ಭಾರತವು ಬಹು ಸಂಕೀರ್ಣತೆಯ ಮತ್ತು ಬಹು ಸಮಾಜದ ಗೊಂದಲಮಯ ದೇಶವಾಗಿದೆ. ಹಾಗೆಯೇ ವಿಶ್ವ ದಲ್ಲಿಯೇ ಅತಿ ಹೆಚ್ಚಿನ ಧರ್ಮಗಳನ್ನು ಹೊಂದಿದೆ. ನಮ್ಮ ದೇಶದ ನಿಜವಾದ ಸಮಸ್ಯೆ ಶಿಕ್ಷಣ, ನಿರುದ್ಯೋಗ, ಬಡತನವೇ ಹೊರತು ಮಂದಿರ, ಮಸೀದಿ, ಗೋವು ,ಹಂದಿ ಅಲ್ಲ ಅಂತ ಎಲ್ಲಿವರೆಗೆ ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅಭಿವ್ರದ್ದಿ ಮರೀಚಿಕೆ ಮಾತ್ರ. ಧರ್ಮ, ಬಟ್ಟೆ , ಆಹಾರ ವೈಯುಕ್ತಿಕವಾದವುಗಳೇ ಹೊರತು ಸಾರ್ವತ್ರಿಕವಾಗಿ ಹೇರಲ್ಪಡುವಂತದ್ದು ಅಲ್ಲ.
ನಮ್ಮ ವೋಟು ಪಡೆದವರು ತಮ್ಮ ತೀಟೆಗಳಿಗೆ ಜನರ ನಡುವೆ ದ್ವೇಷ ಏರ್ಪಡಿಸಿ ಕೋಮು ದಳ್ಳುರಿಗೆ ಪ್ರಚೋದಿಸುತ್ತಿರುವಾಗ, ನಮ್ಮ ದೇಶದ ಇಂಚು ಇಂಚನ್ನು ಹಂತ ಹಂತವಾಗಿ ನಮಗೆ ಗೊತ್ತೇ ಆಗದ ಹಾಗೆ ಮಾರುತ್ತಿರುವಾಗ ನಾವು ಕುರುಡ ರಂತೆ ಅವರನ್ನು ಅಪ್ಪಿಕೊಂಡರೆ ನಮ್ಮ ನಾಶ ಖಂಡಿತ .ಹೀಗಾಗಿ ನಮ್ಮಲ್ಲಿನ ವಿವಿದತೆಯನ್ನು ಬದಿಗಿಟ್ಟು ಭಾರತ ರಕ್ಷಣೆಗೆ ನಾವೆಲ್ಲಾ ಒಂದಾಗಿ ನಮ್ಮ ಶಕ್ತಿಯನ್ನು ದುಪ್ಪ
ನಮ್ಮ ನಡೆ-ನುಡಿ, ವೇಷ -ಭೂಷಣ, ಆಚಾರ-ವಿಚಾರ, ಆಹಾರ-ವಿಹಾರದ ವಿವಿಧತೆಯಲ್ಲಿಯೂ ಕೂಡ ಏಕತೆಯನ್ನು ಒಪ್ಪಿಕೊಂಡಿರುವ ನಾವು ಸಂಕುಚಿರಾಗದೆ, ನಮ್ಮ ಅನನ್ಯತೆಯನ್ನು ಮೆಚ್ಚಿಕೊಂಡು ಮುನ್ನಡೆದರೆ ಮಾತ್ರ ದೇಶ ವಿಕಾಶದ ಕನಸು ನನಸಾಗಲು ಸಾದ್ಯ. ಭವಿಷ್ಯದ ಭಾರತದ ಅಬಿವ್ರದ್ದಿಗೆ ಹೊಸ ದೃಷ್ಟಿಕೋನದ ಅಗತ್ಯವಿದ್ದು ಅಂತ ಹೊಸ ಬದಲಾವಣೆಗಳನ್ನು ನಾವು ಮಾಡಿಕೊಳ್ಳಬೇಕಿದೆ.ಎಲ್ಲ ಧರ್ಮದವರೂ ಸಮಾನವಾಗಿ ಎದುರಿಸಬೇಕಾದ ಸಮಸ್ಯೆಗಳಾದ ಶಿಕ್ಷಣ, ನಿರುದ್ಯೋಗ, ಬಡತನದ ವಿರುದ್ದ ಹೋರಾಡಬೇಕೆ ಹೊರತು ಪರಸ್ಪರ ಗುದ್ದಾಡುವುದು ಅಲ್ಲ. ದೇಶದ ಹಿತಾಶಕ್ತಿಯಿಂದ ನಮ್ಮೊಳಗಿನ ವೈಷಮ್ಯ ತೊರೆದು ಒಂದಾಗಬೇಕಿದೆ. ತನ್ಮೂಲಕ ಸಾಮಾನ್ಯ ಭಾರತೀಯರ ಹೆಬ್ಬಯಕೆಗಳನ್ನು ಈಡೇರಿಸಲು ಮತ್ತು ದೇಶದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಲು ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಚಿಂತಕರು ,ಸಮಾಜ ಸುದಾರಕರು ಮುಂದೆ ಬರಬೇಕಾಗಿದೆ.
ಅಭಿವ್ರದ್ದಿಯ ಕಡೆಗೆ ನಡೆಸಬಲ್ಲ ಅಂಥ ನಡೆಯನ್ನು ವಿಶಾಲ ಮನಸ್ಸಿನಿಂದ ಒಪ್ಪಿಕೊಂಡರೆ ಭವಿಷ್ಯದಲ್ಲಿ ಭಾರತ ನಂಬರ್ ಒನ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
- ಉಫಾಕು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ