ಭಾನುವಾರ, ಮಾರ್ಚ್ 29, 2015

ನನ್ನ ಕನಸಿನ ಭಾರತ



ಸುಹಾನ ಫಾತಿಮ     ಹೇಂತಾರ್
ನಿಕ್ಷೇಪ 2014-15 ನಲ್ಲಿ ಸಮಾಧಾನಕರ ಬಹುಮಾನ ಪಡೆದ ಲೇಖನ #3#


ಪ್ರಸಕ್ತ ನನ್ನ ದೇಶದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಕಾರಣ ನಾನು ಜನ್ಮ ಕಳೆದಂತಹ ಭೂಮಿಯು ಇದಾಗಿದೆ. ಜನನೀ ಜನ್ಮ ಭೂಮಿ ಸ್ವರ್ಗದಪಿಗರೀಯಸಿ ಎಂಬುದೊಂದು ಶ್ಲೋಕವನ್ನು ನಾವು ರಾಮಾಯಣದಲ್ಲಿ ಕಾಣಬಹುದು. ಅದೇ ರೀತಿಯಲ್ಲಿ ಜನ್ಮ ಭೂಮಿಯನ್ನು ಪ್ರೀತಿಸದವನು ಸತ್ಯ ವಿಶ್ವಾಸಿಯಲ್ಲವೆಂಬುದು ಪ್ರವಾದಿ ಮಹಮ್ಮದ್ ಪೈಗಂಬರ್ನವರ ವರನುಡಿಯಾಗಿದೆ.

ಆದರೆ ನನ್ನ ಭಾರತವು ಪರಕೀಯರ ಆಡಳಿತಕ್ಕೊಳಪಟ್ಟು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ದೇಶ ಪ್ರೇಮಿಗಳು ತನ್ನ ತನು, ಮನ, ಧನ, ಪ್ರಾಣಗಳನ್ನು ಅರ್ಪಿಸಿದ ಚರಿತ್ರೆಯು ಕಾಲಚಕ್ರದಲ್ಲಿ ಅಡಗಿದೆ. ಆದರೆ ಪ್ರಸಕ್ತ ರಾಷ್ಟ್ರವನ್ನು ಪರಿಶೀಲಿಸಿದರೆ, ತ್ಯಾಗವು ಮರೆಯಾಗಿ ಭೋಗದ ಜೀವನ ಶೈಲಿಯನ್ನು ಕಾಣಬಹುದಾಗಿದೆ. ಅಂದು ದೇಶಕ್ಕೆ ಎಲ್ಲವನ್ನೂ ಕೊಟ್ಟವರು ಹಲವರು. ಇಂದು ದೇಶದ ಸಂಪತ್ತನ್ನೇ ಲೂಟಿ ಮಾಡುವವರು ಸಾವಿರಾರು ಜನರು.

ಭಾರತ ದೇಶವು ಜಗತ್ತಿನಲ್ಲಿಯೇ ಶೋಭಿತವಾಗಬೇಕು. ಜಗತ್ತಿನ ಎಲ್ಲಾ ಜನರು ನನ್ನ ಭಾರತವನ್ನೂ ಕಂಡು ಕಲಿಯಬೇಕು. ಯಾಕೆಂದರೆ ಪುರಾತನ ಕಾಲದಲ್ಲೇ ಭಾರತವು ಜ್ಞಾನ ಭೂಮಿಯಾಗಿತ್ತು. ಕಗೋಲ ಶಾಸ್ತ್ರ. ಶೂನ್ಯದ ಬಳಕೆ, ಆಯುರ್ವೇದ ಚಿಕಿತ್ಸಾ ಕ್ರಮ, ಶಿಲ್ಪಕಲೆ, ಜಗತ್ತಿಗೆ ನಾವು ಕೊಟ್ಟಿದ್ದೇವೆ.

ಭಾರತೀಯ ಜನರಿಗೆ ಆರೋಗ್ಯವು ದೊರಕುವಂತಾಗಬೇಕು. ಸ್ವಚ್ಚ ಆಹಾರದ ತಯಾರಿಕೆಯು ನಮ್ಮದಾಗಿದ್ದು ಹೃದಯ ಕಾಯಿಲೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ಮೊದಲಾದ ರೋಗಗಳಿಂದ ಮುಕ್ತರಾಗುವಂತೆ ನನ್ನ ಕನಸಾಗಿದೆ.
ಸ್ತ್ರೀಯರ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಒಳಪಡದಂತೆ, ಜಾಗೃತರಾಗಿರಬೇಕು. ಪುರುಷ ವರ್ಗವು ಸಚ್ಚಾರಿತ ಹಾಗೂ ನೀತಿಯುತವಾಗಿ ಬದುಕುವ ಕಲೆ ಹಾಗೂ ಸ್ತ್ರೀ ಗೌರವದ ಮನಸ್ಥಿತಿಯನ್ನು ಹೊಂದಿಕೊಂಡು ಅತ್ಯಚಾರದ ಮೂಲೋತ್ಪಾದನೆಯಾಗಬೇಕು. ಮಧ್ಯ ರಾತ್ರಿಯಲ್ಲಿ ಮಾಲಿನಿಯರು ಯಾವುದೇ ಮಾರ್ಗದಲ್ಲಿ ಧೈರ್ಯವಾಗಿ ನಡೆಯುವಂತಹ ಸಮಯವೇ ಸಂಪೂರ್ಣ ಸ್ವಾತಂತ್ರ್ಯದ ಅನುಭವಾಗಿದೆ. ಖಲೀಪ ಉಮರರ ರಾಜ್ಯಾಡಳಿತ ಕಾಲದಲ್ಲಿ ಸ್ತೀಯರು ಮಧ್ಯರಾತ್ರಿಯಲ್ಲಿ ಯಾವುದೇ ಭಯವಿಲ್ಲದೇ, ನಡೆದಾಡುತ್ತಿದ್ದಾರೆಂದು ಚರಿತ್ರೆಯಾಗಿದೆ. ಇದೇ ಕನಸನ್ನು ಮಾಹಾತ್ಮಾಜಿಯವರು ಕಂಡಿದ್ದರು.

ಯುವ ಶಕ್ತಿಯು ಮಾದಕ ದ್ರವ್ಯಗಳ ಗುಲಾಮರಾಗಿ, ತನ್ನ ಜೀವನವನ್ನು ದುಃಖಮಯಗೊಳಿಸುತ್ತಿದ್ದಾರೆ. ಆದುದರಿಂದ ಎಲ್ಲಾ ಮಾದಕ ದ್ರವ್ಯ ಹಾಗೂ ಮದ್ಯಪಾನ ಮುಕ್ತವಾದ ಭಾರತವು ನನ್ನ ಕನಸಿನದ್ದಾಗಿದೆ.ಇನ್ನೊಂದು ರಾಷ್ಟ್ರೀಯ ಸಮಸ್ಯೆಯೆಂದರೆ ಕೋಮುವಾದ ಜಾತಿ ಧರ್ಮಗಳಲ್ಲಿ ಪರಸ್ಪರ ದ್ವೇಷ, ಅಸೂಯೆ, ಹಿಂದೂ ಮುಸ್ಲಿಮರೆಂಬ ಬೇಧ ಭಾವದ ಕಲಹ ಎಲ್ಲಯೂ ಅಳಿಯಬೇಕು. ಎಲ್ಲ ಭಾರತೀಯರೂ ಏಕೋದರ ಸಹೋದರರಂತೆ ವರ್ತಿಸಿ, ರಾಷ್ಟ್ರೀಯ ಕಾರ್ಯದಲ್ಲಿ ಮಗ್ನರಾಗಬೇಕು.

ಭಾರತೀಯರಿಗೆ ಸರಿಯಾದ ವಿದ್ಯಾಭ್ಯಾಸವು ದೊರಕುವಂತೆ ಆಗಬೇಕು. ಆರ್ಥಿಕ ತೊಡಕಿನಿಂದಾಗಿ ಯಾವುದೇ ಭಾರತೀಯರಿಗೆ ವಿದ್ಯಾವಂಚನೆಯಾಗಬಾರದು ಹಾಗೂ ಜನ ಶಕ್ತಿಯನ್ನೂ ದೇಶದ ಸೇವೆಗಾಗಿ ಉಪಯೋಗಿಸಿಕೊಳ್ಳುವಂತಾಗಬೇಕು. ವೈಜ್ಞಾನಿಕ ರಂಗದಲ್ಲಿ ದೇಶವು ಪ್ರಗತಿಯನ್ನು ಕಾಣಬೇಕು. ಹಾಗೂ ಯುವ ವಿಜ್ಞಾನಿಗಳನ್ನು ತಯಾರು ಮಾಡುವಂತೆ ಆದಷ್ಟು ಪ್ರೋತ್ಸಾಹಿಸಬೇಕು. ಭಾರತೀಯರಲ್ಲಿ ಪರಸ್ಪರ ಐಕ್ಯಮತ್ಯ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸಿ, ಜಗತ್ತಿನಲ್ಲಿ ಶ್ರೇಷ್ಠ ಭಾರತದ ಕನಸು ನನ್ನದಾಗಿದೆ.


 ಕವನ
ಪ್ರಸಕ್ತ ನನ್ನ ಕನಸಿನ ಭಾರತ|
ನೀನು ಜಗದ ಮುಕುಟು ಮಣಿ ಎನ್ನುತ|
ನಿನ್ನ ಒಡಲಲ್ಲಿ ಬೆಳೆದು ಬಂದ ಜ್ಞಾನ|
ಜಗಕೆ ನೀನೆಂದೂ ಸತ್ಯವೆಂಬ ಪ್ರಾಣ|
ಸಕಲ ಜನರೆಲ್ಲಾ ಒಂದಾಗಿ ಕಳೆದು|
ದ್ವೇಷ ರೋಶ ಭಾವನೆಯು ತೊರೆದು|
ಸೋದರತೆಯ ಚಿಂತನೆಯು ಮೂಡಿಬರಲಿ|
ಜಾತಿ, ಕೋಮು ಭಾವನೆಯು ಅಳಿದು ಹೋಗಲಿ|
ಎಲ್ಲ ಯುವ ಜನತೆಗೆ ಸರಿಯಾದ ಉದ್ಯೋಗ|
ಭರತ ಭೂಮಿಯಲಿ ಇರಲಿ ದೇಶಕ್ಕಾಗಿ ತ್ಯಾಗ|
ಅಳಿದು ಹೋಗಲಿ ಸ್ತ್ರೀ ಮೇಲಾಗುವ ಅತ್ಯಾಚಾರ|
ಬೆಳೆದು ಬರಲಿ ಮಹಿಳಾ ಗೌರವ ಆದರ|
ಕಳ್ಳತನ ಕೊಲೆ ಸುಲಿಗೆಗಳು ಅಳಿದು|
ಸತ್ಯಾ ಸಚ್ಚಾರಿತ್ರ್ಯ ನೀತಿಯೆಲ್ಲಾ ತುಂಬಿ ಬೆಳೆದು|
ಸತ್ವಯುತ ಅನ್ನವನು ನಾವೆಲ್ಲಾ ಮಾಡಿ|
ಭಾರತೀಯ ಜನಕೆ ಸ್ವಚ್ಚಾ ಆಹಾರವ ನೀಡಿ|
ರೋಗ ಮುಕ್ತ ರಾಷ್ಟ್ರ ನಮ್ಮದಾಗಬೇಕು|
ಮದ್ಯ ದಿನಗಳು ಜನರಿಗೆ ಬರಲೇಬೇಕು|
ವಿಜ್ಞಾನ ಕಲೆಗಳು ನಮ್ಮ ಬದುಕಿನ ಅಂಗ|
ಭಾರತೀಯರೆಲ್ಲಿ ಒಂದಾಗಿ ಬದುಕುವ ರಂಗ|
ಸರ್ವೇಜನಾಃ ಸುಖಿನೋ ಭವಂತು ಎಂದು|
ವಿಶ್ವಾಕುಟುಂಬದ ಕನಸು ಮೂಡಲಿ ಇಂದು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ