಸಾಧ್ಯವಿದೆ ನಮ್ಮ ಭಾರತದಲ್ಲಿ. ಅಂತಹ ಒಂದು ಕ್ರಾಂತಿ ಆದಷ್ಟು ಬೇಗ ಬರುತ್ತೆ. ಈ ಕೊಲೆಗಾರರು ಮತ್ತು ಬೃಷ್ಟ ರಾಜಕಾರಣಿಗಳು ಹೇಳ ಹೆಸರಿಲ್ಲದೆ ಮಣ್ಣಾಗುವ ದಿನ ಇನ್ನು ದೂರವಿಲ್ಲ.

ಅತ್ಯಾಚಾರದ ಕರಾಳ ಕರಿ ಛಾಯೆ - ಯುವ ಭಾರತವೇ ಇನ್ನೂ ನಿದ್ದೆ ತರವಲ್ಲ..!


ನಿರ್ಭಯಳಿಗಾಗಿ ಹೋರಾಡಿ ವ್ಯವಸ್ಥೆಯ ಎದೆಗೆ ಒದ್ದು ಕಾನೂನು ಬದಲಾಯಿಸಿ ಅತ್ಯಾಚಾರಿಗಳಿಗೆ ಸಿಂಹಸ್ವಪ್ನವಾಗುವ ಮುನ್ಸೂಚನೆ ಕೊಟ್ಟ ಯುವಕ ಯುವತಿಯರೇ ಮತ್ತೊಮ್ಮೆ ಮೌನ ಮುರಿಯಬೇಕಿದೆ. ಮತ್ತೊಮ್ಮೆ ದನಿ ಎತ್ತಬೇಕಿದೆ.. ಮತ್ತೊಮ್ಮೆ ಎದೆ ಬಿರಿದು ಹೋರಾಡಬೇಕಿದೆ.ಕಳೆದ ವಾರವಷ್ಟೇ ಮೂರುವರೆ ವರುಷದ ಕಂದಮ್ಮನ ಮೇಲೆ ಮುಗಿಬಿದ್ದ ರಾಕ್ಷಸ ಅಯೋಗ್ಯ ನೀಚ ದುರುಳ ವಿಕೃತ ಗುಂಡಪ್ಪನ ಹೇಯ ಮನಸ್ಸಿನ ಪೈಶಾಚೀ ಕೃತ್ಯದ ಆಘಾತ ಕಿವಿಯ ಮೇಲೆ ಗುಂಯ್ಗುಡುತ್ತಿರುವಾಗಲೇ ಮತ್ತೆ ಆರು ವರುಷದ ಪುಟ್ಟ ಹೂವಿನ ಮೇಲೆ ನಡೆದ ಕರುಳು ಹಿಂಡುವ ಘಟನಗೆ ಸಾಕ್ಷಿಯಾಗುತ್ತಿದ್ದೇವೆಯೆಂದರೆ,ನಮ್ಮ ಮೌನಗಳು ಭೀಕರ ಭವಿಷ್ಯವೊಂದಕ್ಕೆ, ಹಾದಿ ಬೀದಿಯಲ್ಲಿ ಅರಳುವ ಕುಸುಮಗಳು ತರಿದು ಹಾಕಲ್ಪಡುವ ಅನಾಚಾರ ವಿಕೃತಿಯ ಪರಕಾಷ್ಠೆಯ ನರಕವಾಗಲು ನಾಂದಿಯಾಗುತ್ತಿದೆ ಎಂಬ ಎಚ್ಚರಿಕೆಯು ನಮ್ಮನ್ನು ಮತ್ತೆ ಬೀದಿಗಿಳಿಸಬೇಕಿದೆ.

ಆಳುವ ವರ್ಗದ ಮೌನಗಳು, ಬರೇ ಪುಸ್ತಕದಲ್ಲಿ ಬರೆದಿಡಲು ಮಾತ್ರ ಕಾನೂನುಗಳಾದರೆ, ಅತ್ಯಾಚಾರಿಯೊಬ್ಬನಿಗೆ ಸಾರ್ವಜನಿಕವಾಗಿ ಶಾಸ್ತಿ ಮಾಡುವ ಮೂಲಕ ಪ್ರತಿಯೊಬ್ಬ ಅತ್ಯಾಚಾರಿಗೂ ದಿಟ್ಟ ಎಚ್ಚರಿಕೆಯನ್ನು ನೀಡದಿದ್ದರೆ, ತನ್ನ ಸುಂದರ ಬದುಕನ್ನು ಅವಮಾನ ಯಾತನೆಗಳಿಂದ ಕಳೆಯಬೇಕಾಗಿಸಿ, ಅಮಾಯಕ ಹೆಣ್ಣು ಮಗುವಿನ ಬದುಕು ಕಸಿದುಕೊಂಡ,ಅಸಂಖ್ಯಾತ ಹೆಣ್ಣು ಹೆತ್ತವರನ್ನು ಕಣ್ಣೀರಿಡಿಸಿದ, ಅವರ ಆಸೆ ಆಕಾಂಕ್ಷೆಗಳನ್ನು ಚಿಗುರಲ್ಲೇ ಚಿವುಟಿ ಹಾಕಿದ, ಪೊದೆಯಲ್ಲೊ, ಚರಂಡಿಯಲ್ಲೋ ಹಸಿ ಮಾಂಸ ತಿಂದು ಅರ್ದಕ್ಕೆ ಬಿಟ್ಟ ನಮ್ಮ ಮನೆ ಮಕ್ಕಳ ನಗ್ನ ಶರೀರವನ್ನು ಅಚೇತನ ಜಡದಂತೆ ನಿಂತು ನೋಡಬೇಕಾದ ಸಾಮಾಜಿಕ ಕ್ರೂರತೆಗಳಿಗೆ ಅವಸಾನ ಎಂಬುದೇ ಇರುವುದಿಲ್ಲ.ಭಯಮುಕ್ತ, ಸ್ತ್ರೀ ಹಕ್ಕುಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಅಧಿಕಾರದಲ್ಲಿರುವ ಅಮಲುಗಣ್ಣಿನವರಿಗಿಂತ ಭಾರತೀಯ ಯುವ ಸಮೂಹಗಳು ಹೊರಬೇಕಿದೆ. ಅದು ನಿದ್ರಿಸುತ್ತಿರುವ ಆಳುವ ವರ್ಗದ ಎದೆಗೆ ಒದ್ದೋ, ಕಾನೂನಿನ ಕೊರಳಪಟ್ಟಿ ಹಿಡಿದೋ, ಕಾರ್ಯಾಂಗದ ಜಡತ್ವದ ಅಂಡಿಗೆ ಬಡಿದೋ, ಅದು ಹೇಗೆಯಾದರೂ ಸರಿ, ಅತ್ಯಾಚಾರಿಯೊಬ್ಬ ಕನಸಿನಲ್ಲಿಯೂ ಬೆಚ್ಚಿ ಬೀಳುವಂತಹ ವಾತಾವರಣವನ್ನು ನಾವು ಸೃಷ್ಟಿಸದಿದ್ದರೆ.. ಓ ಭಾರತೀಯ ಯುವ ಸಮೂಹವೇ.. ನಮ್ಮ ಅಕ್ಕ ತಂಗಿಯಂದಿರು, ಇಲ್ಲಾ ನಾಳೆ ಹುಟ್ಟಿ ನರ್ಸರಿಗೆ ಹೊರಡಲಿರುವ ನಿನ್ನ ರಕ್ತ ಹಂಚಿಕೊಂಡಿರುವ ಹೆಣ್ಣು ಮಗುವಿನ ಭವಿಷ್ಯವನ್ನು ಊಹಿಸಿಕೊಳ್ಳಲೂ ಅಸಾಧ್ಯವಾದೀತು.

ಕಿಚ್ಚಿಗೆ ಕಿಡಿ ಹೊತ್ತಿಸುವುದು ನಿನ್ನಿಂದಲೇ ಆಗಲಿ. ಎಚ್ಚರಗೊಳ್ಳು, ಒಗ್ಗೂಡಿಸು,ರಾಕ್ಷಸ ದಹನಕ್ಕೆ ಕಾಲ ಮಿಂಚಿಯಾಗಿದೆ. ಇನ್ನೂ ನಿದ್ದೆ ತರವಲ್ಲ...!!!!

- ಟೀಂ ಬ್ಲೂ ವೇವ್ಸ್

#responsible #youths #future #India

www.facebook.com/BlueWavesPag

ಕನ್ನಡ ಯುವ ಬರಹಗಾರರಿಗೆ ನಮ್ಮ ಪ್ರಥಮ ವೇದಿಕೆ


ತಬಸ್ಸುಮ್- ನಿನಗಿದೋ ಸೆಲ್ಯೂಟ್


ಗೆಳೆಯರೇ....

ಫೆಸ್ಬುಕ್ನಲ್ಲಿ ಮಂಗಳೂರಿನ ತಬಸ್ಸುಮ್ ಎಂಬ ದಿಟ್ಟ ಹೆಣ್ಣು ಮಗಳಿಂದ ನಡೆಸಲ್ಪಡುತ್ತಿರುವ HIV ಪೀಡಿತ ಮಕ್ಕಳ ಪಾಲನಾ ಕೇಂದ್ರದ ಬಗ್ಗೆ ಬಂದ ಲೇಖನ ನಿಮ್ಮಲ್ಲಿ ಬಹುತೇಕ ಮಂದಿ ನೋಡಿರುತ್ತೀರ.
ಆ ಮಕ್ಕಳನ್ನು ಬೇಟಿಯಾಗಿ, ಕೆಲ ಹೊತ್ತು ಅವರೊಂದಿಗೆ ಕಳೆದು, ಅವರಿಗೆ ಸಾಂತ್ವಾನ ನೀಡಿ, ಆ ಧೀರ ಮಹಿಳೆಗೆ ಧೈರ್ಯ ತುಂಬಿ ಬರಬೇಕೆಂಬ ಆಲೋಚನೆಯೊಂದಿದೆ ನನ್ನ ಪತ್ನಿಯೊಂದಿಗೆ ಈ ವಿಷಯ ಚರ್ಚಿಸಿದ್ದೆ.ಆಕೆಯೂ ಸಿದ್ಧಳಾಗಿದ್ದಳು ನನ್ನೊಂದಿಗೆ ಕೈ ಜೋಡಿಸಲು.ಹಾಗೆ ಮರುದಿನವೇ "Sneha Deep" ಗೆ ಬಸ್ಸನ್ನೇರಿದೆವು.

ಮಂಗಳೂರಿನಲ್ಲಿ ಬಸ್ಸಿಳಿದು, ರಿಕ್ಷಾ ಮಾಡಿಕೊಂಡು ಉರಿ ಬಿಸಿಲಿನಲ್ಲಿ SNEHA DEEP ಹೊಕ್ಕಾಗ, ತಬ್ಬಲಿ ಕಂದಮ್ಮಗಳು ತಮ್ಮನ್ನು ಸಂತೈಸಲು ನಮ್ಮವರೇ ಯಾರೋ ಬಂದಿದ್ದಾರೆ ಎಂದು ಆಸೆ ಭರಿತ ಕಂಗಳು ನಮ್ಮನ್ನು ಸ್ವಾಗತಿಸಿದವು. xyz ಎಂಬ ಕಂದಮ್ಮನನ್ನು ಮುದ್ದಿಸುವಾಗ ಕಂಗಳು ತೇವಗೊಂಡವು. ಆ ಮನೆಯ ಒಳ ಭಾಗದಲ್ಲಿ ಹವಾನಿಯಂತ್ರಿತ ಕೋಣೆಯನ್ನೂ ಮೀರಿಸುವಂತಹ ತಂಪಾದ ವಾತಾವರಣ ಅನುಭವಿಸಿ ಪುಳಕಿತಗೊಂಡೆವು. ತಬಸ್ಸುಮ್ ಎಂಬ ಧೀರ ಮಹಿಳೆಯೊಂದಿಗೆ ಮಾತನಾಡಲು ತೊಡಗಿ, ಅವರ ಮಾತುಗಳನ್ನೇ ಶಾಂತವಾಗಿ ಆಲಿಸ ತೊಡಗಿದೆವು.

"ನಾನು 14 ವರ್ಷಗಳಿಂದ NGO ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಗೆಳೆಯರಲ್ಲಿ ಓರ್ವ HIV ಪೀಡಿತನ ಪರಿಸ್ತಿತಿ ಕಂಡು ಇಂತಹ ಕೆಲಸಕ್ಕೆ ಕೈ ಹಾಕಿದೆ. ಈ HIV Protection care ಕಳೆದ 3 ವರುಷಗಳಿಂದ ನಡೆಸುತ್ತಿದ್ದೇನೆ. ಇದಕ್ಕಾಗಿ ಯಾರೂ ನನಗೆ ಬಾಡಿಗೆ ಮನೆ ಕೊಡುತ್ತಿರಲಿಲ್ಲ. ಈಗಿರುವ ಮನೆಗೆ ತಿಂಗಳಿಗೆ 10,000 ಬಾಡಿಗೆ. HIV ಸೋಂಕಿತ ಮಕ್ಕಳೆಂದು ಮನೆ ಮಾಲಿಕನಿಗೂ ತಿಳಿದಿಲ್ಲಾ. ಗೊತ್ತಾದರೆ ಮನೆ ಖಾಲಿ ಮಾಡಿಸಬಹುದು.ಈ ಪರಿಸರದ ಯಾರಿಗೂ ಇದು HIV Protection care ಎಂದು ತಿಳಿದಿಲ್ಲ. ಈ ಸಂಗತಿಯನ್ನು ಗೌಪ್ಯವಾಗಿಟಿದ್ದೇನೆ . ಏಕೆಂದರೆ ಮನೆ ಬಾಡಿಗೆಯ ಭಯ. 14 ಮಕ್ಕಳೂ ಶಾಲೆಗೇ ಹೊಗುತ್ತಿದ್ದಾರೆ. ಈ ವಿಷಯ ಅವರ ಸಹಪಾಟಿಳಿಗೆ ತಿಳಿದರೆ, ಮಕ್ಕಳನ್ನು ನಿಂದಿಸ ಬಹುದು. ಆದ್ರೆ ಶಾಲೆಯ ಆಡಳಿತ ವರ್ಗಕ್ಕೆ ತಿಳಿದಿದೆ. ಪರಿಸರದವರು ಕನಿಕರದ ದ್ರಿಷ್ಟಿ ಬೀರಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಬಹುದು ಎಂಬ ಕಾರಣಕ್ಕಾಗಿ ಬಹಳ ಜಾಗ್ರತೆಯಿಂದ ನಡೆಸಿಕೊಂಡು ಬರುತ್ತಿದ್ದೇನೆ. ಕೆಲವರ ಕೊಂಕು ನುಡಿ ಗಳು "ನೀವೊಬ್ಬ ಮುಸ್ಲಿಂ ಆಗಿ ಕೇವಲ HIV ಪೀಡಿತ ಹಿಂದೂ ಮಕ್ಕಳನ್ನು ಮಾತ್ರ ಯಾಕೆ ಆರೈಕೆ ಮಾಡಿ ಕೊಂಡಿರುವುದು? ನಿಮ್ಮ ಸಮುದಾಯದಲ್ಲಿ ಇಂತಹ ಮಕ್ಕಳಿಲ್ಲವೆ" ಎಂದು ಸಂಕುಚಿತ ಮನಸ್ಸಿನ ಜನರ ಮಾತಿನ ಬಾಣಗಳು ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುತ್ತವೆ. ಇಂತಹ ಸಂಕುಚಿತ ಮನಸ್ಸಿನವರಿಗೆ ನನ್ನ ಉತ್ತರ- ನಮ್ಮ ಕೇಂದ್ರದಲ್ಲಿ ಜಾತಿ, ಧರ್ಮಗಳ ಭೇದವಿಲ್ಲ. ಮಕ್ಕಳು ಸೃಷ್ಟಿಕರ್ತನ ಹೂದೋಟದ ಹೂಗಳು. ಅವಕ್ಕೆ ಜಾತಿಯ ಲೇಪ ಹಚ್ಚ ಬೇಡಿ. ಈ ಮಕ್ಕಳನ್ನು ಶಾಲಾ ರಜಾ ದಿನಗಳಲ್ಲಿ ಅವರ ಬಡ ಹೆತ್ತವರು ಕರ್ಕೊಂಡು ಹೊಗ್ತಾರೆ. ರಜೆ ಮುಗಿದ ನಂತರ ಬಂದು ಬಿಟ್ಟು ಹೊಗ್ತಾರೆ. ಆರೈಕೆಗಾಗಿ ಒಬ್ರನ್ನು ನೇಮಿಸಿದ್ದೆ. ಆದ್ರೆ ಕಾನೂನಿನ ಪ್ರಕಾರ ಎರಡು ಜನ ಅಗತ್ಯವಾಗಿರುವುದರಿಂದ, ವಿಧಿ ಇಲ್ಲದೆ ಇನ್ನೊಬ್ರನ್ನು ಸೇರಿಸಿಕೊಳ್ಳ ಬೇಕಾಯಿತು.

ಕಳೆದ 3 ವರ್ಷಗಳಿಂದ SNEHA DEEP ಎಂಬ Protection Care ಆರ್ಥಿಕ ಅಡಚಣೆಯೊಂದಿಗೆ ನಡೆಸುತ್ತಿದ್ದೇನೆ. ಕೆಲವು ಮಾಧ್ಯಮದವರು ಸಂದರ್ಶನಕ್ಕೆ ಕರೆ ಮಾಡುತ್ತಿದ್ದಾರೆ. ಆದರೆ ಈ ವಿಷಯ ಬಹಿರಂಗವಾದರೆ ಈಗ ಇರುವ ಮನೆ ಖಾಲಿ ಮಾಡಬೇಕಾಗ ಬಹುದು ಎಂಬ ಭಯದಿಂದ ನಿರಾಕರಿಸುತ್ತಿದ್ದೇನೆ.ತಿಂಗಳಿಗೆ 50 ರಿಂದ 60 ಸಾವಿರ ಖರ್ಚಾಗುತ್ತದೆ." ಎಂದು ಗದ್ಗದಿತವಾಗಿ ಹೇಳುವಾಗ, ಅವರ ಕಂಗಳು ತೇವವಾಗಿದ್ದವು.
ಅವರ ತೇವವಾದ ಕಣ್ಣುಗಳನ್ನು ದಿಟ್ಟಿಸಲಾಗದೆ ನೆಲಕ್ಕೆ ದ್ರಷ್ಟಿನೆಟ್ಟು ಭಾರವಾದ ಮನಸ್ಸಿನೊಂದಿಗೆ ಆಲಿಸುತ್ತಿದ್ದೆ.

ನನ್ನ ಶಕ್ತಿಯನುಸಾರ 20 ಸಾವಿರ ರೂಪಾಯಿಗಳನ್ನು ನನ್ನ ಪತ್ನಿಯ ಮುಖಾoತರ ಅವರ ಕೈಗಿಟ್ಟು "ನನ್ನಿoದ ಸಾದ್ಯವಾದ ಕಿರು ಕಾಣಿಕೆ" ಎನ್ನುವಾಗ "ನಮಗಿದು ದೊಡ್ಡ ವಿಷಯ. ಸಾವಿರ, ಎರಡು ಸಾವಿರ ಕೂಡ ನಮಗೆ ದೊಡ್ಡ ವಿಷಯ" ಎಂದರು.

ಉಳಿದ ಮಕ್ಕಳು ಶಾಲೆಗೆ ಹೋಗಿರುವ ಕಾರಣ ಇನ್ನೊಮ್ಮೆ ಬರುವೆ ಎಂದು ಹೊರಡಲನುವಾದಾಗ ಅಲ್ಲಿನ ಆರೈಕೆಗಾರಳಲ್ಲಿ ಓರ್ವ ಮಹಿಳೆ "ಧನ್ಯವಾದ" ಹೇಳುವಾಗ, ಅವರ ಮಾತಿಗಿಂತ ಅವರ ಕಣ್ಣುಗಳು ನನ್ನ ಕಣ್ಣನ್ನು ತಗ್ಗಿಸುವಂತೆ ಮಾಡಿದವು. ನಾವು ಭಾರವಾದ ಹೆಜ್ಜೆಯೊಂದಿಂಗೆ ಅಲ್ಲಿಂದ ನಿರ್ಗಮಿಸಿದೆವು.

ಗೆಳೆಯರೇ....

ತಬಸ್ಸುಮ್ ಅವರ ಮಾತು ಕೇಳುವಾಗ ಎಂತಹ ಕಲ್ಲು ಹೃದಯಗಳೂ ಕರಗಿ ಹೋದೀತು.ತಮ್ಮದಲ್ಲದ ತಪ್ಪಿಗೆ ಸಮಾಜದಿಂದ ತಿರಸ್ಕ್ರತಗೊಮಡ 14 ಪುಟ್ಟ ಕಮದಮ್ಮಗಳಿಗೆ ಬಾಳು ಆಸರೆ ಕೊಡಲು ಒಬ್ಬಳು ಮುಸ್ಲಿಂ ಸಮುದಾಯದ ಹೆಣ್ಣುಮಗು ತೋರಿರುವ ದಿಟ್ಟತನ ಹೃದಯ ವೈಶಾಲ್ಯತೆಗೆ,ಕೈ ಜೋಡಿಸದಿದ್ದರೆ ನೆರವು ನೀಡದಿದ್ದರೆ ನಮಗೆ ನಮ್ಮೊಳಗಿರುವ ಮಾನವೀಯತೆಗೆ ಅಪಮಾನ. ಬೇಕು ಬೇಡದ್ದಕ್ಕೆಲ್ಲವೂ ವ್ಯಯಿಸುವ ನಾವು ತಬಸ್ಸುಮ್ ಳ ಮಹತ್ತರ ಧ್ಯೇಯಕ್ಕೆ ಒಂದು ದಿನದ ನೆರವು ನೀಡಲಾರೆವಾ? ದಯವಿಟ್ಟು ಬಾಯಿಮಾತಿನ ಕನಿಕರ ತೋರಿಸಿ ಕಣ್ಣುಮುಚ್ಚಿ ಕೂರದಿರಿ.ಅವರಿಗೆ ಬೇಕಾಗಿರುವುದು ಆರ್ಥಿಕ ಸಹಾಯದೊಂದಿಗಿನ ಸಾಂತ್ವಾನ.ಒಮ್ಮೆ ಸ್ನೇಹದೀಪ್ ಗೆ ಬೆಟಿ ಕೊಡಿ. ಆ 14 ಕಂದಮ್ಮಗಳು ಅರಳುವ ಮುನ್ನ ಬಾಡಿ ಹೋಗದಂತೆ ನೀರುಣಿಸುವ...!!! ಕೆಲವರ ವಿರೋಧದ ನಡುವೆಯೂ, ಈ ಸಮಾಜದೆದುರು ವಿಶಾಲ ವ್ರಕ್ಷದಂತೆ ಆ ಕಂದಮ್ಮಗಳಿಗೆ ನೆರಳಾಗಿರುವ ಆ ಧೀರ ಮಹಿಳೆಗೆ ಬೆನ್ನೆಲುಬಾಗಿ ನಿಲ್ಲೋಣ...!

(ಸೂಚನೆ: ನನ್ನ ಯಾವುದೇ ಲೇಖನದಲ್ಲಿ ಕೊಟ್ಟಂತಹ ಮೊತ್ತವನ್ನು ನಮೂದಿಸುತ್ತೆನೆ. ಅದಕ್ಕೆ ಅದರದೇ ಆದ ನಿಸ್ವಾರ್ಥ ಉದ್ದೇಶವಿದೆ. ಅದನ್ನು ಬಹಿರಂಗ ಪಡಿಸಲು ಇಚ್ಚಿಸುವುದಿಲ್ಲ.ನಾನೂ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ ಹೊರತು ಕೋಟ್ಯಾಧೀಶನಲ್ಲ.ಅಸಹಾಯಕರ ನೋವುಗಳಿಗೆ ಕಿವಿಯಾಗಬೇಕೆಂಬ ಅದಮ್ಯ ಉತ್ಸಾಹವನ್ನು ತಪ್ಪಾಗಿ ಅರ್ಥೈಸದಿರಿ.ವಿಶಾಲ ಮನೋಭಾವದೊಂದಿಗೆ ನೋಡ ಬೇಕಾಗಿ ವಿನಂತಿ)


ವಿಳಾಸ:
'Sneha Deep'
(Residential Program for Children)
Door No: 2/7/411
First Kottara Cross
Bejei, Kapokad Road
Manglore - 575004

Mobile: +91 9964024655

Bank details :-

Title: Sneha Deep, Kottara, Manglore.

Bank: Corporation bank, Poonja Arcade building, KS Rao road. Hampankatta, Manglore.

SB A/C # 012900101024473

IFSC code:
Corp0000129

ಇಂತಿ
ಅನಾಮಿಕ

#team #BlueWaves

www.facebook.com/BlueWavesPage

ಒಂದು ಮದುವೆಯ ಕಥೆ

ಇಸವಿ 2004ರ ಸಮಯ. ಯಾರ ರಗಳೆಯೂ, ಕಿರಿ ಕಿರಿಯ ಹಂಗೂ ಇಲ್ಲದೆ ಒಬ್ಬ ಅವಿವಾಹಿತ ಯುವಕನ ಖರ್ಚಿಗೆ ಬೇಕಾದಷ್ಟು ಸ್ವಲ್ಪ ಮಟ್ಟಿನ ಸಂಬಳದೊಂದಿಗೆ ಹಾಯಾಗಿದ್ದ ನನಗೆ 26ನೇ ವಯಸ್ಸಿನಲ್ಲಿ ಮದುವೆ ಎಂಬ ಬಂಧನದಲ್ಲಿ ಬಂಧಿಸಿದವರು ನನ್ನ ಗೆಳೆಯರಾದ ಯಾಸೀರ್ ಹಸನ್ ಮತ್ತು ಅವನ ಸೋದರ ತಮ್ಮ ಅಕ್ರಂ ಹಸನ್. ಸ್ವಲ್ಪ ಮಟ್ಟಿನ ಸಾಮಾಜಿಕ ಕಳಕಳಿ ಇರುವ ನಾನು ಏನಾದರು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಮದುವೆ ಮಾಡಿ ತೋರಿಸಿ ಇನ್ನೊಬ್ಬರಿಗೆ ಮಾದರಿಯಾಗಬೇಕೆಂಬ ಹಂಬಲವೂ ಇತ್ತು.

ಅದೊಂದು ದಿನ ಅಕ್ರಂ ಹಸನ್ನ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಾ ಇರುವಾಗ ಒಂದು ಸಂಜೆ ನಾವು ಮೂವರು ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಾ ಇದ್ದೆವು. ಹರಟೆಯ ಮಧ್ಯೆ "ಏನೋ ಮದುವೆಯ ವಯಸ್ಸಾಯಿತು ಆ ಬಗ್ಗೆ ಏನಾದರು ಯೋಚಿಸಿದ್ದೀಯಾ" ಎಂದು ತಮಾಷೆಯಾಗಿ ಕೇಳಿಯೇ ಬಿಟ್ಟ. ಯಾರಾದರು ಬಡ,ಒಳ್ಳೆಯ ಕುಟುಂಬದ ಗುಣವಂತ ಹುಡುಗಿ ಇದ್ರೆ ಹೇಳು... ಎಂದು ನಾನು ಕೂಡ ತಾಮಾಷೆಯಾಗಿಯೇ ಹೇಳಿದೆ. ಈ ತಮಾಷೆಯ ಮಾತು ಮುಂದೊಂದು ದಿನ ನನ್ನ ಜೀವನದ ದಿಕ್ಕನ್ನೆ ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ.ಈ ಮಾತು ನನ್ನ ಬಾಯಿಯಿಂದ ಹೊರಬರುವುದನ್ನೇ ಕಾಯುತ್ತಿದ್ದವನಂತೆ ನನ್ನ ಪಕ್ಕದ್ಮನೆಯಲ್ಲಿ ಒಬ್ಬಳು ಹುಡುಗಿ ಇದ್ದಾಳೆ, ಸುಂದರವಾಗಿದ್ದಾಳೆ ನಿನ್ನಷ್ಟೇ ಪ್ರಾಯವಾಗಿರಬಹುದು(ನಂತರ ತಿಳಿಯಿತು ನನಗಿಂತ 4 ವರ್ಷ ಹಿರಿಯವಳು ಎಂದು) ಬಾಲ್ಯದಲ್ಲಿ ನಾವಿಬ್ಬರೂ ಒಟ್ಟಿಗೆ ಬೆಳೆದದ್ದು. ಅವಳ ತಂಗಿಗೆ ಮದುವೆಯಾಗಿ 7 ವರ್ಷ ಕಳೆದಿದೆ ಕಾರಣ ಅವಳು 12ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಒಳ್ಳೆ ಗಂಡು ಸಿಕ್ಕಿದ್ದರಿಂದ ಅವಳಿಗೆ ಬೇಗ ಮದುವೆ ಮಾಡಿ ಕೊಟ್ಟಿದ್ದರು ಮನೆಯವರು. ತಂಗಿಗೆ ಮದುವೆಯಾಗಿದೆ ಆದರೆ ಅಕ್ಕನಿಗೆ ಇನ್ನೂ ಯಾಕೆ ಆಗಿಲ್ಲ ಎಂದು ನೋಡಲು ಬಂದ ಗಂಡುಗಳೆಲ್ಲ ಸಂಶಯಿಸಿ ಬೇಡ ಎಂದು ಬಿಟ್ಟು ಹೊಗುತ್ತಿದ್ದಾರೆ ಎಂದು ನನಗೆ ಮಾತನಾಡಲು ಅವಕಾಶವೇ ಕೊಡದೆ ಒಂದೇ ಮಾತಿನಲ್ಲಿ ಹೇಳಿ ಮುಗಿಸಿದ. ನೋಡು ಯಾಸೀರ್ ನೀನು ನನ್ನ ಗೆಳೆಯ, ನಾವಿಬ್ಬರೂ ಅಣ್ಣ ತಮ್ಮಂದಿರ ಹಾಗೆ.. ನೀನು ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಎರಡು ಪ್ರಶ್ನೆಗಳಿಗೆ ಉತ್ತರಿಸು ಎಂದೆ.

ಮೊದಲನೇ ಪ್ರಶ್ನೆ- ನಾನು ಕಪ್ಪಗಿನ ಮನುಷ್ಯ, ನೋಡಲು ಅಷ್ಟೇನೂ ಸುಂದರವಾಗಿಲ್ಲ ಆದರೂ ಅವಳು ನನ್ನನ್ನು ಗಂಡನಾಗಿ ಸ್ವೀಕರಿಸಲು ಸಾಧ್ಯವೇ?
ಎರಡನೇ ಪ್ರಶ್ನೆ - ನಮ್ಮ ಮದುವೆ ಆದರೆ ನನ್ನ ಕಷ್ಟಗಳಿಗೆ ಹೆಗಲು ಕೊಟ್ಟು ನಡೆಯುವಳು ಎಂಬ ಭರವಸೆ ನಿನಗಿದೆಯಾ?
ಹಾಗಾದರೆ ನಿನ್ನ ಮಾತಿನ ಮೇಲೆ ವಿಶ್ವಾಸವಿಟ್ಟು ನಾನು ಒಪ್ಪುತ್ತೇನೆ.. ನನಗೆ ಅವಳ ಅಂದ ಚೆಂದ, ವಯಸ್ಸು ಬಣ್ಣ ಎತ್ತರ ಯಾವುದೂ ಅಗತ್ಯವಿಲ್ಲ. ನನಗೆ ಬೇಕಾಗಿರುವುದು ಒಂದು ಒಳ್ಳೆಯ ಜೀವನ ಸಂಗಾತಿ ಎಂದು ನಾನೂ ಕೂಡಾ ಒಂದೇ ಉಸಿರಿನಲ್ಲಿ ಹೇಳಿದೆ. ಈ ಮಾತುಕತೆಯ ಮಧ್ಯೆ ನನಗರಿವಿಲ್ಲದೆ ಅವಳ ಒಂದು ಪೋಟೋ ತರಿಸಿ ನನ್ನ ಕೈಗಿಟ್ಟು ಆ ಹುಡುಗಿ ಬಗ್ಗೆ ನಾನು ಭರವಸೆ ಕೊಡುತ್ತೇನೆ ಎಂದು ಹೇಳಿದ. ಅಲ್ಲದೆ ಮರುದಿನವೇ ಹುಡುಗಿಯನ್ನು ನೋಡಲು ಹೋಗಲು ಒತ್ತಾಯಿಸಿದ. "ನಿನ್ನ ಭರವಸೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.. ಹಾಗಾಗಿ ಹೆಣ್ಣು ನೋಡುವ ಅವಶ್ಯಕತೆ ಇಲ್ಲಾ. ಹುಡುಗಿಯ ಮನೆಯವರಿಗೆ ಮದುವೆಯ ದಿನಾಂಕ ನಿಗದಿಪಡಿಸಲು ಹೇಳು.. ಎಂದು ನಾನು ಹೇಳಿದರೂ ಅದಕ್ಕವನು ಒಪ್ಪದೆ, ನೀನೊಮ್ಮೆ ನೋಡಿ ಒಪ್ಕೊಂಡ್ರೆ ಎಲ್ಲರಿಗೂ ಸಮಾಧಾನವಗುತ್ತೆ ಅಂದಾಗ, ಹೆಣ್ಣು ನೋಡಲು ನಾನು ಒಪ್ಪಿಕೊಂಡೆ.

ಮರುದಿನ ಹುಡುಗಿ ನೋಡಲು ಒಬ್ಬನೇ ಅವಳ ಮನೆಗೆ ಹೋದೆ. ಹುಡುಗಿ ನನಗೆ ಇಷ್ಟವಾದಳು, ಹಾಗೆಯೆ ನಾನೂ ಕೂಡಾ ಹುಡುಗಿಗೆ ಇಷ್ಟವಾದೆ. ಹುಡುಗಿ ಮನೆಯಿಂದ ಹೊರಗೆ ಬಂದವನೇ ತಾಯಿಗೆ ಪೋನ್ ಮಾಡಿ ವಿಷಯ ತಿಳಿಸಿದೆ "ಅಮ್ಮಾ ನಾನು ಒಂದು ಹುಡುಗಿಯನ್ನು ನೋಡಿದ್ದೇನೆ ಅವಳನ್ನೇ ಮದುವೆಯಾಗಬೇಕೆಂದಿದ್ದೇನೆ, ಅದಕ್ಕೆ ನಿನ್ನ ಅನುಮತಿ ಬೇಕಿತ್ತು". ನೀನು ನನ್ನ ಐದು ಗಂಡುಮಕ್ಕಳಲ್ಲಿ ಮೊದಲನೆಯವ, ನಿನಗೆ ತಂಗಿಯಂದಿರೂ ಇಲ್ಲಾ, ಹುಡುಗಿ ಕೂಡಾ ನೋಡಿಯಾಗಿದೆ ಹಾಗಾಗಿ ನಿನ್ನಿಷ್ಟವೇ ನನ್ನಿಷ್ಟ" ಎಂದಳು. "ಹಾಗದರೆ ನನ್ನ ಗೆಳೆಯನ ಬಾಡಿಗೆ ಕಾರು ಮನೆಗೆ ಕಳುಹಿಸಿದ್ದೇನೆ.. ನಿನ್ನ ಸೊಸೆಯಾಗುವವಳನ್ನು ನೋಡಲು ಬೇಗ ಬಾ" ಎಂದೆ.ಅಮ್ಮನೂ ಬಂದು ಹುಡುಗಿಯನ್ನು ನೋಡಿ ಇಷ್ಟಪಟ್ಟಳು.

ನಂತರ ಗೆಳೆಯ ಮುಂದೇನು ಅಂತ ಕೇಳಿದ. "ನೋಡು ಯಾಸೀರ್ ಹುಡುಗಿ ನನಗೂ ನನ್ನ ಮನೆಯವರಿಗೂ ಒಪ್ಪಿಗೆ ಆದರೆ ನಮ್ಮ ತಮಾಷೆ ಇಲ್ಲಿಯವರೆಗೆ ಬಂದು ಮುಟ್ಟುತ್ತದೆ ಎಂದು ತಿಳಿದಿರಲಿಲ್ಲ.ಮುಖ್ಯವಾದ ವಿಚಾರವೇನೆಂದರೆ ನನ್ನಲ್ಲಿರುವುದು ಬರೀ 10 ರೂ ನೋಟು ಮಾತ್ರ ಬೇರೆನೂ ನನ್ನಲ್ಲಿಲ್ಲ.ಖರ್ಚಿಗೇನೂ ಮಾಡುವುದು ಹೇಳು... ವರದಕ್ಷಿಣೆ ನನ್ನ ಆತ್ಮ ಸಾಕ್ಷಿಗೆ ಕಳಂಕ ಹಾಗಾಗಿ ನೀನೆ ಏನಾದರು ಉಪಾಯ ಹೇಳು" ಎಂದೆ. "ಈಗ ಮನೆಗೆ ಹೋಗು ನಾಳೆ ಬೆಳಗ್ಗೆ ನನ್ನ ಮನೆಗೆ ಬಾ ಆರಾಮವಾಗಿ ಕುಲಿತುಕೊಂಡು ಮಾತನಾಡುವ" ಎಂದು ಬೆನ್ನು ತಟ್ಟಿ ನನ್ನನ್ನು ಬೀಳ್ಕೊಟ್ಟ , ನಾನು ಅದೇ ಕಾರಿನಲ್ಲಿ ಮನೆಗೆ ತೆರಲಿದೆ.

ಹಾದಿಯಲ್ಲಿ ನನ್ನ ಮಾವ ನನ್ನನ್ನು ದಾರಿಯುದ್ದಕ್ಕೂ 1 ಲಕ್ಷ ಹಣ ಮತ್ತು 20 ಪವನ್ ಬಂಗಾರ ವರದಕ್ಷಿಣೆ ಸ್ವೀಕರಿಸುವಂತೆ ಒತ್ತಾಯಿಸುತ್ತಿದ್ದರು. "ಮಾವ ವರದಕ್ಷಿಣೆ ಪಡೆದು ನಾನು ನನ್ನನ್ನು ಆ ಹುಡುಗಿ ಕಡೆಯವರಿಗೆ ಮಾರಲ್ಪಡಲು ಇಚ್ಚಿಸುವುದಿಲ್ಲ ನನ್ನ ಬಳಿ ಹಣ ಇಲ್ಲದೇ ಇರಬಹುದು ಆದರೆ ಅಲ್ಲಾಹನಲ್ಲಿ ಭರವಸೆ ಇದೆ ನಿಮಗಿಷ್ಟವಿದ್ದರೆ ಬನ್ನಿ ಇಲ್ಲಾಂದ್ರೆ ಸುಮ್ನಿರಿ ಎಂದೆ" ಕೊನೆಗೆ ಸ್ವಲ್ಪ ಏರು ಧ್ವನಿಯಲ್ಲೇ ಉತ್ತರಿಸಿದೆ. ಅಷ್ಟರವರೆಗೆ ಮಾವನಲ್ಲಿ ಮುಖ ಕೊಟ್ಟು ಮಾತನಾಡಲೂ ಹೆದರುತ್ತಿದ್ದ ನಾನು ಅವತ್ತು ಆ ರೀತಿ ಉತ್ತರ ಕೊಟ್ಟದ್ದು ಈಗಲೂ ನನ್ನಿಂದ ನಂಬಲಾಗುತ್ತಿಲ್ಲ.

ಮರುದಿನ ಯಾಸೀರ್ ನನ್ನು ಭೇಟಿಯಾದೆ. ನನ್ನ ಗೆಳೆಯರೊಡನೆ ಡೊನೇಷನ್ ಕೇಳಿ 20 ಸಾವಿರ ರೂಪಾಯಿ ಜಮೆಯಾಗಿದೆ, ಇದರಿಂದಲೇ ಸ್ವಲ್ಪ ಅಡ್ಜೆಸ್ಟ್ ಮಾಡ್ಕೋ ಎಂದ. ಸಂತೋಷದಿಂದ ಸ್ವೀಕರಿಸಿ ನಾಳೆಗೆ ಮದುವೆ ದಿನಾಂಕ ನಿಗದಿ ಮಾಡುವಾ ಎಂದೆ.

ಚಹಾ ಪಾನೀಯದೊಂದಿಗೆ ನಿಶ್ಚಿತಾರ್ಥವೂ ಆಯಿತು 15 ದಿನಗಳೊಳಗೆ ಮದುವೆಯೂ ನಿಗದಿಯಾಯಿತು. ಈ ವಿಷಯ ಕೇಳಿ ಊರಿನವರು,ಗೆಳೆಯರು ಆಶ್ಚರ್ಯಚಕಿತರಾಗಿ ನನ್ನನ್ನೇ ನೋಡುತ್ತಿದ್ದರು. ಕೆಲವರು ವ್ಯಂಗ್ಯವಾಗಿ ಹೇಳಿಯೇ ಬಿಟ್ಟರು "ನೀನು ಹೇಳಿರುತ್ತಿದ್ದರೆ ಕನಿಷ್ಠ 2 ರಿಂದ 3 ಲಕ್ಷ ಮತ್ತು 25 ರಿಂದ 35 ಪವನ್ ಚಿನ್ನ ಸಿಗುವ ಹುಡುಗಿಯನ್ನು ತೋರಿಸುತ್ತಿದ್ದೆವು". ನಿನ್ನ ಗೆಳೆಯ ಕೊಟ್ಟ ಕೇವಲ 20 ಸಾವಿರದಲ್ಲಿ ನೀನು ಹೇಗೆ ಮದುವೆಯಾಗಿತ್ತೀಯಾ.. ? ಅದು ಸಾಧ್ಯವೇ ಇಲ್ಲಾ ಎಂದು. ಇಂತಹ ಕುಹುಕಗಳು ನನಗೆ ಗಜ ಬಲವನ್ನೇ ಕೊಟ್ಟಿತು. ನಾನು ಇನ್ನಷ್ಟು ಬಲಿಷ್ಠನಾದೆ. ನನ್ನ ತಾಯಿ ಕಡ್ಡಾಯ ಮಹರ್ ಗಾಗಿ ಅವರ ಕೈಯಲ್ಲಿದ್ದಂತಹ ಒಂದೂವರೆ ಪವನ್ ಚಿನ್ನದ ಸರ ನನ್ನ ಕೈಗಿಟ್ಟರು ಹಾಗೆನೆ ಬಡ್ಡಿ ಮಾರ್ವಾಡಿಯಿಂದ 15 ಸಾವಿರ ಸಾಲನೂ ತೆಗೆದು ಕೊಟ್ಟರು. ಈ ಎಲ್ಲಾ ಹಣದಿದ ಶಾಪಿಂಗ್ ಗೆ ಹೋದೆವು. ಮೊದಲು ಉಡುಪಿಯ ನನ್ನ ಗೆಳೆಯನ ಶೂ ಮಹಲ್ ಗೆ, ಅಲ್ಲಿ ನನಗೆ ತಂದೆ ತಾಯಿ ಮತ್ತು ತಮ್ಮಂದಿರಿಗೆ ಶೂ ಖರೀದಿಸಿ 3200 ಬಿಲ್ ಆಯಿತು. ನಿನ್ನ ಮದುವೆಯ ವಿಷಯ ತಿಳಿದು ತುಂಬಾ ಸಂತೋಷವಾಯಿತು ದೇವರು ನಿನ್ನನ್ನು ಒಳ್ಳೆಯದು ಮಾಡಲಿ ಎಂದು ಕೇವಲ 800 ರೂಪಾಯಿಯಷ್ಟೇ ಪಡೆದುಕೊಂಡ ಸಾಧೀಕ್ ಭಾಯಿ, ಜೊತೆಗೆ ಮದುಮಗಳಿಗೆ ಬೆಲೆಬಾಳುವ ಚಪ್ಪಲಿಯೂ ಉಚಿತವಾಗಿ ನೀಡಿದರು. ಅಲ್ಲಿಂದ ಇನ್ನೋರ್ವ ಗೆಳೆಯ ಪಯಾಝ್ ನ ಬಟ್ಟೆಯಂಗಡಿಗೆ ಹೋದೆ. ಅಲ್ಲಿ ನನಗೆ 2 ಜೊತೆ ಡ್ರೆಸ್ ಮತ್ತು ಮದುಮಗಳಿಗೆ ಒಂದು ಜೊತೆ ಚೀಪ್ ಆಂಡ್ ಬೆಸ್ಟ್ ಬಟ್ಟೆ ಖರೀದಿಸಿದೆ. ಅವನು ನನಗೆ ನನ್ನ ಅಸಲು ಹಣ ಮಾತ್ರ ಸಾಕು ಲಾಭಾಂಶ ಬೇಡ ಎಂದು ಬಹಳ ಕಡಿಮೆ ಹಣ ಪಡೆದ(ಮೊತ್ತ ಎಷ್ಟೆಂದು ಈಗ ನೆನಪಿಲ್ಲ).
ನಮ್ಮ ಊರಿನ ಎಚ್.ಎಮ್.ಟಿ ಬಸ್ ನ ಮಾಲಕರಾದ ಖಲೀಲ್ ಸಾಹೇಬರು ನನ್ನ ಮದುವೆಯ ವಿಷಯ ತಿಳಿದು ಸ್ವತಃ ತಾನಾಗಿ ಬಂದು "ನಿನ್ನ ಮದುವೆಗೆ ನನ್ನ ಬುಸ್ ಉಚಿತವಾಗಿ ತೆಗೋ ಕೇವಲ 2000 ರೂಪಾಯಿಯ ಡೀಸೆಲ್ ಹಾಕಿದರೆ ಸಾಕು.ಸಮಯ ಹೇಳು ಟ್ರಿಪ್ ಕಟ್ ಮಾಡಿ ಕಳುಹಿಸುವೆ, ಡ್ರೈವರ್ ಮತ್ತು ಕಂಡೆಕ್ಟರ್ ಸಂಬಳ ನಾನೇ ಕೊಡುತ್ತೇನೆ ಎಂದರು.

ನನ್ನ ಬಹಳ ಹತ್ತಿರದ 7-8 ಮನೆಗೆ ಮಾತ್ರ ಹೋಗಿ ಮೌಖಿಕ ಆಮಂತ್ರಣ ನೀಡಿದೆ. ನನ್ನ ಗೆಳೆಯರ ಸಂಖ್ಯೆ ಬಹು ದೊಡ್ಡದು ಹಾಗಾಗಿ ಯಾರನ್ನೂ ಆಮಂತ್ರಿಸಲಿಲ್ಲ ಕಾರಣ ಹೆಣ್ಣಿನ ಕಡೆಯವರಿಗೆ ಕಷ್ಟ ಆಗಬಾರದೆಂಬ ಉದ್ದೇಶದಿಂದ. ನನ್ನ ನಿಖಾ 31 ಮೇ 2004 ಸಂಜೆ 4 ಗಂಟೆಗೆಂದು ನಿಗದಿಯಾಗಿತ್ತು. ಆದ್ದರಿಂದ ನನ್ನ ಮದುವೆಯ ದಿವಸ ನನ್ನೂರಿನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದೆ.1:30ಕ್ಕೆ ಸೆಮಿ ಪೈನಲ್ ಪಂದ್ಯ ಸೋತು ಬಂದೆವು. ಇನ್ನು ಮದುವೆಯ ದಿನವೇ ಕ್ರಿಕೆಟ್ ಆಡಲು ಹೋದ ವಿಚಾರ ತಾಯಿಗೆ ತಿಳಿದರೆ ಪಜೀತಿ ಎಂದು ಹಸಿವು ತಾಳಲಾರದೆ ತುಂಬಾ ಆತ್ಮೀಯರಾದ ನನ್ನ ನೆರೆಮನೆಯವರು, ಅವರ ಮುಂದಿನ ದ್ವಾರದಲ್ಲಿ ಬೀಡಿ ಕಟ್ಟುತ್ತಿದ್ದುದನ್ನು ನೋಡಿ ಇದೇ ಅವಕಾಶವೆಂದು ಅವರ ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ಗಂಜಿ ಮತ್ತು ಬಂಗುಡೆ ಪ್ರೈ ಕದ್ದು ತಿಂದು ಅವರ ಮುಂಬಾಗಿಲಲ್ಲೆ ಹೊರಗೆ ಬಂದೆ. ಅದಕ್ಕೆ ಆ ಹೆಂಗಸು ಏನೋ ಹಿಂಬಾಗಿಲಿನಿಂದ ಏಕೋ ಬಂದೆ ನಿನ್ನ ಮದ್ವೆ ಅಲ್ವೇನೊ ಇವತ್ತು ಗಂಟೆ ಈಗಲೇ ೨:೦೦ ಆಯಿತು ಎಂದು ಪ್ರಶ್ನಿಸಲಾರಂಭಿಸಿದರು, "ಹೌದು ಇನ್ನು 2 ಗಂಟೆಯೊಳಗೆ ನನ್ನ ನಿಖಾ.ಹಸಿವು ತಾಳಲಾರದೆ ನಿಮ್ಮ ಅಡುಗೆ ಮನೆಯಲ್ಲಿದ್ದ ಗಂಜಿ ಮತ್ತು ಬಂಗುಡೆ ಪ್ರೈ ಕದ್ದು ತಿಂದೆ ದಯವಿಟ್ಟು ಕ್ಷಮಿಸಿ ಈ ಹೊತ್ತಿನಲ್ಲಿ ತಾಯಿಯ ಹತ್ತಿರ ಅನ್ನ ಹಾಕಲು ಹೇಳುವಂಗಿಲ್ಲ" ಅಂತ ನಾನು ಹಾಸ್ಯಭರಿತವಾಗಿ ಹೇಳಿದೆ. ಅಲ್ಲಿಂದ ಮನೆಗೆ ಬಂದವನೇ ಮನೆಯನ್ನೊಮ್ಮೆ ಸೂಕ್ಷ್ಮವಾಗಿ ದಿಟ್ಟಿಸಿದೆ, ನನ್ನ ಮನೆ ಒಂದು "ಮದುವೆ ಮನೆ" ಅಂತ ಯಾರೂ ಹೇಳಲು ಸಾದ್ಯವಿಲ್ಲದಂತಿತ್ತು. ನನ್ನ ತಾಯಿ ತಂದೆ ತಮ್ಮಂದಿರು ನಿಖಾಹ್ ಗೆ ಹೋಗಲು ರೆಡಿಯಾಗುತ್ತಿದ್ದರು. ಮನೆಯಲ್ಲಿ ಕೇವಲ ಲೆಕ್ಕದ 7 ಮಂದಿ ಸಂಬಂದಿಕರು ಮದುವೆಗೆ ಬಂದಿದ್ದರು. ನಾನು ಬಾಡಿಗೆಯ್ ಸೂಟ್ ಧರಿಸಿ ರೆಡಿಯಾದೆ. ಮದುವೆಗೆ ಹೋಗಲು ಬಸ್ಸು ಮತ್ತು ನನ್ನ ಗೆಳೆಯನು ಓಮ್ನಿ ಬಂದು ನಿಂತಿತ್ತು. ಬಸ್ಸಲ್ಲಿ ಎಲ್ಲರೂ ಹತ್ತಿ ಕುಳಿತರು ಮಕ್ಕಳಿಂದ ಹಿಡಿದು ವಯಸ್ಸಾದವರು ಸೇರಿ ಒಟ್ಟು 16ರಷ್ಟು ಮಂದಿಯಿದ್ದರು. ಹೊರಡು ಮಗನೆ 16 ಜನರಲ್ಲ 10 ಮಂದಿ ಇದ್ದರೂ ಸಾಕು ನಿಖಾಹ್ ಗೆ ತಡ ಮಾಡುವುದು ಬೇಡ ಅಂತ ತಾಯಿ ಅವಸರದಿಂದಲೇ ಬಸ್ಸು ಹತ್ತಿದರು .

ನನ್ನ ಮನೆಯಿಂದ ಪೇಟೆಗೆ ಒಂದು ಕಿಲೋಮೀಟರ್ ದೂರ ಇದೆ. ನಾನು ಓಮ್ನಿ ಏರಿ ಪೇಟೆಗೆ ಹೋಗಿ ಬಸ್ ಬರುವುದನ್ನೇ ಕಾಯುತ್ತಿದ್ದೆ. ಆ ಸಮಯದಲ್ಲಿ ಮೊಬೈಲ್ ಕೂಡ ಅಪರೂಪ. ಅರ್ಧ ಗಂಟೆ ಕಳೆದರೂ ಬಸ್ ಬಾರದ್ದನ್ನು ಕಂಡು ನೋಡಿ ಬರುವಾ ಎಂದು ವಾಪಸ್ಸಾಗುವ ಹೊತ್ತಿಗೆ ದೂರದಿಂದ ಬಸ್ ಓವರ್ ಲೋಡ್ ಆಗಿ ವಾಲಿಕೊಂಡು ಬರುತ್ತಿತ್ತು. ವಿಷಯ ಏನೆಂದರೆ "ಏ ಅವನ ಮದ್ವೆ ಅಲ್ಲವಾ ಆಮಂತ್ರಣ ಇಲ್ಲದಿದ್ದರೂ ಪರವಾಗಿಲ್ಲ ನಾವೂ ಬರುತ್ತೇವೆಂದು ಕ್ರಿಕೆಟ್ ಆಡುತ್ತಿದ್ದ ಹುಡುಗರು ಬಸ್ಸೇರಿ ಬಂದಿದ್ದರು. ಬಸ್ ನಲ್ಲಿ ಜಾಗವಿಲ್ಲದ ಕಾರಣ 16 ಬೈಕಿನಲ್ಲಿ 32 ಜನ, ಬೈಕ್ ಸಿಗದ 15ರಿಂದ 20 ಜನರು ಟ್ಯಾಕ್ಸಿ ಮಾಡಿ ಬಂದಿದ್ದರು. ಮಸೀದಿಯಲ್ಲಿ ನಿಖಾ ಕ್ಲಪ್ತ ಸಮಯಕ್ಕೆ ಮುಗಿಯಿತು. ಎಲ್ಲರಿಗೂ ಲಿಂಬೆ ಹಣ್ಣಿನ ಸರ್ಬತ್ತು ಮತ್ತು ಲಡ್ಡು ವಿತರಿಸಲಾಯಿತು. ಮಸೀದಿಯಿಂದ ಮದು ಮಗಳ ಮನೆಗೆ ಹೋಗುವಾಗ ಇಡೀ ಊರೇ ಆಶ್ಚರ್ಯಚಕಿತವಾಗಿ ನೋಡುತ್ತಿತ್ತು ಏಕೆಂದರೆ ಅಲ್ಲಿ ನನ್ನ ಕಡೆಯಿಂದ ಸುಮಾರು 150 ಜನ ಬಂದಿದ್ದರು, 150 ರಲ್ಲಿ 7 ರಿಂದ 8 ಜನ ಮಾತ್ರ ಮಧ್ಯ ವಯಸ್ಕರು,ಬಾಕಿಯೆಲ್ಲ ನನ್ನ ಪ್ರಾಯದ ಮತ್ತು ನನಗಿಂತ ಸಣ್ಣ ಪ್ರಾಯದ ಹುಡುಗರು. ಅಲ್ಲಿ ಒಬ್ಬರು ಕೇಳಿಯೇ ಬಿಟ್ಟರು ನಿಮ್ಮ ಊರಿನಲ್ಲಿ ವಯಸ್ಸಾದವರು ಯಾರೂ ಇಲ್ವೆ..? ಎಲ್ಲಾ ಯುವಕರೇ ಇರುವುದಾ... ಎಂದು. ನಾನು ನಸು ನಕ್ಕು ಮುಂದೆ ಸಾಗಿದೆ. ಮಳೆಯ ಕಾರಣ ಇನ್ನಷ್ಟು ಗೆಳೆಯರು ಬರಲಾಗಲಿಲ್ಲ ಎಂದು ಬೇಸರದಿಂದ ಸಂದೇಶ ಕಲಿಸಿದ್ದರು.

ಮರುದಿನ ವಲಿಮಾ ಕಾರ್ಯಕ್ರಮ. ನನ್ನ ಹತ್ತಿರದ ಕೆಲವೇ ಕೆಲವು ಸಂಬಂದಿಕರನ್ನು ಆಹ್ವಾನಿಸಿದ್ದೆ. ನೆರೆಮನೆಯಿಂದ ಒಬ್ಬರನ್ನು ಹಾಗು ಅತೀ ಆತ್ಮೀಯ ಸ್ನೇಹಿತರನ್ನು ಕರೆದಿದ್ದೆ. ಒಟ್ಟಾಗಿ ಸುಮಾರು 70 ರಿಂದ 80 ಜನರಿದ್ದರು. ಅಕ್ಕಪಕ್ಕದ ಮನೆಯಿಂದ ಕುರ್ಚಿ ಟೇಬಲನ್ನು ಕೇಳಿ ತಂದಿದ್ದೆ. ನನ್ನ ಬೆಡ್ ರೂಮ್ಗೆ ನೆರೆಮನೆಯವರ ಪಲ್ಲಂಗವನ್ನು ಒಂದು ವಾರದ ಮಟ್ಟಿಗೆ ಕೇಳಿ ತಂದಿದ್ದೆ. ಪಾತ್ರೆ ಪಗಡೆಯ ಇಬ್ರಾಹಿಂ ಸಾಹೇಬರೂ ಕೂಡ ಪಾತ್ರೆಗಳಲ್ಲಿ ಭಾರೀ ಕಡಿತ ಮಾಡಿದ್ದರು. ಊಟ ಉಪಾಹಾರಗಳನ್ನು ತಯಾರಿಸಿದ ಪಕ್ವಾನ್ ಆದಂ ಸಾಹೇಬರೂ ಕೂಡ 2500 ರೂಪಾಯಿಯ ಬದಲಿಗೆ ಕೇವಲ 500 ರೂಪಾಯಿಯನ್ನು ತನ್ನ ಕೆಲಸಕ್ಕೆ ಪಡೆದಿದ್ದರು. ಒಟ್ಟಾರೆಯಾಗಿ ನನ್ನ ಈ ನಿರ್ಧಾರಕ್ಕೆ ಎಲ್ಲಾ ಸಹ್ರದಯಿಗಳು ಕೈ ಜೋಡಿಸಿದ್ದರು.

ಇನ್ನೊಂದು ಮುಖ್ಯವಾದ ವಿಚಾರ ಅವತ್ತು ಹುಡುಗಿ ನೋಡುವ ಮೊದಲು ಯಾಸೀರ್ ನನ್ನ ಕೈಗೆ ಹುಡುಗಿಯ ಪೋಟೊ ಇರುವ ಕವರ್ ಕೊಟ್ಟಾಗ ಆ ಕವರನ್ನು ತೆರೆಯದೆ ಅದೇ ರೀತಿ ಆಫೀಸಿನ ಪುಸ್ತಕಗಳ ಮಧ್ಯೆ ಬಚ್ಚಿಟ್ಟಿದ್ದೆ, ಪೋಟೊ ನೋಡಿ ಮನಸ್ಸು ಬದಲಾಗಿ ನನ್ನ ಆತ್ಮೀಯ ಗೆಳೆಯನಿಗೆ ಕೊಟ್ಟ ಮಾತು ತಪ್ಪಬಾರದೆಂಬ ಉದ್ದೇಶದಿಂದ. ಆ ಕವರನ್ನು ನಾನು ಮತ್ತು ನನ್ನ ಹೆಂಡತಿ ಮದುವೆಯಾದ 15 ದಿವಸಗಳ ನಂತರ ಆಫೀಸ್ ಗೆ ಹೋಗಿ ಒಟ್ಟಿಗೆ ತೆರೆದು ನೋಡಿದೆವು(ನಂಬಿದ್ರೆ ನಂಬಿ ಬಿಟ್ರೆ ಬಿಡಿ) ತದ ನಂತರ ನನ್ನನ್ನು ನೋಡಿ ನನ್ನ ನಾಲ್ಕು ಗೆಳೆಯರೂ ಸಹ ಇದೇ ರೀತಿಯಲ್ಲಿ ಮದುವೆಯಾಗುವುದಾಗಿ ಮಾತು ಕೊಟ್ಟು, ನುಡಿದಂತೆ ನಡೆದುಕೊಂಡರು. ನನ್ನ ಮದುವೆಗೆ ಆದ ಒಟ್ಟು ಖರ್ಚು ಕೇವಲ 38000 ಮಾತ್ರ.

"ಸೃಷ್ಟಿಕರ್ತನಿಗೆ ಸರ್ವ ಸ್ತೋತ್ರಗಳು"

ಇಂತೀ
ಅನಾಮಿಕ


www.facebook.com/BlueWavesPage
 

ದೀನಾರ್

****** ಅವಕಾಶಗಳು ಕಾಯುತಿವೆ ******

ಬಡವನಾಗಿ ಹುಟ್ಟಿದ್ದು ನಿನ್ನ ತಪ್ಪಲ್ಲ ಆದರೆ ಬಡವನಾಗಿ ಸತ್ತರೆ ಅದು ಖಂಡಿತಾ ನಿನ್ನದೇ ತಪ್ಪು.. ಈ ಮಾತನ್ನು ಹೇಳಿದವರು ಜಗತ್ತಿನ ಅತಿದೊಡ್ಡ ಶ್ರೀಮಂತ ಬಿಲ್ ಗೆಟ್ಸ್ ಅವರು.

ನಾವು ಚಿಕ್ಕಂದಿನಿಂದಲೇ ಹೆಳುತ್ತಾ ಬರುವ ಮಾತೊಂದಿದೆ ನಮ್ಮ ಅಪ್ಪ ಶ್ರೀಮಂತನಾಗಿದ್ದರೆ ನಂಗೆ ಈ ಸ್ಥಿತಿ ಬರುತ್ತಿರಲಿಲ್ಲ ಅಂತ..ಕೆಲವೊಮ್ಮೆ ನೆರೆಮನೆಯ ಶ್ರೀಮಂತನ ನೋಡಿ ಮನದಲ್ಲೇ ಹೇಳುದಿದೆ ಶ್..... ನಾನು ಅವರ ಮಗನಾಗಿ ಹುಟ್ಟಿದ್ದರೆ...!! ದಾರಿಯಲ್ಲಿ ಹೊಗುವಾಗ ಊರಿನ ಶ್ರೀಮಂತ ತನ್ನ ಬೆನ್ಸ್ ಕಾರಲ್ಲಿ ನಮ್ಮ ದಾಟಿ ಹೊದಾಗ, ಕಾಲೇಜಿನಲ್ಲಿ ತನ್ನ ಸಹಪಾಠಿ ದುಬಾರಿ ಬೈಕಲ್ಲಿ style ಆಗಿ ಬಂದು ಹೀರೊ ಪೋಸು ನೀಡಿದಾಗ, ಹೀಗೆ ಹಲವಾರು ಕಡೆ ನಾವು ಯೋಚಿಸೂದು ತಂದೆ ಶ್ರೀಮಂತನಾಗಿದ್ದರೆ ? ಇನ್ನು ಸ್ವಲ್ಪ ವಾಸ್ತವತೆಗೆ ಬರೊನ ಇಂದು ನಾವು ಕೇಳಿದ ಇದೇ ಮಾತನ್ನು ನಮ್ಮ ಮುಖ ನೋಡಿ ನಾಳೆ ನಮ್ಮ ಮಕ್ಕಳು ಕೇಳಿದರೆ..? ನಾವು ಏನಂತ ಉತ್ತರ ನೀಡುದು...?

ನಿಜವಾಗಿ ಯೋಚಿಸಿದರೆ ಎಲ್ಲರಿಗೂ ಶ್ರೀಮಂತನಾಗಿ ಬದುಕಲು ಆಸೆ ಇದ್ದೇ ಇರುತ್ತವೆ ಹಾಗಂತ ತಂದೆ,ಅಜ್ಜ ಮಾಡಿದ ಆಸ್ತಿಯ ಇಟ್ಟುಕೊಂಡು ಶ್ರೀಮಂತಿಕೆ ಮೆರೆಯುದರಲ್ಲಿ ಅರ್ಥವಿಲ್ಲ..ಜಗತ್ತಿನ ಹೆಚ್ಚಿನ ಶ್ರೀಮಂತರ ಹಿಂದಿನ ಕತೆ ನೋಡಿದಾಗ ಅವರೆಲ್ಲರೂ ಅತೀ ಬಡತನದಿಂದ ಬಂದವರೆ.. ಆದರೆ ಅವರೆಲ್ಲ ಯೊಚಿಸಿದ್ದು ಸ್ವಂತ ಕಾಲ ಬಲದ ಶಕ್ತಿಯ ವಿನಹ ಇತರರ ಸಂಪತ್ತಿನ ಪುಕ್ಕಟೆ ಪಾಲುದಾರಿಕೆಯನ್ನಲ್ಲ.

ಖಂಡಿತ ನಾವು ಬಡವನಾಗಿ ಹುಟ್ಟಿರಬಹುದು ಅದಕ್ಕೆ ನಾವು ಜವಾಬ್ದಾರರಲ್ಲದಿದ್ದರೂ ಮಂದೆ ಅದೆಷ್ಟೋ ವರ್ಷಗಳ ಬದುಕಲ್ಲಿ ನಮಗೆ ಬೇಕಾದ ರೀತಿಯಲ್ಲಿ ಸಾಧನೆ ಮಾಡುವ ಅವಕಾಶಗಳು ಇದ್ದೇ ಇರುತ್ತವೆ... ತಂದೆ ಮಾಡಿದ ಆಸ್ತಿಯಲ್ಲಿ ಶ್ರೀಮಂತಿಕೆ ಮರೆಯುವ ಬಗ್ಗೆ ಹೇಳುವಾಗ ಒಂದು ಕತೆ ನೆನಪಿಗೆ ಬರುತ್ತದೆ ಅದೇನೆಂದರೆ...
ಒಮ್ಮೆ ಬಿಲ್ ಗೇಟ್ಸ್ ಅವರು ಒಂದು ಹೋಟೆಲಿಗೆ ಊಟ ಮಾಡಲ ಹೋಗುತ್ತಾರೆ ..

ಜಗತ್ತಿನ ಅತೀ ದೊಡ್ಡ ಶ್ರೀಮಂತ ಬಂದುದನ್ನು ಕಂಡು ಹೋಟೆಲ್ ಕೆಲಸದಾಳಿಗೆ ಖುಷಿಯೋ ಖುಷಿ, ಊಟ ಎಲ್ಲಾ ಮುಗಿಸಿ ಹೊರೆಡಲು ನಿಂತ ಬಿಲ್ ಗೇಟ್ಸ್ ಅವರ ಎದುರಿಗೆ ನಗುತ್ತಾ ನಿಂತಿರುವ ಕೆಲಸದಾಳ ಕಂಡು 100ಡಾಲರ್ ನೀಡುವನು ಇದನ್ನು ಕಂಡ ಕೆಲಸಾದಲು ಹೇಳುತ್ತಾನೆ ನಿಮ್ಮ ಮಗ ದಿನಾ ಇಲ್ಲಿಗೆ ಬಂದು ಹೋಗುವಾಗ 500ಡಾಲರ್ ನೀಡಿ ಹೋಗುವನು ನೀವು ಇಷ್ಟು ಜಿಪುಣ ಅಂತ ತಿಳಿದಿರಲಿಲ್ಲ ಅಂತ, ಇದನ್ನು ಕೇಳಿದ ಬಿಲ್ ಗೇಟ್ಸ್ ಅವರು ಸಮಾಧಾನದಿಂದ ನಗುತ್ತಾ ಹೇಳುತ್ತಾರೆ "ಅವನು ಜಗತ್ತಿನ ಅತಿದೊಡ್ಡ ಶ್ರೀಮಂತನ ಮಗ, ಆದರೆ ನಾನು ಒಬ್ಬ ಬಡ ಚಮ್ಮಾರನ ಮಗ ಅಂತ ".

ಇಲ್ಲಿ ನಾವು ತಿಳಿದುಕೊಳ್ಳಬೇಕಾದುದು ತಂದ ಮಾಡಿದ ಆಸ್ತಿಯಿಂದ ಮೆರೆಯುವ ಮಗನಿಗೆ ಹಣದ ಬೆಲೆ ತಿಳಿದಿರೂದಿಲ್ಲ ಅದೇ ಕಷ್ಟಪಟ್ಟು ಸ್ವಂತ ಬಲದಿಂದ ಮೇಲೆ ಬಂದವನಿಗೆ ಅದರ ಬೆಲೆಯ ಅರಿವಿರುತ್ತದೆ. ಇನ್ನು ನಾವು ಕೇವಲ ಅವರಾಗಿದ್ದರೆ, ಇವರಾಗಿದ್ದರೆ ಅಂತ ಚಿಂತೆ ಮಾಡಿ ಚಿತೆಯಾಗದೆ ನಾವು ನಮ್ಮ ಶಕ್ತಿಯ ಬಗ್ಗೆ,ತೆರೆದ ಆಕಾಶದಂತಿರುವ ಅವಕಾಶಗಳ ಬಗ್ಗೆ ಯೊಚಿಸೋಣ..ಯೋಚನೆಗಳನ್ನು ಯೊಜನೆಗೆ ಒಳಪಡಿಸೋಣ,ಅಲ್ಲಿಗೆ ಮಗಿಸದೆ ಯೋಜನೆಗಳ ಕಾರ್ಯರೂಪಕ್ಕೆ ಇಳಿಸೋಣ.

-ದೀನಾರ್

#great #opportunities #ahead

www.facebook.com/BlueWavesPage

ರೇಪ್ ..


ವಿಐಪಿ ಸಾಲುಗಳು



ಯಾವುದಾದರು ಕಾರ್ಯಕ್ರಮಕ್ಕೆ ಭೇಟಿ ನೀಡಿದರೆ ಬಹಳ ಸಾಮಾನ್ಯವೆಂಬಂತೆ ಅಲ್ಲಿ ಮುಂದಿನ ಎರಡೋ ಮೂರು ಸಾಲು ಕುರ್ಚಿಗಳನ್ನು ವಿಶೇಷವಾಗಿ ಇಟ್ಟಿರಲಾಗುತ್ತದೆ ಅಥವಾ ಅದು ಸೀಮಿತವಾಗಿರುತ್ತದೆ, ಸಮಾರಂಬಕ್ಕೆ ಬರುವ ವಿಶಿಷ್ಟ ವ್ಯಕ್ತಿಗಳಿಗಾಗಿ, ಗಣ್ಯರಿಗಾಗಿ ಮೀಸಲಿಟ್ಟ ಜಾಗ! ಎಲ್ಲಕ್ಕಿಂತ ಹೆಚ್ಚಾಗಿ ಸಿರಿವಂತರಿಗೆ ಮೀಸಲಿಟ್ಟ ಜಾಗ, ಸಾಮಾನ್ಯರು ಸ್ವಲ್ಪ ದೂರವುಳಿಯಬೇಕಾದ ಜಾಗ, ವಿಐಪಿಗಳಿಗೆ ಪ್ರಾತಿನಿದ್ಯ ನೀಡುವ, ಅವರನ್ನು ಸತ್ಕರಿಸುವ ಒಂದು ವ್ಯವಸ್ಥೆ.

ವಿಐಪಿಗಳನ್ನು ಹಲವು ರೀತಿಯಲಿ ಪಟ್ಟಿ ಮಾಡಲಾಗಿರುತ್ತದೆ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಸಾಧಕರು! ಆದರೆ ಹೆಚ್ಚಿನ ಪ್ರಾತಿನಿದ್ಯ ಸಿಗುವುದು ಶ್ರೀಮಂತಿಕೆಗೆ ಎನ್ನುವುದು ಹಲವು ಕಡೆ ವಾಸ್ತವ, ಇಲ್ಲಿ ಅಂತಹ ವ್ಯವಸ್ಥೆ ಕಾಲಗಟ್ಟಕ್ಕೆ ಅನಿವಾರ್ಯ, ಆದರೆ ಆ ವಿಐಪಿ ಕುರ್ಚಿಯ ಸಾಲುಗಳು ಸಾಮಾನ್ಯರಿಗೆ ಸ್ಪೂರ್ತಿಯ ಸಾಲುಗಳಾಗಬೇಕು! ಹಾಗಾಗಬೇಕಾದಲಿ ಅದರಲ್ಲಿ ಬಹಳಷ್ಟು ಅರ್ಹ ವ್ಯಕ್ತಿಗಳನ್ನು ಕುಲ್ಲಿರಿಸಬೇಕಾಗುತ್ತದೆ, ಅಲಂಕರಿಸುವ ವ್ಯಕ್ತಿಗಳು ಕೂಡಾ ಅರ್ಹವಾಗಿರಬೇಕಾಗುತ್ತದೆ, ಅದು ಜಾಗ ಬರ್ತಿ ಮಾಡುವ ಸಾಲುಗಳು ಆಗುತ್ತಿರುವುದು ವಿಪರ್ಯಾಸ.

ಶ್ರೀಮಂತಿಕೆಯನ್ನೇ ಮಾನದಂಡವಾಗಿಸುವುದಕ್ಕಿಂತ ಹೆಚ್ಚಾಗಿ ಅಲ್ಲಿ ಸಾಧಕ ಶ್ರೀಮಂತರಿಗೆ ಹೆಚ್ಚು ಪ್ರಾತಿನಿಧ್ಯ ಸಿಗಬೇಕು, ಸಾಮಾಜಕ್ಕೆ ಬಹಳ ಹತ್ತಿರವಾಗಿರುವ ವ್ಯಕ್ತಿಗಳಿರಬೇಕು, ಸಾಮಾನ್ಯರು ಕೂಡಾ ಮುಂದೆ ಸಾಧಕರಾದಾಗ ಆ ಕುರ್ಚಿಗಳಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆಯಬೇಕು, ಅದು ಅಹಂಕಾರ ಪ್ರತಿಷ್ಠೆಯ ಸಾಲುಗಳಾಗಬಾರದು. ಸಾಧಕರನ್ನು ಅಣಕಿಸುವ ಸಾಲುಗಳೂ ಆಗಿರಬಾರದು, ಅದು ಪ್ರತಿಷ್ಠೆಯ ಚೇರುಗಳಾಗುವುದಕ್ಕಿಂತ್ ಸಮುದ್ದಾರಕರ ಚೇರುಗಳಾಗಬೇಕು, ಕೇವಲ ಶ್ರೀಮಂತಿಕೆ ಪ್ರಾತಿನಿಧ್ಯತೆ ಆಗಬಾರದು, ಶ್ರೀಮಂತಿಕೆಯ ಜೊತೆಯಲ್ಲಿ ಅರ್ಹ ಸಾಧಕ ವ್ಯಕ್ತಿತ್ವಗಳೂ ಅಲ್ಲಿರಬೇಕು.

ನಿಜವಾದ ವಿಐಪಿಗಳಿಗೆ ಗೌರವ ನೀಡುವ ಚೇರುಗಳಾಗಬೇಕು, ಕೇವಲ ಹಣ ಪ್ರತಿಷ್ಠೆಯ ಚೇರುಗಳಾಗಬಾರದು, ಸಮಾಜದಲ್ಲಿ ಗಮಾನರ್ಹ ಸಾಧನೆ ಮಾಡಿದ ವ್ಯಕ್ತಿತ್ವಗಳು ಅಲ್ಲಿ ಕಾಣಸಿಗಬೇಕು, ಸಾಧನೆಗಳು ಸಾಧಕರನ್ನು ಮುಂದಿನ ಸಾಲುಗಳಿಗೆ ಅಹ್ವಾನಿಸುವಂತಹ ಲೈನುಗಳಾಗಬೇಕು, ಸಾದಕರನ್ನು ಅಲ್ಲಿ ಕುಳ್ಳಿರಿಸಿ ಆ ಸಾಲುಗಳು ಬೆಳೆಯಬೇಕು, ಅನರ್ಹವಾದ ವ್ಯಕ್ತಿಗಳನ್ನು ಅಲ್ಲಿ ಕುಳ್ಳಿರಿಸಿ ಸಾಧಕರಿಗೆ ಅವಮಾನ ಮಾಡುವುದು ನಿಲ್ಲಬೇಕು, ಕಷ್ಟ ಪಟ್ಟ ಮುಂದೆ ಬಂದ ಜೀವಗಳು ಏನು ಕಷ್ಟ ಪಡದೆ ಮುಂದೆ ಬಂದು ಶ್ರೀಮಂತಿಕೆ ಮಾತ್ರ ಸಂಪಾದಿಸಿದವನ ಜೊತೆ ಕುಳ್ಳಿರಿಸಿ ಸಾಧನೆಗೆ ಅವಮಾನ ಮಾಡಬಾರದು, ಸಮಾಜದಲ್ಲಿ ಇನ್ನಷ್ಟು ಸ್ಪೂರ್ತಿದಾಯಕ ಸಾಧಕರು, ಸಮಾಜ ಕಾಳಜಿಯ ಉತ್ತಮ ಸ್ಥಿತಿವಂತರು ಬೆಳೆದು ವಿಐಪಿ ಸಾಲುಗಳು ಇನ್ನಷ್ಟು ಬೆಳೆಯಲಿ, ಕೇವಲ ಪ್ರತಿಷ್ಠೆಯ ಸಾಲುಗಳಾಗದೆ ಸ್ಪೂರ್ತಿಯ ಸಾಲುಗಳಾಗಲಿ.

#need #changes #soon

www.facebook.com/BlueWavesPag

ಬದುಕು -ಬೆಲೆ ಮತ್ತು ಬಲಿ



ಕಡು ಬಡ ಕುಟುಂಬದಿಂದ ಬಂದ ಬಡ ತಂದೆ ತಾಯಿ ಹಾಗು ರೋಗಗ್ರಸ್ತ ಅಜ್ಜಿಯೊಂದಿಗೆ ಜೀವಿಸುತಿದ್ದ, ಓದಿನಲ್ಲಿ ಚುರುಕಾಗಿದ್ದ, ಶಾಲಾ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ, ಗೆಳೆಯರೊಂದಿಗೆ ಅನ್ಯೋನ್ಯವಾಗಿದ್ದ, ಶಿಕ್ಷಕರ ಮೆಚ್ಚಿನ ವಿಧ್ಯಾರ್ಥಿಯಾಗಿದ್ದ, ಈಗಷ್ಟೇ ಯೌವ್ವನಕ್ಕೆ ಕಾಲಿಡುತ್ತಿದ್ದ ಹೈಸ್ಕೂಲ್ ವಿಧ್ಯಾರ್ಥಿ ಉತ್ತರ ಪ್ರದೇಶದ "ಗೋಪಾಲ್". ಇದ್ದಕಿದ್ದಂತೆ ನೇಣಿಗೆ ಶರಣಾದ. ಅವನ ಆತ್ಮಹತ್ಯೆಯ ಕಾರಣಗಳನ್ನು ಹುಡುಕುತ್ತಾ ಹೋದಾಗ, ಮನ ಕುಲುಕುವಂತಹ ಚಿತ್ರಗಳ ಅನಾವರಣವಾಗುತ್ತದೆ.

ತನ್ನ ಅಜ್ಜಿಯ ಔಷದಿಗೆ ಹಣವಿಲ್ಲದ ಚಿಂತೆಯನ್ನು ತನ್ನ ಆಪ್ತ ಮಿತ್ರನಾದ ಹರಿಯೊಂದಿಗೆ ಹಂಚಿಕೊಳ್ಳುತ್ತಾನೆ. ಹರಿಯು ಮಿತ್ರನಿಗೆ ಸಹಾಯ ಮಾಡಲೋಸುಗ, ತನ್ನ ಅಕ್ಕ 'ನೈನಾ'ಳ ದುಂಬಾಲು ಬೀಳುತ್ತಾನೆ. ಇಪ್ಪತ್ತೋ ಮೂವತ್ತೋ ರೂಪಾಯಿ ಆಗಿರಬಹುದು ಅಂದುಕೊಂಡು "ಇವತ್ತೇ ಸಂಬಳ ಸಿಕ್ಕಿದೆ, ಪರ್ಸಲ್ಲಿ ಇದೆ ತೆಗೆದುಕೋ" ." ಎಂದು ಉತ್ತರಿಸುತ್ತಾಳೆ. ಹರಿ ಅದರಿಂದ 1000 ರೂ ತೆಗೆದು ಗೋಪಾಲನಿಗೆ ಕೊಟ್ಟು ಸಮಾಧಾನ ಪಡಿಸಿ ಕಳುಹಿಸುತ್ತಾನೆ.

ನಂತರ ನೈನ ತನ್ನ ಪರ್ಸ್ನಿಂದ 1000 ರೂ ತೆಗೆದಿದುರುವುದನ್ನು ಕಂಡು ಗಾಬರಿಗೊಂಡು ವಿಚಾರಿಸಿದಾಗ, ಹರಿಯು ಒಪ್ಪಿಕೊಂಡು ವಿನಯಪೂರ್ವಕವಾಗಿ ಆದಷ್ಟು ಬೇಗ ಅವನು ಹಣವನ್ನು ಮರಳಿಸುತ್ತಾನೆ ಎಂದು ಪರಿಯಾಗಿ ಬೇಡಿಕೊಂಡರೂ, ಅದನ್ನು ಕಿವಿಗೊಲ್ಲದೆ ತಕ್ಷಣ ತನ್ನ ಹರಿದ ಚಪ್ಪಲಿಯೇರಿಸಿಕೊಂಡು ನೇರ ಗೋಪಾಲನ ಮನೆಗೆ ದೌಡಾಯಿಸಿ, ಈಗಲೇ ಹಣ ಕೊಡುವಂತೆ ದಬಾಯಿಸುತ್ತಾಳೆ. "ಔಷದ ಖರೀದಿಸಿ 1000 ರೂಪಾಯಿಯಲ್ಲಿ 127 ರೂಪಾಯಿಯಷ್ಟೇ ಉಳಿದಿದೆ, ಬಾಕಿ ಹಣ ಶೀಘ್ರದಲ್ಲಿ ಮರಳಿಸುವೆ" ಗೋಪಾಲ್ ಅವಳಲ್ಲಿ ವಿನಂತಿಸುತ್ತಾನೆ.

ಅದಕ್ಕವಳು ಕೆಂಡ ಮುಂಡಲವಾಗಿ "ನನ್ ಹಣ ರಾತ್ರಿ ಬೆಳಗಾಗೊದರೊಳಗೆ ನನ್ ಕೈ ಸೆರ್ಬೆಕು. ಇಲ್ಲಾಂದ್ರೆ, ನೀನು ನನ್ನನ್ನು ರೇಪ್ ಮಾಡಿ ಸಾವಿರ ಅಲ್ಲ ಹತ್ತು ಸಾವಿರ ದೊಚಿದ್ದಿ ಎಂದು ನೇರ ಪೋಲೀಸ್ ಕಂಪ್ಲೇಂಟ್ ಕೊಡ್ತೀನಿ. ನೀನಂತು 7 ವರ್ಷಕ್ಕೆ ಒಳಗೆ ಹೋಗ್ತೀಯ. ಹೊರ ಬಾರೋ ಹೊತ್ತಿಗೆ ನಿನ್ ಮನೆಯವರು ಅವಮಾನ ಸಹಿಸಿ ಜೀವಂತ ಇರುತ್ತಾರೋ ಇಲ್ವೋ ಹೇಳಕ್ಕಾಗದು" ಅಂತ ಒಂದಷ್ಟು ಕರುಣೆಯಿಲ್ಲದೆ ದಬಾಯಿಸುತ್ತಾಳೆ. ಮೊದಲೇ ತನ್ನ ಸಾಲು ಸಾಲು ಕಷ್ಟಗಳಿಂದ ನೊಂದಿದ್ದ ಗೋಪಾಲನನ್ನು ಈ ಮಾತು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸುತ್ತದೆ. ಪರಿಹಾರದ ಯಾವುದೇ ಮಾರ್ಗ ತೋಚದೆ ಜರ್ಜರಿತನಾಗುತ್ತಾನೆ. ಅಲ್ಲಿಂದ ಬಿಕ್ಕಿ ಬಿಕ್ಕಿ ಅಳುತ್ತ ನೇರ ಕೊಠಡಿ ಹೋದವನೇ ನೇಣಿಗೆ ಶರಣಾಗುತ್ತಾನೆ.

ಪೋಲೀಸ್ ವಿಚಾರಣೆ ವೇಳೆ ನೈನ ಹೇಳ್ತಾಳೆ, "ನಾನು ಆ ತರ ಹೇಳಿರೋದು ನಿಜ. ಆದ್ರೆ ಗೋಪಾಲ್ ಇಷ್ಟು ದೊಡ್ಡ ಅನಾಹುತ ಮಾಡ್ಕೊಳ್ತಾನೆ ಎಂದು ಯೋಚಿಸಿರಲಿಲ್ಲಾ. ನನಗೆ1000 ರುಪಾಯಿ ಬಹಳ ದೊಡ್ಡ ಮೊತ್ತ. ನನಗೆ 5000 ರುಪಾಯಿ ಸಂಬಳ. ಅದ್ರಲ್ಲಿ ತಿಂಗಳ ಮನೆ ಖರ್ಚು, ತಂದೆಯ ಔಷದಿ, ತಮ್ಮನ ವಿಧ್ಯಾಬ್ಯಾಸ, ನನ್ನ ಸಣ್ಣ ಪುಟ್ಟ ಖರ್ಚು. ಎಲ್ಲವೂ 5000 ರುಪಾಯಿಯಲ್ಲಿ ನಿಭಾಯಿಸಬೇಕು. 3 ದೀಪಾವಳಿಗಳು ನಮಗಾರಿಗೂ ಹೊಸ ಬಟ್ಟೆಯಿಲ್ಲದೆ ಕಳೆದು ಹೋಗಿದೆ. ನನ್ನಲ್ಲಿರುವುದು 2 ಜೊತೆ ಬಟ್ಟೆ ಮಾತ್ರ. ದಿನಾಲು ಒಗೆದು ಹಾಕ್ತೀನಿ. ಆ 1000 ರುಪಾಯಿಂದಾಗಿ ನನ್ನ ತಿಂಗಳ ಖರ್ಚಿನ ಲೆಕ್ಕಾಚಾರ ತಲೆ ಕೆಳಗಾಗುವ ಭಯ ಮತ್ತು ಚಿಂತೆ ನನ್ನನ್ನು ಕಾಡಿದಕ್ಕೊಸ್ಕರ ನಾನು ನನ್ನ ಹಣಕ್ಕಾಗಿ ಬೆದರಿಸಿದೆ. ಆದ್ರೆ ಇದರ ಪರಿಣಾಮ ಈ ರೀತಿ ಇರಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ" ಎಂದು ಗದ್ಗದಿತಳಾಗಿ ಮರುಗುತ್ತಾಳೆ.
ಈಗ ನೈನ ಜೈಲಿನಲ್ಲಿ ಭಾರವಾದ ಕಣ್ಣೀರಿನೊಂದಿಗೆ ದಿನ ಕಳೆಯುತ್ತಿದ್ದಾಳೆ. ಎರಡೂ ಬಡ ಕುಟುಂಬಗಳ ಸ್ಥಿತಿ ಡೋಲಾಯಮಾನವಾಗಿದೆ.

ಗೆಳೆಯರೇ, ಸಿನಿಮಾ ತಾರೆಯರಿಗೆ, ಫ್ಯಾಶನ್ ಲೋಕದ ಬಿಚ್ಚಮ್ಮಗಳಿಗೆ ಸಣ್ಣ ನೆಗಡಿ ಆದ್ರೂ ನೆಗೆದು ಬೀಳುವ ನಾವುಗಳು, FB ಪುಟಗಳಲ್ಲಿ ಹಂಚಿ ಕೊಳ್ತೆವೆ, ಮಾಧ್ಯಮಗಳಲ್ಲೂ ಚರ್ಚಿಸಲ್ಪಡುತ್ತದೆ

ಶ್ರೀಮಂತರು ತಮ್ಮ ಮಕ್ಕಳನ್ನು ಡಾಕ್ಟರುಗಳನ್ನಾಗಿ ಮಾಡಿ ವಿದೇಶಕ್ಕೆ ಕಳಿಸಿ ಬ್ಯಾಂಕ್ ಬ್ಯಾಲೆನ್ಸ್ ವೃದ್ದಿಸಿಕೊಳ್ತಾರೆ. ಮಲ್ಟಿ ಮಿಲಿಯನರ್ಗಳು, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ತೆರೆದು, ಮತ್ತೊಂದನ್ನು ಕಟ್ಟಿಸುವ ಕನಸು ಕಾಣುತ್ತಾರೆ. ಅದೇ ಆಸ್ಪತ್ರೆಯ ಪಕ್ಕದಲ್ಲಿ ಅದೆಷ್ಟೋ ಬಡ ಕುಟುಂಬಗಳು ಔಷದಿಗಾಗಿ ಪರದಾದುತ್ತಿರುತ್ತವೆ.

ನಮ್ಮ ಊರಿನಲ್ಲಿ ಯಾರಾದರು ಬಡವರು ಔಷದಿಗಾಗಿ ಪರಿತಪಿಸಿದರೆ, ನಾವು ಅವರತ್ತ ಹೆಜ್ಜೆ ಹಾಕುವುದು ಬಿಡಿ, ಮುಖ ಕೂಡ ತಿರುಗಿಸಿ ನೊಡಲ್ಲ. ಹಾಗೆ ನೋಡಿದರೆ ಎಲ್ಲಿ ನಮ್ಮ ಜೇಬಿಗೆ ಕತ್ತರಿ ಬೀಳುತ್ತೋ ಎಂಬ ಭಯ.

ಇವತ್ತು ಎಷ್ಟು ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆಯ ಯಜಮಾನರು ರೋಗಿಗಳಿಂದ ಗಳಿಸಿದ ಲಾಭಾಂಶದಲ್ಲಿ ಒಂದಂಶವನ್ನಾದರೂ ಮೀಸಲಿತಿದ್ದಾರೆ ? ಬೆಲೆ ಬಾಳುವ ಐಶಾರಾಮಿ ಕಾರುಗಳನ್ನು ಕಾಲ ಕಾಲಕ್ಕೆ ಬದಲಾಯಿಸುವ ಆಗರ್ಭ ಶ್ರೀಮಂತರು (ಕೆಲವರನ್ನು ಬಿಟ್ಟು) ಇದರ ಬಗ್ಗೆ ಕಾಳಜಿವಹುಸಿದ್ದಾರೆಯೇ?

ನಾವುಗಳು ಇದಕ್ಕಾಗಿ ಒಂದು ಹೆಜ್ಜೆ ಇಡೋಣವೇ? ಇಂಥಹ ನಿಜವಾದ ಬಡ ಜನರಿಗಾಗಿ ಕೈ ಜೋಡಿಸೋಣವೇ?

ನಿಮ್ಮ ಅಂತರಾಳದಲ್ಲಿ ಎಲ್ಲಾದರೂ "ಹೌದು" ಎಂಬ ಸಣ್ಣ ಒಂದು ದ್ವನಿ ಮೂಡಿದರೆ, ನಾವೆಲ್ಲಾ ಒಟ್ಟಾಗಿ ಇದಕ್ಕಾಗಿ ಕಾರ್ಯಪ್ರವೃತ್ತರಗೋಣ...

ಇತಿ ನಿಮ್ಮ
ಅನಾಮಿಕ...


https://www.facebook.com/BlueWavesPage

ಲವ್ ಜಿಹಾದ್- ಅವಕಾಶವಾದಿ ರಾಜಕಾರಣ ಮತ್ತು ವಿವೇಚನಾ ಶೂನ್ಯ ಮಾಧ್ಯಮಗಳು



ಹೌದು.. ಇದು ಖಂಡಿತಾ ನನ್ನ ಕನಸಿನ ಭಾರತದಲ್ಲಿ ನಡೆಯಬೇಕಾದುದು ಅಲ್ಲ. ಧರ್ಮ ನಿರಪೇಕ್ಷತೆಯ, ಯವುದೇ ಜಾತಿ, ಮತ, ಪಂಗಡಗಳ ಹಂಗಿನ ಪಾಲುದಾರಿಕೆಯಿಲ್ಲದ ಗಾಂಧೀಜಿಯವರ ಕನಸಿನ "ರಾಮ ರಾಜ್ಯ" ನಮ್ಮ ಪಾಲಿಗೆ ವಿದೂರವಾಗುತ್ತಾ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ "ರಾಮರಾಜ್ಯದ" ಪರಿಕಲ್ಪನೆ ಮರೀಚಿಕೆಯಾಗಿಯೇ ಉಳಿಯಬಹುದೆಂಬ ಭಯವಿದೆ ನನ್ನಲ್ಲಿ. ರಾಜಕಾರಣ ಎಂಬುದು ಸಮಾಜ ಸೇವೆಗೆ ಉತ್ಕೃಷ್ಟ ವೇದಿಕೆ, ದೇಶದ ಎಲ್ಲಾ ಸ್ಥರದ, ಎಲ್ಲಾ ನಂಬಿಕೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭವ್ಯ ಭಾರತ ನಿರ್ಮಾಣವೇ ಅದರ ಗುರಿಯಾಗಿರಬೇಕು. ದೇಶದ ಚುಕ್ಕಾಣಿ ಹಿಡಿಯುವ ರಾಜಕೀಯ ಪಕ್ಷಗಳು ದೇಶವಾಸಿಗಳು ಪರಸ್ಪರ ಸೌಹಾದರ್ಯತೆಯಿಂದ ಸಹಬಾಳ್ವೆ ನಡೆಸಬೇಕೆಂಬ ಆಶಾಭಾವ ಹೊಂದಿರಬೇಕು ಮತ್ತು ಆ ಶಾಂತಿಮಂತ್ರದ ಅನುಷ್ಠಾನವನ್ನು ತನ್ನ ಸಿದ್ಧಾಂಥಗಳ ಭಾಗವಾಗಿಸಬೇಕು. ಅದೇ ರೀತಿ ರಾಜಕಾರಣಿಯಾದವನು ದೇಶದ ಅಭ್ಯುದಯಾಕಾಂಕ್ಷಿಯಾಗಿರಬೇಕು, ಪ್ರತೀ ನಾಗರಿಕರನ್ನೂ ವರ್ಣ, ಭಾಷೆ, ಜಾತಿ, ಧರ್ಮಗಳ ಹಂಗಿಲ್ಲದೆ ಪ್ರೀತಿಸುವವನೂ, ಪರಿಪಾಲಿಸುವವನೂ ಆಗಿರಬೇಕು. ಈ ಆದರ್ಶಗಳಿಂದ ವಿಮುಖವಾಗಿ ರಾಜಕೀಯ ಪಕ್ಷಗಳು,ರಾಜಕಾರಣಿಗಳು ಧರ್ಮ ಧರ್ಮಗಳೊಳಗೆ ದ್ವೇಷ ಭಾವ ಹರಡಿ, ದೇಶವಾಸಿಗಳ ಅಖಂಡತೆಗೆ ಕೊಳ್ಳಿ ಇಡುವುದನ್ನೇ ಕಾಯಕವಾಗಿಸಿಕೊಂಡುಬಿಟ್ಟು ಈ ದೇಶದ ಏಳಿಗೆಗೆ, ಶಾಂತಿಗೆ ಕೊಳ್ಳಿಯಿಡುತ್ತಿದ್ದಾರೆ. ಅದು ದೇಶವನ್ನು ಅನಪೇಕ್ಷಿತ ವಿಷಯಗಳ ಸುತ್ತಲೇ ಗಿರಕಿ ಹೊಡೆಸುತ್ತಾ ದೇಶದ ಸಾರ್ವಭೌಮತೆ ಮತ್ತು ಅಭಿವೃದ್ಧಿಯ ಅವಶ್ಯಕತೆಗಳೆಡೆಗೆ ನಮ್ಮ ಗಮನವನ್ನು ಕುರುಡಾಗಿಸುತ್ತಿದೆ. ನಾವು ಎಚ್ಚೆತ್ತುಕೊಳ್ಳಬೇಕಾದ ಸಮಯ ಮೀರಿದೆ.

ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ "ಲವ್ ಜಿಹಾದ್" ಪ್ರಕರಣದ ಬಗೆಗಿನ ನಗ್ನ ಸತ್ಯಗಳು ಹೊರಬಿದ್ದಿದೆ. ಸಾಮಾನ್ಯದಲ್ಲಿ ಸಾಮಾನ್ಯವಾದ ಅಂತರ್ ಧರ್ಮ ಪ್ರೇಮ ಪ್ರಕರಣವನ್ನು ಮುಖ್ಯವಾಹಿನಿಯಲ್ಲಿ "ಲವ್ ಜಿಹಾದ್" ಎಂಬ ವರ್ಣರಂಜಿತ ಹೆಸರಿನೊಂದಿಗೆ ತಳುಕು ಹಾಕಿ, ಒಂದು ಸಮುದಾಯದ ಮೇಲೆ ವಿಷ ಕಾರುವ ಸಾಮಾಜ ದ್ರೋಹಿಗಳ ವಿಕೃತ ಕ್ರೌರ್ಯ ಮತ್ತೊಮ್ಮೆ ಬಯಲಾಗಿದೆ. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ಮತ್ತು ಬಲವಂತವಾಗಿ ಮತಾಂತರ ಮಾಡಲಾಗಿತ್ತು ಎಂದು ಆರೋಪಿಸಿದ್ದ ಯುವತಿ ತನ್ನ ಹೇಳಿಕೆಯಿಂದ ಹಿಂದೆ ಸರಿದ ಬಳಿಕ ಇಡೀ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಉತ್ತರ ಪ್ರದೇಶದ ಪದಾಧಿಕಾರಿ ವಿನೀತ್ ಅಗರವಾಲ್ ಎಂಬ ಅಸಾಮಿಯ ಕೋಮು ಕೀವು ತುಂಬಿಕೊಂಡ ತಲೆಯಲ್ಲಿ ಹೊಳೆದ ಐಡಿಯಾವೇ ಇಡೀ ಪ್ರಕರಣದ ಹಿಂದಿನ ಸೂತ್ರಧಾರ ಎಂದರೆ ನನ್ನ ದೇಶದ ರಾಜಕಾರಣ ಮತ್ತದರ ಉದ್ದೇಶಗಳು ಅರ್ಥವಾಗದ ಬೆಪ್ಪನಂತಾಗಿಬಿಟ್ಟಿದ್ದೇನೆ. ಆತನ 25 ಸಾವಿರ ರೂಪಾಯಿ ಹಾಗು ಮತ್ತಷ್ಟು ಹಣದ ಆಮಿಷ ಪ್ರೇಮ ಪ್ರಕರಣವೊಂದನ್ನು ಲವ್ ಜಿಹಾದಾಗಿಸಿ ಆ ಪ್ರದೇಶವೇ ಹೊತ್ತಿ ಉರಿಯುವಂತೆ ಮಾಡುತ್ತದೆ. ಕಳೆದ ತಿಂಗಳು ಉತ್ತರಪ್ರದೇಶದಲ್ಲಿ ನಡೆದ ಉಪಚುನಾವಣೆ­ಯ ಹಿನ್ನಲೆಯಲ್ಲಿ ಈ ಪ್ರಕರಣದ ವಿರುದ್ದ ನಡೆದ ಪ್ರತಿಭಟನೆಗಳು ಮತ್ತು ಬೀದಿ ನಾಟಕ ಪ್ರಹಸನಗಳಿಂದ ಅವನು ಮತ್ತವನ ಪಕ್ಷ ಪಡೆದುಕೊಂಡ ಲಾಭವನ್ನು ನೆನೆಸಿಕೊಳ್ಳುವಾಗ ನನ್ನ ದೇಶದ ದುರ್ಗತಿಗಳು ಮತ್ತದರ ವಿರುದ್ಧದ ದಿವ್ಯ ಮೌನ ಅಸಹ್ಯ ಹುಟ್ಟಿಸುತ್ತಿದೆ.

ಪ್ರಾರಂಭದಲ್ಲಿ ಈ ಪ್ರಕರಣಕ್ಕೆ ವರ್ಣರಂಜಿತ ಪುಟಗಳನ್ನು ಮೀಸಲಿಟ್ಟ ಪತ್ರಿಕೆಗಳು, ಅರೇಬಿಕ್ ಲಿಪಿಯಿರುವ ಭಯಾನಕ ಚಿತ್ರಗಳನ್ನು ಹಿನ್ನೆಲೆಯಾಗಿಸಿ ಗಂಟೆಗಟ್ಟಲೆ ಸಮಯವನ್ನು ಅದರ ಬಗೆಗಿನ ಚರ್ಚೆಗೆ ಮೀಸಲಿಟ್ಟ ದೃಶ್ಯ ಮಾಧ್ಯಮಗಳು, ಸತ್ಯ ಬಯಲಾದ ನಂತರ ಒಂದು ಕಾಲಂ ಮತ್ತು ಒಂದು ವಾಕ್ಯದ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದೆಯೆಂದರೆ, ಆ ಮೂಲಕ ನಮ್ಮ ಮಾಧ್ಯಮಗಳ ವಸ್ತು ನಿಷ್ಠತೆ ಸತ್ತು ಶವವಾಗಿದೆ ಎಂಬ ಹಿಡಿಶಾಪ ಹಾಕಿ ಸುಮ್ಮನಾದರಾಯಿತೇ? ಅಲ್ಲಾ ಮಾಧ್ಯಮಗಳು ದೇಶದ ಅಧಃಪತನ ನಡೆಸುತ್ತಿರುವವರ ಕೈಂಕರ್ಯದಲ್ಲಿ ಪಾಲು ಪಡೆದುಕೊಂಡಿದೆ ಎಂದು ಗಂಭೀರವಾಗಿ ಚಿಂತಿಸಬೇಕಾಗಿದೆಯೇ..? ಸುಳ್ಳು ಸುದ್ಧಿಗಳನ್ನು ಪ್ರಚುರಪಡಿಸಲು ಆ ಮೂಲಕ ಸಾವಿರಾರು ಜನರ ಮನಸ್ಸಿನಲ್ಲಿ ಧರ್ಮ ದ್ವೇಷ ಹುಟ್ಟಿಸುವಾಗ ಇರುವ ಆವೇಗ ಸತ್ಯ ಬಯಲಾದಾಗ ಅದೇ ಜನರ ಮನಸ್ಸಿಗೆ ಸತ್ಯವನ್ನು ತಲುಪಿಸಬೇಕಾದ ಜವಾಬ್ದಾರಿ ಬಂದಾಗ ಇಲ್ಲವಾಗುವುದು, ಸಂವಿಧಾನದ ನಾಲ್ಕನೇ ಅಂಗವೇ ಶಾಂತಿ ಮತ್ತು ಪ್ರಗತಿಯ ಅತೀ ದೊಡ್ಡ ಬೆದರಿಗೆಯಾಗುತ್ತಿದೆಯೇ ಎಂಬ ಪ್ರಶ್ನೆಯೊಂದು ಜೀವ ಪಡೆದುಕೊಳ್ಳುತ್ತಿದೆ.

ಮಾಧ್ಯಮಗಳ ರಾಜಕಾರಣಿಗಳ ಗೋಸುಂಬೆತನಗಳು ಎಲ್ಲೆಗಳನ್ನು ಮೀರಿ ದೇಶದ ಬುಡವನ್ನು ಅಲುಗಾಡಿಸಲು ಹೊರಟಿರುವುದನ್ನು ಪ್ರಶ್ನಿಸಬೇಕಾಗಿರುವುದು ಪ್ರಜ್ಙಾವಂತ ದೇಶವಾಸಿಗಳ ಗಂಭೀರ ಆದ್ಯತೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗದಿದ್ದರೆ ಇತಿಹಾಸದ ಅತೀ ಕೆಟ್ಟ ಅಧ್ಯಾಯಗಳು ಮರುಕಳಿಸುವ ಸಾಧ್ಯತೆಗಳನ್ನು ನಾವೇ ತೆರೆದಿಟ್ಟಂತಾಗುತ್ತದೆ.

ಹುಸೇನ್ (ಟೀಂ ಬ್ಲೂ ವೇವ್ಸ್)
www.facebook.com/BlueWavesPage

ಬಡವರಿಗಾಗಿ ಒಂದು ಬೊಗಸೆ ಅಕ್ಕಿ



ಅಲ್ ಫುರ್ಖಾನ್ ಪಬ್ಲಿಕ್ ಸ್ಕೂಲಿನ ಮಕ್ಕಳು ವಿಶಿಷ್ಟ ರೀತಿಯಲ್ಲಿ ವಿಶ್ವ ಅಹಾರ ದಿನವನ್ನು ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. "ಒಂದು ಬೊಗಸೆ ಅಕ್ಕಿ" ಎಂಬ ಯೋಜನೆ ಸ್ಕೂಲ್ ಕ್ಯಾಂಪಸ್ಸಿನಲ್ಲಿ ಮಾತ್ರವಲ್ಲ ಕೇರಳದಾದ್ಯಂತ ಚರ್ಚಾ ವಿಷಯವಾಗಿದೆಯಲ್ಲದೇ ಇತರ ಸ್ಕೂಲ್ ಕ್ಯಾಂಪಸ್ಗಳು ಅಲ್ ಫುರ್ಖಾನಿನ ಹಾದಿಯಲ್ಲಿ ಹೆಜ್ಜೆಯಿಡುವಂತೆ ಮಾಡಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ವಂಡೂರ್ ಸಮೀಪದ ಅಲ್ ಫುರ್ಖಾನ್ ವಿದ್ಯಾ ಸಂಸ್ಥೆ ಸ್ಕ್ಕೂಲಿನ ಬಕೆಟ್ ಚಾಲೆಂಜ್ ಭಾಗವಾಗಿ ಪ್ರತೀ ಮಕ್ಕಳಿಂದ ಒಂದು ಬೊಗಸೆ ಅಕ್ಕಿಯನ್ನು ಸಂಗ್ರಹಿಸಿ ಸುತ್ತಮುತ್ತಲಿನ ಬಡವರಿಗೆ ಹಂಚುವ ಯೋಜನೆ ಹಮ್ಮಿಕೊಂಡಿತ್ತು. ಪ್ರತೀ ಮಗುವು ಮನೆಯಿಂದ ಒಂದು ಬೊಗಸೆ ಅಕ್ಕಿಯನ್ನು ತಂದು ಸಂಸ್ಥೆಯ ನಿರೀಕ್ಷೆಯನ್ನೂ ಮೀರಿ ಈ ಯೋಜನೆಯ ಗೆಲುವಿಗಾಗಿ ಕೈ ಜೋಡಿಸಿದರು. ಸಂಗ್ರವಾದ ಒಟ್ಟು ೬೦೦ ಕೆಜಿಯಷ್ಟು ಅಕ್ಕಿಯನ್ನು ಸುತ್ತಮುತ್ತಲಿನ ೧೫೦ ಕುಟುಂಬಗಳಿಗೆ ಹಂಚಲಾಯಿತು.

ಆಹಾರ ಮತ್ತು ಕೃಷಿ ಯುಎನ್ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ ಜಗತ್ತಿನ ಒಟ್ಟು ಸಂಖ್ಯೆಯಲ್ಲಿ ಸುಮಾರು 842 ಮಿಲಿಯನ್ ಅಂದರೆ ಎಂಟು ಜನರಲ್ಲಿ ಒಬ್ಬರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ. ತುತ್ತು ಅನ್ನಕ್ಕೆ ಪರದಾಡುವ ಕುಟುಂಬಗಳಿಗೆ ಇಂತಹ ಸಣ್ಣ ಸಣ್ಣ ಪ್ರಯತ್ನಗಳು ಆಶಾವಾದವನ್ನು ತುಂಬುತ್ತದೆ. ಇಂತಹ ಪ್ರಯತ್ನಗಳು ವ್ಯಾಪಕವಾಗಿ ಹರಡಿದರೆ ದೇಶದ ಆಹಾರ ಭದ್ರತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು. ಇಂತಹ ಪ್ರಯತ್ನಗಳಿಗೆ ಕೈ ಜೋಡಿಸುವ ಮೂಲಕ ಆಹಾರ ಭದ್ರತೆಗೆ ನಮ್ಮ ಅಳಿಲು ಸೇವೆ ನೀಡೋಣ.


ಟೀಮ್ ಬ್ಲೂ ವೇವ್ಸ್
www.facebook.com/BlueWavesPage