ಗುರುವಾರ, ಫೆಬ್ರವರಿ 12, 2015

ದೆಹಲಿ ಅನುಭವ




ಗೆಳೆಯರೇ...

ಕೆಲಸದ ನಿಮಿತ್ತ ತುರ್ತಾಗಿ ದೆಹೆಲಿಗೆ ಹೋಗಬೇಕಾಗಿ ಬಂದ್ದಿದ್ದರಿಂದ, ಓರ್ವ ಗೆಳೆಯನಜೊತೆಗೂಡಿ, ಸಮಯದ ಅಭಾವದ ಕಾರಣಮಂಗಳೂರಿನಿಂದ ದೆಹಲಿಗೆ ವಿಮಾನವೇರಿದೆ. ನನ್ನದೆಹಲಿ ಪ್ರಯಾಣದಲ್ಲಾದ ಕೆಲವು ಅನುಭವಗಳನ್ನುತಮ್ಮ ಮುಂದಿಡುತ್ತಿದ್ದೆನೆ.
ಮಂಗಳೂರಿನಿಂದ ಮುಂಬಯಿ ಮುಖಾಂತರಮಧ್ಯ ರಾತ್ರಿಗೆ ದೆಹಲಿ ಪ್ರಾದೇಶಿಕ ವಿಮಾನನಿಲ್ದಾಣದಲ್ಲಿ ಇಳಿದು ಹೊರಗೆ ಬಂದಾಗ ನೂರಾರುಬಾಡಿಗೆ ಕಾರುಗಳು ನಮಗೆದುರಾದವು. ಒಬ್ಬರನಂತರ ಒಬ್ಬರು ಟ್ಯಾಕ್ಸಿ ಬೇಕಾ ಎಂದು ಕೇಳತೊಡಗಿದರು. ಪಹಾಡ್ ಗಂಜ್ ಗೆ ಹೋಗಲು ಎಷ್ಟುಚಾರ್ಜ್ ಮಾಡುವಿರಿ ಎಂದು ಕೇಳಿದಾಗ, ನಮಗೆಸಿಕ್ಕಿದ ರೇಟ್ ಗಳನ್ನು ನೀವೇ ಗಮನಿಸಿ... ಒಬ್ಬರನಂತರ ಒಬ್ಬರು – 1500/-, 1200/-, 1000/-, 800/- ಕೊನೆಗೆ 700/- ರೂಪಾಯಿಗೆ ಬಂದು ನಿಂತಿತು.ಎಲ್ಲರ ರೇಟು ಕೇಳಿದ ನಂತರ, ನಿಲ್ದಾಣದಲ್ಲಿರುವ ಪ್ರೀಪೈಡ್ ಟ್ಯಾಕ್ಸಿಯಲ್ಲಿ ವಿಚಾರಿಸಿದಾಗ ಕೇವಲ 350/-ರೂಪಾಯಿ ಎಂದು ಉತ್ತರ ಸಿಕ್ಕಿತು. ಅದನ್ನೆ ನಿಗದಿಪಡಿಸಿ ಮುನ್ನಡೆದೆವು. ದಾರಿ ಮದ್ಯೆ ಕಾರಿನಚಾಲಕನಲ್ಲಿ, ಯಾವುದಾದರೂ 2000-2500/-ರೂಪಾಯಿ ಬೆಲೆಯ ಒಳ್ಳೆಯ ಹೋಟೆಲ್ಕೊಡಿಸುವಂತೆ ಕೇಳಿದೆವು. ಅವನು ಒಂದುಹೊಟೇಲಿಗೆ ಕರೆದು ಕೊಂಡು ಹೋದ, ನಮಗಿಂತಮೊದಲು ಒಳ ಹೊಕ್ಕು "ಸಾರ್ ಗೆ ರೂಮ್ ತೋರಿಸು"ಎಂದ. ರೇಟು ಎಷ್ಟು ಕೇಳಿದರೆ "ಮೊದಲು ರೂಮ್ನೋಡಿ, ಒಪ್ಪಿಗೆಯಾದರೆ ರೇಟು ತಿಳಿಸುವೆ" ಎಂದುರೂಮ್ ಬಾಯ್ ನೊಂದಿಗೆ ಕಳುಹಿಸಿದ. ರೂಮ್ಸಣ್ಣದಾಗಿದ್ದರೂ 2500/- ಬೇರೆ ವಿಧಿಯಿಲ್ಲದೆ ಒಪ್ಪಿದೆ.ನಮ್ಮ ಇನ್ನೋರ್ವ ಗೆಳೆಯ ದುಬಾಯಿ ಯಿಂದಬರುವವನಿದ್ದ ಕಾರಣ 2 ರೂಮ್ ಪಡೆದೆವು.

ಆದರೆ ನಂತರ ತಿಳಿಯಿತು ಆ ರೂಮ್ ಗೆಹೆಚ್ಚೆಂದರೆ 1000/- ರೂಪಾಯಿ ಕೊಡಬಹುದುಎಂದು. ನಮ್ಮನ್ನು ಕರೆದುಕೊಂಡು ಬಂದ ಟ್ಯಾಕ್ಸಿಡ್ರೈವರ್ ನಾವು ರೂಮ್ ನೋಡಲು ಒಳಗೆಹೋದಾಗ ಹೋಟೇಲಿನವನೊಂದಿಗೆ 2500/- ಹೇಳುಎಂದು ಫಿಕ್ಸಿಂಗ್ ಮಾಡಿ, ಬಾಕಿ ಹಣವನ್ನು ತನ್ನಜೇಬಿಗಿಳಿಸಿ ಹೋಗಿದ್ದ. ಸಾಮಾನ್ಯವಾಗಿ ನಾನುಯಾವಾಗಲೂ ದೂರದೂರಿಗೆ ಪ್ರಯಾಣ ಹೊರಡುವಾಗ Booking.com/app ನಲ್ಲಿ ನಿರ್ದಿಷ್ಟ ಸ್ಥಳದ ಹೋಟೆಲ್ ಗಳ ಬೆಲೆಯನ್ನು ಪರೀಕ್ಷಿಸಿಮುಂಗಡವಾಗಿ ಕಾಯ್ದಿರಿಸುತ್ತಿದ್ದೆ. ಆದರೆ ಈ ಸಲಸಮಯದ ಅಭಾವದ ಕಾರಣ ಪರೀಕ್ಷಿಸಲಾಗಲಿಲ್ಲ. ಆಸಂದರ್ಭದಲ್ಲಿ ನನಗೆ ಈ app ನ ಮಹತ್ವ ತಿಳಿಯಿತು.

ಮರುದಿನ ಮಧ್ಯಾನ್ಹ 1:30 ಕ್ಕೆ ಹೋಟೆಲ್ಬಿಡುವಾಗ 2 ರೂಮ್ 2 ದಿನದ ಬಾಡಿಗೆ ಕೇಳಿದ.ನಾವು ಕೇವಲ 13 ಗಂಟೆ ಮಾತ್ರ ಉಳಿದುಕೊಂಡದ್ದು,ಅದಕ್ಕೆ ಎರಡು ದಿನದ ಬಾಡಿಗೆ ಯಾಕೆ ಎಂದು ಕೇಳಿದೆ.ಅದಕ್ಕವನು "ನೀವು ಯಾವುದೇ ಸಮಯದಲ್ಲಿಬಂದರೂ ಮಧ್ಯಾನ್ಹ 12 ಗಂಟೆ ಮೊದಲು ರೂಮ್ಖಾಲಿ ಮಾಡ್ಬೆಕು. ಇಲ್ಲಂದ್ರೆ ಮರುದಿನದ ಬಾಡಿಗೆಕಡ್ಡಾಯ ಪಾವತಿಸ ಬೇಕು. ಆಗ ನಾನುBooking.com/app ನ ಮೊರೆ ಹೋದಾಗ ಅದೇಪರಿಸರದಲ್ಲಿ ಇನ್ನೊಂದು ಉತ್ತಮ ಹೋಟೆಲ್ಲಭಿಸಿದಾಗ ಅದನ್ನೇ ರಿಸರ್ವ್ ಮಾಡಿ, ಅಲ್ಲಿಂದನಿರ್ಗಮಿಸಿದೆವು. ನಮಗೆ ಲಭಿಸಿದ ಹೋಟೆಲ್ವಿಶಾಲವಾಗಿಯೂ, ಸ್ವಚ್ಚವಾಗಿತ್ತು. ನಾವು 3 ಜನರಿಗೆಉಳಿದು ಕೊಳ್ಳಲು ಬಾಡಿಗೆ ಕೇವಲ 2800/-ರೂಪಾಯಿ ಮಾತ್ರ – Thanks to Booking.com/app

ನಮ್ಮ ಉದ್ದೇಶಿತ ಕಾರ್ಯವು 3 ದಿನ ವಿಳಂಭವಾದ ಕಾರಣ ಮರುದಿನ ಜಗತ್ತಿನ 7 ನೇ ಅಧ್ಭುತವಾದ ಆಗ್ರಾದ "ತಾಜ್ ಮಹಲ್" ನೋಡಲು7000/- ಪಾವತಿಸಿ ಬಾಡಿಗೆ ಕಾರು ನಿಗದಿಪಡಿಸಿ ಮುಂಜಾನೆ 6 ಗಂಟೆಗೆ ಹೊರಟೆವು. 4 ಗಂಟೆಗಳ ಪ್ರಯಾಣವಾದ ಕಾರಣ, ದಾರಿ ಮದ್ಯೆ ಕಾರು ಚಾಲಕ ಕೇಳಿದ "ಸಾರ್ ಚಹ, ತಿಂಡಿಗಾಗಿ ಮುಂದೆ ಒಂದು ಧಾಭಾವಿದೆ" ಎಂದ. ಅದರಂತೆ ಧಾಭಾದ ಒಳಗೆ ಹೋಗಿ ತಿಂಡಿಗಳ ದರ ಪಟ್ಟಿ ನೋಡಿ ದಂಗಾದೆವು. ಒಂದು ಪ್ಲೇಟ್ ಪೂರಿಗೆ 125/-, ಕೇವಲ ಒಂದು ಪರೋಟಕ್ಕೆ 40/-, ಚಹ 50/- ರೂಪಾಯಿ. ಊರಿನಲ್ಲಿ15 ರೂಪಾಯಿಗೆ ಸಿಗುವ ಬಿಸ್ಕಿಟ್ ಗೆ 170/- ಮುಂದಿನ ಧಾಭಾದಲ್ಲಿ ಅದೇ ಬಿಸ್ಕಿಟ್ ಗೆ 50/- ರೂಪಾಯಿ ಕೊಟ್ಟು ಖರೀದಿಸಿ ಮುಂದುವರಿದು ಒಂದು ಕ್ಯಾಂಟೀನ್ ನಲ್ಲಿ ಚಹ ತಿಂಡಿ ಮುಗಿಸಿದೆವು.

ನಂತರ ಆಗ್ರಾ ತಲುಪಿದಾಗ ತಾಜ್ ಮಹಲ್ ನ ಗೇಟ್ ನಲ್ಲಿ ಸೈಕಲ್ ರಿಕ್ಷಾದವ ಹೇಳಿದ " ಸಾರ್ ಇದು ಸರಕಾರಿ ಪ್ರಾಯೊಜಿತ ಸೈಕಲ್. ತಾಜ್ ಮಹಲ್ ಬಳಿಗೆ ಬಿಡಲು ಕೇವಲ 40/- ರೂಪಾಯಿ ಮಾತ್ರ" ಒಮ್ಮೆ ಸೈಕಲ್ ರಿಕ್ಷಾ ಏರಿದ ಮೇಲೆ, ಅಲ್ಲಿಯ ಪರಿಸರದ ಬಗ್ಗೆ ವಿವರಿಸಲು ತೊಡಗಿದ. ಕೊನೆಗೆ "ಸಾರ್ ಇಲ್ಲಿ ಒಂದು ಸರಕಾರಿ ಬಟ್ಟೆ ಅಂಗಡಿ ಇದೆ. ಕಡಿಮೆ ಬೆಲೆಯಲ್ಲಿ ಉತ್ತಮ ಸೀರೆಗಳು. ಬಿದಿರನ್ನು ಎಳೆ ಎಳೆಯಾಗಿ ಬಿಡಿಸಿ, ಅದರಿಂದ ತಯಾರಿಸಿದ ಸೀರೆಗಳು. ಬಾಳೆ ದಿಂಡಿನ ಎಳೆಗಳಿಂದ ತಯಾರಿಸಿದ ಸೀರೆಗಳು. ನಯವಾಗಿಯೂ, ಅತೀ ಹಗುರವಾದ, ಇಸ್ತ್ರಿ ಹಾಕುವ ಅಗತ್ಯವಿಲ್ಲದ ಸೀರೆಗಳು. ಜೈಲಿನಲ್ಲಿರುವ ಕೈದಿಗಳಿಂದ ತಯಾರಿಸಲ್ಪಡುತ್ತದೆ. 5 ವರ್ಷ ವಾರಂಟಿಯೂ ಇದೆ. ಅದೂ ಅಲ್ಲದೆ 3-4 ವರ್ಷ ಉಪಯೊಗಿಸಿದ ನಂತರ ಹಿಂತಿರುಗಿಸಿದರೆ ಅರ್ಧ ಹಣ ವಾಪಸ್ ನೀಡುತ್ತಾರೆ. ಬೆಂಗಳೂರಿನಲ್ಲಿ ಇವರ ಶಾಖೆಗೆ ಹಿಂತಿರುಗಿಸ ಬಹುದು. ಅಲ್ಲಿ ಒಂದು ದಪ್ಪವಾದ ಹಾಗೂ ಹತ್ತಿಗಿಂತ ಹಗುರವಾದ ಚಾದರ ಸಿಗುತ್ತದೆ. ಚಳಿಗಾಲದಲ್ಲಿಯೂ ಉಪಯೊಗಿಸಿ, ಸೆಖೆಗಾಲದಲ್ಲಿ ಅದನ್ನೆ ತಿರುಗಿಸಿ ಹೊದ್ದು ಕೊಂಡರೆ ತಂಪಾಗಿರಿಸುತ್ತದೆ." ಹೀಗೆ ಹೇಳುತ್ತಾ ನಾನು ನಿಮ್ಮನ್ನು ಮೊದಲು ಅಲ್ಲಿಗೆ ಕರೆದು ಕೊಂಡು ಹೋಗುವೆ, ನಂತರ ತಾಜ್ ಮಹಲ್ ಗೆ ಕರೆದು ಕೊಂಡು ಹೋಗುವೆ ಎಂದ. ಅವನ ಮಾತಿಗೊಪ್ಪಿ ಆ ಅಂಗಡಿಗೆ ಭೇಟಿ ನೀಡಿ ಬಾಳೆ ದಿಂಡಿನ ಮತ್ತು ಬಿದಿರಿನ ೨ ಸೀರೆ ಹಾಗು ಒಂದು ಚಾದರ ಖರೀದಿಸಿ ಸೈಕಲ್ ಹತ್ತಿ ಕುಳಿತು ಚಾಲಕನಿಗಾಗಿ ಕಾಯುತಿದ್ದೆವು. ಅವನು ನಮ್ಮ ವ್ಯಾಪಾರದ ಮೊತ್ತಕ್ಕನುಗುಣವಾಗಿ ಕಮಿಶನ್ ಪಡೆಯಲು ಹೊಗಿದ್ದ ಎಂದು ನಂತರ ತಿಳಿಯಿತು. ಅಲ್ಲಿಂದ ತಾಜ್ ಮಹಲ್ ಕಡೆಗೆ ಹೊರಟೆವು.

ಟೂರಿಸ್ಟ್ ಗೈಡ್ ನ ಸಹಾಯ ಪಡೆಯುವುದು ಬೇಡವೆಂದು ಮೊದಲು ನಿರ್ಧರಿಸಿದ್ದೆವು. ಆದರೆ ತಾಜ್ ಮಹಲ್ ಪ್ರವೇಶಕ್ಕೆ 400-500 ಜನ ಕ್ಯೂ ನಿಂತಿದ್ದರು. ಆಗ ಅಲ್ಲಿಗೆ ಬಂದ ಗೈಡ್ ನಮಗೆ ಹೇಳ ತೊಡಗಿದ "ಸಾರ್ ಹೀಗೆ ಹೋದರೆ ಟಿಕೆಟ್ ಸಿಗುವಾಗ ಸಂಜೆಯಾಗುತ್ತದೆ. ನಾನು ನಿಮ್ಮನ್ನು ಕಾಯಿಸದೆ 5ನಿಮಿಷದಲ್ಲಿ VIP ಗೇಟ್ ಮುಖಾಂತರ ಒಳಗೆ ಕರೆದು ಕೊಂಡು ಹೋಗುವೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿ ಕೊಳ್ಳುವೆ. ಕೇವಲ450/- ರೂ ಕೊಡಿ ಎಂದ. ಅಲ್ಲಿರುವ ಕ್ಯೂ ನೋಡಿ ಅವನ ಮಾತಿನ ಮೇಲೆ ನಂಬಿಕೆ ಇರಲಿಲ್ಲ. ಆದರೂ ವಿಧಿಯಿಲ್ಲದೆ ಒಪ್ಪಿದೆವು. ಅವನು ತನ್ನ ಮಾತಿನಂತೆ ನಮ್ಮನ್ನು ಇಕ್ಕಟ್ಟಾದ ಓಣಿಗಳಲ್ಲಿ ಕರೆದು ಕೊಂಡು ಹೋಗಿ ಟಿಕೇಟ್ ಪಡೆದು 5 ನಿಮಿಷದಲ್ಲಿ ಹೊರಗಿನVIP ಗೇಟ್ ಮುಖಾಂತರ ಪ್ರವೇಶಿಸುವಂತೆ ಮಾಡಿದ. ಪರಿಸರವನ್ನು ಸುತ್ತಾಡಿಕೊಂಡು ತಾಜ್ ಮಹಲ್ ನ ಒಳಗೆ ಹೋಗಲು ಇನ್ನಷ್ಟು (100-150 ಜನರ) ಕ್ಯೂ ಇತ್ತು. ಆಗ "ಚಿಂತೆ ಮಾಡಬೇಡಿ, ಎರಡೇ ನಿಮಿಷದಲ್ಲಿ ನಾವು ಒಳಗೆ ಹೋಗುವಂತೆ ಮಾಡುವೆ" ಎಂದವನೇ ಸರತಿಯ ಸಾಲನ್ನು ದಾಟಿಸಿ, ತಟ್ಟನೆ ಒಳಗೆ ಹೊಗಲು ಅನುವು ಮಾಡಿ ಕೊಟ್ಟು, ಸವಿವರವಾಗಿ ಮಾಹಿತಿ ನೀಡಿದ ನಂತರ ಗೇಟ್ ನ ಹೊರಗಡೆ ನಮ್ಮ ಸೈಕಲ್ ರಿಕ್ಶಾದ ಬಳಿಗೆ ಬಿಟ್ಟ. ಅಲ್ಲಿಂದ ದೆಹಲಿಯ ನಮ್ಮ ಹೋಟೆಲ್ ಕಡೆಗೆ ಪ್ರಯಾಣ ಬೆಳೆಸಿದೆವು. ಗೈಡ್ ನಿಂದಾಗಿ ನಮ್ಮ ಕೆಲಸ ತುಂಬಾನೆ ಸುಲಭವಾಯಿತು.

ದೆಹಲಿಗೆ (ಇತರ ಊರಿಗೂ ಅನ್ವಯ) ಪ್ರಯಾಣಿಸುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಿ.

· ಚಳಿಗಾಲದ ಸಮಯದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಥವ ಹತ್ತುವಾಗ ಸಾಧ್ಯವಾದಷ್ಟು 10 am ಗಂಟೆಯ ನಂತರದ ವಿಮಾನಗಳೊಂದಿಗೆ ವ್ಯವಹರಿಸಿ.ಏಕೆಂದರೆ,ಮಧ್ಯರಾತ್ರಿಯಿಂದ ಬೆಳ್ಳಗಿನವರೆಗೆ ದಟ್ಟವಾದ ಮಂಜು ಆವರಿಸಿರುವ ಕಾರಣ ವಿಮಾನ ವಿಳಂಬ(ಆಗುತ್ತದೆ)ವಾಗುವ ಸಾಧ್ಯತೆಗಳಿರುತ್ತವೆ.
· ಟ್ಯಾಕ್ಸಿಯನ್ನು ಪ್ರೀ ಪೈಡ್ ಕೌಂಟರ್ ನಿಂದಲೇ ಕಾಯ್ದಿರಿಸಿಕೊಳ್ಳಿ.
· ಹೋಟೆಲ್ ಕಾಯ್ದಿರಿಸಲು ಕೆಲವೊಂದು ಆಪ್ಲಿಕೆಶನ್ ಗಳು ಸ್ಮಾರ್ಟ್ ಫೊನ್ ಗಳಲ್ಲಿ ಲಭ್ಯವಿದೆ. ಹಾಗಾಗಿ ಪ್ರಯಾಣ ಹೊರಡುವ ಮೊದಲೇ ಅಂತಹ ಆಪ್ಲಿಕೆಶನ್ ಸಹಾಯದಿಂದ ತಮ್ಮ ಹೋಟೆಲ್ ಕೋಣೆಯನ್ನು ಕಾಯ್ದಿರಿಸಿಕೊಳ್ಳಿ. ಇಲ್ಲಾಂದ್ರೆ ದುಪಟ್ಟ ಹಣ ಕೊಡ ಬೇಕಾಗಿ ಬರಬಹುದು.
· ಕೆಲವು ಹೋಟೆಲ್ ಗಳಲ್ಲಿ ನೀವು ಪ್ರವೆಶಿಸಿದ ಕ್ಷಣದಿಂದ ನಿಮ್ಮ ಸಮಯ ಶುರುವಾಗಿ ಮರುದಿನ ಅದೇ ಸಮಯಕ್ಕೆ ಮುಕ್ತಾಯವಾಗುತ್ತದೆ. ಆದರೆ ಕೆಲವು ಹೋಟೆಲ್ ಗಳಲ್ಲಿ 12pm ಗೆ ಕೋಣೆ ಬಿಡ ಬೇಕಾಗಿದೆ. ಅದರ ನಂತರ ಅರ್ಧ ಗಂಟೆ ಕಳೆದರೂ ಮರು ದಿನದ ಬಾಡಿಗೆಯನ್ನು ಪಾವತಿಸ ಬೇಕಾಗುತ್ತದೆ. ಹಾಗಾಗಿ ಇದನ್ನು ಮೊದಲೇ ಹೋಟೆಲ್ ನವರಿಂದ ಕೇಳಿ ತಿಳಿದು ಕೊಳ್ಳಿ.
· ತಾಜ್ ಮಹಲ್ ನಲ್ಲಿ ಗೈಡ್ ಪಡಕೊಂಡ್ರೆ ಒಳ್ಳೆದು. (ಅನುಭವದ ಮಾತು)
· ಚಳಿಗಾಲದಲ್ಲಿ ಹವಾಮಾನ 4 ಡಿಗ್ರಿಯವರೆಗೆ ಇಳಿಯುತ್ತದೆ. ಹಾಗಾಗಿ ಅದಕ್ಕೆ ತಕ್ಕುದಾದ ಬಟ್ಟೆ,ಕಾಲು ಚೀಲ, ಕೈ ಚೀಲ ಇತ್ಯಾದಿಗಳೊಂದಿಗೆ ಪ್ರಯಾಣಿಸಿ.
ದೆಹಲಿ ಪ್ರಯಾಣದಲ್ಲಿ ನನಗಾದ ಅನುಭವ ಹಾಗೂ ಪ್ರಯಾಣಿಕರಿಗೆ ಉಪಯೋಗವಾಗಲಿ ಎಂಬುದು ಈ ಲೇಖನ ಬರೆಯುವ ಉದ್ದೇಶ. ಹಾಗಾಗಿ ಈ ಲೇಖನ ಉಪಯುಕ್ತವಾಗಿದೆ ಎಂಬ ವಿಶ್ವಾಸದೊಂದಿಗೆ
ನಿಮ್ಮವನೇ ಆದ
ಅನಾಮಿಕ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ