ಇಂದು ನಮ್ಮ ಶಿಕ್ಷಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಹಲವಾರು ಲೋಪ ದೋಷಗಳಿವೆ.
ಶಾಲಾ ಪೂರ್ವ ಶಿಕ್ಷಣ:
ಮಕ್ಕಳಲ್ಲಿ ಉತ್ತಮ ಜ್ನಾನ ಬೆಳೆದು ಬರುವಲ್ಲಿ ಶಾಲಾ ಪೂರ್ವ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದು ನಮ್ಮಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡುವ ಅಂಗನವಾಡಿ ಕೇಂದ್ರಗಳು, ಸೂಕ್ತ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಕಾಣಬಹುದು. ಇಲ್ಲಿ ಪಾಠ ಮಾಡುವ ಶಿಕ್ಷಕಿಯರಿಗೆ ಸರಿಯಾಗಿ ವೇತನ ಸಿಗದೆ ಅವರು ಪರದಾಡುವ ಸ್ಥಿತಿ ಇದೆ. ಅಲ್ಲದೆ ಪೌಷ್ಟಿಕ ಆಹಾರಗಳು ಕೂಡ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಕೆಲವು ಸಂದರ್ಭದಲ್ಲಿ ಕಳಪೆ ಆಹಾರಗಳು ಪೂರೈಕೆಯಾಗುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಶಾಲಾ ಪೂರ್ವ ಶಿಕ್ಷಣವೇ ಸರಿಯಾಗಿಲ್ಲ.
ಇದರ ಪರಿಣಾಮವಾಗಿ ಹಾಗೂ ಜಾಗತಿಕ ಕಾರಣದಿಂದಾಗಿ ನಮ್ಮ ಜನತೆಯಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಕಾರಣದಿಂದಾಗಿ LKG,UKG, BABY SITTING ಮುಂತಾದುವುಗಳು ಪ್ರಾರಂಭವಾಗಿದೆ. ಇಲ್ಲಿ ಲಕ್ಷಾಂತರ ರುಪಾಯಿಗಳನ್ನು ಪ್ರವೇಶ ಶುಲ್ಕವಾಗಿ ಪಡೆಯಲಾಗುತ್ತಿದೆ. ಇಲ್ಲಿ ಮಕ್ಕಳಿಗೆ ಒಂದು ಮೌಲ್ಯಯುತ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಇದು ಕೇವಲ ಹಣ ಮಾಡುವ ಕೇಂದ್ರಗಳಾಗಿವೆ.
ಶಾಲಾ ಶಿಕ್ಷಣ:
ಶಾಲಾ ಶಿಕ್ಷಣದಲ್ಲಿ ಸರಕಾರಿ ಶಾಲೆಗಳು ಮುಖ್ಯವಾಗಿದೆ. ಆದರೆ ಇಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ನಮ್ಮ ದೇಶದ ಸರಕಾರಿ ಶಾಲೆಗಳು ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ನಮ್ಮ ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಹೆಚ್ಚಿನ ಸರಕಾರಿ ಶಾಲೆಗಳು ವಿಧ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದೆ. ಈ ಶಾಲೆಗಳಲ್ಲಿ ಸರಿಯಾದ ಸೌಕರ್ಯಗಳಿಲ್ಲದ ಕಾರಣ ವಿಧ್ಯಾರ್ಥಿಗಳು ಖಾಸಗೀ ಶಾಲೆಗಳನ್ನು ಅವಲಂಭಿಸುವ ಪರಿಸ್ಥಿತಿ ಇದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗಳಿವೆ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು ಪೂರೈಕೆಯಾಗುತ್ತಿಲ್ಲ. ಸರಕಾರಗಳ ನೀತಿ ಕೂಡ ಖಾಸಗಿಗಳ ಪರ ಇರುವುದರಿಂದ, ಸರಕಾರಿ ಶಾಲೆಗಳು ಈ ರೀತಿ ರೋಗಗ್ರಸ್ತವಾಗಲು ಕಾರಣವಾಗಿದೆ.
ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ನಾಯಿ ಕೊಡೆಗಳಂತೆ ತಲೆಯೆತ್ತಿದೆ. ಇಲ್ಲಿ ಲಕ್ಷಗಟ್ಟಲೆ ಡೊನೇಶನ್ ವಸೂಲಿ ಮಾಡಲಾಗುತ್ತದೆ. ಇವುಗಳು ಶಿಕ್ಷಣ ನೀಡುವುದರ ಬದಲು ಕೇವಲ ಹಣ ಮಾಡುವ ವ್ಯಾಪಾರಿ ಕೇಂದ್ರಗಳಾಗಿದೆ. ಹೆಚ್ಚಿನ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರು ಸರಿಯಾದ ವಿದ್ಯಾರ್ಹತೆ ಪಡೆದಿರುವುದಿಲ್ಲ. ಕನಿಷ್ಟ ದ್ವಿತೀಯ ಪಿ.ಯು.ಸಿ ಓದಿದವರನ್ನು ಇಲ್ಲಿ ಶಿಕ್ಷಕರಾಗಿ ನೇಮಿಸಿರುವುದನ್ನು ಕಾಣ ಬಹುದು. ಇಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗುವುದರ ಬದಲು ಕೇವಲ ಸರ್ಟಿಫಿಕೇಟ್ ಗಾಗಿ ಮಾತ್ರ ಶಿಕ್ಷಣ ಎನ್ನುವಂತ್ತಾಗಿದೆ. ಸರಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ: ಕಳೆದೆರಡು ವರ್ಷಗಳ ಹಿಂದೆ ನಮ್ಮ ಸರಕಾರವು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದಾಗ ಒಂದು ರೀತಿಯಲ್ಲಿ ಬಡವರ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಬಹುದು ಎಂಬ ಸಂಭ್ರಮ ಉಂಟಾಗಿತ್ತು. ಆದರೆ ಎರಡು ವರ್ಷಗಳಲ್ಲಿ, ಮುಖ್ಯವಾಗಿ ಕರ್ನಾಟಕ ರಾಜ್ಯದ ಬೆಳವಣಿಗೆಯನ್ನು ಗಮನಿಸಿದರೆ ಈ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರಕಾರವೆ ಹಿಂದೇಟು ಹಾಕುತ್ತದೆ. ಖಾಸಗಿ ಶಾಲೆಗಳಲ್ಲಿ ೨೫% ಬಡ ಮಕ್ಕಳಿಗೆ ಪ್ರವೇಶ ನೀಡಬೇಕಾಗಿದ್ದರೂ ಖಾಸಗಿ ಶಾಲೆಗಳು ಪ್ರವೇಶ ನೀಡಲು ಹಿಂದೇಟು ಹಾಕುತ್ತಿದೆ. ಇಲ್ಲಿ ಖಾಸಗಿ ಶಿಕ್ಶಣ ಸಂಸ್ಥೆಗಳಿಗೆ ನಿಯಂತ್ರಣ ಹಾಕಲು ಜಿಲ್ಲಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತೀ ಜಿಲ್ಲೆಗೂ ಇರಬೇಕಾದ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ನಿಷ್ಕ್ರೀಯವಾಗಿದೆ. ಈ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಎಗ್ಗಿಲ್ಲದೆ ಹಣ ಮಾಡುವಲ್ಲಿ ಯಶಸ್ವಿಯಾಗಿದೆ.
ಬಿಸಿಯೂಟ ಯೋಜನೆಯಲ್ಲೂ ಹಲವಾರು ಲೋಪ ದೋಷಗಳು :
ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಎಸ್.ಎಮ್.ಕ್ರಷ್ಣ ಸರಕಾರ ಇದ್ದಾಗ ಜಾರಿಗೊಳಿಸಿದ್ದು, ಇದರಿಂದಾಗಿ ಬಡ ವಿಧ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲು ಸಾಧ್ಯ್ವಾವಾಗಿದೆ. ಆದರೆ ಸರಕಾರದ ತಪ್ಪು ನೀತಿಗಳಿಂದಾಗಿ ಬಿಸಿಯೂಟದ ಯೋಜನೆಯು ಖಾಸಗಿ ಸ್ವಯಂ ಸಂಸ್ಥೆಗಳ ಪಾಲಾಗುವ ಸಂದರ್ಭ ಬಂದಿದೆ. ಈಗಾಗಲೇ ಪಟ್ಟಣ ಪ್ರದೇಶಗಳಲ್ಲಿ ಸ್ವಯಂಸೇವಾ ಸಂಸ್ಥೆಗಳಿಗೆ ಬಿಸಿಯೂಟದ ನಿರ್ವಹಣೆ ನೀಡಲಾಗಿದೆ. ಬಿಸಿಯೂಟವನ್ನು ಖಾಸಗಿಯವರಿಗೆ ವಹಿಸಿದರೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಿ ಹಣ ಮಾಡುವ ಉದ್ದೇಶ ಕೂಡ ಸ್ವಯಂ ಸಂಸ್ಥೆಗಳಿಗಿರುತ್ತದೆ. ಇದರಿಂದಾಗಿ ಬಡ ಮಕ್ಕಳ ಪಾಲಿಗಂತೂ ತೊಂದರೆಯಾಗಿದೆ.
ಪದವಿ ಪೂರ್ವ ಶಿಕ್ಷಣ
ಪದವಿ ಪೂರ್ವ ಶಿಕ್ಷಣ ಕೂಡ ಹಲವಾರು ದೋಶಗಳಿಂದ ಕೂಡಿದ್ದು ಗುಣಮಟ್ಟದ ಮೌಲ್ಯಯುತ ಶಿಕ್ಷಣ ಮರಿಚೀಕೆಯಾಗಿದೆ. ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನೇ ಗಮನಿಸಿದರೆ ಸರಕಾರಿ ಪದವಿ ಪೂರ್ವ ಕಾಲೇಜುಗಳು ಬೆರಳೆಣಿಕೆಯಷ್ಟಿದೆ. ಇರುವ ಕಾಲೇಜುಗಳು ಕೂಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಎಲ್ಲಾ ವಿಷಯಗಳಿಗೆ ಬೇಕಾದ ಉಪನ್ಯಾಸಕರ ಕೊರತೆ ಇದೆ. ವಿಜ್ನಾನ ವಿಭಾಗವಂತು ಹೆಚ್ಚಿನ ಕಡೆ ಇಲ್ಲ. ಇದ್ದರೂ ಅದಕ್ಕೆ ಬೇಕಾದ ಪ್ರಯೋಗಲಯದ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲಾ ಕಾರುಗಳಿಂದ ಬಡ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಮರಿಚೀಕೆಯಾಗಿದೆ. ಇದಲ್ಲದೆ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಪಿ ಯು ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿದ್ದು ಇಲ್ಲಿ ಲಕ್ಷಗಟ್ಟಲೆ ಡೊನೇಶನ್ ವಸೂಲು ಮಾಡುವ ಮೂಲಕ ಶಿಕ್ಷಣವನ್ನು ಮರಾಟದ ವಸ್ತುವನ್ನಾಗಿ ಮಾಡಲಾಗಿದೆ
ಇದಲ್ಲದೆ ಕಳೆದ ವರ್ಷದಿಂದ ವಿಜ್ನಾನ ವಿಭಾಗಕ್ಕೆ CBSC ಪಠ್ಯಕ್ರಮವನ್ನು ಹೇರಿರುವುದರಿಂದ ವಿದ್ಯಾರ್ಥಿಗಳ ಮೇಲೆ ಮತ್ತು ಉಪನ್ಯಾಸಕರ ಮೇಲೆ ಹೆಚ್ಚಿನ ಹೊರೆ ಉಂಟಾಗಿದೆ. ಸರಕಾರಗಳಉ ಶಿಕ್ಷಣ ಇಲಾಖೆಗಳ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ
ಪದವಿ ಶಿಕ್ಷಣ:
ಪದವಿ ಶಿಕ್ಷಣದಲ್ಲಿ ಪದವಿ ಕಾಲೇಜುಗಳು ಹೆಚ್ಚಿನ ಕಡೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನು ಅವಲಂಬಿಸ ಬೇಕಾಗಿದೆ. ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಡೊನೇಶನ್ ನಿಡಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಉಪನ್ಯಾಸಕರು ಕೂಡ ಎಲ್ಲಾ ವಿಷಯಕ್ಕೆ ಇರುವುದಿಲ್ಲ. ಅತಿಥಿ ಉಪನ್ಯಾಸಕರ ನೇಮಕದಿಂದಾಗಿ ಅವರಿಗೆ ಸರಿಯಾದ ವೇತನ ಸಿಗದ ಕಾರಣ ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಲಭ್ಯರಾಗುತ್ತಿಲ್ಲ.
ಪದವಿ ಕಾಲೇಜುಗಳು ಹೆಚ್ಚಿನವು ವಿಶ್ವ ವಿದ್ಯಾಲಯಗಳ ವ್ಯಾಪ್ತಿಯೊಳಗೆ ಇರುತ್ತದೆ. ಇದರ ಮದ್ಯೆ ಕೆಲವು ಸ್ವಯತ್ತ ಕಾಲೇಜುಗಳಿವೆ. ಇದರ ಜೊತೆಗೆ ವಿಶ್ವ ವಿದ್ಯಾಲಯಗಳ ವೇಳಾ ಪಟ್ಟಿಗಳು ಬೇರೆ ಬೇರೆ ರೀತಿ ಇರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿಧ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ. ಉದಾಹರಣೆಗೆ: ಕರ್ನಾಟಕದಲ್ಲಿ ಹಲವಾರು ವಿಶ್ವ ವಿದ್ಯಾಲಯಗಳಿದ್ದು, ಇವುಗಳಲ್ಲಿ ಪರೀಕ್ಷೆಗಳ ವೇಳಾ ಪಟ್ಟಿ ಬೇರೆ ಬೇರೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳು ಪದವಿ ಮುಗಿಸಿ ಮುಂದಿನ ಕೋರ್ಸ್ ಗೆ ಪ್ರವೇಶ ಪಡೆಯಬೇಕಾರೆ ಕೆಲವೊಂದು ದಾಖಲಾತಿ ಮುಗಿದಿರುತ್ತದೆ. ಸೂಕ್ತ ಸಮಯಕ್ಕೆ ಪರೀಕ್ಷಾ ಫಲಿತಾಂಶಗಳು ಬಾರದೆ, ಅಂಕಪಟ್ಟಿಗಳು ಕೂಡಾ ಸಿಗದೆ ಇರುವ ಪರಿಸ್ಥಿತಿ ಕೂಡಾ ಇದೆ.
ಸೆಮಿಸ್ಟರ್ ಪದ್ದತಿ:
ಇತ್ತೀಚಿನ ಕೆಲವು ವರ್ಷಗಳಿಂದ ಪದವಿಯಿಂದ ಸೆಮಿಸ್ಟರ್ ಪದ್ದತಿ ಜಾರಿ ಗೊಳಿಸಿದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಹೊರೆಯನ್ನು ಹೊರುವಂತಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವಿಪರೀತ ಪರೀಕ್ಷಾ ಶುಲ್ಕಗಳು, ಮರುಮೌಲ್ಯ ಮಾಪನಾ ಶುಲ್ಕಗಳ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗುತ್ತದೆ. ಒಮ್ಮೆ ಒಂದು ವಿಷಯದಲ್ಲಿ ಅನುತ್ತೀರ್ಣನಾದರೆ ಮುಂದಿನ ಪರೀಕ್ಷೆಗೆ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ. ಇದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿನ ಲೋಪ ದೋಷಗಳು:
ಇಂದು ವಿಶ್ವ ವಿದ್ಯಾಲಯಗಳಲ್ಲಿ ಕೂಡ ಸರಿಯಾದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ಹಣವುಲ್ಲವರಿಗೆ ಮಾತ್ರ ವಿಶ್ವ ವಿದ್ಯಾಲಯ ಪ್ರವೇಶ ಎನ್ನುವಂತಾಗಿದೆ. ಇಂದು ವಿಶ್ವ ವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ತಾಚಾರ, ಜಾತಿವಾದಗಳು ತಾಂಡವವಾಡುತ್ತಿದೆ. ಸೂಕ್ತ ಅಧ್ಯಯನ ಸಮಾಗ್ರಿಗಳಿಲ್ಲದೆ ಕೇವಲ ಅಂಕ ಪಟ್ಟಿಗೋಸ್ಕರ ವಿಶ್ವ ವಿದ್ಯಾಲಯಗಳು ಇದೆ ಎನ್ನುವಂತಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಸೊರಗುತ್ತಿದೆ.
ಖಾಸಗಿ ವಿವಿಗಳ ಸ್ಥಾಪನೆ:
ನಮ್ಮ ದೇಶಕ್ಕೆ ಖಾಸಗಿ ವಿವಿಗಳು ಮತ್ತು ವಿದೇಶಿ ವಿವಿಗಳಿಗೆ ಅವಕಾಶ ನೀಡಲಾಗಿದೆ. ಈ ಖಾಸಗಿ ಮತ್ತು ವಿದೇಶಿ ವಿವಿಗಳ ಪ್ರವೆಶದಿಂದಾಗಿ ಉನ್ನತ ಶಿಕ್ಷಣವು ಮಹತ್ವವನ್ನೇ ಕಳೆದು ಕೊಳ್ಳುವಂತಾಗಿದೆ. ಹಣವುಳ್ಳವರಿಗೆ ಪದವಿಯನ್ನು ಖರೀದಿ ಮಾಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ವಿವಿಗಳಿಗೆ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ.ಇದರ ಕುಲಪತಿಗಳು ಕೂಡ ಖಾಸಗಿ ವ್ಯಕ್ತಿಗಳಾಗಿರುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೂ ಕೂಡ ಪೆರ್ಶ್ನಿಸುವ ಹಕ್ಕು ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಈ ಖಾಸಗೀ ಮತ್ಥು ವಿದೇಶಿ ವಿವಿಗಳು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಬಹಳ ಅಪಾಯಕಾರಿಯಾಗಿದೆ.
ವ್ರತ್ತಿ ಶಿಕ್ಷಣದಲ್ಲಿನ ಲೋಪಗಳು:
ವ್ರತ್ತಿ ಶಿಕ್ಷಣಕ್ಕೆ ಸಂಬಂಧಿಸಿ ಇಂದು ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ, ಬೆರಳೆಣಿಕೆಯ ಸರಕಾರಿ ಕಾಲೇಜುಗಳಿವೆ. ಇದರಿಂದಾಗಿ ಸಾಕಷ್ಟು ಖಾಸಗಿ ಕಾಲೇಜುಗಳು ತಲೆಯೆತ್ತಿವೆ. ಇಲ್ಲಿನ ಡೊನೇಶನ್ ಗಳಿಂದಾಗಿ ಇಂದು ಬಡ ವಿದ್ಯಾರ್ಥಿಗಳಿಗೆ ವ್ರತ್ತಿ ಶಿಕ್ಷಣವೆನ್ನುವುದು ಕನಸಿನ ಮಾತಾಗಿದೆ. ITI ಮತ್ತು DIPLOMA ಗಳಿಗೆ ಸರಿಯಾದ ಸರ್ಕಾರದ ಸಹಾಯವಿಲ್ಲದೆ ಅತಂತ್ರ ಸ್ಥಿತಿಯಲ್ಲಿದೆ. ಇಂಜಿನಿಯರಿಂಗ್ ಸಂಪೂರ್ಣ ಖಾಸಗಿಯವರ ಹಿಡಿತದಲ್ಲಿದ್ದು ಮರಾಟದ ಸರಕಾಗಿದೆ. ವೈದಕೀಯ ಶಿಕ್ಷಣ ಕೂಡಾ ಸಂಪೂರ್ಣವಾಗಿ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಖಾಸಗಿ ವೈದಕೀಯ ಕಾಲೇಜುಗಳಲ್ಲಿ ಹಣವಿಲ್ಲದವರು ಮುಖ ಮಾಡುವ ಪರಿಸ್ಥಿತಿಯೇ ಇಲ್ಲ. ಬೇಕಾ ಬಿಟ್ಟಿ ಡೊನೇಶನ್ ವಸೂಲಿ ಮಾಡಿದರೂ ಸರಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೋಳ್ಳುತ್ತಿಲ್ಲ. ಸರಕಾರಗಳ ಖಾಸಗಿಯವರ ಪರವಾದ ನೀತಿಗಳಿಂದ ಈ ವ್ರತ್ತಿ ಶಿಕ್ಷಣವೆನ್ನುವುದು ಬಡವರಿಗೆ ಕನಸಿನ ಮಾತಾಗಿದೆ.
ಸಕಾಲಕ್ಕೆ ಸಿಗದ ವಿದ್ಯಾರ್ಥಿ ವೇತನಗಳು:
ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗುವ ವಿವಿಧ ವಿದ್ಯಾರ್ಥಿ ವೇತನಗಳು ಇಂದು ಸಮರ್ಪಕವಾಗಿ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂರು, ಮುನ್ನೂರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ಕೆಲವೊಂದು ವಿದ್ಯಾರ್ಥಿ ವೇತನಗಳನ್ನು ನಿಲ್ಲಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಬೋದನಾ ಶುಲ್ಕವನ್ನು ಸರಕಾರವೆ ಭರಿಸುತಿತ್ತು. ಆದರೆ ಕಳೆದ ಅವದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆಳ್ವಿಕೆಯಲ್ಲಿದ್ದ ಬಿ.ಜೆ.ಪಿ ಸರಕಾರ ಇದನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರಕಾರ ಕೂಡ ಇದನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಹಲವಾರು ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುವಂತಾಗಿದೆ.
ಹಾಸ್ಟೆಲ್ ಗಳಲ್ಲಿನ ಸಮಸ್ಯೆಗಳು:
ಇಂದು ಕರ್ನಾಟಕ ಹಾಸ್ಟೆಲ್ ಗಳಲ್ಲಿನ ಪರಿಸ್ಥಿತಿಯನ್ನೇ ಗಮನಿಸಿದರೆ ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲ್ಲಖೆಯ ಹಾಸ್ಟೆಲ್ ಗಳಿವೆ. ಎಲ್ಲಾ ಹಾಸ್ಟೆಲ್ ಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಾಸ್ಟೆಲ್ ಗಳಲ್ಲಿ ಪೌಷ್ಟಿಕ ಅಹಾರಗಳು ಕೂಡ ಸಿಗುತ್ತಿಲ್ಲ. ಆಹಾರಕ್ಕೆ ಬೇಕಾದ ಹಣವನ್ನು ಒದಗಿಸುವಲ್ಲಿ ಸರಕಾರಗಳು ವಿಫಲವಾಗಿದೆ. ಇದಲ್ಲದೆ ಅಧ್ಯಯನ ಸಮಾಗ್ರಿಗಳು, ದಿನ ಪತ್ರಿಕೆ, ಕಂಪ್ಯೂಟರ್ ಇದ್ಯಾವ ಸೌಲಭ್ಯವೂ ಹಾಸ್ಟೆಲ್ ಗಳಿಗೆ ಇಲ್ಲದ ಕಾರಣ ಹಾಸ್ಟೆಲ್ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ.
ಶಿಕ್ಷಣಕೆ ಹಣಕಾಸು ಕಡಿತ:
ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹಣಕಾಸು ಒದಗಿಸುವಲ್ಲಿ ವಿಫಲವಾಗುತ್ತಿದೆ. 1964 ರಲ್ಲಿ ಕೊಠಾರಿ ಅಯೋಗವು ಕೇಂದ್ರ ಬಜ್ಜೆಟ್ ನಲ್ಲಿ ಶೇ 10% ಹಾಗೂ ರಾಜ್ಯ ಬಜ್ಜೆಟ್ ನಲ್ಲಿ 30% ಹಣವನ್ನು ಮೀಸಲಿಡ ಬೇಕು ಎಂದು ಶಿಫಾರಸ್ಸು ನೀಡಿತ್ತು. ಆದರೆ ಸರಕಾರಗಳು ಇದನ್ನು ನಿರ್ಲಕ್ಷಿಸುತ್ತಿವೆ. ಸರಕಾರಗಳು ಬಜ್ಜೆಟ್ ನಲ್ಲಿ ಶಿಕ್ಶಣಕ್ಕೆ ಬೇಕಾದಷ್ಟು ಹಣವನ್ನು ಮೀಸಲಿಡದ ಕಾರಣ ಸರಕಾರಿ ಶಿಕ್ಷಣ ಸಂಸ್ಥೆಗಳು ಸೌಲಭ್ಯಗಳಿಂದ ವಂಚಿತವಾಗಲು ಕಾರಣವಾಗಿದೆ.
ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ತಡೆ:
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಗುಲಾಮರಂತೆ ಮಾಡಿ ರಾಜಕೀಯ, ಸಮಾಜಿಕ ಚಂತನೆಗಳನ್ನು ಬೆಳೆಸೆದಂತೆ ಮಾಡಲಾಗಿದೆ. ತಮಗೆ ಎಂತಹಾ ಶಿಕ್ಷಣ ಬೇಕು ಎನ್ನುವುದನ್ನು ತಿಳಿದು ಕೊಳ್ಳುವಂತಹ ಸಾಮಾನ್ಯ ಜ್ನಾನ ಕೂಡ ವಿದ್ಯಾರ್ಥಿಗಳಲ್ಲಿ ಇಲ್ಲವಾಗಿದೆ. ತಮ್ಮ ಹಕ್ಕುಗಳಿಗೋಸ್ಕರ ಪ್ರತಿಭಟಿಸುವ ಹಕ್ಕುಗಳನ್ನೇ ನಿರಾಕರಿಸಲಾಗಿದೆ. ಇದರ್ ಜೊತೆಗೆ ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಗಳಿಗೆ ನಡೆಯುವ ಚುನಾವಣೆಗಳನ್ನೇ ನಿರಾಕರಿಸಲಾಗಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆದರೆ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ನೆ, ಪ್ರಶ್ನಿಸುವ ಮನೋಭಾವ ಉಂಟಾಗಿ ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಪ್ರತಿಭಟಿಸಲು ಸಾಧ್ಯವಿತ್ತು. ಆದರೆ ಸರಕಾರಗಳು ಖಾಸಗಿ ಶಿಕ್ಶಣ ಸಂಸ್ಥೆಗಳ ಮತ್ತು ಬಂಡವಾಳ ಶಾಹಿಗಳ ಹಿಡಿತದಲ್ಲಿ ಇರುವ ಕಾರಣ ವಿದ್ಯಾರ್ಥಿಗಳ ದ್ವನಿಯನ್ನು ಅಡಗಿಸಿ ತನ್ನ ಬೇಳೆ ಬೇಯಿಸುವಲ್ಲಿ ನಿರತವಾಗಿದೆ.
ಈ ರೀತಿಯಲ್ಲಿ ಇಂದು ಎಲ್ಲಾ ವಿಧದಲ್ಲೂ ಶಿಕ್ಷಣವು ಹಲವಾರು ಲೋಪ ದೋಶಗಳಿಂದ ಕೂಡಿದೆ. ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳವಣಿಗೆ ಹೊಂದಿ ಈ ದೇಶಕ್ಕೆ ಕೊಡುಗೆ ನೀಡ ಬೇಕಾದರೆ ಅವರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಆದರೆ ಇಂದಿನ ನಮ್ಮ ಈ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಲ್ಲಿ ಯಾವುದೇ ಬೆಳವಣಿಗೆಗಳು ಆಲೋಚನೆಗಳು, ಪ್ರಶ್ನಿಸುವ ಮನೋಭಾವ ಬೆಳೆಯುತ್ತಿಲ್ಲ. ಈ ಪರಿಸ್ಥಿತಿಯ ಲಾಭ ಪಡೆದು ಕೊಂಡು ಕೋಮುವಾದಿಗಳು, ವಿಛ್ಹಿದ್ದಕಾರಿ ಶಕ್ತಿಗಳು ವಿದ್ಯಾರ್ಥಿಗಳ ತಲೆಗೆ ಧರ್ಮದ ವಿಷ ಬೀಜ ಬಿತ್ತುವ ಮೂಲಕ ದ್ವೇಶದ ಮನೋಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಹೆಚ್ಚಿನ ಶಿಕ್ಷಣ ಪಡೆದವರೇ ಹಲವಾರು ಕ್ರಿಮಿನಲ್ ಗಳಾಗಿರುವುದನ್ನು ಕಾಣಬಹುದು. ಇದಕ್ಕೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣವಾಗಿದೆ.
ನಮ್ಮ ಶಿಕ್ಷಣವು ಸಂಪೂರ್ಣವಾಗಿ ಬದಲಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಹಲವಾರು ಕ್ರಮ ಕೈಗೊಳ್ಳ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಸರಿಯಾದ ಗುಣಮಟ್ಟದ ಶಿಕ್ಷಣ ನೀಡಬೇಕು. ಆಗ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆಗಳಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಭಯದ ವಾತಾವರಣ ನಿರ್ಮಾಣ ಮಾಡದೆ ಆತ್ಮಿಯವಾಗಿ ನಡೆಸಿಕೊಂಡು ತಿಳುವಳಿಕೆ ನೀಡಬೇಕಾಗಿದೆ. ಇದಲ್ಲದೆ ಎಲ್ಲಾರೂ ಸರಕಾರಿ ಶಾಲೆಗಳಲ್ಲಿಯೆ ಶಿಕ್ಷಣ ಪಡೆಯುವಂತಾಗ ಬೇಕು. ಇದಕ್ಕಾಗಿ ಸರಕಾರವು ಸರಕಾರಿ ಶಾಲೆಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.
ಇಂದು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಆಂಗ್ಲ ಮಾದ್ಯಮ ಶಾಲೆಗಳನ್ನು ನಿಯಂತ್ರಿಸ ಬೇಕು.ಶಿಕ್ಷಣವು ಹಣ ಕೊಟ್ಟು ಖರೀದಿಸುವ ಸಾಧನವಾಗ ಬಾರದು. ಉತ್ತಮವಾದ ಮೌಲ್ಯಯುತ ಜೀವನ ನಡೆಸಲು ಹಾಗೂ ದೇಶಕ್ಕೆ ಕೊಡುಗೆ ನೀಡಲು ಸಹಕಾರಿಯಾಗಬೇಕು. ಪಕ್ಷೇತರ ಚಟುವಟಿಕೆಗಲಿಗೆ ಕೂಡ ಪ್ರೊತ್ಸಾಹ ಕೊಡಬೇಕು. ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಸರಕರ ಒದಗಿಸಬೇಕು. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಲು ಗ್ರಂಥಾಲಯ ವ್ಯವಸ್ಥೆ ಇರಬೇಕು. ಇಲ್ಲಿ ದಿನ ಪತ್ರಿಕೆಗಳು, ಇತರ ಎಲ್ಲಾ ಪುಸ್ತಕಗಳು ಸಿಗಬೇಕು. ವಿದ್ಯಾರ್ಥಿಗಳಲ್ಲಿ ದಿನ ನಿತ್ಯಾ ನಡೆಯುವ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳುವಳಿಕೆ ಬರಬೇಕು.
# ಪ್ರಾಥಮಿಕ ಹಂತದಿಂದ ಪಿ.ಯು.ಸಿ ತನಕವಾದರೂ ಶಿಕ್ಷಣ ಉಚಿತವಾಗಿ ಸಿಗಬೇಕು. ಇದರಿಂದ ಬಡ ಹಾಗೂ ಹಿಂದುಳಿದ ಮಕ್ಕಳು ಪಿಯುಸಿ ತನಕವಾದರೂ ಶಿಕ್ಷಣ ಪಡೆಯಬಹುದು. ಸರಕಾರಿ ಕಾಲೇಜುಗಳಿಗೆ ಡೊನೇಶನ್ ವಸೂಲಿ ಸಂಪೂರ್ಣ ನಿಷೇದಿಸಬೇಕು.
# ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಯಂತ್ರಣ ಹೇರಬೇಕು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆಯೆತ್ತಿದೆ. ಬೇಬಿ ಸಿಟ್ಟಿಂಗ್ ನಿಂದ ಹಿಡಿದು ಉನ್ನತ ಶಿಕ್ಷಣ್ದವರೆಗೆ ಬೇಕಾಬಿಟ್ಟಿ ಡೊನೇಶನ್ ಮಾಡಲಾಗುತ್ತಿದೆ. ಇದಕ್ಕೆ ಸರಕಾರ ನಿಯಂತ್ರಣ ಹೇರಬೇಕು.
# R.T.I ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಮುಂದಾಗಬೇಕು.
# ಕಾಯಿದೆಯ ಪ್ರಕಾರ ಖಾಸಗಿ ಶಿಕ್ಷಣ ಸಂಥೆಗಳು 100 ರಲ್ಲಿ 25% ಸೀಟನ್ನು ಬಡ ವಿದ್ಯಾರ್ಥಿಗಳಿಗೆ ನೀಡಬೇಕು. ಆದರೆ ಇದು ಯಶಸ್ವಿಯಾಗಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಿ R.T.I ಕಾಯ್ದೆ ಅನುಷ್ಟಾನವಾಗುವಂತೆ ಕ್ರಮ ಕೈಗೊಳ್ಳಬೇಕುಶಾಲಾ ಕಾಲೇಜುಗಳಿಗೆ ಖಾಯಂ ಶಿಕ್ಷಕರ, ಉಪನ್ಯಾಸಕರ ನೇಮಕವಾಗಬೇಕು. ಶಾಲಾ ಕಾಲೇಜುಗಳ್ಳಲ್ಲಿ ಇಂದು ಹೊರಗುತ್ತಿಗೆ ನೇಮಕಾತಿ ನಡೆಯುತ್ತಿದೆ. ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರು, ಉಪನ್ಯಾಸಕರು, ಹಾಸ್ಟೆಲ್ ವಾರ್ಡನ್, ಇತರ ಸಿಬಂದಿಗಳನ್ನು ಗುತ್ತಿಗೆ ಮತ್ತು ಅರೆ ಗುತ್ತಿಗೆ ಅದಾರದಲ್ಲಿ ನೇಮಕ ಮಾಡಲಾಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಒಂದು ವರ್ಷಕ್ಕೆ ಕೆಲವು ಸ್ವಯಂ ಸೇವ ಸಂಥೆಗಳ ಮೂಲಕ ನೇಮಕ ಮಾಡಲಾಗುತ್ತದೆ. ಈ ಸಂಸ್ಥೆಗಳು ಅವರಿಗೆ ಸರಿಯಾದ ವೇತನ ನೀಡದೆ ವಂಚಿಸಿದ ಸಾಕಷ್ಟು ಉದಾಹರಣೆಗಳಿವೆ. ಸಾಕಷ್ಟು ಖರ್ಚು ಮಾಡಿ ಉನ್ನತ ಶಿಕ್ಷಣ ಪಡೆದವರು ಬೀದಿ ಪಾಲಾಗುತ್ತಿದ್ದಾರೆ. ಈ ಎಲ್ಲದರ ಪರಿಣಾಮವನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ.
# ಅವೈಜ್ನಾನಿಕ ಸೆಮಿಸ್ಟರ್ ಪದ್ದತಿ ಕೈ ಬಿಡಬೇಕು. ಮತ್ತು ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕು.ಇಮ್ದಿನ ಅವೈಜ್ನಾನಿಕ ಸೆಮಿಸ್ಟರ್ ಪದ್ದತಿಯಿಂದ ವಿದ್ಯಾರ್ಥಿಗಳು ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಹೊರೆಯನ್ನು ಅನುಭವಿಸುಂತಾಗಿದೆ. ಈ ಬಗ್ಗೆ ಸರಕಾರವು ಶಿಕ್ಷಣ ತಜ್ನರೊಂದಿಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಸರಿಯಾದ ಕ್ರಮ ಕೈಗೊಳ್ಳಬೇಕು.
# ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ತಡೆಗಟ್ಟಿ ಪ್ರಾಮಾಣಿಕ ವ್ಯಕ್ತಿಗಳನ್ನು ಉನ್ನತ ಹುದ್ದೆಗೇರುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು.
ವಿದ್ಯಾರ್ಥಿ ಸಂಘದ ಚುಣಾವಣೆ ನಡೆಯಬೇಕು:
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆದರೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ರಾಜಕೀಯ, ಸಮಾಜಿಕ ತಿಳುವಳಿಕೆ ಬರುತ್ತದೆ. ಹಾಗೂ ಸಮಸ್ಯೆಗಳ ಬಗ್ಗೆ ದ್ವನಿಯೆತ್ತಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಶಾಲಾ ಕಾಲೇಜು ವಿ.ವಿ ಗಳಲ್ಲಿ ನಡೆಯುವ ಎಲ್ಲ ಚರ್ಚೆಗಳು ತೀರ್ಮಾನಗಳಲ್ಲಿ ವಿದ್ಯಾರ್ಥಿ ಪ್ರತಿನಿದಿಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೆಕು. ಈ ಬಗ್ಗೆ ಸರಕಾರ ಕ್ರಮ ಕೈಗೊಂಡರೆ ಶಿಕ್ಷಣದಲ್ಲಿನ ಲೋಪದೋಷಗಳನ್ನು ಕೆಲವು ಮಟ್ಟೀಗಾದರೂ ಸರಿಪಡಿಸಲು ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು. ಈಗ ಸರಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಮಠಗಳಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಇದನ್ನು ನಿಲ್ಲಿಸಬೆಕು.
ಪಠ್ಯ ಪುಸ್ತಕದಲ್ಲಿ ಜನಪರ ಮತ್ತು ವೈಜ್ನಾನಿಕ ಚಿಂತನೆಗಳಿರಬೇಕು.
ನಮ್ಮನ್ನಾಳುವ ಸರಕಾರಗಳು ಪಠ್ಯ ಪುಸ್ತಕಗಳಲ್ಲಿ ಜಾತ್ಯಾತೀತ ವಿರೋಧಿ, ಸಂವಿಧಾನ ವಿರೋಧಿಯಾಗಿರುವ ಕೆಲವು ವಿಷಯಗಳನ್ನು ಪ್ರಕಟಿಸಲು ಮುಂದಾಗಿದೆ. ಈ ದೇಶದ ನಿಜವಾದ ಇತಿಹಾಸವನ್ನು ತಿರುಚಿ ತಮಗೆ ಬೇಕಾದಂತೆ ಪ್ರಕಟಿಸುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ.ಪಠ್ಯದಲ್ಲಿ ಭಗದ್ಗೀತೆ ಕಡ್ಡಾಯ, ಜ್ಯೋತಿಷ್ಯ, ಯೋಗ ಸಮಾಜಕ್ಕೆ ಯಾವುದೇ ಕೊಡುಗೆ ನೀಡದ ಪಠ್ಯಗಳನ್ನು ಕೈ ಬಿಟ್ಟು ಈ ದೇಶದ ನಿಜವಾದ ಇತಿಹಾಸ, ಜಾತ್ಯಾತೀತತೆಗೆ, ವೈಚಾರಿಕತೆಗೆ ಕೊಡುಗೆ ನೀಡುವಂತಹ ಪಠ್ಯಕ್ರಮ ರೂಪಿಸಿದರೆ ವಿದ್ಯಾರ್ಥಿಗಳಿಗೆ ಬೌದ್ಧಿಕವಾಗಿ ಬೆಳವಣಿಗೆಗೆ ಸಾಧ್ಯವಾಗುತ್ತದೆ. ಹಾಗೂ ಶಿಕ್ಶಣದಲ್ಲಿ ಸ್ವಲ್ಪವಾದರೂ ಸುಧಾರಣೆಗಳು ಬೆಳೆದು ಬರಲು ಸಾಧ್ಯವಾಗುತ್ತದೆ.
ಹಾಸ್ಟೆಲ್ ವ್ಯವಸ್ಥೆಯನ್ನು ಬಲ ಪಡಿಸಬೇಕು ಮತ್ತು ವಿದ್ಯಾರ್ಥಿ ವೇತನವನ್ನು ಸೂಕ್ತ ಸಮಯಕ್ಕೆ ನೀಡಬೇಕು:
ಹೆಚ್ಚಿನ ಬಡ ವಿದ್ಯಾರ್ಥಿಗಳು, ಹಳ್ಳಿ ಪ್ರದೇಶದ ವಿದ್ಯಾರ್ಥಿಗಳು ಹಾಸ್ಟೆಲ್ ಗಳನ್ನು ಅವಲಂಬಿಸಿದ್ದಾರೆ. ಆದರೆ ಸರಕಾರಗಳು ಹಾಸ್ಟೆಲ್ ಗಳಿಗೆ ಸರಿಯಾದ ಪ್ರೊತ್ಸಾಹ ನೀಡದ ಕಾರಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ.
ಸರಕಾರವು ಹಾಸ್ಟೆಲ್ ಗಳಿಗೆ ಬೇಕಾದ ಸಮಾಗ್ರಿಗಳನ್ನು, ಮೂಲಭೂತ ಸೌಕರ್ಯಗಳನ್ನು ಹಾಗೂ ಪೌಷ್ಟಿಕಾಂಶವುಲ್ಲ ಆಹಾರವನ್ನು ಒದಗಿಸಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಸಿಗುವಂತಾಗಬೇಕು.
ಖಾಸಗಿ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಬಲಪಡಿಸ ಬೆಕು:
ಸರಕಾರಿ ವಿಶ್ವ ವಿದ್ಯಾಲಯಗಳು ಸೂಕ್ತ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಪ್ರವೇಶ ಶುಲ್ಕ ಏರಿಕೆ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಈ ಮಧ್ಯೆ ಸರಕಾರಗಳು ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿದೆ. ಖಾಸಗಿ ವಿಶ್ವ ವಿದ್ಯಾಲಗಳಿಗೆ ಅನುಮತಿ ನೀಡಿದ ನಂತರ ಸರಕಾರಕ್ಕೆ ಅದರ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಡೋನೇಶನ್ ವಸೂಲಿ ಮಾಡುವ ಅಪಾಯವಿದೆ.
ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು:
ಇಂದಿನ ಈ ಅವೈಜ್ನಾನಿಕವಾದ ಶಿಕ್ಷಣ ನೀತಿಗಳಿಂದಗಿ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಜಾಗತೀಕರಣದ ದಾಳಿಯಿಂದ ಗ್ರಾಮೀಣ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಗಳು ಮರೆಯಾಗುತ್ತಿವೆ. ವಿದ್ಯಾರ್ಥಿಗಳ ಪ್ರತಿಬೆಗಳು ನಶಿಸುತ್ತಿದೆ. ಇದಕ್ಕಾಗಿ ಸರಕಾರಗಳು ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹಾ ಕಾರ್ಯಕ್ರಮಗಳನ್ನು ಜಾರಿಗೋಳಿಸಬೇಕು. ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಬೇಕಾದ ಸಮಾಗ್ರಿಗಳನ್ನು, ಸೂಕ್ತ ತರಬೇತುದಾರರನ್ನು ಕೂಡಾ ನೇಮಿಸಬೇಕು. ಒಟ್ಟಿನಲ್ಲಿ ನಮ್ಮ ದೇಶ ಜಾಗತೀಕರಣ, ಉದಾರಿಕರಣ, ಖಾಸಗೀಕರಣದ ಪ್ರಭಾವದಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯ ಮೌಲ್ಯವನ್ನು ಕಳೆದುಕೋಂಡು ಕೇವಲ ಉದ್ಯೋಗ ಪಡೆಯಲು ಶಿಕ್ಷಣ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ಶಿಕ್ಷಣ ಪಡೆದವರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಪರದಾಡುವಂತಾಗಿದೆ.ನಮ್ಮನ್ನಾಳುವ ಸರಕಾರಗಳನ್ನು ಬಂಡವಾಳಶಾಹಿಗಳು ನಿಯಂತ್ರಿಸುವ ಕಾರಣದಿಂದಾಗಿ ಸರಕಾರಗಳಿಗೆ ಸರಿಯಾದ ಶಿಕ್ಷಣ ನೀಡುವಂತಹ ಯೊಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಸರಕಾರಗಳು ಈಗ ಇರುವ ಶಿಕ್ಷಣ ನೀತಿಗಳನ್ನು ಬದಲಾಯಿಸಿ, ಶಿಕ್ಷಣಕ್ಕೆ ಸರಿಯಾದ ಪ್ರೊತ್ಸಾಹ್, ಯೋಜನೆಗಳ್ಳನ್ನು ಕೈಗೊಂಡರೆ ಖಂಡಿತವಾಗಿಯೂ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಸುಧಾರಣೆ ಕಾಣಬಹುದು.
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಮುಂದೆ ಅವರು ಈ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಯಶಸ್ವಿಯಾಗಿ ಪಾಲ್ಗೊಳ್ಳಬೇಕಾದರೆ ಜನರಿಗೆ ಉತ್ತಮ ಶಿಕ್ಷಣ ಸಿಗಬೇಕು. ಜನರು ವಿದ್ಯಾವಂತರಾದರೆ ಮಾತ್ರ ಈ ದೇಶಕ್ಕೆ ಒಂದು ಉತ್ತಮ ಆಡಳಿತ ಸಿಗಲು ಸಾಧ್ಯ. ಇದಕ್ಕಾಗಿ ಸರಕಾರಗಳು ಶಿಕ್ಷಣದಲ್ಲಿನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸುವುದು ಇಂದಿನ ಅಗತ್ಯವಾಗಿದೆ